2 ಕೋಟಿ ರೂಪಾಯಿ ದಾನ ಮಾಡಿದೀನಿ 150 ರೂಪಾಯಿಗೆ ಕೂಲಿ ಮಾಡಿ ಬದುಕಿದ್ದೀನಿ ಮಹಾದಾನಿ ಕುಣಿಕೇರಿ ಹುಚ್ಚಮ್ಮನ ಕಥೆ . » Karnataka's Best News Portal

2 ಕೋಟಿ ರೂಪಾಯಿ ದಾನ ಮಾಡಿದೀನಿ 150 ರೂಪಾಯಿಗೆ ಕೂಲಿ ಮಾಡಿ ಬದುಕಿದ್ದೀನಿ ಮಹಾದಾನಿ ಕುಣಿಕೇರಿ ಹುಚ್ಚಮ್ಮನ ಕಥೆ .

ನನಗೆ ವಿದ್ಯಾ ಬುದ್ಧಿ ಇಲ್ಲ ಸ್ವಾಮಿ, ಊರಿನ ಮಕ್ಕಳಾದರೂ ಓದಲಿ ಅಂತ ಇರೋ ಆಸ್ತಿ ಸ್ಕೂಲ್ಗೆ ದಾನ ಮಾಡಿದೆ!!
ಈಗಿನ ಕಾಲದಲ್ಲಿ ಯಾರೂ ಕೂಡ ಒಂದು ರೂಪಾಯಿ ಹಣವನ್ನು ಕೂಡ ಬೇರೆಯವರಿಗೆ ಕೊಡುವುದಿಲ್ಲ ಅದೇ ಹಣ ನಮ್ಮ ಬಳಿ ಇದ್ದರೆ ಇನ್ಯಾವುದಾದರೂ ಕೆಲಸಕ್ಕೆ ಆಗುತ್ತದೆ ಎಂಬ ಉದ್ದೇಶದಿಂದ ಎಲ್ಲರೂ ಕೂಡ ಸ್ವಾರ್ಥಿಗಳಾಗಿ ಉಳಿದಿದ್ದಾರೆ ಅದರಲ್ಲೂ ಸ್ವಾರ್ಥಿ ಎನ್ನುವುದಕ್ಕಿಂತ ಹೆಚ್ಚಾಗಿ ನಮ್ಮ ಮುಂದಿನ ದಿನಗಳಿಗೆ.

WhatsApp Group Join Now
Telegram Group Join Now

ನಮಗೆ ಹಣದ ಅವಶ್ಯಕತೆ ಬೇಕಾಗಿರುತ್ತದೆ ಎನ್ನುವ ಉದ್ದೇಶದಿಂದ ಯಾರೊಬ್ಬರೂ ಕೂಡ ಯಾರಿಗೂ ಹಣದ ಸಹಾಯವನ್ನು ಮಾಡುವುದಿಲ್ಲ ಬೇಕಿದ್ದರೆ ಬೇರೆ ಕೆಲಸಗಳಲ್ಲಿ ಕೆಲವೊಂದಷ್ಟು ಸಣ್ಣಪುಟ್ಟ ಸಹಾಯ ಮಾಡಬಹುದೇ ಹೊರತು ಹಣಕಾಸಿನ ವಿಚಾರದಲ್ಲಂತೂ ಯಾರೂ ಕೂಡ ಯಾರೊಬ್ಬರಿಗೂ ಸಹಾಯ ಮಾಡುವುದಿಲ್ಲ.


ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೇಲೆ ಹೇಳಿದಂತೆ ಇವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಎರಡು ಎಕ್ಕರೆ ಜಮೀನನ್ನು ಸ್ಕೂಲ್ ಗೆ ಮಾರಿಬಿಟ್ಟಿದ್ದಾರೆ ಯಾವ ಕಾರಣಕ್ಕಾಗಿ ಇವರು ತಮ್ಮ ಎರಡು ಎಕರೆ ಭೂಮಿಯನ್ನು ಸ್ಕೂಲ್ಗೆ ಕೊಟ್ಟಿದ್ದಾರೆ ಹಾಗೂ ಇವರ ಉದ್ದೇಶ ಏನು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಹೌದು ಈ ಮಹಿಳೆಯ ಹೆಸರು ಹುಚ್ಚಮ್ಮ ಬಸಪ್ಪ ಎಂದು ಇವರು ಕೊಪ್ಪಳ ಜಿಲ್ಲೆಯ ಕುಣಿಕೇರಿ ಗ್ರಾಮದವರು.

ಇವರಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿ ಅವರ ಗಂಡನು ಕೂಡ ಚಿಕ್ಕ ವಯಸ್ಸಿನಲ್ಲಿ ತೀರಿ ಹೋದರು ಇವರಿಗೆ ಮಕ್ಕಳು ಕೂಡ ಇಲ್ಲ ಬದಲಿಗೆ ಗಂಡನನ್ನು ಕಳೆದುಕೊಂಡು ಒಬ್ಬಂಟಿ ಜೀವನವನ್ನು ನಡೆಸುತ್ತಿದ್ದಾರೆ ಇವರು ನನಗೆ ಮಕ್ಕಳಿಲ್ಲ ಆದರೆ ನಮ್ಮ ಊರಿನಲ್ಲಿರು ವಂತಹ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆಯಲಿ ಅವರು ಜೀವನದಲ್ಲಿ ವಿದ್ಯೆಯನ್ನು ಕಲಿತು ಮುಂದಿನ ದಿನಗಳಲ್ಲಿ ಒಳ್ಳೆಯ ಮಟ್ಟಕ್ಕೆ ಬೆಳೆಯಬೇಕು ಎಂಬ ಉದ್ದೇಶದಿಂದ.

See also  ಮನೆಯಲ್ಲಿ ಸಾಲದ ಬಾಧೆಯಿಂದ ಹಣಕಾಸು ತೊಂದ್ರೆಯಿಂದ ಬಳಲುತ್ತಿದ್ರೆ ಲಕ್ಷ್ಮಿ ಅಷ್ಟೋತ್ತರದಿಂದ ಈ ರೀತಿ ಪರಿಹಾರ ಮಾಡಿಕೊಳ್ಳಿ

ತಮ್ಮ ಮೂರು ಎಕರೆ ಭೂಮಿಯಲ್ಲಿ ಎರಡು ಎಕರೆ ಭೂಮಿಯನ್ನು ಸ್ಕೂಲ್ ಗೆ ಕೊಟ್ಟಿದ್ದಾರೆ ಇವರ ಊರಿನಲ್ಲಿ ವಿದ್ಯಾಭ್ಯಾಸಕ್ಕೆ ಯಾರು ಕೂಡ ಶಾಲೆಯನ್ನು ಕಟ್ಟಲು ಭೂಮಿಯನ್ನು ಕೊಡಲಿಲ್ಲ ಆಗ ಮಕ್ಕಳು ಹೆಚ್ಚಿನ ದೂರ ಹೋಗುವಂತಹ ಅವಶ್ಯಕತೆ ಇತ್ತು ಆಗ ಹುಚ್ಚಮ್ಮ ಅವರು ತಮ್ಮ ಭೂಮಿಯನ್ನೇ ದಾನವಾಗಿ ಸ್ಕೂಲ್ಗೆ ಕೊಟ್ಟಿದ್ದಾರೆ.

ಅದೇ ಭೂಮಿಯನ್ನು ಅವರು ಇಲ್ಲಿಯ ತನಕ ಇಟ್ಟು ಕೊಂಡು ಮಾರಿದರೆ ಕೋಟ್ಯಾಂತರ ರೂಪಾಯಿ ಬರುತ್ತಿತ್ತು ಆದರೆ ಅವರಿಗೆ ಹಣದ ಅವಶ್ಯಕತೆಗಿಂತ ಮಕ್ಕಳಿಗೆ ಒಳ್ಳೆಯದಾಗಬೇಕು ನಾನು ಯಾವುದೇ ಶಾಲೆಗೆ ಹೋಗಲಿಂದ ಆದರೆ ಮಕ್ಕಳಿಗೆ ಯಾವುದೇ ರೀತಿಯ ವಿದ್ಯಾಭ್ಯಾಸದಲ್ಲಿ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದು ಕೊಂಡೆ ಎಂದು ಹುಚ್ಚಮ್ಮ ಅವರು ಹೇಳುತ್ತಾರೆ ಇವರ ಈ ಮಾತು ಪ್ರತಿಯೊಬ್ಬರಿಗೂ ಕೂಡ ಸ್ಪೂರ್ತಿ ದಾಯಕವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">