ಭೂಕಂಪಕ್ಕೆ ತತ್ತರಿಸಲಿದೆ ಭಾರತ..! ಏನಿದು ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿರುವ ಹೂಗರ್ ಬೀಟ್ಸ್ ವರದಿ….!
ಟರ್ಕಿ ಭೀಕರ ಭೂಕಂಪಕ್ಕೆ ತತ್ತರಿಸಿ ಹೋಗಿದೆ, ಟರ್ಕಿಯ ನೆಲ ಈಗಲೂ ಕೂಡ ಅಲ್ಲಾಡುತ್ತಿದೆ! ಟರ್ಕಿಯಲ್ಲಿ ಭೂಮಿ ಕಂಪಿಸುವುದು ಈಗಲೂ ಕೂಡ ನಿಂತಿಲ್ಲ ಸಾವು ನೋವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಹಾಗೂ ಸತ್ತವರ ಸಂಖ್ಯೆ 20 ಸಾವಿರದ ಗಡಿ ದಾಟಿ ಬಿಟ್ಟಿದೆ.
ಹಾಗೂ ಟರ್ಕಿ ಅಕ್ಷರಶಹ ನರಕವಾಗಿ ಹೋಗಿದೆ, ಟರ್ಕಿಯಲ್ಲಿ ಈ ರೀತಿಯಾದಂತಹ ಒಂದು ಭೂಕಂಪ ಸಂಭವಿಸುತ್ತದೆ ಎಂದು ಮೂರು ದಿನಗಳ ಹಿಂದೆಯೇ ಹೂಗರ್ ಬೀಟ್ಸ್ ಎನ್ನುವ ಸಂಶೋಧಕರು ಟ್ವೀಟ್ ಮಾಡಿದರು. ಶೀಘ್ರವೇ ದಕ್ಷಿಣ ಮಧ್ಯ ಟರ್ಕಿ, ಜೋಡನ್, ಸಿರಿಯಾ, ಮತ್ತು ಲೇವೆನಾನ್ ನಲ್ಲಿ 7.5 ತೀವ್ರತೆಯ ಭೂಕಂಪವು ಅಪ್ಪಳಿಸುತ್ತದೆ ಎಂದು ಆ ಟ್ವೀಟ್ ಬರೆದಿದ್ದರು. ಆದರೆ ಈ ಎಚ್ಚರಿಕೆಯನ್ನು ಟರ್ಕಿ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ.
ಈ ರೀತಿ ಸಂಶೋಧಕರು ತುಂಬಾ ಹೇಳುತ್ತಾರೆ ಇದನ್ನೆಲ್ಲ ನಂಬುವುದಕ್ಕೆ ಆಗುವುದಿಲ್ಲ ಎಂದು ಟರ್ಕಿ ಹೂಗರ್ ಬೀಟ್ಸ್ ಮಾಡಿರುವ ಟ್ವಿಟ್ ಗೆ ತಲೆ ಕೆಡಿಸಿಕೊಳ್ಳುವುದಿಲ್ಲ,ಇದಾಗಿ ಕೇವಲ ಮೂರೇ ಮೂರು ದಿನಗಳಲ್ಲಿ ಟರ್ಕಿ ಭೂಗರ್ಭಕ್ಕೆ ಕುಸಿದು ಬಿಟ್ಟಿದೆ.ಜನರು ಗಾಢ ನಿದ್ದೆಯಲ್ಲಿರುವಾ ಗಲೇ ಭೂಕಂಪ ಎದುರಾಗಿದೆ. ಸದ್ಯ ಟರ್ಕಿ ಅಕ್ಷರ ಶಹ ನರಕವಾಗಿ ಬದಲಾಗಿದೆ.
ಸಾವಿರಾರು ಜನ ನೆಲದಡಿಯಲ್ಲಿ ಸಜೀವವಾಗಿ ಸಮಾಧಿಯಾಗಿದ್ದಾರೆ! ದೊಡ್ಡ ದೊಡ್ಡ ಕಟ್ಟಡಗಳು ನೆಲಕ್ಕುರಳಿ ಬಿದ್ದಿದೆ, ಹೂಗರ್ ಬೀಟ್ಸ್ ಅಂದು ಮಾಡಿದ್ದ ಭವಿಷ್ಯ ನಿಜವಾಗಿ ಬಿಟ್ಟಿದೆ. ಹೀಗೆ ಟರ್ಕಿಯಲ್ಲಿ ಈ ರೀತಿಯ ಸಮಸ್ಯೆ ಎದುರಾಗುತ್ತದೆ ಎಂದು ಮೊದಲೇ ಭವಿಷ್ಯ ನುಡಿದಿದ್ದಂತಹ ಈ ಸಂಶೋಧಕ ಈಗ ಭಾರತದ ಬಗ್ಗೆ ಕೂಡ ಭವಿಷ್ಯ ನುಡಿದುಬಿಟ್ಟಿದ್ದಾರೆ.
ಭಾರತದಲ್ಲಿಯೂ ಕೂಡ ಭೀಕರ ಭೂಕಂಪ ಸಂಭವಿಸಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಹೌದು ಮೊದಲು ಆಫ್ಘಾನಿಸ್ತಾನದಲ್ಲಿ ದೊಡ್ಡ ಮಟ್ಟದಲ್ಲಿ ಭೂಕಂಪ ಸಂಭವಿಸುತ್ತದoತೆ ನಂತರ ಇದು ಪಾಕಿಸ್ತಾನದ ಮೇಲೆ ಪರಿಣಾಮವನ್ನು ಬೀರಿ, ಭಾರತವನ್ನು ತಲುಪುತ್ತದೆ ಎನ್ನುವುದು ಹೂಗಾರ್ ಬೀಟ್ಸ್ ಅವರ ಅಭಿಪ್ರಾಯ! ಭಾರತ, ಆಫ್ಘಾನಿಸ್ತಾನ, ಪಾಕಿಸ್ತಾನದ,ವಾತಾವರಣ ನೋಡಿದರೆ ಭೂಕಂಪ ಸಂಭವಿಸುವ ಲಕ್ಷಣ ಇದೆ ಎಂದು ಹೂಗರ್ ಬೀಟ್ಸ್ ಅವರು ಹೇಳಿದ್ದಾರೆ.
ದೊಡ್ಡ ದೊಡ್ಡದಾಗಿ ಸಂಭವಿಸುವ ಕೆಲವು ಭೂಕಂಪಗಳು ಕೆಲವೊಮ್ಮೆ ಸುಳಿವುಗಳನ್ನು ಬಿಟ್ಟು ಕೊಡುವುದಿಲ್ಲ, ಆದರೂ ಒಂದು ಅಂದಾಜಿನ ಪ್ರಕಾರ ಹೇಳುವುದಾದರೆ ಈ ಮೂರು ದೇಶಗಳು ಕೂಡ ಅಪಾಯದ ಅಂಚಿನಲ್ಲಿ ಇದೆ ಎಂದು ಹೂಗರ್ ಬೀಟ್ಸ್ ಹೇಳಿದ್ದಾರೆ. ಇವರು ಹೇಳುವ ಪ್ರಕಾರ ಭಾರತದಲ್ಲಿ ಭೂಕಂಪ ಸಂಭವಿಸುವ ಸುಳಿವು ಕೂಡ ಸಿಕ್ಕಿದೆ. ಹೌದು ಹಿಮಾಲಯದ ತಪ್ಪಲಿನಲ್ಲಿರುವ ಪ್ರದೇಶಗಳಲ್ಲಿ ಭೂಕಂಪ ನಡೆಯುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.