ಪತಿ ಈ ಮೂರು ವಿಷಯಗಳಿಗೆ ಬೇಡಿಕೆ ಇಟ್ಟಾಗ ಇಲ್ಲ ಎನ್ನಬಾರದಂತೆ ಪತ್ನಿ ಸುಖ ಸಂಸಾರದ ಗುಟ್ಟು ಏನು ಗೊತ್ತಾ? » Karnataka's Best News Portal

ಪತಿ ಈ ಮೂರು ವಿಷಯಗಳಿಗೆ ಬೇಡಿಕೆ ಇಟ್ಟಾಗ ಇಲ್ಲ ಎನ್ನಬಾರದಂತೆ ಪತ್ನಿ ಸುಖ ಸಂಸಾರದ ಗುಟ್ಟು ಏನು ಗೊತ್ತಾ?

ಪತಿ ಈ ಮೂರು ವಿಷಯಗಳಿಗೆ ಬೇಡಿಕೆ ಇಟ್ಟಾಗ ಇಲ್ಲ ಎನ್ನಬಾರದು.ಮಹಾನ್ ಅರ್ಥಶಾಸ್ತ್ರಜ್ಞ ಮತ್ತು ರಾಜ ತಾಂತ್ರಿಕ ಆಚಾರ್ಯ ಚಾಣಕ್ಯ ತಮ್ಮ ನೀತಿಗಳಲ್ಲಿ ಪುರುಷರು ಮತ್ತು ಮಹಿಳೆಯರು ಜೀವನದಲ್ಲಿ ಅನುಸರಿಸಬೇಕಾದ ಅನೇಕ ನೀತಿಗಳ ಬಗ್ಗೆ ತಿಳಿಸಿದ್ದಾರೆ ಆ ನಿಯಮಗಳನ್ನು ಅನುಸರಿದರೆ ವೈವಾಹಿಕ ಜೀವನ ಸುಖದ ಸುಪ್ಪತ್ತಿಗೆಯಲ್ಲಿ ತೇಲುವುದು ಎನ್ನಲಾಗಿದೆ ಹೌದು ಸುಖಕರ ದಾಂಪತ್ಯಕ್ಕೆ ಅನುಸರಿಸಬೇಕಾದ ನೀತಿ ನಿಯಮಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ

WhatsApp Group Join Now
Telegram Group Join Now

ಇಲ್ಲಿ ಚಾಣಕ್ಯ ಗುರುಗಳು ಮೂರು ವಿಷಯಗಳ ಬಗ್ಗೆ ಉಲ್ಲೇಖಿಸಿದ್ದಾರೆ ಈ ಮೂರು ವಿಷಯಗಳಿಗಾಗಿ ಪತಿ ಬೇಡಿಕೆ ಇಟ್ಟರೆ ಪತ್ನಿ ಅದನ್ನು ಈಡೇರಿಸಲೇಬೇಕು ಎಂದು ಹೇಳಲಾಗಿದೆ. ಮೊದಲನೆಯದಾಗಿ ಪತಿಯ ಮನಸ್ಸಿಗೆ ಶಾಂತಿ ನೀಡಿ, ಕಷ್ಟದ ಸಂದರ್ಭದಲ್ಲಿ ವ್ಯಕ್ತಿ ಬಯಸುವುದು ತನ್ನ ಸಂಗಾತಿಯ ಬೆಂಬಲವನ್ನು ಯಾರು ಏನೇ ಹೇಳಿದರು ತನ್ನ ಸಂಗಾತಿ ಜೊತೆಗಿದ್ದರೆ ಪ್ರಪಂಚವನ್ನೇ ಗೆಲ್ಲುವ ವಿಶ್ವಾಸ ವ್ಯಕ್ತಿಯಲ್ಲಿ ಮೂಡುತ್ತದೆ.


ಚಾಣಕ್ಯ ನೀತಿಯಲ್ಲಿಯೂ ಇದನ್ನು ಉಲ್ಲೇಖಿಸಲಾಗಿದೆ ಆಚಾರ್ಯ ಚಾಣಕ್ಯರ ಪ್ರಕಾರ ಗಂಡನ ಸುಖ ದುಃಖಗಳ ಬಗ್ಗೆ ಕಾಳಜಿ ವಹಿಸುವುದು ಹೆಂಡತಿಯ ಕರ್ತವ್ಯ ಪತಿ ದುಃಖಿತನಾದಾಗ ಅವನ ಮನಸ್ಸನ್ನು ಶಾಂತಗೊಳಿಸಲು ಪ್ರಯತ್ನಿಸುವುದು ಪತ್ನಿಯ ಕರ್ತವ್ಯ ಪತಿಯನ್ನು ಯಾವುದಾದರೂ ವಿಷಯ ಕಾಡುತ್ತಿದ್ದರೆ ಆತನ ಮನಸ್ಸಿನ ಭಾವನೆಗಳನ್ನು ಅರ್ಥೈಸಿಕೊಂಡು ಆತನ ಜೊತೆ ನಿಲ್ಲಬೇಕು.

ಎರಡನೆಯದಾಗಿ ಪ್ರೀತಿಯಲ್ಲಿ ಕೊರತೆಯಾಗಲೇ ಬಾರದು, ಆಚಾರ್ಯ ಚಾಣಕ್ಯರ ಪ್ರಕಾರ ಪತಿ ಪತ್ನಿಯರ ನಡುನ ಸಂಬಂಧ ಯಶಸ್ವಿಯಾಗಬೇಕಾದರೆ ಪರಸ್ಪರ ಸುಖ ದುಃಖಗಳನ್ನು ಅರಿತುಕೊಂಡಾಗ ಮಾತ್ರ ಗಂಡನ ಪ್ರೀತಿಯ ಬಯಕೆಗಳನ್ನು ಈಡೇರಿಸುವುದು ಹೆಂಡತಿಯ ಕರ್ತವ್ಯ ಹಾಗಾಗಿ ತನ್ನ ಪ್ರೀತಿಯಿಂದ ಯಾವಾಗಲೂ ಪತಿಯನ್ನು ಸಂತೃಪ್ತಗೊಳಿಸಬೇಕಾಗಿದ್ದು ಪತ್ನಿಯ ಮೊದಲ ಆದ್ಯತೆ ಆಗಿರಬೇಕು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ .ಅದೇ ರೀತಿ ಪತ್ನಿಯ ಇಷ್ಟಾರ್ಥಗಳನ್ನು ಈಡೇರಿಸುವುದು ಗಂಡನ ಕರ್ತವ್ಯವು ಕೂಡ ಹೌದು.

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಮೂರನೆಯದಾಗಿ ವೈವಾಹಿಕ ಜೀವನದಲ್ಲಿ ಬಿರುಕು ಸಲ್ಲದು ಸಂತೋಷದ ದಾಂಪತ್ಯ ಜೀವನಕ್ಕಾಗಿ ಪತಿ ಪತ್ನಿ ಎಂದಿಗೂ ಪರಸ್ಪರರ ನಡುವೆ ಅಂತರ ಬರಲು ಬಿಡಬಾರದು ಪತಿ ಪತ್ನಿಯ ಸಂಬಂಧದಲ್ಲಿ ಮೂಡುವ ಸಣ್ಣ ಬಿರುಕು ಕೂಡ ಹೆಮ್ಮರವಾಗಿ ಯಾವಾಗ ಬೆಳೆಯುತ್ತದೆ ಎನ್ನುವುದು ಅರ್ಥವಾಗುವುದಿಲ್ಲ ಆಚಾರ್ಯ ಚಾಣುಕ್ಯರು ತಮ್ಮ ನೀತಿಗಳಲ್ಲಿ ಈ ಬಗ್ಗೆ ಪತಿ ಪತ್ನಿಯರಿಗೆ ಕಿವಿ ಮತ್ತು ಹೇಳಿದ್ದಾರೆ.

ಈ ರೀತಿಯಾಗಿ ಪತಿ ಪತ್ನಿಯರು ಹೊಂದಾಣಿಕೆಯಿಂದ ಜೀವನವನ್ನು ನಡೆಸಿದಾಗ ಸಂಸಾರದಲ್ಲಿ ಯಾವುದೇ ರೀತಿಯಾದಂತಹ ಬಿರುಕುಗಳು ಬರಲು ಸಾಧ್ಯವೇ ಇಲ್ಲ ಸುಖವದಂತಹ ಸಂಸಾರವನ್ನು ನಡೆಸಿಕೊಂಡು ಜಗತ್ತಿಗೆ ಮಾದರಿಯಾಗಬಹುದು ಎಂದು ಚಾಣುಕ್ಯರು ತಮ್ಮ ನೀತಿಗಳಲ್ಲಿ ಈ ಮೇಲೆ ತಿಳಿಸಿದಂತಹ ಎಲ್ಲಾ ಅಂಶಗಳನ್ನು ತಿಳಿಸಿದ್ದಾರೆ ಇದರಂತೆ ನಡೆದುಕೊಂಡು ಹೋದರೆ ಬದುಕು ಬಂಗಾರವಾಗಿರುತ್ತದೆ.

[irp]


crossorigin="anonymous">