ಈ ಎರಡು ಸಾಲಿನ ಸ್ತೋತ್ರದಲ್ಲಿ ಅಂತಹದೊಂದು ಶಕ್ತಿ ಇದೆ...ಎಂತಹ ಸಂಕಟ ಆಪತ್ತು ದೂರ ಆಗುತ್ತೆ... » Karnataka's Best News Portal

ಈ ಎರಡು ಸಾಲಿನ ಸ್ತೋತ್ರದಲ್ಲಿ ಅಂತಹದೊಂದು ಶಕ್ತಿ ಇದೆ…ಎಂತಹ ಸಂಕಟ ಆಪತ್ತು ದೂರ ಆಗುತ್ತೆ…

ಈ ಎರಡು ಸಾಲಿನ ಸ್ತೋತ್ರದಲ್ಲಿ ಅಂತಹದೊಂದು ಶಕ್ತಿ ಇದೆ ಎಂತಹ ಸಂಕಟ ಆಪತ್ತು ದೂರ ಆಗುತ್ತದೆ.
ಈ ಒಂದು ಮಂತ್ರವನ್ನು ನಿಮಗೆ ಏನಾದರೂ ಆಪತ್ತು ಬಂದು ಒದಗಿದಾಗ ನಿಮ್ಮ ಕುಟುಂಬಕ್ಕೆ ಅಥವಾ ಮಕ್ಕಳಿಗೆ ಯಾವುದೇ ಆಪತ್ತು ಬಂದಿದ್ದರೆ ಸಂಕಟ ಉಂಟಾಗಿದ್ದರೆ ಈ ಒಂದು ಮಂತ್ರದಲ್ಲಿ ಹೇಳಿದರೆ ಸಾಕು ಈ ಸ್ತೋತ್ರವನ್ನು ಮನೆಯ ಹೊರಗಡೆ ಆಸ್ಪತ್ರೆಯಲ್ಲಿ ಎಲ್ಲೇ ಇದ್ದರೂ ಕೂಡ ಮನಸ್ಸಿನಲ್ಲಿ ಆಂಜನೇಯನ ಸ್ಮರಣೆಯನ್ನು ಮಾಡಿ. ನೀವು ಮನೆಯಲ್ಲಿದ್ದರೆ ಆಂಜನೇಯನ ಫೋಟೋ ಮುಂದೆ ತುಪ್ಪದ ದೀಪವನ್ನು ಹಚ್ಚಿ ಹೇಳಬಹುದು.

WhatsApp Group Join Now
Telegram Group Join Now

ಇಲ್ಲವಾದರೆ ಮನೆಯಿಂದ ಹೊರಗೆ ಇದ್ದರೆ ಆಂಜನೇಯನ ಸ್ಮರಣೆಯನ್ನು ಮಾಡಿ ಸ್ತೋತ್ರವನ್ನು ಹೇಳಬೇಕು 108, 22, 11 ಹೀಗೆ ಎಷ್ಟು ಭಕ್ತಿ ಶ್ರದ್ಧೆಯಿಂದ ಈ ಸ್ತೋತ್ರವನ್ನು ಪಾರಾಯಣ ಮಾಡುತ್ತಿರೋ ಅಷ್ಟೇ ಬೇಗ ನಿಮ್ಮ ಸಂಕಟ ನಿವಾರಣೆಯಾಗುತ್ತದೆ ಸಿದ್ದ ಮಂತ್ರಗಳಿಗೆ ಬಹಳ ಶಕ್ತಿ ಇರುತ್ತದೆ. ಮುಟ್ಟಾದಾಗ ಮಾತ್ರ ಈ ಒಂದು ಸ್ತೋತ್ರವನ್ನು ಹೇಳಬಾರದು.


ಸಂಕಟ ಬಂದಾಗ ಹೇಳಬೇಕು ಎಷ್ಟು ದಿವಸ ಹೇಳಬೇಕು ಎಂದು ನಿಮಗೆ ಬಿಟ್ಟಿದ್ದು ನೀವು ಒಂದು ದಿವಸ ಎರಡು ದಿವಸ ಅಥವಾ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುವ ತನಕ ಈ ಒಂದು ಸ್ತೋತ್ರವನ್ನು ಹೇಳಬಹುದು ಹೀಗೆ ಈ ಒಂದು ಸ್ತೋತ್ರವನ್ನು ಪಾರಾಯಣ ಮಾಡಿದರೆ ಸಂಕಟದಿಂದ ಪಾರಾಗುತ್ತೀರಾ. ಈ ಒಂದು ಸ್ತೋತ್ರವನ್ನು ನೀವು ಹೊರಗಡೆ ಇದ್ದರೆ ಕಾಲನ್ನು ಚೆನ್ನಾಗಿ ತೊಳೆದುಕೊಂಡು ಹೇಳಬೇಕು.

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಕಠಿಣ ಆಪತ್ತಿನ ನಿವಾರಣೆಗಾಗಿ ಈ ಒಂದು ಸ್ತೋತ್ರವನ್ನು ಹೇಳಿ “ದೀನದಯಾಲ ವಿರದ ಸಂಭಾರಿ, ಹರವು ನಾಥ ಮಮ ಸಂಕಟ ಭಾರೀ”. ಈ ಒಂದು ಸ್ತೋತ್ರವನ್ನು ಪಾರಾಯಣ ಮಾಡಿದರೆ ನಿಮ್ಮ ಸಂಕಟ ಎಲ್ಲವೂ ಸಹ ನಿವಾರಣೆಯಾಗುತ್ತದೆ ಮಹಾಕವಿ ತುಳಸಿ ದಾಸರ ರಚಿಸಿದಂತಹ ಈ ಒಂದು ರಾಮಚರಿತ ಮಾಸದಲ್ಲಿ ಇಷ್ಟೊಂದು ಶಕ್ತಿ ಇದೆ.

ಕಾಶಿಯಲ್ಲಿ ತುಳಸಿದಾಸರು ರಾಮಕಥ ಪ್ರಸಂಗವನ್ನು ಮಾಡುತ್ತಿರುತ್ತಾರೆ ಅಂದರೆ ರಾಮನ ಕಥೆಯನ್ನು ಪ್ರತಿನಿತ್ಯ ಒಂದೊಂದು ಅಧ್ಯಾಯವನ್ನು ಹೇಳುತ್ತಿರುತ್ತಾರೆ. ಎಲ್ಲಿ ರಾಮನ ಕಥೆ ನಡೆಯುತ್ತಿದೆಯೋ ಅಲ್ಲಿ ಆಂಜನೇಯ ಬರುತ್ತಾನೆ ಪ್ರತಿನಿತ್ಯ ಬುದ್ಧ ಬ್ರಾಹ್ಮಣನ ರೂಪದಲ್ಲಿ ಬಂದು ಪ್ರತಿನಿತ್ಯ ಕಥೆಯನ್ನು ಕೇಳುತ್ತ ಆನಂದ ಭಾಷ್ಪಗಳನ್ನು ಸುರಿಸುತ್ತಿದ್ದ ಎಲ್ಲರಿಗಿಂತ ಮುಂಚೆ ಬಂದು ಎಲ್ಲರೂ ಹೋಗುವ ಮುಂಚೆ ಕಣ್ಮರೆಯಾಗಿ ಬಿಡುತ್ತಿದ್ದ.

ಆಗ ತುಳಸಿದಾಸರಿಗೆ ಅನುಮಾನ ಬರುತ್ತದೆ ಆಗ ಅವರ ಪಾದಕ್ಕೆ ಬಿದ್ದು ಸ್ವಾಮಿ ತಾವು ಯಾರು ನನಗೆ ನೀವು ಆಂಜನೇಯ ಎಂದು ಅನಿಸುತ್ತಿದೆ ಎಂದು ಪರಿಪರಿಯಾಗಿ ಬೇಡಿಕೊಂಡರು ಆಗ ಸಾಕ್ಷಾತ್ ತನ್ನ ದರ್ಶನವನ್ನು ತೋರಿಸಿದಂತಹ ಸ್ವಾಮಿ ರಾಮಚರಿತ ಮಾನಸ ನನಗೆ ಅತ್ಯಂತ ಪ್ರಿಯವಾದಂತಹದ್ದು ಈ ಒಂದು ಸ್ತೋತ್ರದಿಂದ ಯಾರೇ ನನ್ನನ್ನು ಸ್ತುತಿಸಿದರು ಅವರ ಎಲ್ಲ ಸಂಕಟಗಳನ್ನ ನಿವಾರಣೆ ಮಾಡುತ್ತೇನೆ ಎಂದು ತುಳಸಿದಾಸರಿಗೆ ಮಾತನ್ನು ಕೊಡುತ್ತಾರೆ‌.

[irp]


crossorigin="anonymous">