ಬೆಂಗಳೂರಿನಲ್ಲಿ ಹೊರಗಿನಿಂದ ದೇವಸ್ಥಾನದಂತೆ ಕಾಣಿಸುವ ಈ ಬಟ್ಟೆ ಮಳಿಗೆಯ ಓನರ್ ಯಾರು ಗೊತ್ತಾ ? ಈಕೆ ಇಷ್ಟಮಟ್ಟಿಗೆ ಬೆಳೆದು ನಿಲ್ಲಲು ಮಾಡಿದ ಐಡಿಯಾ ಏನ್ ಗೊತ್ತಾ ? » Karnataka's Best News Portal

ಬೆಂಗಳೂರಿನಲ್ಲಿ ಹೊರಗಿನಿಂದ ದೇವಸ್ಥಾನದಂತೆ ಕಾಣಿಸುವ ಈ ಬಟ್ಟೆ ಮಳಿಗೆಯ ಓನರ್ ಯಾರು ಗೊತ್ತಾ ? ಈಕೆ ಇಷ್ಟಮಟ್ಟಿಗೆ ಬೆಳೆದು ನಿಲ್ಲಲು ಮಾಡಿದ ಐಡಿಯಾ ಏನ್ ಗೊತ್ತಾ ?

ಮುಗ್ಧಾ ಆರ್ಟ್ಸ್ ಸ್ಟುಡಿಯೋ ಯಶಸ್ಸಿನ ಕಥೆ……||

WhatsApp Group Join Now
Telegram Group Join Now

ಮುಗ್ಧ ಆರ್ಟ್ಸ್ ಸ್ಟುಡಿಯೋ ಎಂಬುದನ್ನು ನಿಮ್ಮಲ್ಲಿ ಕಡಿಮೆ ಜನ ಮಾತ್ರ ತಿಳಿದುಕೊಂಡಿರುತ್ತಾರೆ. ಆದರೆ ಮುಗ್ಧ ಆರ್ಟ್ಸ್ ಸ್ಟುಡಿಯೋ ಪ್ರಾರಂಭಿಸಿದ ಅವರ ಹೆಸರನ್ನು ಮಾತ್ರ ಯಾರು ಕೂಡ ತಿಳಿದಿಲ್ಲ ಹಾಗೂ ಅವರ ಪರಿಶ್ರಮದ ಹಿಂದಿನ ವಿಷಯವನ್ನು ಯಾರು ಕೂಡ ತಿಳಿದಿಲ್ಲ. ಹಾಗಾದರೆ ಈ ದಿನ ಮುಗ್ಧ ಆರ್ಟ್ಸ್ ಸ್ಟುಡಿಯೋ ಪ್ರಾರಂಭಿಸಿದಂತಹ.

ಶಶಿವಂಗಪಲ್ಲಿ ಎನ್ನುವವರ ಬಗ್ಗೆ ಹಾಗೂ ಅವರ ಯಶಸ್ಸಿನ ಕಥೆಯ ಬಗ್ಗೆ ಸ್ವಲ್ಪ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳೋಣ.ಹೌದು ಶಶಿವಂಗಪಲ್ಲಿ ಎನ್ನುವವರು ಫ್ಯಾಶನ್ ಉದ್ಯಮವನ್ನು ಪ್ರಾರಂಭಿಸಿ ಅದರಲ್ಲಿ ಅತ್ಯುತ್ತಮವಾದಂತಹ ಹೆಸರನ್ನು ಪಡೆದುಕೊಂಡಂತಹ ಮಹಿಳೆ ಎಂದು ಹೇಳಬಹುದು. ಇವರು ನೋಡುವುದಕ್ಕೆ ಕುರೂಪಿಯಾಗಿ ಅಷ್ಟೇನೂ ಚೆನ್ನಾಗಿ ಇಲ್ಲದಿರುವುದರಿಂದ ಪ್ರತಿಯೊಬ್ಬರೂ ಕೂಡ ಇವರನ್ನು ಹೀಯಾಳಿಸುತ್ತಿದ್ದರು.

ನೀನೇ ಈ ರೀತಿ ಇದ್ದೀಯ ನೀನು ಫ್ಯಾಷನ್ ಉದ್ಯಮವನ್ನು ಕಲಿಯಲು ಏಕೆ ಬಂದಿರುವೆ ಎಂದು ಹೇಳುತ್ತಿದ್ದರು. ಆಗ ಅಂತಹ ಸಮಯದಲ್ಲಿ ಅವರು ಈ ವಿಷಯವಾಗಿ ಸ್ವಲ್ಪ ದಿನ ಯೋಚನೆ ಮಾಡಿ ಇದನ್ನು ಬಿಟ್ಟಿದ್ದರು. ಆದರೆ ಸ್ವಲ್ಪ ದಿನ ಈ ವಿಷಯವಾಗಿ ಯೋಚಿಸುತ್ತಾ ನಮ್ಮ ತಂದೆ ತಾಯಿಗಳು ನನಗೆ ಈ ಒಂದು ವಿದ್ಯಾಭ್ಯಾಸವನ್ನು ಪಡೆಯುವುದಕ್ಕೆ ಹಲವಾರು ಕಷ್ಟಗಳನ್ನು ಅನುಭವಿಸಿ ನಮ್ಮನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ.

ಆದರೆ ನಾನು ಈ ರೀತಿ ಇವರ ಮಾತಿಗೆ ಹೆದರಿಕೊಂಡು ನನ್ನ ಭವಿಷ್ಯವನ್ನು ನಾನು ಹಾಳು ಮಾಡಿಕೊಳ್ಳಲು ಸಾಧ್ಯವಿಲ್ಲ, ನಾನು ಎಲ್ಲಾ ಮಹಿಳೆಯರಂತೆ ಹಿಂದೆ ಉಳಿಯಲು ಸಾಧ್ಯವಿಲ್ಲ ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದೇನೆ ನಾನು ನನ್ನ ಜೀವನದಲ್ಲಿ ಏನಾದರೂ ಯಶಸ್ಸನ್ನು ಸಾಧಿಸಲೇಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡು ಇವರು ಅವರೆಲ್ಲರ ಮಾತಿಗೆ ಯಾವುದೇ ರೀತಿಯ ತಲೆಕೆಡಿಸಿಕೊಳ್ಳದೆ.

ಮುಂದೇ ನುಗ್ಗುತ್ತಾರೆ ಆದ್ದರಿಂದಲೇ ಇವರು ಈ ದಿನ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರುವಾಸಿಯಾಗುವುದಕ್ಕೆ ಕಾರಣ ಎಂದು ಸ್ವತಃ ಅವರೇ ಹೇಳುತ್ತಾರೆ. ಹಾಗೂ ಅವರು ಹಲವಾರು ಮಹಿಳೆಯರಿಗೆ ಕೆಲವೊಂದಷ್ಟು ಮಾಹಿತಿಗಳನ್ನು ಹೇಳುವುದರ ಮೂಲಕ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಅದೇನೆಂದರೆ ನಾನು ಚಿಕ್ಕ ಬಟ್ಟೆ ಹೊಲಿಯುವ ಯಂತ್ರವನ್ನು ಇಟ್ಟುಕೊಂಡು ಜೀವನವನ್ನು ಪ್ರಾರಂಭಿಸಿದೆ ಆದರೆ ನಾನು ಯಾರ ಮಾತಿಗೂ ಕೂಡ ಕಿವಿ ಕೊಡಲಿಲ್ಲ.

ಬದಲಿಗೆ ನಾನು ನನ್ನ ಯಶಸ್ಸಿನತ್ತ ಮಾತ್ರ ಗುರಿ ಇಟ್ಟಿದ್ದೆ. ಅದರಿಂದ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಇರುತ್ತದೆಯೋ ಅದರಲ್ಲಿ ನೀವು ಮುಂದೆ ಹೋಗಿ ಆಗ ಮಾತ್ರ ನೀವು ಆ ಕೆಲಸದಲ್ಲಿ ಹೆಚ್ಚು ಯಶಸ್ಸನ್ನು ಪಡೆಯಲು ಸಾಧ್ಯ ಯಾರು ಕೂಡ ಇದು ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಹಿಂದೆ ಉಳಿಯಬಾರದು, ಆಗ ಅವರು ಯಾವುದೇ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ, ಎಂಬ ಮಾತನ್ನು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">