ಕಿರಿಕ್ ಕೀರ್ತಿ ಹಾಗೂ ಅರ್ಪಿತ ಜೀವನದಲ್ಲಿ ಏನಾಗುತ್ತಿದೆ.....! ಜೊತೆಯಲ್ಲಿಯೇ ಇದ್ದು ಹುಳಿ ಹಿಂಡಿ ಬೇರೆ ಮಾಡಿದ್ದು ಯಾರು.... » Karnataka's Best News Portal

ಕಿರಿಕ್ ಕೀರ್ತಿ ಹಾಗೂ ಅರ್ಪಿತ ಜೀವನದಲ್ಲಿ ಏನಾಗುತ್ತಿದೆ…..! ಜೊತೆಯಲ್ಲಿಯೇ ಇದ್ದು ಹುಳಿ ಹಿಂಡಿ ಬೇರೆ ಮಾಡಿದ್ದು ಯಾರು….

ಕಿರಿಕ್ ಕೀರ್ತಿ ಹಾಗೂ ಅರ್ಪಿತ ಜೀವನದಲ್ಲಿ ಏನಾಗುತ್ತಿದೆ…..! ಜೊತೆಯಲ್ಲಿಯೇ ಇದ್ದು ಹುಳಿ ಹಿಂಡಿ ಬೇರೆ ಮಾಡಿದ್ದು ಯಾರು……??

WhatsApp Group Join Now
Telegram Group Join Now

ನಮ್ಮಲ್ಲಿ ಸಾಕಷ್ಟು ಜನರಿಗೆ ಕಿರಿಕ್ ಕೀರ್ತಿ ಎಂದ ತಕ್ಷಣ ಅವರು ಮಾತನಾಡುವಂತಹ ವಿಧಾನ ಹಾಗೂ ಅವರು ನಡೆದುಕೊಳ್ಳುವಂತಹ ರೀತಿಯೇ ನೆನಪಿಗೆ ಬರುತ್ತದೆ. ಅದೇ ರೀತಿಯಾಗಿ ಇವರು ಬಿಗ್ ಬಾಸ್ ನಲ್ಲಿ ಭಾಗವಹಿಸಿದಂತಹ ಎಷ್ಟೋ ವಿಚಾರಗಳು ಎಲ್ಲರಿಗೂ ನೆನಪಿಗೆ ಬರುತ್ತದೆ.

ಹೌದು ಬಿಗ್ ಬಾಸ್ ನಲ್ಲಿ ಪ್ರಥಮ್ ಹಾಗೂ ಕಿರಿಕ್ ಕೀರ್ತಿ ಎಂದರೆ ಇವರಿಬ್ಬರೂ ಜಗಳವಾಡುವುದು ಮಾತಿನಲ್ಲಿ ವಿನಾಭಿಪ್ರಾಯಗಳು ಹೀಗೆ ಇವರಿಬ್ಬರ ಚರ್ಚೆಗಳೇ ಎಲ್ಲರಿಗೂ ತಿಳಿದಿತ್ತು. ಹೀಗೆ ಬಿಗ್ ಬಾಸ್ ಮುಗಿದ ನಂತರ ಕೀರ್ತಿ ಅವರು ಕೆಲವೊಂದಷ್ಟು ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದರು ಅದೇ ರೀತಿಯಾಗಿ ನ್ಯೂಸ್ ಆಂಕರ್ ಆಗಿಯೂ ಕೂಡ ಕೆಲಸವನ್ನು ನಿರ್ವಹಿಸುತ್ತಿದ್ದರು.

ಇವರು ನ್ಯೂಸ್ ಆಂಕರ್ ಆಗಿ ಕೆಲಸ ಮಾಡುತ್ತಿದ್ದಂತಹ ರೀತಿ ಪ್ರತಿ ಯೊಬ್ಬರಿಗೂ ಕೂಡ ಇಷ್ಟವಾಗುತ್ತಿತ್ತು. ಏಕೆ ಎಂದರೆ ಇವರು ಯಾವುದೇ ಒಂದು ವಿಚಾರದ ಬಗ್ಗೆ ಮಾಹಿತಿಯನ್ನು ಜನರಿಗೆ ತೋರಿಸಬೇಕು ಎಂದರೆ ಅದಕ್ಕೆ ಸಂಪೂರ್ಣವಾದಂತಹ ಮಾಹಿತಿಗಳನ್ನು ಕಲೆ ಹಾಕಿ, ಅದರ ಬಗ್ಗೆ ಹೆಚ್ಚು ಆಲೋಚನೆಯನ್ನು ಮಾಡಿ, ಅದಕ್ಕೆ ಸೂಕ್ತವಾದ ಪರಿಹಾರವನ್ನು ಕೊಡುವುದರ ಮೂಲಕ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದರು.

ಹಾಗೆಯೇ ಕಲರ್ಸ್ ಕನ್ನಡದಲ್ಲಿ ಸೃಜನ್ ಲೋಕೇಶ್ ಅವರು ನಡೆಸಿ ಕೊಡುತ್ತಿದ್ದಂತಹ ರಾಜಾರಾಣಿ ಕಾರ್ಯಕ್ರಮಕ್ಕೂ ಕೂಡ ಕಿರಿಕ್ ಕೀರ್ತಿ ಹಾಗೂ ಅವರ ಪತ್ನಿ ಅರ್ಪಿತ ಅವರು ಭಾಗವಹಿಸಿದ್ದರು. ಅಲ್ಲಿಯೂ ಕೂಡ ಇವರಿಬ್ಬರು ಅದ್ಭುತವಾದಂತಹ ಮೆಚ್ಚುಗೆಯನ್ನು ಪಡೆದು ಕೊಂಡರು. ಆದರೆ ಈಗ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ. ಇತ್ತೀಚಿಗೆ ಕಿರಿಕ್ ಕೀರ್ತಿ ಅವರು ಒಂದು ಅನುಮಾನಾ ಸ್ಪದವಾದಂತಹ ಪತ್ರವನ್ನು ಬರೆಯುವುದರ ಮೂಲಕ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿ ದ್ದೇನೆ.

ನನ್ನ ಸಾವಿಗೆ ಯಾರು ಕಾರಣರಲ್ಲ ನನ್ನ ಸಾವಿಗೆ ನಾನೇ ಕಾರಣ ಈ ರೀತಿಯಾದಂತಹ ಪತ್ರವನ್ನು ಬರೆಯುವುದರ ಮೂಲಕ ಎಲ್ಲರಲ್ಲಿಯೂ ಕೂಡ ಗೊಂದಲವನ್ನು ಸೃಷ್ಟಿಸಿತ್ತು. ಆದರೆ ಸ್ವಲ್ಪ ದಿನ ಕಳೆದ ನಂತರ ಕಿರಿಕ್ ಕೀರ್ತಿ ಅವರನ್ನು ಕೆಲವೊಂದಷ್ಟು ಮೀಡಿಯಾದವರು ಪ್ರಶ್ನೆಯನ್ನು ಕೇಳುವಂತಹ ಸಮಯದಲ್ಲಿ ಕಿರಿಕ್ ಕೀರ್ತಿ ಅವರ ಮಾತಿನ ಅರ್ಥ ಏನು ಎಂದರೆ. ಯಾವುದೇ ಒಬ್ಬ ಮನುಷ್ಯ ಸಾಮಾನ್ಯ ಜನರಂತೆ ಬದುಕಬೇಕು ಅಥವಾ ಅವನು ದೊಡ್ಡ ಮಟ್ಟದಲ್ಲಿರಬೇಕು.

ಆದರೆ ಹೆಚ್ಚಿನ ಹೆಸರನ್ನು ಪಡೆದಿರಬಾರದು ಎನ್ನುವಂತಹ ಮಾತನ್ನು ಹೇಳಿದರು ಇದರ ಅರ್ಥ ಯಾವುದೇ ಒಬ್ಬ ವ್ಯಕ್ತಿ ದೊಡ್ಡ ಹೆಸರನ್ನು ಪಡೆಯುತ್ತಿದ್ದಾನೆ ಎಂದರೆ ಅವನನ್ನು ತುಳಿಯುವುದಕ್ಕೆ ಹಿಂದೆ ಸಾಕಷ್ಟು ಜನ ಇರುತ್ತಾರೆ ಎನ್ನುವ ಅರ್ಥವನ್ನು ಅದು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">