ಇವನು ಬಡತನವನ್ನೇ ಮೆಟ್ಟಿ ನಿಂತವನು...ಐದಕ್ಕೆ ಐದು ಸಿಕ್ಸರ್ ಚಚ್ಚಿದ ಈ ರಿಂಕು ಸಿಂಗ್ ಯಾರು ಗೊತ್ತಾ.. » Karnataka's Best News Portal

ಇವನು ಬಡತನವನ್ನೇ ಮೆಟ್ಟಿ ನಿಂತವನು…ಐದಕ್ಕೆ ಐದು ಸಿಕ್ಸರ್ ಚಚ್ಚಿದ ಈ ರಿಂಕು ಸಿಂಗ್ ಯಾರು ಗೊತ್ತಾ..

ಇವನು ಬಡತನವನ್ನೇ ಮೆಟ್ಟಿ ನಿಂತವನು…! ಐದಕ್ಕೆ ಐದು ಸಿಕ್ಸರ್ ಚಚ್ಚಿದ ಈ ರಿಂಕು ಸಿಂಗ್ ಯಾರು ಗೊತ್ತಾ….??

WhatsApp Group Join Now
Telegram Group Join Now

ಈ ಕ್ಷಣಕ್ಕೆ ಆ ಕಾಮೆಂಟರಿ ಸಾಕಾಗಲಿಲ್ಲ, ಈ ಸಮಯದಲ್ಲಿ ಡ್ಯಾನಿ ಮೋರಿಸನ್ ಕಮೆಂಟರಿ ಬಾಕ್ಸ್ ನಲ್ಲಿ ಇರಬೇಕಿತ್ತು. T 20 ವಿಶ್ವಕಪ್ ನಲ್ಲಿ ಪ್ರೆಥ್ವಿಡ್ ನಾಲ್ಕು ಸಿಕ್ಸರ್ ಚಚ್ಚಿದಾಗ ರಿಮೆಂಬರ್ ದಿ ನೇಮ್ ಎಂದು ಗುಣಗಾನ ಮಾಡಿದಾಗ.ಎನ್ ಬಿಶಪ್ಪ ಆದ್ರೂ ಕಮೆಂಟರಿ ಬಾಕ್ಸ್ ನಲ್ಲಿ ಇರಬೇಕಿತ್ತು. ಧೋನಿ ವಿಶ್ವಕಪ್ ನಲ್ಲಿ ಸಿಕ್ಸರ್ ಸಿಡಿಸಿದಾಗ ಧೋನಿ ಫಿನಿಷಸ್ ಅಪ್ ಇನ್ ಸ್ಟೈಲ್ ಅಂತ ಎಂದಿಗೂ ಮರೆಯಲಾಗದ ಕಾಮೆಂಟರಿ ಮಾಡಿದ ರವಿಶಾಸ್ತ್ರಿ ಆದರೂ ಆ ಕ್ಷಣದಲ್ಲಿ ಕಮೆಂಟರಿ ಬಾಕ್ಸ್ ನಲ್ಲಿ ಇರಬೇಕಿತ್ತು. ಕಾರಣ ಆ ಕ್ಷಣ ಇದಿಯಲ್ಲ ಅದು ಇದ್ಯಾವುದಕ್ಕೂ ಕೂಡ ಕಡಿಮೆ ಇರಲಿಲ್ಲ.

ಇಲ್ಲಿ ಬೋರ್ ಹೊಡೆದದ್ದು ಕಮೆಂಟರಿ ಮಾತ್ರ 5 ಎಸೆತ ಬರೋಬ್ಬರಿ 28 ರನ್ ಗಳ ಅವಶ್ಯಕತೆ. ಕೊನೆಯ ಓವರ್ ನಲ್ಲಿ ಅಸಾಧ್ಯವಾದ ಗುರಿ ಇದು. ಎರಡೇ ಎರಡು ಎಸೆತಗಳನ್ನು ಡಾಟ್ ಮಾಡಿದರೆ ಮ್ಯಾಚ್ ಫಿನಿಶ್. ಇಂತಹ ಪಂದ್ಯಗಳನ್ನು ಗೆಲ್ಲಬಹುದು ಅನ್ನುವ ನಂಬಿಕೆಯೇ ಇರುವುದಿಲ್ಲ. ಕೊನೆಯ ಓವರ್ ನಲ್ಲಿ ಇಷ್ಟೊಂದು ರನ್ ಬೇಕು ಎಂದಾಗ ಕಳೆದ ಬಾರಿಯ ಚಾಂಪಿಯನ್ ತಂಡ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

See also  ಇಂತ ಹುಚ್ಚು ಜನರು ನಿಮ್ಮ ಸುತ್ತಲೂ ಇರಬಹುದು ಏನ್ ಸ್ಟೋರಿ ಸ್ವಾಮಿ ಇದು ಗೊತ್ತಾ ? ಭಯಾನಕ ಸ್ಟೋರಿ ಗುಂಡಿಗೆ ಗಟ್ಟಿ ಇದ್ದವರು ನೋಡಿ

ಗುಜರಾತ್ ಅಲ್ಲಿ ಬಹುತೇಕವಾಗಿ ಗೆದ್ದಾಗಿತ್ತು. ಸ್ಟೇಡಿಯಂ ನಲ್ಲಿದ್ದ ಗುಜರಾತ್ ಫ್ಯಾನ್ಸ್ ಖುಷಿಯಿಂದ ಮನೆಗೆ ಹೋಗಲು ಸಿದ್ದರಾಗುತ್ತಿದ್ದರೆ ಕೊಲ್ಕತ್ತದ ಫ್ಯಾನ್ಸ್ ಅಲ್ಲಿಗಾಗಲೇ ಸ್ಟೇಡಿಯಂ ಬಿಟ್ಟು ಹೊರ ನಡೆದಿದ್ದರು. ಹೆಚ್ಚಿನ ಜನ ಟಿವಿಯನ್ನು ಆಫ್ ಮಾಡಿ ಮೊಬೈಲ್ ಪಕ್ಕಕ್ಕಿಟ್ಟು ತಮ್ಮ ಕೆಲಸಗಳಿಗೆ ಹೊರಟಿದ್ದರು. ಇದಕ್ಕೆ ಕಾರಣ ಯಾರು ಕೂಡ ಕೊಲ್ಕತ್ತಾ ಗೆಲ್ಲುತ್ತದೆ ಎನ್ನುವ ಯಾವುದೇ ರೀತಿಯ ನಂಬಿಕೆಯು ಸಹ ಇರಲಿಲ್ಲ.

ಆದರೆ ಸ್ಟ್ರೈಕ್ ನಲ್ಲಿ ನಿಂತಿದ್ದಂತಹ ರಿಂಕು ಸಿಂಗ್ ಎನ್ನುವ ವಾಮನ ಗಾತ್ರದ ಹುಡುಗ ರಣಕಲಿಯಂತೆ ಹೋರಾಟಕ್ಕೆ ನಿಂತಿದ್ದ. ಮುಂದೆ ನಡೆದದ್ದು ಇತಿಹಾಸ! ಇಂಥದ್ದೊಂದು ಫಿನಿಶ್ ಅನ್ನು ಕ್ರಿಕೆಟ್ ಜಗತ್ತು ಹಿಂದೆಂದೂ ಕಂಡಿರಲಿಲ್ಲ, ಮುಂದೆ ಕಾಣಲು ಸಾಧ್ಯವೂ ಇಲ್ಲ. ಶತಮಾನದಲ್ಲಿ ಒಂದು ಸಲ ನಡೆಯುವಂತಹ ಪವಾಡ ಅದು. ಕೊನೆಯ 5 ಚೆಂಡುಗಳಲ್ಲಿ 28 ರನ್ ಬೇಕಿದ್ದಾಗ.

ರಿಂಕು ಸಿಂಗ್ ಕೊನೆಯಲ್ಲಿ ಜ್ವಾಲಾಮುಖಿಯಂತೆ ಸಿಡಿದುಬಿಡುತ್ತಾನೆ. ಅಕ್ಷರ ಶಹ ರಣಾರ್ಬಟವನ್ನು ಮಾಡಿಬಿಡುತ್ತಾನೆ. ಐದಕ್ಕೆ 5 ಚಂಡು ಗಳನ್ನು ಸಿಕ್ಸರ್ ಗೆ ಅಟ್ಟಿ ಕ್ರಿಕೆಟ್ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಪಂದ್ಯಕ್ಕೆ ರಿಂಕು ಸಾಕ್ಷಿಯಾಗುತ್ತಾನೆ. ಈ ಪಂದ್ಯವನ್ನು ನೋಡುತ್ತಿರುವವ ರಿಗೆ ಒಂದು ಕ್ಷಣ ಏನಾಗುತ್ತಿದೆ ಎನ್ನುವುದೇ ಗೊತ್ತಾಗಿರಲಿಲ್ಲ. ಅದೊಂದು ಪವಾಡ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">