ಜೈಲಿನಲ್ಲಿದ್ದುಕೊಂಡೆ ಜನರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ನೊಂದು ಪತ್ರ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್..ಯೂಟ್ಯೂಬ್ ನಲ್ಲಿ ವೈರಲ್.

ಅಭಿಮಾನಿಗಳಿಗೆ ಪತ್ರ ಬರೆದರೆ ದರ್ಶನ್ ಪತ್ರದಲ್ಲಿ ಏನೆಲ್ಲ ಇರಬಹುದು? ತನ್ನ ಅಭಿಮಾನಿಗಳಿಗಾಗಿ ದರ್ಶನ್ ಮನದಾಳದ ಮಾತಿನಲ್ಲಿ ಪತ್ರ ಬರೆದರೆ ಈ ರೀತಿಯಾಗಿರುತ್ತದೆ……..ನನ್ನ ಪ್ರೀತಿಯ ಎಲ್ಲಾ ಸೆಲೆಬ್ರೆಟಿಗಳಿಗೂ ನನ್ನ ನಮಸ್ಕಾರ ಚಿತ್ರರಂಗದಲ್ಲಿ 25 ವರ್ಷಗಳಿಗೂ ಹೆಚ್ಚು ಕಾಲ ನನ್ನನ್ನು ಸಾಕಿ ಸಲುಹಿದವರು ನೀವು ನಿಮ್ಮಿಂದ ಅನ್ನ ತಿಂದು ಬೆಳೆದು ಕೊಬ್ಬಿದ ಶರೀರವಿದು.

WhatsApp Group Join Now
Telegram Group Join Now

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ನಿಮ್ಮ ಋಣ ಅತಿ ದೊಡ್ಡದು ಅದೇ ಸಲಗೆ ಹಾಗೂ ಅಕ್ಕರೆಯಿಂದ ನಿಮ್ಮ ಜೊತೆ ನಾಲ್ಕು ಮಾತು ಅಂಚಿಕೊಳ್ಳಲು ಬಂದಿದ್ದೀನಿ ನನ್ನ ತಂದೆಯ ಹೆಸರು ತೂಗುದೀಪ್ ಶ್ರೀನಿವಾಸ್ ಎಂದು ಇವರ ಬಗ್ಗೆ ತಿಳಿಯದಿರುವ ಕನ್ನಡಿಗರೇ ಬಹುಷಃ ಇಲ್ಲ ಅನಿಸುತ್ತೆ ಇವತ್ತು ಅವರಿಲ್ಲ ಅವರು ಕಾಲಾವಶರಾಗಿ ಮೂರು ದಶಕಗಳಾಗಿದೆ ದೇವರು ಅವರು ಬಿಟ್ಟುಹೋದರು ಸಾಕಷ್ಟು ನೆನಪುಗಳ ನಷ್ಟೇ ನನಗೆ ಕೊಟ್ಟ.. ಹೆಚ್ಚು ಕಾಲ ಅವರ ಜೊತೆ ಇರುವ ಅದೃಷ್ಟ ನಮಗಿರಲಿಲ್ಲ ಸುಮಾರು 30 ವರ್ಷಗಳಿಗೂ ಹೆಚ್ಚಿನ ಸಮಯ ಚಿತ್ರರಂಗದಲ್ಲಿ ದುಡಿದವರು ನನ್ನ ತಂದೆ.

ನನ್ನ ಮೊದಲ ಅನ್ನದಾತರು ಹಾಗೂ ಕನ್ನಡಿಗರೆಲ್ಲರ ಮೇರು ನಟರಾದ ರಾಜಕುಮಾರ್ ಅವರಿಗೆ ಬಹಳ ಆಪ್ತರಾಗಿದ್ದರು ರಾಜಕುಮಾರ ಅವರ ಅನೇಕ ಚಿತ್ರಗಳಲ್ಲಿ ನನ್ನ ತಂದೆ ತೂಗುದೀಪ ಎಂಬ ಹೆಸರಿನ ಚಿತ್ರ ಒಂದರಲ್ಲಿ ನನ್ನ ತಂದೆ ನಟಿಸಿದ್ದರು ಅದು 1966 ರಲ್ಲಿ ಬಿಡುಗಡೆಯಾಗಿತ್ತು ನಂತರ ಅವರ ಹೆಸರಿನ ಮುಂದೆ ಇದೇ ಚಿತ್ರರಂಗದ ಹೆಸರನ್ನು ಇಟ್ಟುಕೊಂಡರು..

ನಾವು ಚಿತ್ರರಂಗದಲ್ಲಿ ನಮ್ಮ ತಂದೆಯ ಯಶಸ್ಸನ್ನು ನೋಡಿದ್ವಿ ಆದರೆ ನನ್ನ ಯಶಸ್ಸನ್ನು ನೋಡುವ ಭಾಗ್ಯ ಅವರಿಗಿರಲಿಲ್ಲ ಅವರಿಗೆ ನಾನು ಸೇರಿ ಒಟ್ಟು ಮೂವರು ಮಕ್ಕಳು ನಾನು ಅವರ ಹಿರಿ ಮಗ ನನಗೆ ಓದು ಅಷ್ಟಾಗಿ ತಲೆಗೆ ಹತ್ತಲಿಲ್ಲ ಕಷ್ಟಪಟ್ಟು ಹತ್ತನೇ ತರಗತಿಯವರೆಗೂ ಓದಿದೆ ನಾನು ವಯಸ್ಸಿಗೆ ಬರುವ ಹೊತ್ತಿಗೆ ನನ್ನ ತಂದೆಗೆ ಅನಾರೋಗ್ಯ ಬಾಧಿಸ ತೊಡಗಿತು ಅವರ ಆರೋಗ್ಯದ ಕಾಳಜಿ ನನ್ನ ಹೆಗಲಿಗೆ ಬಿತ್ತು.

ನನ್ನ ತಂದೆಗೆ ಎರಡು ಕಿಡ್ನಿ ಫೇಲ್ ಆಗಿದ್ದವು ನಮ್ಮ ತಾಯಿ ಅವರ ಒಂದು ಕಿಡ್ನಿಯನ್ನೇ ನಮ್ಮ ತಂದೆಗೆ ಕೊಡಬೇಕಾಗಿ ಬಂತು ಆದರೂ ಸಹ ಅವರು ಬದುಕುಳಿಯಲಿಲ್ಲ ಅವರ ಕೊನೆಯ ದಿನಗಳಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಿದ ನೆನಪು ಮಾತ್ರ ಉಳಿದಿದೆ ಆ ಸಮಯದಲ್ಲಿ ಅವರ ಸಂಕಟ ನರಳಾಟ ವೇದನೆ ಇದಿಷ್ಟೇ ನಮಗೆ ಕಂಡದ್ದು ಎಷ್ಟು ಕಾಳಜಿ ವಹಿಸಿದರು ಸಹ ಅವರ ಆರೋಗ್ಯ ಸುಧಾರಿಸಲಿಲ್ಲ ಅವರು ಕೊನೆಗೂ ನಮ್ಮ ಕೈ ಬಿಟ್ಟು ಹೋದರು ಮನೆಗೆ ಆಸರೆಯಾಗಿದ್ದ ತಂದೆಯ ಅಗಲಿಕೆ ನಮಗೆ ಬರಸಿಡಿಲ ಆ ಗಾತಾ ನೀಡಿತ್ತು ಮುಂದೇನು ಗತಿ ಯಾರು ನಮಗೆ ದಿಕ್ಕು ಎಂದು ಕಂಗಾಲಾದೇವು.

ನನ್ನ ತಂದೆ ನೂರಾರು ಚಿತ್ರಗಳಲ್ಲಿ ನಟಿಸಿದ್ದರು ಅದರಿಂದ ಲಕ್ಷಾದೀಶ್ವರರೇನು ಆಗಿರಲಿಲ್ಲ ಅವರು ಗಳಿಸಿದ್ದರಲ್ಲಿ ಹೆಚ್ಚು ಪಾಲು ಅವರ ಚಿಕಿತ್ಸೆಗೆ ಖರ್ಚಾಗಿತ್ತು ನಾನು ಲೈಟ್ ಬಾಯ್ ಆಗಿ ನನ್ನ ಮೊದಲ ವೃತ್ತಿ ಶುರು ಮಾಡಿದೆ ಬೇರೆ ಕೆಲಸ ಮಾಡೋಣ ಅಂದ್ರೆ ಹೆಚ್ಚು ಓದಿಲ್ಲ ಅನ್ನೋ ಅಳುಕಿತ್ತು ತಂದೆಯ ತರಹ ನಟನೆಗೆ ಹೋಗೋಣ ಅಂದರೆ ನನಗೆ ಆಗ ಅದರ ಗಂದ ಗಾಳಿಯು ಗೊತ್ತಿರಲಿಲ್ಲ ನಾನು ಇತರರ ಹಾಗೆ ಯಾವುದೇ ರಂಗಭೂಮಿ ಅಥವಾ ರಂಗಶಾಲೆಯಲ್ಲಿ ಪಳಗಿದವನಲ್ಲ.

ಆದರೆ ನನ್ನ ಬುದ್ಧಿ ಸಾಮರ್ಥ್ಯಕ್ಕೆ ತಕ್ಕ ಕೆಲಸಗಳಲ್ಲಿ ನಾನು ಮುಂದುವರೆದೆ ಆ ಸಮಯದಲ್ಲಿ ಬದುಕಿನ ಬಗ್ಗೆ ಅಂತಹ ಕನಸು ಗುರಿ ಇದ್ಯಾವುದು ಇರಲಿಲ್ಲ ಎರಡು ಹೊತ್ತು ಊಟಕ್ಕೆ ಏನಾದರೂ ಆಧಾರ ಮಾಡಿಕೊಂಡರೆ ಸಾಕು ಎನ್ನುವ ಸ್ಥಿತಿಯಲ್ಲಿದ್ದೆವು ನನ್ನ ತಾಯಿಗೆ ನಾನು ಹಾಗೂ ತಮ್ಮ ಇಬ್ಬರೇ ಆಸರೆ ನನ್ನ ಸಹೋದರ ದಿನಕರ್ ಅವನ ಪಾಡಿಗೆ ಅವನು ಅವನಿಗೆ ಗೊತ್ತಿದ್ದ ಕೆಲಸಗಳಲ್ಲಿ ಮುಂದುವರೆದಿದ್ದ ನಾನು ಹಾಲು ಮಾರುತ್ತಾ ಮನೆ ಮನೆಗೆ ಪೇಪರ್ ಹಾಕುತ್ತಾ ಸಿನಿಮಾ ಸೆಟ್ ಗಳಲ್ಲಿ ಲೈಟ್ ಮ್ಯಾನ್ ಆಗಿ ಮೇಕಪ್ ಬಾಯ್ ಆಗಿ ಚಹಾ ಕಾಫಿ ತಿಂಡಿ ಸರ್ ಮಾಡುತ್ತಾ ಹೀಗೆ ಸಿಕ್ಕ ಸಿಕ್ಕ ಕೆಲಸ ಮಾಡುತ್ತಾ ಅಲ್ಪ ಸ್ವಲ್ಪ ಹಣವನ್ನು ಗಳಿಸುತ್ತಿದ್ದೆ.

ಸಮಾರಂಭ ಒಂದರಲ್ಲಿ ನಾನು ಊಟಕ್ಕೆ ಕುಳಿತಿದ್ದಾಗ ನನ್ನ ಕೈಲಿದ್ದ ತಟ್ಟೆಯನ್ನು ಕಿತ್ತು ನನ್ನನ್ನು ಹೊರ ಹಾಕಿದರು ನಾನು ಒಬ್ಬ ಹಿರಿಯ ನಟನ ಮಗನೆಂದು ಸಹ ತಿಳಿದು ನನಗೆ ಯಾರು ಗೌರವವನ್ನು ನೀಡಿರಲಿಲ್ಲ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು ಬೆಳೆದೆ ಆರಂಭದಲ್ಲಿ ಕೆಲವು ಧಾರಾವಾಹಿಗಳಲ್ಲಿ ನಟಿಸಿದೆ ಅದರ ನಂತರ ಅನೇಕರ ಚಿತ್ರಗಳಲ್ಲಿ ಸೈಡ್ ರೋಲ್ ಕೊಟ್ಟರು ಶಿವಣ್ಣ ರಾಮ್ ಕುಮಾರ್ ಮೋಹನ್ ವಿನೋದ್ ಗಣ್ಯ ನಟರಾಜ್ ಸಿನಿಮಾಗಳಲ್ಲಿ ಅವರ ಪಕ್ಕವೇ ನಿಂತು ನಟಿಸಿದೆ ಇದಕ್ಕೂ ಮೊದಲು ಶಿವಣ್ಣನವರ ಜನುಮದ ಜೋಡಿ ಚಿತ್ರದ ತೆರೆಯ ಹಿಂದೆ ಕೆಲಸ ಮಾಡಿ ಅವರ ಹೋಂ ಬ್ಯಾನರ್ ನಿಂದ ಮೊದಲ ಸಂಭಾವನೆ ಪಡೆದಿದೆ ಅದನ್ನು ನಾನಿನ್ನು ಸಹ ಮರೆತಿಲ್ಲ.

ನಾವೆಲ್ಲರೂ ಕೂಡ ದೊಡ್ಡ ಮನೆಯ ಅನ್ನವನ್ನು ತಿಂದುಕೊಂಡು ಬಂದವರೇ ಎಂದು ಹೇಳಲು ಇವತ್ತಿಗೂ ಸಹ ನನಗೆ ಹೆಮ್ಮೆ ಹಾಗೂ ಸಂತೋಷವಿದೆ ನಟ ಶಿವಣ್ಣ ರವರ ಬೆಂಬಲ ಹಾಗೂ ಪ್ರೀತಿ ಬಹಳ ಅಮೂಲ್ಯವಾದದ್ದು ನನಗೆ ಚಿತ್ರರಂಗದಲ್ಲಿ ಅಭಿನಯಿಸಲು ಪಾತ್ರ ಕೊಟ್ಟಿದ್ದು ಮೊದಲ ಬಾರಿಗೆ ನಿರ್ದೇಶಕರಾದಂತಹ ಎಸ್ ನಾರಾಯಣ್ ರವರು ಅವರಿಗೆ ನಾನು ಸದಾ ಚಿರಋಣಿ ಮುಂದೆ ದಿವಂಗತ ನಿರ್ದೇಶಕರಾದಂತಹ ಪಿ ಎಸ್ ಸತ್ಯ ರವರ ಮೆಜೆಸ್ಟಿಕ್ ಎಂಬ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದ ಆ ಸಿನಿಮಾ ನೋಡಿ ಎಷ್ಟು ಜನ ನೋಡಿ ಸಂತೋಷಪಟ್ಟರೋ ಅಷ್ಟೇ ಅದಕ್ಕಿಂತ ಹೆಚ್ಚಾಗಿ ನನ್ನನ್ನು ನೋಡಿ ಗೇಲಿ ಮಾಡಿದವರು ಕೂಡ ಇದ್ದರು ಹೀರೋ ಆಗಿ ನಟಿಸಿದ್ದಕ್ಕೆ ನನ್ನ ಲಕ್ ಬದಲಾಗಲಿಲ್ಲ

ಅಥವಾ ಅದರ ನಂತರ ಸಿನಿಮಾಗಳ ಅವಕಾಶಗಳನ್ನು ಸಾಲು ಸಾಲಾಗಿ ಬರಲಿಲ್ಲ ಸ್ಟಾರ್ ಅನ್ನೋದು ಅಷ್ಟು ಸುಲಭವಾಗಿ ಯಾರಿಗೂ ಸಿಗುವಂತದ್ದಲ್ಲ ಮನೆಯಲ್ಲಿ ಬಡತನ ಹಾಸಿ ಒದ್ದಿಕೊಳ್ಳುವಷ್ಟಿತ್ತು ಆಗ ನಿರ್ದೇಶಕ ಪ್ರೇಮ್ ರವರ ಡೈರೆಕ್ಷನ್ ಶುರು ಮಾಡಲು ನಿರ್ಧರಿಸಿದ್ದರು ಅವರ ಕರಿಯ ಚಿತ್ರದಲ್ಲಿ ನಟಿಸಿದೆ ಜನರು ಅದ್ದೂರಿಯಾಗಿ ನನ್ನನ್ನು ಸ್ವಾಗತಿಸಿದ್ದರು ಆ ಸಮಯದಲ್ಲಿ ಕೇವಲ ಒಂದು ಲಕ್ಷ ರೂಪಾಯಿಯ ಸಂಭಾವನೆಗಾಗಿ ಇತರ ನಟರಿಂದ ರಿಜೆಕ್ಟ್ ಆಗಿದ್ದಂತಹ ಸಿನಿಮಾಗಳನ್ನು ಒಪ್ಪಿಕೊಂಡಿದ್ದೆ ಕಾರಣ ಅವತ್ತಿಗೆ ಆ ಹಣ ನನಗೆ ಬಹುದೊಡ್ಡ ಪ್ರಮಾಣದಾಗಿತ್ತು ಅಷ್ಟು ಹಣ ನನ್ನ ಕೈಗೆ ಬಂದರೆ ನನ್ನ ಕೆಲವು ಸಾಲ ಹಾಗೂ ಕಮಿಟ್ಮೆಂಟ್ ಗಳಿಗೆ ಸಹಾಯವಾಗಲಿ ಎನ್ನುವ ಅಸಹಾಯಕತೆ ಮತ್ತು ಅನಿವಾರ್ಯತೆಯ ಪರಿಸ್ಥಿತಿ.

ಆ ಸಮಯದಲ್ಲಿ ನನ್ನ ಬಗ್ಗೆ ಹೊಗಳಿ ಬರೆದವರಿಗಿಂತ ಇಲ್ಲಸಲ್ಲದನ್ನ ಬರೆದು ವಿವಾದ ಹುಟ್ಟಿ ಹಾಕಿದವರೇ ಜಾಸ್ತಿ, ಕರಿಯ ಚಿತ್ರದ ಯಶಸ್ಸು ಕೈಹಿಡಿತು ಮುಂದೆ ಅನೇಕ ಚಿತ್ರಗಳಲ್ಲಿ ನಟಿಸಿದೆ ಆ ಸಮಯದಲ್ಲಿ ಪುನೀತ್ ,ಸುದೀಪ್, ವಿಜಯ್ ರಾಘವೇಂದ್ರ, ಉಪೇಂದ್ರ, ಶಿವಣ್ಣ ಮುಂತಾದ ಪ್ರಮುಖ ನಟರು ಲೀಡಿಂಗ್ ನಲ್ಲಿ ಇದ್ದರು ಇವರೆಲ್ಲ ಒಬ್ಬರಿಗಿಂತ ಒಬ್ಬರು ಪ್ರತಿಭಾವಂತ ಕಲಾವಿದರು ಇಂಥವರ ಸಿನಿಮಾಗಳ ಮುಂದೆ ನನ್ನದೊಂದು ಕಟೌಟ್ ಇತ್ತು ಎಂಬುವುದು ಹೆಮ್ಮೆಯ ಮಾತು 2007ರಲ್ಲಿ ನಿರ್ಮಾಪಕ ಕೂಡ ಅದೇ ಜನ ಬಹು ಬೇಡಿಕೆಯ ಕಲಾವಿದನನ್ನಾಗಿ ನನ್ನ ರೂಪಿಸಿದರು ಪ್ರೀತಿಯಿಂದ ದಾಸ ಕರಿಯ ಡಿ ಬಾಸ್ ಎಂದು ಕರೆದರು ಪ್ರೀತಿಯಿಂದ ಅವರೇನು ಕರೆದರೂ ಏನೇ ಕಟ್ಟಿದರು ಸಂತೋಷವೇ..

[irp]