ಮೆಟ್ಟಿಲುಗಳ ಮೇಲಿಂದ ಹಾರಿದ ದೈವೀ ದೈವ ನಲಿವ ಅದ್ಬುತ ದೃಶ್ಯ ಪವಾಡ ಕಂಡು ಭಕ್ತರೇ ಶಾಕ್ - Karnataka's Best News Portal

ತುಳುನಾಡಿನ ದೈವಗಳ ಶಕ್ತಿ ಎಷ್ಟು ಭಯಂಕರವಾಗಿರುತ್ತದೆ ಗೊತ್ತಾ?ದಕ್ಷಿಣ ಕನ್ನಡ ಹಾಗೂ ಆ ಭಾಗದ ಕೆಲ ಜಿಲ್ಲೆಗಳಿಗೆ ಅಷ್ಟೇ ಎಂದು ತಿಳಿದುಕೊಂಡಿದ್ದ ಭೂತಕೋಲಾ ದೈವಾರಾಧನೆ ಇಂತಹ ಆಚಾರ ವಿಚಾರ ನಂಬಿಕೆಗಳ ಬಗ್ಗೆ ಇಂದು ಇಡೀ ವಿಶ್ವವೇ ಆಸಕ್ತಿ ತೋರುತ್ತಿದೆ. ಇದು ಎಲ್ಲಾ ಸಾಧ್ಯವಾಗಿದ್ದು ಕಾಂತಾರ ಎನ್ನುವ ಒಂದು ಸಿನಿಮಾದ ಮೂಲಕ ಎಂದು ಹೇಳಬಹುದು. ನಿರ್ದೇಶಕರಾದ ರಿಷಬ್ ಶೆಟ್ಟಿ ಅವರು ಮೂಲತಃ ಕುಂದಾಪುರದವರು ಹೀಗಾಗಿ ಬಾಲ್ಯದಿಂದಲೂ ತಾವು ನೋಡಿ ತಿಳಿದುಕೊಂಡಿದ್ದ ಈ ಸಂಸ್ಕೃತಿಯನ್ನು ಸಿನಿಮಾ ಮೂಲಕ ತೆರೆ ಮೇಲೆ ಅದ್ಭುತವಾಗಿ ತಂದು ಇಂದು ಜಗತ್ತೇ ಕರ್ನಾಟಕದ ತುಳುಭಾಗದ ಕಡೆ ತಿರುಗಿ ನೋಡುವಂತೆ ಮಾಡಿದೆ. ಇದಾದ ಬಳಿಕ ಎಲ್ಲರೂ ಕೂಡ ಇಲ್ಲಿನ ಆಚರಣೆಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ದೈವಾರಾಧನೆ ಕುರಿತಾದ ಹಲವಾರು ವಿಡಿಯೋಗಳು ವೈರಲ್ ಆಗುತ್ತಿವೆ. ಇಂತಹದೇ ಒಂದು ವಿಡಿಯೋದಲ್ಲಿ ತುಳುನಾಡಿನ ದೈವ ಶಕ್ತಿಗಳು ಎಷ್ಟು ಭಯಂಕರವಾಗಿರುತ್ತದೆ ಎನ್ನುವುದು ರೆಕಾರ್ಡ್ ಆಗಿದೆ.

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಕಾಂತರಾ ಸಿನಿಮಾದ ಪ್ರತಿಯೊಂದು ಅಂಶವು ಕೂಡ ಅದ್ಭುತವಾಗಿದೆ. ಸರ್ಕಾರ, ಕಾಡು, ಕಾಡಂಚಿನ ಜನರ ವೇದನೆಗಳು ಅವರ ಮುಗ್ಧತೆ ಜೊತೆಗೆ ದೈವದ ವಿಷಯ ಇದೆಲ್ಲವೂ ಕಾಂತರಾ ಸಿನಿಮಾದ ಶಕ್ತಿಯಾಗಿದೆ. ಈ ಸಿನಿಮಾದಲ್ಲಿ ಪಂಜುರ್ಲಿ ಹಾಗೂ ಗುಳಿಕ ದೈವದ ಬಗ್ಗೆ ಜನರಿಗೆ ತಿಳಿಸಿಕೊಡಲಾಗಿದೆ. ಅದರಲ್ಲೂ ಕೊನೆಯಲ್ಲಿ ಗುಳಿಕ ದೈವ ಆವಾಹನೆ ಆಗಿ ರಿಷಭ್ ಶೆಟ್ಟಿ ಅವರು ಅಬ್ಬರಿಸಿರುವ ಕುರಿತು ಜನರು ಈ ನಟನೆಗೆ ಅವಾರ್ಡ್ ಗಳು ಅಷ್ಟೇ ಅಲ್ಲಾ ಆಸ್ಕರ್ ಅನ್ನೇ ಕೊಡಬೇಕು ಎಂದು ಮಾತನಾಡುತ್ತಿದ್ದಾರೆ ಎಂದರೆ ಅದಕ್ಕೆ ಆ ದೈವದ ಆಶೀರ್ವಾದ ಇರುವುದೇ ಕಾರಣ ಎನ್ನಬಹುದು. ತುಳುನಾಡಿನ ಭಾಗದವರು ಪಂಜುರ್ಲಿ, ಗುಳಿಕ, ಅಣ್ಣಪ್ಪಸ್ವಾಮಿ ಈ ರೀತಿ ಅನೇಕ ದೈವಗಳನ್ನು ಪೂಜಿಸುತ್ತಾರೆ. ಮತ್ತು ಇಲ್ಲಿ ದೈವದ ಜೊತೆಗೆ ದೈವ ನರ್ತಕರಿಗೂ ಕೂಡ ಅಷ್ಟೇ ಬೆಲೆ ಇರುತ್ತದೆ. ಜನರು ಯಾವುದೇ ಸಮಸ್ಯೆ ಬಂದರೂ ದೈವ ನರ್ತಕರ ಮೇಲೆ ದೈವ ಬಂದು ಏನು ಮಾತು ಹೇಳುತ್ತದೆಯೋ ಆ ಮಾತಿಗೆ ಬೆಲೆ ಕೊಟ್ಟು ಅದರಂತೆ ನಡೆದುಕೊಳ್ಳುತ್ತಾರೆ.

ಇದೇ ಪದ್ಧತಿಯನ್ನು ಅವರು ತಲತಲಾಂತರದಿಂದ ನಡೆಸಿಕೊಂಡು ಬಂದಿದ್ದಾರೆ. ಹಾಗಾಗಿ ಇಲ್ಲಿ ನಡೆಯುವ ಭೂತಕುಲ, ದೈವಾರಾಧನೆಗೆ ಆ ಭಾಗದ ಜನರು ಯಾವುದೇ ಊರಲ್ಲಿ ಇದ್ದರೂ ಕೂಡ ತಪ್ಪದೇ ಬಂದು ಪಾಲ್ಗೊಳ್ಳುತ್ತಾರೆ. ಈಗ ವೈರಲ್ ಆಗುತ್ತಿರುವ ವಿಡಿಯೋ ಒಂದರಲ್ಲಿ ದೈವ ನರ್ತಕರಾದ ಒಬ್ಬರು ದೈವ ಮೈಮೇಲೆ ಬಂದಾಗ ಅವರ ಶಕ್ತಿಯಿಂದ ಹೇಗೆ ನರ್ತನ ಮಾಡುತ್ತಾರೆ ಎನ್ನುವುದನ್ನು ನೋಡಬಹುದಾಗಿದೆ. ಅಲ್ಲಿ ನಡೆದಿದ್ದ ಸಾವಿರಾರು ಮೊಬೈಲ್ ಕ್ಯಾಮರಗಳು ಕೂಡ ಇದನ್ನು ಸೆರಿ ಹಿಡಿದಿವೆ. ಮೆಟ್ಟಿಲುಗಳಿಂದ ಇಳಿದು ಬರುತ್ತಿದ್ದ ಅಲಂಕಾರ ಭೂಷಿತ ದೈವ ನರ್ತಕರು ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಒಮ್ಮೆಲೆ ಹಾರಿ ಬರುತ್ತಾರೆ ದೈವಶಕ್ತಿ ಇಲ್ಲದೆ ಈ ರೀತಿ ಮಾಡಲು ಸಾಧ್ಯವೇ ಇಲ್ಲ ಎನ್ನುವುದನ್ನು ಇದನ್ನು ನೋಡಿದ ಬಳಿಕ ಜನರು ಹೇಳುತ್ತಿದ್ದಾರೆ.ಈ ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *