ಹಾಸನಂಬ ದೇವಾಲಯವು ವರ್ಷಕೊಮ್ಮೆ ತೆರೆಯುವುದು ಏಕೆ??ಹಾಸನಂಬ ದೇವಸ್ಥಾನವು ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಇದೆ. ಈ ದೇವಾಲಯವು ಪ್ರತಿವರ್ಷ ಒಂದು ವಾರದವರೆಗೆ ಮಾತ್ರ ಭಕ್ತರಿಗೆ ತೆರೆದಿರುವುದು ಅಸಾಮಾನ್ಯವಾಗಿದೆ. ವರ್ಷದ ಉಳಿದ ದಿನಗಳಲ್ಲಿ, ದೇವಿಗೆ ಬೆಳಗಿದ ದೀಪ, ಹೂವು, ನೀರು ಮತ್ತು ಎರಡು ಚೀಲ ಅಕ್ಕಿಯನ್ನು ನೈವೇದ್ಯವಾಗಿ ಮುಂದಿನ ವರ್ಷದವರೆಗೆ ಇಡಲಾಗುತ್ತದೆ. ಪ್ರತಿ ವರ್ಷವು ದೇವರ ಮುಂದೆ ಇರುವ ಕಲ್ಲು ಒಂದು ಇಂಚು ಚಲಿಸುತ್ತದೆ ಮತ್ತು ಅದು ಹಾಸನಾಂಬೆಯ ಪಾದಕಮಲವನ್ನ ತಲುಪಿದಾಗ ಕಲಿಯುಗವು ಕೊನೆಗೊಳ್ಳುತ್ತದೆ ಎಂದು ನಂಬಲಾಗಿದೆ. ಹಾಸನಾಂಬ ದೇವಾಲಯದ ಪ್ರಧಾನ ದೇವತೆಯ ಹೆಸರನ್ನು ಹಾಸನ ಎಂದು ಹೆಸರಿಸಲಾಯಿತು. ತನ್ನ ಭಕ್ತರಿಗೆ ಸಕಲ ಸಂಪತ್ತನ್ನು ದಯಪಾಲಿಸುತ್ತಾ ಸದಾ ನಗುನಗುತ್ತಿರುತ್ತಾಳೆ ಎಂದು ಭಾವಿಸಿರುವುದರಿಂದ ಆಕೆಯನ್ನು ಹಾಸನಾಂಬ ಎಂದು ಕರೆಯುತ್ತಾರೆ.
ಒಮ್ಮೆ ಸಪ್ತಮಾತೃಕೆಗಳಾದ ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಇಂದ್ರಾಣಿ ಮತ್ತು ಚಾಮುಂಡಿ ದಕ್ಷಿಣ ಭಾರತಕ್ಕೆ ತೇಲುತ್ತಾ ಬಂದಾಗ, ಅವರು ಹಾಸನದ ಸೌಂದರ್ಯದಿಂದ ವಿಸ್ಮಯಗೊಂಡರು ಮತ್ತು ಅದನ್ನು ಶಾಶ್ವತವಾಗಿ ತಮ್ಮ ಮನೆಯನ್ನಾಗಿ ಮಾಡಲು ನಿರ್ಧರಿಸಿದರು. ಮಹೇಶ್ವರಿ, ಕೌಮಾರಿ ಮತ್ತು ವೈಷ್ಣವಿ ದೇವಸ್ಥಾನದ ಒಳಗಿನ ಮೂರು ಇರುವೆಗಳಲ್ಲಿ ನೆಲೆಸಿದರು; ಕೆಂಚಮ್ಮನ ಹೊಸಕೋಟೆಯಲ್ಲಿ ಬ್ರಾಹ್ಮಿ, ದೇವಿಗೆರೆ ಹೊಂಡದಲ್ಲಿ ಇಂದ್ರಾಣಿ, ವರಾಹಿ, ಚಾಮುಂಡಿ ಮೂರು ಬಾವಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಾಸನ ಜಿಲ್ಲೆಯು ಇತಿಹಾಸದಲ್ಲಿ ಚೋಳರು ಹಾಗೂ ಹೊಯ್ಸಳರ ಆಳ್ವಿಕೆಯಲ್ಲಿ ಇತ್ತು. ಹೊಯ್ಸಳರ ಪ್ರಾದೇಶಿಕ ನಾಯಕನಾದ ಸಂಜೀವ ಕೃಷ್ಣಪ್ಪ ನಾಯಕರು ಒಮ್ಮೆ ಹೋಗುವಾಗ ಮೊಲವೊಂದು ಅಡ್ಡ ಬಂದಿತ್ತು, ಇದನ್ನು ರಾಜನು ಅಪಶಕುನವೆಂದು ತಿಳಿದು ಖಿನ್ನತೆ ಒಳಗಾಗಿ ಹಾಸನ ಜಿಲ್ಲೆಯನ್ನು ಬಿಡುವಂತೆ ಆಯ್ತು. ಆದರೆ ಆ ರಾಜನ ಕನಸಿನಲ್ಲಿ ಹಾಸನಾಂಬೇ ಬಂದು ನಾನು ಹುತ್ತದ ರೂಪದಲ್ಲಿ ಇದ್ದೇನೆ ನನಗೆ ಒಂದು ಗುಡಿಯನ್ನು ಕಟ್ಟಿಸು ಎಂದು ಹೇಳುತ್ತಾಳೆ ತಕ್ಷಣ ಬೆಳಗ್ಗೆ ರಾಜನು ಆ ಸ್ಥಳಕ್ಕೆ ಹೋಗಿ ಗುಡಿಯನ್ನು ಕಟ್ಟಿಸುತ್ತಾನೆ.
ಇನ್ನು ಹಾಸನ ಜಿಲ್ಲೆಯಲ್ಲಿ ಮೆಣಸಿನಕಾಯಿಗಳನ್ನು ಬಿಡಿಸಿ ಒಣಗಿಸಿ ಪುಡಿ ಮಾಡಿದಾಗ ದೇವರಿಗೆ ಧೂಳು ಹಾಗು ಖಾರದ ಕಾರಗಳು ದೇವಿಯ ಕಣ್ಣಿಗೆ ಹೋಗುತ್ತಿದ್ದಂತೆ ಈ ಕರಣಕ್ಕಾಗಿ ದೇವರ ಹಾಗೂ ಭಕ್ತಾದಿಗಳ ಮಧ್ಯ ಒಂದು ಒಪ್ಪಂದ ನಡೆಯಿತು. ಈ ಒಪ್ಪಂದದ ಪ್ರಕಾರ ಆಶ್ವಯುಜದ ಪೂರ್ಣಮೀಯ ನಂತರ ದೀಪಾವಳಿಯ ವರೆಗೂ ದೇವಸ್ಥಾನದ ಬಾಗಿಲುಗಳನ್ನು ತೆರೆಯಬೇಕು ಈ ವೇಳೆ ಕೃಷಿ ಚಟುವಟಿಕೆಗಳು ಕಡಿಮೆ ಇರುವುದರಿಂದ ಈ ಒಪ್ಪಂದವು ನೆರವೇರಿತು ಹಾಗಾಗಿ ವರ್ಷಕ್ಕೆ ಒಮ್ಮೆ ಒಂದು ವಾರಗಳ ಮಟ್ಟಿಗೆ ತಾಯಿಯ ದೊರೆಯುತ್ತದೆ ಇನ್ನು ಈ ದೇವಸ್ಥಾನಕ್ಕೆ ಒಬ್ಬ ಸೊಸೆಯು ಪ್ರತಿನಿತ್ಯ ಪೂಜೆಯನ್ನು ಮಾಡಿ ದೇವಿಯ ಜೊತೆ ಮಾತನಾಡುತ್ತಿರುತ್ತಾಳೆ ಹೀಗೆ ಅತ್ತೆ ಒಬ್ಬಳು ಮುಂದಿನ ಕೆಲಸ ಮಾಡುವ ಬದಲು ಇಲ್ಲಿಯ ಇದ್ದಾಳೆ ಎಂದು ಬಟ್ಟಲನ್ನು ತೆಗೆದುಕೊಂಡು ಹೊಡೆಯುತ್ತಾಳೆ. ಹೊಡೆದಾಗ ರಕ್ತ ಬಂದು ಆ ಸೊಸೆಯು ಹಾಸನಾಂಬೇ ಎಂದು ಕೂಗಿದಾಗ ಅವಳು ಅಲ್ಲೇ ಕಲ್ಲಾಗಿ ನಿಂತಿರುವುದು ಆ ಸೊಸೆಯೇ ದೇವರ ಮುಂದಿರುವ ಕಲ್ಲು.