ಅಂಬಾನಿಗೂ ಠಕ್ಕರ್ ಕೊಡುತ್ತಿರೋ ಈ ಬಿಂದು ಮಾಲೀಕ ಯಾರು ಗೊತ್ತಾ ? I am not for sale ಕೋಕಾ‌ ಕೋಲಾ ಎಂದು ಬೀಗಿದ್ದು ಹೇಗೆ ನೋಡಿ - Karnataka's Best News Portal

I AM NOT FOR SALE ಕೋಕಾ ಕೋಲಾ ಅಂಬಾನಿಗೂ ಟಕ್ಕರ್ ಕೊಡುತ್ತಿರೋ ಈ ಬಿಂದು ಮಾಲೀಕ ಯಾರು!
ಇವತ್ತಿನ ಸಾಧಕರ ಹೆಸರು ಸತ್ಯ ಶಂಕರ್ ಎಂದು ಮೂಲತಃ ಪುತ್ತೂರಿನವರಾದ ಇವರು ಬಿಂದು ಎಂಬ ಕುಡಿಯುವ ನೀರು ಹಾಗೂ ಜೀರಾ ಮಸಾಲ ಡ್ರಿಂಕ್ ನ ಮಾಲೀಕರು ಇವತ್ತು ಇವರ ಈ ಬ್ರಾಂಡ್ ದೇಶದಲ್ಲೆಲ್ಲ ಹೆಚ್ಚಿನ ಹೆಸರು ಮಾಡಿದೆ.

ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ಪಡೆದಂತಹ ಈ ಬಿಂದು ಇವತ್ತು ನಮ್ಮ ರಾಜ್ಯದ ಹೆಮ್ಮೆಯ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ ಇದರ ಯಶಸ್ಸಿನ ಹಿಂದೆ ನಿಂತಂತಹ ವ್ಯಕ್ತಿಯೇ ಪುತ್ತೂರಿನ ಸತ್ಯ ಶಂಕರ್ ಎಂಬ ಯಶಸ್ವಿ ಉದ್ಯಮಿ ಇವತ್ತು 500 ಕೋಟಿಗೂ ಹೆಚ್ಚು ಟರ್ನ್ ಓವರ್ ಹೊಂದಿದ ಸಂಸ್ಥೆಯ ಮಾಲೀಕರಾಗಿದ್ದರೂ ಸಹ ಅವರಲ್ಲಿ ಸ್ವಲ್ಪವೂ ಸಹ ಅಹಂ ಅಹಂಕಾರ ಯಾವುದು ಸಹ ಇಲ್ಲ.

ಇದೇ ಕಾರಣಕ್ಕೆ ಸತ್ಯ ಶಂಕರ್ ಅವರು ನಮಗೆಲ್ಲರಿಗೂ ಕೂಡ ಇಷ್ಟವಾಗುವುದು ಸರಳತೆ ಹಾಗೂ ಸಜ್ಜನತೆಯ ಸಹಕಾರ ಮೂರ್ತಿಯಾದ ಸತ್ಯಶಂಕರ್ ಅವರು ಇವತ್ತಿಗೂ ಸಾವಿರ ಕೋಟಿ ವ್ಯವಹಾರವನ್ನು ನಡೆಸುತ್ತಿದ್ದರು ಸಹ ತಾವು ಬೆಳೆದು ಬಂದಂತಹ ಆ ಮೂಲವನ್ನು ಮರೆತಿಲ್ಲ ಆರಂಭದಲ್ಲಿ ಕಡಿಮೆ ಪ್ರಮಾಣದಲ್ಲಿ ಉದ್ಯಮವನ್ನು ಪ್ರಾರಂಭಿಸಿದ ಸತ್ಯ ಶಂಕರ್ ಅವರು ಆರಂಭಿಕ ಬೇರುಗಳನ್ನು ಇವತ್ತಿಗೂ ಮರೆಯದೆ ಸ್ಮರಿಸುತ್ತಾರೆ.

ಇವತ್ತು ಅದೆಷ್ಟೋ ಜನರಿಗೆ ಉದ್ಯೋಗ ಕಲ್ಪಿಸಿ ಅನ್ನ ಹಾಕುತ್ತಿರುವoತಹ ಶ್ರೀ ಸತ್ಯಶಂಕರ್ ಅವರು ತಾವು ಬೆಳೆದು ಬಂದ ಜರ್ನಿಯ ಬಗ್ಗೆ ವಿವರವಾಗಿ ಒಂದು ಸ್ತೂಲವಾದ ಬೋರ್ಡ್ ನಲ್ಲಿ ನಮೂದಿಸಿ ಅದನ್ನು ಈಗಲೂ ಕೂಡ ತಮ್ಮ ಕಚೇರಿಯ ಮುಂಭಾಗದಲ್ಲಿ ಇರಿಸಿ ಬಂದವರಿಗೆಲ್ಲ ಆದನ್ನು ತೋರಿಸುತ್ತಾ ತಮ್ಮ ಹಾದಿಯನ್ನು ಪರಿಚಯ ಮಾಡಿಕೊಡುತ್ತಾರೆ.

ಈ ಮೂಲಕ ಪೀಳಿಗೆಯನ್ನು ಸದಾ ಕಾರ್ಯೋನ್ಮುಖವಾಗುವಂತೆ ಹಾಗೂ ತಮ್ಮ ತಮ್ಮ ಕೆಲಸದ ಬಗ್ಗೆ ಶ್ರದ್ಧೆ ತೋರುವಂತೆ ಸ್ಪೂರ್ತಿ ತುಂಬುತ್ತಾರೆ ಮೂಲತಃ ಪುತ್ತೂರಿನವರಾದಂತಹ ಸತ್ಯ ಶಂಕರ್ ಅವರು ಸಾಧಾರಣ ಮನೆತನದಲ್ಲಿ ಜನಿಸಿದಂತಹ ಹುಡುಗ 1984ರಲ್ಲಿ ಮೊದಲಿಗೆ ಆಟೋರಿಕ್ಷಾ ಟೂರಿಂಗ್ ಸಂಸ್ಥೆಯನ್ನು ಆರಂಭಿಸಿದ ಸತ್ಯ ಶಂಕರ್ ಮುಂದೆ 1985ರಲ್ಲಿ ತಮ್ಮ ತ್ರಿಚಕ್ರ ವಾಹನದ ಸಣ್ಣ ಉದ್ಯಮವನ್ನು ಕಾರ್ ಕ್ಷೇತ್ರದ ವರೆಗೂ ವಿಸ್ತರಿಸಿಕೊಂಡರು.

ಆ ಬಳಿಕ 1987ರಲ್ಲಿ ಸ್ವಂತದ ಆಟೋಮೊಬೈಲ್ಸ್ ಹಾಗೂ 1989 ರಲ್ಲಿ ಟೈಯರ್ ಡೀಲರ್ ಆರಂಭಿಸಿದ ಇವರು 1994 ರಲ್ಲಿ ಪ್ರವೀಣ್ ಕ್ಯಾಪಿಟಲ್ ಎಂಬ ಸಣ್ಣ ಸಣ್ಣ ಗಾತ್ರದ ಹಣಕಾಸು ಸಂಸ್ಥೆಯನ್ನು ಶುರು ಮಾಡಿದರು ಈ ರೀತಿ ಹಂತ ಹಂತವಾಗಿ ಬಿಸಿನೆಸ್ ನ ಹಲವು ಆಯಾಮಗಳಲ್ಲಿ ತಮ್ಮನ್ನ ತಾವು ತೆಗೆದುಕೊಳ್ಳುತ್ತಾ ಬಂದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *