ಎಷ್ಟೆಷ್ಟು ಓದಿದ್ದಾರೆ ಆಸ್ತಿ ಎಷ್ಡಿದೆ ಗೊತ್ತಾ? ಅನಿತಾ ಭವಾನಿ ಗೌಡರ ಸೊಸೆಯರಲ್ಲಿ ಯಾರು ಬೆಸ್ಟ್ ನೋಡಿ - Karnataka's Best News Portal

ಭವಾನಿ ರೇವಣ್ಣಗೆ ಗೌಡರ ಕುಟುಂಬದಿಂದ ಮೋಸ.!
ಭವಾನಿ ರೇವಣ್ಣ ಕೆ ಆರ್ ನಗರದ ಸಾಲಿಗ್ರಾಮದಲ್ಲಿ ಜನಿಸಿದರು ಇವರ ಕುಟುಂಬಕ್ಕೆ ಅಷ್ಟೊಂದು ರಾಜಕೀಯ ಹಿನ್ನೆಲೆ ಇರಲಿಲ್ಲ ಆದರೆ ಇವರ ತಂದೆ ಶಿವಣ್ಣ ದೇವೇಗೌಡರಿಗೆ ಅಪ್ತರಾಗಿದ್ದರು ಭವಾನಿ ರೇವಣ್ಣ ಪದವೀಧರೆಯಾಗಿದ್ದರು ಅದೇ ರೀತಿ ಗೌಡರ ಮಗ ರೇವಣ್ಣ ಓದಿದ್ದು 10ನೇ ಕ್ಲಾಸ್ ಅಷ್ಟೇ, ಹೀಗಾಗಿ ಅವರಿಗೆ ಭವಾನಿ ರೇವಣ್ಣ ರನ್ನು 1985ರಲ್ಲಿ ಮದುವೆ ಮಾಡಿಸಿದ್ದರು ದೇವೇಗೌಡರು.

ದೇವೇಗೌಡ ಅವರು ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದರು. ದೇವೇಗೌಡರು ಸಚಿವರಾದಂತಹ ಸಂದರ್ಭದಲ್ಲಿ ಅವರನ್ನು ನೋಡಲು ಸಾಕಷ್ಟು ಜನ ಮನೆಗೆ ಬರುತ್ತಿದ್ದರು ಆಗ ಭವಾನಿ ರೇವಣ್ಣ ಅವರು ತಮ್ಮ ಮಾವನನ್ನು ನೋಡಿ ಜನರೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂದು ತಿಳಿದುಕೊಂಡಿದ್ದರು. ಕಾಲ ಕಳೆದಂತೆ 1994ರಲ್ಲಿ ಎಚ್ ಡಿ ರೇವಣ್ಣ ರಾಜಕೀಯ ಪ್ರವೇಶ ಮಾಡಿದರು ಹೊಳೆನರಸೀಪುರ ನಕ್ಷತ್ರದಿಂದ ಕಣಕ್ಕೆ ಇಳಿದು ವಿನ್ ಕೂಡ ಆದರು.


ಆಗ ಪತಿಯ ಜೊತೆ ತಾವು ಕೂಡ ಜನರೊಂದಿಗೆ ಬೆರೆಯಲು ಭವಾನಿಯವರು ಪ್ರಾರಂಭ ಮಾಡಿದರು. ಜನರ ಕಷ್ಟಗಳನ್ನು ಆಲಿಸಿದರು ಆದರೆ 1999 ರಲ್ಲಿ ಎಚ್ ಡಿ ರೇವಣ್ಣ ಸೋಲು ಕಂಡರು ಇದಾದ ನಂತರ ರಾಜಕೀಯದಲ್ಲಿ ತಮ್ಮನ್ನು ತಾವು ಭವಾನಿ ರೇವಣ್ಣ ಅವರು ತೊಡಗಿಸಿಕೊಂಡರು. ಕ್ಷೇತ್ರದಲ್ಲಿ ಪತಿ ರೇವಣ್ಣ ಜೊತೆ ಪಕ್ಷದ ಕಾರ್ಯಕರ್ತರೊಂದಿಗೆ ಓಡಾಡಲು ಪ್ರಾರಂಭ ಮಾಡಿದರು.

ಆಗಲೇ ಭವಾನಿ ರೇವಣ್ಣ ರನ್ನು ಜನ ಗುರುತಿಸಲು ಶುರು ಮಾಡಿದರು 2004ರ ವಿಧಾನಸಭಾ ಚುನಾವಣೆಯಲ್ಲಿ ಮಾವನ ಬಳಿ ಭವಾನಿ ರೇವಣ್ಣ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದರು. ಮೊದಲಿಗೆ ದೇವೇಗೌಡರು ಓಕೆ ಎಂದಾಗ ಕೆ ಆರ್ ನಗರ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದರು ಭವಾನಿ ರೇವಣ್ಣ ತನ್ನ ಹುಟ್ಟೂರಾದ ಕೆಆರ್ ನಗರಕ್ಕೆ ಹೋಗಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿದರು ಹೊಸ ಸಂಚಲನ ಮೂಡಿಸಿದರು.

ಆದರೆ ಕೊನೆಗಳಿಗೆಯಲ್ಲಿ ಟಿಕೆಟ್ ನೀಡಲಿಲ್ಲ ಜನ ಕುಟುಂಬ ರಾಜಕಾರಣ ಎಂದು ಮಾತನಾಡುತ್ತಾರೆ ಎನ್ನುವುದು ಕಾರಣವಾಗಿತ್ತು. ಇದಾದ ನಂತರ ಹೊಳೆನರಸಿಪುರಕ್ಕೆ ಬಂದ ಭವಾನಿ ರೇವಣ್ಣ ಪತಿಯ ಪರವಾಗಿ ಕೆಲಸ ಮಾಡಿದರು ಅಲ್ಲಿಂದ ಇಲ್ಲಿಯವರೆಗೂ ರೇವಣ್ಣ ಹೊಳೆನರಸೀಪುರ ಕ್ಷೇತ್ರದಲ್ಲಿ ಸೋತೆ ಇಲ್ಲ. ಭವಾನಿ ರೇವಣ್ಣ ಗೆ ರಾಜಕೀಯ ಕ್ಷೇತ್ರದಲ್ಲಿ ಟ್ಯಾಲೆಂಟ್ ಇದೆ ಆದರೂ ಅವರಿಗೆ ಟಿಕೆಟ್ ನೀಡಲಿಲ್ಲ.

ಆದರೆ ಅನಿತಾ ಕುಮಾರಸ್ವಾಮಿಗೆ ರಾಜಕೀಯ ಕ್ಷೇತ್ರದಲ್ಲಿ ಅಷ್ಟೊಂದು ಚಾಕ ಚಕ್ಯತೆ ಇಲ್ಲದೆ ಇದ್ದರೂ ಅವರಿಗೆ ಟಿಕೆಟ್ ನೀಡುತ್ತಾ ಬರಲಾಗಿದೆ ಜೊತೆಗೆ ಅನಿತಾ ಕುಮಾರಸ್ವಾಮಿ ವಿನ್ ಆಗಿರುವುದು ಕೂಡ ತನ್ನ ಮಾವ ಮತ್ತು ಪತಿಯ ವರ್ಚಸ್ಸಿನಿಂದ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಲವು ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಆದರೆ ಈ ಸಲ ರಾಮನಗರ ಕ್ಷೇತ್ರವನ್ನು ಪುತ್ರ ನಿಖಿಲ್ ಅವರಿಗೆ ಬಿಟ್ಟುಕೊಡುವುದಾಗಿ ಅನಿತಾ ಕುಮಾರಸ್ವಾಮಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *