ತಂದೇನ ಕೊಂದು ಮಗ ರಾಜ್ಯ ಆಳುವ ಕಾಲ 2023 ವಿಚಿತ್ರ ಹೇಗಿರುತ್ತೆ.? ಕಾಲಮಾನ ಭವಿಷ್ಯ. ವ್ಯವಸಾಯ ಮಾಡುವವನು ಕೂಲಿ ಮಾಡುವವನಿಗಿಂತ ಕಡೆಯಾಗುವಂತಹ ಕಾಲ ಬರುತ್ತದೆ ಈ ರಾವಣ ರಾಜ್ಯದಲ್ಲಿ ಕಾಲಲ್ಲಿ ನಡೆಯಿರಿ ಎಂದರೆ ತಲೆಯಲ್ಲಿ ನಡೆಯುತ್ತೇನೆ ಎನ್ನುವಂತಹ ಕಾಲ ಬಂದಿದೆ. ಮುಂದೆ ರಂಡೆ ಮಕ್ಕಳು ರಾಜರಾಗುವಂತಹ ಕಾಲ ಬರುತ್ತದೆ. 1050-60 ರಲ್ಲಿ ಬಸವಣ್ಣವರು ಸಾರಿರಿವ ಹಾಗೆ ಕೋಟಿಗಿದ್ದವನ್ನು ಕೂಳಿಗೆ ಇರಲ್ಲ, ಕೂಳುಗಿದ್ದವನು ಕೋಟಿಗಿರಲ್ಲ ಬಡವನ ಮನೆಗೆ ಶ್ರೀಮಂತ ಕೂಲಿ ಮಾಡಲು ಹೋಗುತ್ತಾನೆ ಇದು ಸಾಧ್ಯವಾಗುವಂತಹ ಮಾತು.
ಅಲ್ಲವಾಗಿದ್ದು ಬೆಲ್ಲವಾಗುತ್ತದೆ ಬೆಲ್ಲವಾಗಿದ್ದು ಬೇವಿನ ಕಾಯಿ ಆಗುತ್ತದೆ. ಶರಣರ ಮಾತು ಶಾಶ್ವತ ವಾದಂತಹದ್ದು ನಮ್ಮ ದೇಶದಲ್ಲಿ ಒಬ್ಬ ಪುರುಷನಿಗೆ 12 ಜನ ಹೆಣ್ಣು ಮಕ್ಕಳು ಮದುವೆಯಾಗುವಂತಹ ಕಾಲ ಬರುತ್ತದೆ 2025 ಕಳೆಯುವುದರ ಒಳಗೆ ವಿಚಿತ್ರವೇ ನಡೆದು ಹೋಗುತ್ತದೆ ಮುಂದಿನ ಕಲಿಯುಗ ತಂದೆ ಮತ್ತು ಮಗ ಇಬ್ಬರಿಗೂ ಒಬ್ಬಳೇ ಹೆಂಡತಿ ಆಗುತ್ತಾಳೆ.
ತಂದೆಯನ್ನು ಕೊಂದು ಮಗ ರಾಜ್ಯ ಆಳುವಂತಹ ಕಾಲ ಬರುತ್ತದೆ. ನಾನು ನಾನು ಎಂಬುದರಲ್ಲಿ ನರಕದ ಕಾಲ ಬರುತ್ತದೆ ಬಸವಣ್ಣನವರು ಹೇಳಿದ್ದರು ನಾಯಿ ಹಡೆದ ಮಕ್ಕಳು ನೀರು ಪಾಲು ಎಂದು ಹೇಳಿದ್ದರು ಆದರೆ ಇವತ್ತು ಮಾನವ ಹಡೆದ ಮಕ್ಕಳು ನೀರು ಪಾಲಾಗುತ್ತಾರೆ ಯಾಕೆಂದರೆ ಈ ವರ್ಷ ನೀರಿಗಾಗಿ ಕೊಚ್ಚಿ ಹೋಗುವ ಕಾಲ ಬರಲಿದೆ ನಾನು ಹೆಚ್ಚು ನಾನು ಹೆಚ್ಚು ಎಂದು ಮೆರೆಯುವ ಕಾಲ ಬರುತ್ತದೆ.
2019 ರಲ್ಲಿ 14 ಜಿಲ್ಲೆ 84 ತಾಲ್ಲೂಕುಗಳು ನೀರಿಗಾಗಿ ಹೋದವು. ಈ ವರ್ಷ 18 ಜಿಲ್ಲೆ 110 ತಾಲೂಕುಗಳು ಕೊಚ್ಚಿ ಹೋಗುತ್ತವೆ. ಆರು ಕೊಳಗದ ಮಳೆ, ಆರು ಕೊಳಗದ ಗಾಳಿ, ಬರಲಿದೆ 9 ಕೊಳಗದ ಸಿಡಿಲು ಈ ವರ್ಷ ಬರಲಿದೆ. ಈ ವರ್ಷ ಬಹಳ ಎಚ್ಚರಿಕೆಯಿಂದ ಇರಬೇಕು ಯಾರು ತಂದೆ ತಾಯಿಯನ್ನು ಎದುರುಹಾಕಿಕೊಂಡು ತಂದೆ ತಾಯಿಯ ಮೇಲೆ ಯಾರು ಕೈ ಮಾಡುತ್ತಾರೆ ಕೆಟ್ಟ ದಿನಗಳು ಬರಲಿವೆ.
ಅಂತಹವರು ಕುರುಡರಾಗಿ, ಕುಂಟರಾಗಿ, ಅನಾಥರಾಗಿ ಹುಟ್ಟುತ್ತಾರೆ ತಂದೆ ತಾಯಿಗಿಂತ ಮಿಗಿಲಾದಂತಹ ದೇವರು ಯಾರು ಇಲ್ಲ ತಂದೆ ತಾಯಿಗೆ ಅನ್ನವನ್ನು ಹಾಕಿ ಪಾದ ಪೂಜೆ ಮಾಡಿದರೆ ಕೈಲಾಸ ದೊರೆಯುತ್ತದೆ. ಮುಂದೆ ಎಲ್ಲರೂ ಯಾವುದೇ ಜಾತಿ ಇಲ್ಲದೆ ಅಣ್ಣತಮ್ಮಂದಿರಾಗಿ ಬಾಳುವಂತಹ ಕಾಲ ಬರುತ್ತದೆ.
ಎಲ್ಲ ದೇಶಗಳಲ್ಲಿ ಸುನಾಮಿ ಭೂಕಂಪಗಳು ಉಂಟಾಗುತ್ತದೆ ಆದರೆ ನಮ್ಮ ದೇಶದಲ್ಲಿ ಆಗುವುದಿಲ್ಲ ಬಸವಣ್ಣನವರ ನೀತಿ ಧರ್ಮ ಇರುವುದರಿಂದ ನಮಗೆ ಸ್ವಲ್ಪ ಕಾಲಾವಧಿ ಇದೆ ಎಚ್ಚರಿಕೆಯಿಂದ ಇರಬೇಕು. ಮುಂದಿನ ದಿನಗಳಲ್ಲಿ 75000 ಮರಣ 25000 ಜನನ ಉಂಟಾಗುತ್ತದೆ. ಕುಂತವರು ಕುಂತಲ್ಲಿ ಮರಣ, ನಿಂತವರು ನಿಂತಲ್ಲಿ ಮರಣ ಆಕ್ಸಿಡೆಂಟ್ ಗಳು ಹೆಚ್ಚಾಗುವಂತಹ ಕಾಲ ಬರಲಿದೆ.