ನಿಮ್ಮ ಪ್ರತಿಯೊಂದು ಸಂಕಷ್ಟ ಕೇವಲ 3 ತಿಂಗಳಿನಲ್ಲಿ ದೂರವಾಗುತ್ತೆ ಈ ರೀತಿ ಗಣೇಶ ಸಂಕಲ್ಪ ಪೂಜೆ ಮಾಡಿ..ಚಮತ್ಕಾರ ನೋಡಿ » Karnataka's Best News Portal

ನಿಮ್ಮ ಪ್ರತಿಯೊಂದು ಸಂಕಷ್ಟ ಕೇವಲ 3 ತಿಂಗಳಿನಲ್ಲಿ ದೂರವಾಗುತ್ತೆ ಈ ರೀತಿ ಗಣೇಶ ಸಂಕಲ್ಪ ಪೂಜೆ ಮಾಡಿ..ಚಮತ್ಕಾರ ನೋಡಿ

ಗಣೇಶ ಸಂಕಲ್ಪ ಪೂಜೆ ಮೂರು ತಿಂಗಳಲ್ಲಿ ಕಷ್ಟ ನಿವಾರಣೆ.
ನಿಮ್ಮ ಇಷ್ಟಾರ್ಥ ಅಥವಾ ನಿಮ್ಮ ಕಷ್ಟಗಳು ಏನು ನೆರವೇರಬೇಕು ಅದನ್ನು ಸಂಕಲ್ಪ ಮಾಡಿಕೊಂಡು ಮೂರು ತಿಂಗಳ ವರೆಗೂ ಮಾಡಬಹುದು ಅಥವಾ ಮೂರು ತಿಂಗಳು ಪೂರ್ತಿ ಮಾಡಬಹುದು ನಿಮ್ಮ ಸಂಕಲ್ಪ ಸಿದ್ಧಿಯಾದ ನಂತರ ಇದನ್ನು ನಿಲ್ಲಿಸಬಹುದು ಈ ಒಂದು ಪೂಜೆಯನ್ನು ನಾಲ್ಕುವರೆಯಿಂದ ಆರುವರೆ ಒಳಗಡೆ ಮಾಡಬೇಕು.

WhatsApp Group Join Now
Telegram Group Join Now

ಇದಕ್ಕೆ ಬೇಕಾಗಿರುವಂತಹ ಸಾಮಗ್ರಿಗಳು ಮನೆಯಲ್ಲಿರುವ ಯಾವುದಾದರೂ ಒಂದು ಗಣೇಶ ಮೂರ್ತಿ ಪೂಜೆ ಅರಿಶಿಣ ಕುಂಕುಮ ಒಂದು ವೀಳ್ಯದೆಲೆ ಮೇಲೆ ಓಂಕಾರ ಎಂದು ಬರೆದಿರಬೇಕು ಒಂದು ಮುಷ್ಟಿ ಸಗಣಿ ತೆಗೆದುಕೊಂಡು ಗರಿಕೆ ಇಟ್ಟು ಅರಿಶಿಣ ಕುಂಕುಮ ಹಚ್ಚಿ ಒಂದು ಬೆನಕ ಮಾಡಿಕೊಳ್ಳಿ ಪೂಜೆಗೆ ಬೇಕಾದ ಹೂವು ಅಕ್ಷತೆ ಒಂದು ದೀಪ ಮತ್ತು ನೈವೇದ್ಯಕ್ಕೆ ಕಡಲೆ ಸಕ್ಕರೆ ಅವಲಕ್ಕಿ ಹಣ್ಣುಗಳು ಯಾವುದಾದರೂ ತೆಗೆದುಕೊಳ್ಳಬಹುದು.


ಒಂದು ಮಣೆಯ ಮೇಲೆ ಸಗಣಿಯಿಂದ ಮಾಡಿಕೊಂಡಿರುವಂತಹ ಬೆನಕನನ್ನು ಕೂರಿಸಿ ನಂತರ ವಿಗ್ರಹವನ್ನು ಎದುರು ಬದಲಾಗಿ ಇಡಬೇಕು ಅದಕ್ಕೆ ನೀವು ಹೂವಿನಿಂದ ಕುಂಕುಮದಿಂದ ಅಲಂಕಾರವನ್ನು ಮಾಡಿಕೊಂಡು ಪೂಜೆಯಗೆ ತೆಗೆದುಕೊಂಡಿರುವಂತಹ ಸಾಮಾಗ್ರಿಗಳನ್ನು ಮಣೆಯ ಮೇಲೆ ಜೋಡಿಸಿಕೊಳ್ಳಿ ನಂತರ ಇದನ್ನು ನೀವು ದೇವರ ಮನೆಯ ಒಳಗಡೆ ಮಾಡಬೇಕು. ನೀವು ದೇವರ ಮನೆಯಲ್ಲಿ ಇರುವಂತಹ ಸ್ಲಾಬ್ ಮೇಲೆ ಸಹ ಇದನ್ನು ಮಾಡಬೇಕಯ.

ವಾರಕ್ಕೆ ಒಂದೇ ಬಾರಿ ಮಾಡುವುದು ಶುಕ್ರವಾರ ನೀವು ಹೊಸ ಬೆನಕ ಇಟ್ಟು ಗಣೇಶ ವಿಗ್ರಹವನ್ನು ತೊಳೆದು ಪ್ರತಿ ಶುಕ್ರವಾರ ಪೂಜೆಯನ್ನು ಮಾಡಬೇಕು. ವಾರಪೂರ್ತಿ ಅದನ್ನು ಅಲುಗಾಡಿಸದೆ ಪೂಜೆ ಮಾಡಬೇಕು ಹೂ ಮತ್ತು ನೈವೇದ್ಯವನ್ನು ಮಾತ್ರ ಬದಲಿಸಬೇಕು. ಭಕ್ತಿಯಿಂದ ದೇವರಿಗೆ ಗಂಧದಕಡ್ಡಿ ಕರ್ಪೂರ ಆರತಿ ಎಲ್ಲವನ್ನು ಬೆಳಗಬೇಕು ಸಂಕಲ್ಪ ಮಾಡಿಕೊಳ್ಳಲು ನೀವು ಅಕ್ಷತೆಯನ್ನು ಕೈಯಲ್ಲಿ ತೆಗೆದುಕೊಂಡು

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಎಡಗೈಯನ್ನು ನಿಮ್ಮ ಬಲತೊಡೆಯ ಮೇಲೆ ಇಟ್ಟು ಬಲಗಡೆ ಕೈಯನ್ನು ನಿಮ್ಮ ಎಡ ಕೈಯನ್ನು ಮುಚ್ಚಿ ಇಟ್ಟುಕೊಳ್ಳಬೇಕು ಹೀಗೆ ಇಟ್ಟುಕೊಂಡು “ನಮೋ ನಮೋ ಗಣೇಶಾಯ ನಮಸ್ತೋ ಶುಭ ಸೂದವೇ ಮಯಾವೃದ್ದಮ್ ಯದಮ್ ಕರ್ಮಮ್ ನಿರ್ವಿಘ್ನಂ ಕುರು ಸರ್ವದ” ಎಂದು ಮಂತ್ರ ಹೇಳಿ ನಿಮಗೆ ಏನು ಸಂಕಷ್ಟ ಇದೆ ನಿಮಗೆ ಈ ಪೂಜೆಯಿಂದ ಏನು ನೆರವೇರಬೇಕು ಅದನ್ನು ಮನಸ್ಸಿನಿಂದ ಕೇಳಿಕೊಂಡು ದೇವರಲ್ಲಿ ಪ್ರಾರ್ಥಿಸಿ ಕೊಂಡು ಅಕ್ಷತೆಯನ್ನು ಬೆನಕಾ ಮತ್ತು ಗಣಪತಿಯ ಮೇಲೆ ಹಾಕಬೇಕು

ಸಂಕಲ್ಪ ಮಂತ್ರ ಹೇಳಿ ಸಂಕಲ್ಪ ಮಾಡಿಕೊಂಡ ನಂತರ ಅಲ್ಲೇ ಕುಳಿತುಕೊಂಡು 108 ಬಾರಿ ಇನ್ನೊಂದು ಮಂತ್ರವನ್ನು ಹೇಳಬೇಕು. “ಓಂ ಗಂ ಗಣಪತಯೇ ನಮಃ ಓಂ ಶ್ರೀಂ ಹ್ರೀಂ ಮಹಾಲಕ್ಷ್ಮಿಯೇ ನಮಃ” ಇದನ್ನು 108 ಬಾರಿ ಎಣಿಸಿ ಹೇಳಬೇಕು ಎಣಿಸಲು ಕಷ್ಟವಾದರೆ ಕಡ್ಲೆಕಾಳು ಅಥವಾ ಹೂವನ್ನು ಇಟ್ಟುಕೊಂಡು ಲೆಕ್ಕ ಇಟ್ಟುಕೊಂಡು ಹೇಳಬೇಕು.

[irp]


crossorigin="anonymous">