ಕಾರ್ಯಸಿದ್ದಿ ಕಡಲೆ ಹಾರ..ನಿಮ್ಮ ಕೋರಿಕೆಗಳು ಶೀಘ್ರವಾಗಿ ಈಡೇರಲು ತಪ್ಪದೇ ಗಣೇಶನಿಗೆ ಹೀಗೆ ಅರ್ಪಿಸಿ..ಚಮತ್ಕಾರ ನೋಡಿ.. - Karnataka's Best News Portal

ಕಾರ್ಯಸಿದ್ದಿ ಕಡಲೆ ಹಾರ..ನಿಮ್ಮ ಕೋರಿಕೆಗಳು ಶೀಘ್ರವಾಗಿ ಈಡೇರಲು ತಪ್ಪದೇ ಗಣೇಶನಿಗೆ ಹೀಗೆ ಅರ್ಪಿಸಿ..ಚಮತ್ಕಾರ ನೋಡಿ..

ಕಾರ್ಯಸಿದ್ಧಿ ಕಡಲೆ ಹಾರ…|| ಗಣಪತಿ ಪೂಜಾ ವಿಧಾನ…. ||

WhatsApp Group Join Now
Telegram Group Join Now

ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತೆ ಗಣಪತಿಯನ್ನು ವಿಘ್ನ ವಿನಾಯಕ ಎಂದೇ ಕರೆಯುತ್ತಾರೆ. ಅಂದರೆ ನೀವು ಯಾವುದೇ ಒಂದು ಕೆಲಸವನ್ನು ಮಾಡುವುದಕ್ಕೂ ಮುನ್ನ ಯಾವುದೇ ಪೂಜೆಯನ್ನು ಮಾಡುವುದಕ್ಕೂ ಮುನ್ನ ಮೊದಲ ಪೂಜೆ ಗಣಪತಿಗೆ ಸಲ್ಲಬೇಕು. ಏಕೆಂದರೆ ನೀವು ಮಾಡುತ್ತಿರುವಂತಹ ಈ ಕೆಲಸದಲ್ಲಿ ಯಾವುದೇ ರೀತಿಯ ವಿಜ್ಞ ಬಾರದಂತೆ ನಮಗೆ ಒಳ್ಳೆಯದನ್ನು ದಯಪಾಲಿಸಿ ಎಂದು ಹೇಳುತ್ತಾ ಗಣಪತಿಯನ್ನು ಪೂಜೆ ಮಾಡುತ್ತಾರೆ.

ಅದೇ ರೀತಿಯಾಗಿ ಗಣಪತಿಗೆ ವಿಶೇಷವಾದಂತಹ ಪೂಜೆ ನೈವೇದ್ಯ ಗಣಪತಿಗೆ ಇಷ್ಟವಾದ ಹೂವು ಗರಿಕೆ ಎಲ್ಲವನ್ನು ಕೂಡ ಅರ್ಪಿಸುತ್ತಾ ಗಣಪತಿಯನ್ನು ಪ್ರತಿಯೊಬ್ಬರೂ ಕೂಡ ಆರಾಧನೆ ಮಾಡುತ್ತಾರೆ. ಅದೇ ರೀತಿಯಾಗಿ ತಿಂಗಳಿಗೆ ಒಮ್ಮೆ ಬರುವ ಸಂಕಷ್ಟ ಹರ ಗಣಪತಿ ದಿನ ದೇವಸ್ಥಾನಗಳಿಗೆ ಹೋಗಿ ಅಲ್ಲಿ ದೇವರ ಆಶೀರ್ವಾದವನ್ನು ಪಡೆದುಕೊಂಡು ಬರುತ್ತಾರೆ.

ಪ್ರತಿಯೊಬ್ಬರೂ ಕೂಡ ತಮ್ಮೆಲ್ಲರ ಕಷ್ಟ ದೂರವಾಗಲಿ ನಾವು ಅಂದು ಕೊಂಡಂತೆ ಎಲ್ಲಾ ಕೆಲಸಗಳು ನೆರವೇರಲಿ ಎನ್ನುವಂತೆ ಗಣಪತಿಗೆ ಪ್ರಿಯವಾದಂತಹ ಎಲ್ಲಾ ಪದಾರ್ಥಗಳನ್ನು ಕೊಟ್ಟು ಪೂಜೆಯನ್ನು ಮಾಡಿಸಿ ಅಲ್ಲಿ ಗಣಪತಿಯ ದರ್ಶನವನ್ನು ಮಾಡಿಕೊಂಡು ಬರುತ್ತಾರೆ. ಅದೇ ರೀತಿ ಗಣಪತಿಗೆ ಬಿಳಿ ಎಕ್ಕದ ಹೂವಿನ ಹಾರ, ಕಡಲೆ ಹಾರ ಹೀಗೆ ಕೆಲವೊಂದು ವಿಭಿನ್ನ ಬಗೆಯ ಹಾರಗಳನ್ನು ಕೂಡ ಅರ್ಪಿಸುತ್ತಾರೆ.

ಅದೇ ರೀತಿಯಾಗಿ ಗಣಪತಿಗೆ ಕಡಲೆ ಹಾರವನ್ನು ಮಾಡಿ ಅರ್ಪಿಸಿದರೆ ನಿಮ್ಮ ಎಲ್ಲಾ ಸಂಕಷ್ಟಗಳು ದೂರವಾಗುತ್ತದೆ. ಹಾಗೆ ನೀವು ಅಂದು ಕೊಂಡ ಎಲ್ಲಾ ಕೆಲಸಗಳು ಕೂಡ ನೆರವೇರುತ್ತದೆ. ಹಾಗಾದರೆ ಈ ಒಂದು ಕಾರ್ಯಸಿದ್ಧಿ ಕಡಲೆ ಹಾರ ಪೂಜಾ ವಿಧಾನವನ್ನು ಹೇಗೆ ಮಾಡಬೇಕು? ಯಾವುದೆಲ್ಲ ವಿಧಾನಗಳನ್ನು ಅನುಸರಿಸಬೇಕು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ.

See also  ಏಪ್ರಿಲ್ ಒಂದರಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟವೋ ಅದೃಷ್ಟ.. ನಿಮ್ಮ ರಾಶಿ ಇದೆಯಾ ಚೆಕ್ ಮಾಡಿಕೊಳ್ಳಿ

ಬಹಳ ಮುಖ್ಯವಾಗಿ ಗಣಪತಿಯನ್ನು ನೀವು ಪೂಜೆ ಮಾಡುವುದಕ್ಕೂ ಮುನ್ನ ದೇವರ ಮನೆಯನ್ನು ಸ್ವಚ್ಛ ಮಾಡಿ ಅಲ್ಲಿ ಒಂದು ರಂಗವಲ್ಲಿ ಯನ್ನು ಹಾಕಿ ಅದಕ್ಕೆ ಅರಿಶಿನ ಕುಂಕುಮ ಅಕ್ಷತೆಯನ್ನು ಹಾಕಿ ಒಂದು ಬಟ್ಟಲಿನಲ್ಲಿ ಅಕ್ಕಿ ಹಾಕಿ ಅದರ ಮೇಲೆ ಸ್ವಸ್ತಿಕ್ ಚಿನ್ಹೆ ಬರೆದು ಅದಕ್ಕೂ ಕೂಡ ಪೂಜೆ ಅರ್ಪಿಸಿ ನಂತರ ಅದರ ಮೇಲೆ ಗಣಪತಿಯನ್ನು ಇಟ್ಟು ಗಣಪತಿಯನ್ನು ಆಹ್ವಾನ ಮಾಡಿ ಪೂಜೆ ಸಲ್ಲಿಸಬೇಕು.

ನಂತರ ಗಣಪತಿಯ ಬಲಭಾಗದಲ್ಲಿ ಒಂದು ದೀಪವನ್ನು ಇಟ್ಟು ಕೂಡ ಪೂಜೆ ಮಾಡಬೇಕು. ಅದೇ ರೀತಿಯಾಗಿ ಗಣಪತಿಗೆ ನೈವೇದ್ಯವನ್ನು, ಪೂಜೆಯನ್ನು ಮಾಡುವುದಕ್ಕೆ ಬಹಳ ಮುಖ್ಯವಾಗಿ ಗಂಗಾಜಲ ಬಹಳ ಮುಖ್ಯ, ಅದೇ ರೀತಿಯಾಗಿ ಒಂದು ತಾಮ್ರ ಅಥವಾ ಹಿತ್ತಾಳೆಯ ಬಿಂದಿಗೆಯಲ್ಲಿ ನೀರನ್ನು ಹಾಕಿ ಎಲ್ಲಾ ಪವಿತ್ರ ನದಿಗಳ ಹೆಸರನ್ನು ಹೇಳಿ ಪೂಜೆಯನ್ನು ಅರ್ಪಿಸಿ ಗಣಪತಿಯನ್ನು ಪೂಜೆ ಮಾಡಿ ಕಡಲೆ ಹಾರ ಅರ್ಪಿಸಿ ಪೂಜೆ ಸಲ್ಲಿಸಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ಕೂಡ ದೂರ ವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">