ವೀರ ಬ್ರಹ್ಮೇಂದ್ರ ಸ್ವಾಮಿಯ ಕಾಲಜ್ಞಾನ ಪ್ರಕಾರ 2023ರಲ್ಲಿ ಏನಾಗುತ್ತೆ.?//
ಕಲಿಯುಗದಲ್ಲಿ ಚಿತ್ರ ವಿಚಿತ್ರಗಳು ನಡೆಯುತ್ತವೆ ಎಂದು ಶ್ರೀ ಪೋತ ಲೂರು ವೀರ ಬ್ರಹ್ಮೇಂದ್ರ ಸ್ವಾಮಿಗಳು ಆಗಲೇ ಹೇಳಿದ್ದರು. ಇವರು ಹೇಳಿದ ಮಾತುಗಳು ಅಕ್ಷರ ಸತ್ಯ ನಿಜವಾಗುತ್ತಿದೆ. ಅವರು ಹೇಳಿದ ಮಾತುಗಳು ಯಾವುದೋ ಒಂದು ಭಾಗದಲ್ಲಿ ನಡೆಯುವುದನ್ನು ನಾವು ಕೇಳುತ್ತಲೇ ಬರುತ್ತಿದ್ದೇವೆ.
ಬ್ರಹ್ಮೇಂದ್ರ ಸ್ವಾಮಿ ಹೇಳಿದ ಪ್ರತಿ ಮಾತುಗಳು ಬೇಳಕಿಗೆ ಬರುತ್ತಲೆ ಇದೆ. ಬ್ರಹ್ಮೇಂದ್ರ ಸ್ವಾಮಿಗಳು ಹೇಳುತ್ತಿರುವ ಎಲ್ಲಾ ವಿಷಯಗಳು ನಡೆಯು ತ್ತಿದೆಯ? ಹಾಗಾದರೆ 2023ರಲ್ಲಿ ಏನೆಲ್ಲ ಆಗುತ್ತದೆ ಎಂದು ನೋಡೋಣ. ಈಗಾಗಲೇ ಬ್ರಹ್ಮೇಂದ್ರ ಸ್ವಾಮಿ ಹೇಳಿದ ಹಾಗೆ ತುಂಬಾ ಘಟನೆಗಳು ನಡೆದಿದೆ. ಅವುಗಳಲ್ಲಿ 2023ರಲ್ಲಿ ನಡೆಯುವ ಘಟನೆ ಗಳನ್ನು ನೋಡೋಣ.
ಸ್ತ್ರೀಯರು ತಮಗೆ ಹುಟ್ಟಿದ ಮಕ್ಕಳುಗಳನ್ನು ಮಾರ್ಕೆಟ್ ಗಳಲ್ಲಿ ಮಾರುತ್ತಾರೆ. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ತಮ್ಮ ಎದೆ ಹಾಲಿನ ಬದಲು ಬಾಟಲ್ ಹಾಲನ್ನು ಕೊಡುತ್ತಾರೆ. ಇದನ್ನು ನಾವು ಈಗಿನ ಕಾಲದಲ್ಲಿ ನೋಡಬಹುದು ಅನೇಕ ಚಲನಚಿತ್ರ ನಟಿಯರು ತಮ್ಮ ಸೌಂದರ್ಯ ಉಳಿಸಿಕೊಳ್ಳಲು ಈ ರೀತಿ ಹೆಚ್ಚಾಗಿ ಮಾಡುತ್ತಾರೆ ಹಾಗೂ ಯಾರೋ ತಂದೆ-ತಾಯಿಯರಿಗೆ ಯಾರೋ ಒಬ್ಬ ಹೆಣ್ಣು ಮಗುವನ್ನು ಮಾಡಿಕೊಡುತ್ತಾರೆ.
ಅದನ್ನೇ ನಾವು ಇಂಗ್ಲಿಷಿನಲ್ಲಿ ಸಾರೋಗೆಸಿ ಎಂದು ಕರೆಯುತ್ತಾರೆ. ಈ ವಿಷಯವನ್ನು ಇವರು ಮೊದಲೇ ಹೇಳಿದ್ದರು. ಇನ್ನು ವಿದ್ಯೆ ಎಂಬುದು ದುಡ್ಡಿನ ಮೇಲೆ ನಿಲ್ಲುತ್ತದೆ. ನೀವು ಎಷ್ಟು ದುಡ್ಡು ಕೊಡುತ್ತೀರಾ ಅಷ್ಟು ವಿದ್ಯೆ ನಿಮಗೆ ನೀಡುತ್ತದೆ ಎಂದು ಹೇಳಿದ್ದರು. ವಿದ್ಯೆ ಒಂದು ಮಾರಾಟ ವಸ್ತು ಆಗಿದೆ ಈಗಿನ ಪ್ರಪಂಚದಲ್ಲಿ. ಇನ್ನು ಗಂಡನನ್ನು ತಮ್ಮ ಸೇವಕನಾಗಿ ಮಾಡಿಕೊಂಡು ಹೆಂಡತಿ ಮನೆಯನ್ನು ಆಳುತ್ತಾಳೆ.
ಇದನ್ನು ನಾವು ಸಾಮಾನ್ಯವಾಗಿ ನೋಡಬಹುದು. ಈಗಿನ ಕಾಲದಲ್ಲಿ ಅನೇಕ ಮನೆಗಳಲ್ಲಿ ಹೆಂಡತಿಯ ಮಾತು ಹೆಚ್ಚಾಗಿ ಕೇಳುವ ಪುರುಷರು ಇದ್ದಾರೆ. ಹಾಗೂ ಒಳ್ಳೆಯ ಕೆಟ್ಟದರ ಬಗ್ಗೆ ಯೋಚನೆ ಮಾಡದೆ ಒಡ ಹುಟ್ಟಿದವರು ಆಸ್ತಿ ಅಂತಸ್ತಿಗಾಗಿ ಹೊಡೆದಾಡುವರು ಎಂದು ಹೇಳಿದರು. ನಾವು ಇದನ್ನು ಪ್ರತಿನಿತ್ಯ ಟಿವಿ ರೇಡಿಯೋಗಳಲ್ಲಿ ಕೇಳುತ್ತಲೇ ಬಂದಿದ್ದೇವೆ. ಕಪಟ ಯೋಗಿಗಳು ಹೆಚ್ಚಾಗುತ್ತಾರೆ ಇದರಿಂದ ಜನರು ಹೆಚ್ಚು ಮೋಸ ಹೋಗುತ್ತಾರೆ ಎಂದು ವೀರ ಬ್ರಹ್ಮೇಂದ್ರ ಸ್ವಾಮಿ ಹೇಳಿದ್ದರು. ಹಾಗೂ ಪ್ರಸ್ತುತ ಕಳ್ಳ ಬಾಬಾಗಳು ಹೆಚ್ಚಾಗುತ್ತಾ ಇದ್ದಾರೆ.
ಇದರಿಂದ ಆ ಕಳ್ಳ ಬಾಬಾಗಳನ್ನು ಹೆಚ್ಚಾಗಿ ನಂಬಿ ಜನ ಮೋಸ ಹೋಗಿ ದುಡ್ಡು ಹಾಗೂ ಅನೇಕ ಆಭರಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಎಷ್ಟೋ ಯಂತ್ರ ಮಂತ್ರಗಳು ಬಂದರೂ ಸಾವು ಬದುಕನ್ನು ಕಂಡುಹಿಡಿ ಯಲು ಆಗುವುದಿಲ್ಲ ಎಂದು ಹೇಳಿದರು. ಈಗಿನ ಕಾಲದಲ್ಲಿ ಎಷ್ಟು ಸೂಪರ್ ಪವರ್ ಬಂದರು ಸಾವು ಬದುಕನ್ನು ಕಂಡುಹಿಡಿಯಲು ಆಗುತ್ತಿಲ್ಲ ಎಂದು ಬ್ರಹ್ಮೇಂದ್ರ ಸ್ವಾಮಿಗಳು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.