ಇದೊಂದು ವಸ್ತುವನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ ದುಡ್ಡು ಹರಿದು ಬರುತ್ತೆ.....ಪ್ರಾಕ್ಟಿಕಲ್ ಆಗಿ ನೀವೆ ಮಾಡಿ ನೋಡಿ.. - Karnataka's Best News Portal

ಇದೊಂದು ವಸ್ತುವನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ ದುಡ್ಡು ಹರಿದು ಬರುತ್ತೆ….!!

ಶುಕ್ರವಾರದ ದಿನ ಲಕ್ಷ್ಮಿ ದೇವಿಯ ದಿನ ಎಂದು ಗುರುತಿಸಲಾಗಿದೆ. ನೀವು ಸಂಪತ್ತಿನ ಅಧಿದೇವತೆ ಲಕ್ಷ್ಮಿ ಮಾತೆಯ ಅದ್ಭುತ ಅನುಗ್ರಹವನ್ನು ಪಡೆಯುವುದಕ್ಕೆ ಬಯಸಿದರೆ ತಾಯಿ ಲಕ್ಷ್ಮಿಯನ್ನು ನಾವು ಹೇಳುವ ಸುಲಭ ಪರಿಹಾರಗಳು ಮತ್ತು ಮಂತ್ರಗಳೊಂದಿಗೆ ಮೆಚ್ಚಿಸಿ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಿ.

ಹಾಗಾದರೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕೆ ಯಾವುದೆಲ್ಲ ವಿಧಾನಗಳು ಇದೆ. ಈ ದಿನ ಯಾವ ಮಂತ್ರಗಳನ್ನು ಪಠಿಸ ಬೇಕು ಎನ್ನುವುದನ್ನು ಈ ದಿನ ತಿಳಿಯೋಣ. ಶುಕ್ರವಾರದ ದಿನ ಕಮಲದ ಬೀಜದ ಮಾಲೆಯನ್ನು ಕೈಯಲ್ಲಿ ಹಿಡಿದುಕೊಂಡು ಓಂ ಕಾಮಲಾಯೈ ನಮಃ ಅನ್ನು ಮಂತ್ರವನ್ನು ಜಪಿಸಬೇಕು. ಇದು ನಿಮಗೆ ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹವನ್ನು ತರುತ್ತದೆ. ನೀವು ಐಶ್ವರ್ಯವಂತರಾಗಬೇಕು ಎಂದರೆ ಶುಕ್ರವಾರದಂದು ದಕ್ಷಿಣಾರ್ತಿ ಶಂಖದಲ್ಲಿ ನೀರನ್ನು ತುಂಬಿ ವಿಷ್ಣು ದೇವರನ್ನು.

ಮತ್ತು ಲಕ್ಷ್ಮಿಯನ್ನು ಪೂಜಿಸಿ. ಈ ಪರಿಹಾರದಿಂದ ಶೀಘ್ರದಲ್ಲಿಯೇ ಸಂಪತ್ತು ಮತ್ತು ಅದೃಷ್ಟವನ್ನು ಪಡೆಯಬಹುದು. ಲಕ್ಷ್ಮಿಯನ್ನು ಪೂಜಿ ಸಿದ ನಂತರ ಒಂದು ಅರಿಶಿನದ ಕೊಂಬು ಮತ್ತು ಒಂದು ನಾಣ್ಯವನ್ನು ಕಮಾಲಿನಲ್ಲಿ ಇಡಿ ಇದರಿಂದ ವಿಷ್ಣು ಮತ್ತು ಲಕ್ಷ್ಮೀದೇವಿಯು ಸಂತೋಷ ಗೊಳ್ಳುತ್ತಾರೆ. ದುರಾದೃಷ್ಟ ಮತ್ತು ಬಡತನವನ್ನು ಮನೆಯಿಂದ ಓಡಿಸು ವುದರ ಮೂಲಕ ಸಂಪತ್ತು ಮಾಡುವಂತಹ ಹೊಸ ಮಾರ್ಗಗಳು ತೆರೆಯುತ್ತದೆ.

ಲಕ್ಷ್ಮಿ ದೇವಿಯನ್ನು ಮೆಚ್ಚಿಸುವುದಕ್ಕೆ ಮತ್ತು ಶುಕ್ರನ ಶಾಂತಿಯಾಗಿ ಶುಕ್ರವಾರದಂದು ಬಿಳಿ ಪ್ರಕಾಶಮಾನವಾದ ಮತ್ತು ಗುಲಾಬಿ ಬಣ್ಣವನ್ನು ಹೆಚ್ಚಾಗಿ ಬಳಸಿ. ಇದರಿಂದ ಜೀವನದಲ್ಲಿ ನೆಮ್ಮದಿ ಸಿಗುತ್ತದೆ. ಈ ದಿನ ನೀವು ಲಕ್ಷ್ಮೀದೇವಿಯನ್ನು ಪೂಜಿಸುವುದರ ಜೊತೆಗೆ ಲಕ್ಷ್ಮಿ ದೇವಿಯ ದೇವಸ್ಥಾನದಲ್ಲಿ ಹಣ್ಣುಗಳು ಮತ್ತು ಸಿಹಿ ತಿಂಡಿಗಳು, ಒಣ ಹಣ್ಣುಗಳು, ಇತ್ಯಾದಿಗಳನ್ನು ನೀಡುವುದರಿಂದ ತಾಯಿಯನ್ನು ಸಂತೋಷಪಡಿಸ ಬಹುದು.

ಇಂದು ಮಹಾಲಕ್ಷ್ಮಿ ಸ್ತೋತ್ರ, ವಿಷ್ಣು ಸಹಸ್ರನಾಮ, ಲಕ್ಷ್ಮಿ ಚಾಲೀಸಾ, ಶ್ರೀ ಸೂಕ್ತ ವನ್ನು ಪಠಿಸುವುದರಿಂದ ಲಕ್ಷ್ಮಿಯು ಸಂತೋಷದಿಂದ ಶ್ರೀಮಂತರಾಗುವಂತೆ ಆಶೀರ್ವದಿಸುತ್ತಾಳೆ. ಶುಕ್ರವಾರ ಲಕ್ಷ್ಮಿ ದೇವಿಯ ದೇವಸ್ಥಾನದಲ್ಲಿ ಶ್ರೀ ಫಲ ಸಕ್ಕರೆ ಮಿಠಾಯಿ ಮತ್ತು ತೆಂಗಿನಕಾಯಿ ಲಡ್ಡುಗಳನ್ನು ಅರ್ಪಿಸುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ಲಕ್ಷ್ಮಿ ದೇವಿಯು ಮಖಾನವನ್ನು ತುಂಬಾ ಇಷ್ಟಪಡುತ್ತಾಳೆ. ಆದ್ದರಿಂದ ಈ ದಿನದಂದು ಲಕ್ಷ್ಮೀದೇವಿಗೆ ಮಖಾನವನ್ನು ಅರ್ಪಿಸಿ.

ಮಖಾನವನ್ನು ಕಮಲದ ಹೂವಿನ ಬೀಜದಿಂದ ತಯಾರಿಸಲಾಗಿರುತ್ತದೆ. ಹಾಗಾಗಿ ಇದನ್ನು ಫೂಲ್ ಮಖಾನಾ ಎಂದು ಕರೆಯುತ್ತಾರೆ. ಲಕ್ಷ್ಮಿ ದೇವಿಗೆ ನೈವೇದ್ಯವನ್ನು ಅರ್ಪಿಸುವಾಗ. ಇದನ್ನು ವಿಶೇಷವಾಗಿ ನೀಡಲಾಗುತ್ತದೆ. ಮುಸ್ಸಂಜೆ ಹಸುವಿನ ತುಪ್ಪದಲ್ಲಿ ದೀಪವನ್ನು ಹಚ್ಚಿಡ ಬೇಕು. ದೀಪವನ್ನು ಹಚ್ಚುವ ಮುನ್ನ ಅದಕ್ಕೆ ಸ್ವಲ್ಪ ಕುಂಕುಮವನ್ನು ಹಾಕಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *