ಬುಧವಾರ ಜೀರಿಗೆ ಇಲ್ಲಿ ಬಚ್ಚಿಡಿ ಕುಬೇರ ನಿಮ್ಮ ಮನೆ ಬಿಟ್ಟು ಹೋಗೋದಿಲ್ಲ….

ಬುಧವಾರ ಜೀರಿಗೆ ಇಲ್ಲಿ ಬಚ್ಚಿಡಿ ಕುಬೇರ ನಿಮ್ಮ ಮನೆ ಬಿಟ್ಟು ಹೋಗೋದಿಲ್ಲ…….!!

WhatsApp Group Join Now
Telegram Group Join Now

ನಾವು ಸೇವಿಸುವ ಆಹಾರಕ್ಕೆ ರುಚಿಯನ್ನು ನೀಡುವುದಕ್ಕೆ ಉಪ್ಪು ಬಹಳ ಅವಶ್ಯಕ. ಉಪ್ಪು ಸೂರ್ಯನಿಗೆ ಸಂಬಂಧಿಸಿದ ಪದಾರ್ಥ ಎಂದು ಭಾವಿಸಲಾಗಿದೆ. ಒಂದು ವೇಳೆ ನೀವು ಉಪ್ಪನ್ನು ನೀರಿನಲ್ಲಿ ಬೆರೆಸಿ ಸೂರ್ಯನಿಗೆ ಅರ್ಗ್ಯವಾಗಿ ನೀಡಿದರೆ ಅದರಿಂದ ನಿಮ್ಮ ಸಾಲಗಳು ಋಣಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಧನಿಯವನ್ನು ನವಗ್ರಹಗಳ ಯುವರಾಜ ಎಂದು ಕರೆಯಲಾಗುವ ಬುಧ ಗ್ರಹಕ್ಕೆ ಸಂಬಂಧಿಸಿದ ಮಸಾಲೆ ಪದಾರ್ಥವಾಗಿದೆ. ಧನಿಯವನ್ನು ಸೇವಿಸುವುದರಿಂದ ಮನೆಗೆ ಸಂಪತ್ತು ಬರುವ ಮಾರ್ಗವನ್ನು ನೀವು ತೆರೆಯುತ್ತೀರಿ ಎಂದು ಹೇಳಲಾಗುತ್ತದೆ. ಬುಧನ ಸ್ಥಾನವು ಸುಭದ್ರವಾಗಿ ದ್ದರೆ ಆ ವ್ಯಕ್ತಿಯು ಭೌತಿಕವಾಗಿ ಅತ್ಯಂತ ಪ್ರಬಲನಾಗಿರುತ್ತಾನೆ ಹಾಗೂ ಉತ್ತಮ ವಾಗ್ಮಿಯಾಗಿರುತ್ತಾನೆ. ಹಣಕಾಸಿನ ವಿಚಾರದಲ್ಲೂ ಕೂಡ ಬುಧನು ಸಹಾಯವನ್ನು ಮಾಡುತ್ತಾನೆ.

ಬುಧನ ಸ್ಥಾನ ನಿಮ್ಮ ಜಾತಕದಲ್ಲಿ ಸರಿ ಇಲ್ಲವಾದರೆ ಅವರ ಜೀವನದಲ್ಲಿ ಬಡತನ ಹಾಗೂ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತದೆ. ಜೊತೆಗೆ ಮಾನಸಿಕ ಶಾಂತಿಯು ಕೂಡ ಇರುವುದಿಲ್ಲ. ಜೀರಿಗೆ ರಾಹು ಕೇತುವನ್ನು ಪ್ರತಿನಿಧಿಸುತ್ತದೆ. ಜೀರಿಗೆಯನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ರಾಹು ಕೇತುಗಳ ಉತ್ತಮ ಪ್ರಯೋಜನ ಗಳನ್ನು ನಿಮ್ಮದಾಗಿಸಿಕೊಳ್ಳುವುದಕ್ಕೆ ಮಂಗಳವಾರದಂದು ಮೊಸರಿನಲ್ಲಿ ಜೀರಿಗೆಯನ್ನು ಬೆರೆಸಿಕೊಂಡು ಸೇವಿಸಿ ಇದರಿಂದ ಜೀವನದಲ್ಲಿ ನಿಮಗೆ ಸಂಪತ್ತು ಸಿಗುತ್ತದೆ.

ಜೊತೆಗೆ ಅದೃಷ್ಟವೂ ಕೂಡ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹಾಗೆಯೇ ಜೀರಿಗೆಯ ಕೆಲವೊಂದು ತಂತ್ರಗಳು ಕೂಡ ಪರಿಣಾಮಕಾರಿ ಎಂದು ಸಾಬೀತಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಂತ್ರಗಳನ್ನು ಮಾಡುವುದರಿಂದ ಮನೆಯಲ್ಲಿ ಸಂತೋಷ ಶಾಂತಿ ಮತ್ತು ಸಮೃದ್ಧಿ ಇರುತ್ತದೆ ಜೊತೆಗೆ ಆರ್ಥಿಕ ಸ್ಥಿತಿಯು ಸದೃಢವಾಗಿರುತ್ತದೆ. ಜ್ಯೋತಿಷ್ಯದಲ್ಲಿ ಇಂತಹ ಅನೇಕ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಅದನ್ನು ಬಳಸಿಕೊಂಡು ಗ್ರಹಗಳನ್ನು ಬಲಪಡಿಸಬಹುದು.

ಅನೇಕ ಔಷಧೀಯ ಗುಣಗಳು ಜೀರಿಗೆಯಲ್ಲಿ ಕಂಡು ಬರುತ್ತದೆ. ಆದ್ದರಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸ ಲಾಗಿದೆ. ಜೀರಿಗೆ ಆರೋಗ್ಯಕ್ಕೆ ಮಾತ್ರ ಒಳ್ಳೆಯದು ಅಲ್ಲದೆ ಇದಕ್ಕೆ ಸಂಬಂಧಿಸಿದ ತಂತ್ರಗಳನ್ನು ಕೂಡ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಜೀರಿಗೆಗೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಮನೆಯ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ ಮತ್ತು ಕುಟುಂಬ ಸದಸ್ಯರ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.

ಜೀರಿಗೆಯ ಈ ತಂತ್ರಗಳು ಮನೆಯ ಆರ್ಥಿಕ ಪರಿಸ್ಥಿತಿಗಳನ್ನು ಉತ್ತಮ ಪಡಿಸುವುದಕ್ಕೆ ಮತ್ತು ಕೆಲಸಗಳಲ್ಲಿ ಬರುವಂತಹ ಅಡೆತಡೆಗಳನ್ನು ತೆಗೆದು ಹಾಕುವುದಕ್ಕೆ ಉಪಯುಕ್ತ ಎಂದು ಪರಿಗಣಿಸಲಾಗಿದೆ. ಹಣ ಕೈಯಲ್ಲಿ ನಿಲ್ಲದೆ ಇದ್ದರೆ ಜಿರಿಗೆಗೆ ಸಂಬಂಧಿಸಿದ ಈ ತಂತ್ರಗಳನ್ನು ಖಂಡಿತವಾಗಿ ಮಾಡಿ. ಶುಕ್ರವಾರ ದಿನ ತಾಯಿ ಲಕ್ಷ್ಮಿ ವಿಗ್ರಹದ ಮುಂದೆ ಒಂದು ಕೆಂಪು ಪಟ್ಟಿಯನ್ನು ಇಟ್ಟು ಅದರಲ್ಲಿ ಒಂದು ಹಿಡಿ ಜೀರಿಗೆಯನ್ನು ಹಾಕಿ ಸ್ವಲ್ಪ ನಾಣ್ಯಗಳನ್ನು ಇಟ್ಟು ಪೂಜೆ ಮಾಡಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">