ಸಾವಿರಾರು ಕೋಟಿ ಆಸ್ತಿ ಮಾಡಿರುವ ರಾಜಕಾರಣಿಗಳು ಇವರ ಕಾಲು ಧೂಳಿಗೆ ಸಮಾನ ಯಾಕೆ ಗೊತ್ತಾ…….?
ಜನರ ಹಣವನ್ನು ಯಾವ ರೀತಿ ಲೂಟಿ ಮಾಡೋಣ ಅಂತ ಹಲವು ಜನ ಸರ್ಕಾರಿ ಅಧಿಕಾರಿಗಳು ಕಾಯುತ್ತಿರುತ್ತಾರೆ. ಸಾರ್ವಜನಿಕರನ್ನು ಹೇಗೆಲ್ಲ ದೋಚಬಹುದು ಎಂದು ರಾಜಕೀಯ ನಾಯಕರು ಹಾಗೂ ರಾಜಕಾರಣಿಗಳು ಹಗಲಿರುಳು ಚಿಂತೆ ಮಾಡುತ್ತಿರುತ್ತಾರೆ. ಅವರಿಗೆ ಇಷ್ಟೆಲ್ಲ ರಾಜ ಸೌಲತ್ತು ವೇತನ ಹಾಗೂ ಸೌಲಭ್ಯಗಳು ಇದ್ದರೂ ಕೂಡ.
ಲಂಚದ ಮೇಲಿನ ಅವರ ದಾಹ ಮಾತ್ರ ಕಡಿಮೆ ಆಗುವುದೇ ಇಲ್ಲ. ನಮ್ಮ ವ್ಯವಸ್ಥೆ ಹೀಗಿರುವಾಗ ಅಲ್ಲೊಬ್ಬ ಬಿಕ್ಷುಕ ತಮಿಳುನಾಡಿನ ಮುಖ್ಯಮಂತ್ರಿ ಗಳಿಗೆ ಲಕ್ಷಗಟ್ಟಲೆ ಹಣವನ್ನು ದಾನವಾಗಿ ಕೊಟ್ಟಿರುವುದರ ಬಗ್ಗೆ ನಿಮಗೆ ಗೊತ್ತಾ? ಹೌದು, ಆತ ಒಬ್ಬ ಸಾಧಾರಣ ಭಿಕ್ಷುಕನಾದರೂ ಸಮಾಜದ ಪರ ಆತ ತೋರಿದಂತಹ ವಿಶ್ವಾಸ ಮತ್ತು ಕಾಳಜಿ ಎಂತಹ ಧನಿಕರನ್ನು ಕೂಡ ನಾಚಿಸುವಂಥದ್ದು.
ಈ ಕಾಲದಲ್ಲಿ ದಾನ ಧರ್ಮದ ಗುಣ ಇರುವವರು ಕಡಿಮೆ ತಮ್ಮ ಬಳಿ ಸಾಕಷ್ಟು ಸಂಪತ್ತು ಇದ್ದರೂ ಕೂಡ ಬೇರೆಯವರ ಬಳಿ ಇರುವಂತಹ ಹಣಕಾಸನ್ನು ನೋಡುವುದರ ಮೂಲಕ ಅವರ ಮೇಲೆ ಕಣ್ಣು ಹಾಕುವ ವರೇ ಹೆಚ್ಚು ಜನ. ಇವತ್ತಿನ ಕಾಲಮಾನದಲ್ಲಿ ಅಗತ್ಯ ಇದ್ದವರಿಗೆ ಕೈಯೆತ್ತಿ ಕೊಡುವುದು ಒಂದು ದೊಡ್ಡ ಗುಣ. ಅದೇ ತಮ್ಮ ಬಳಿ ಬೇಕಾದಷ್ಟು ಹಣ ಇದ್ದರೂ ಕೂಡ.
ಇನ್ನೊಬ್ಬರ ಹಣಕ್ಕೆ ಆಸೆ ಪಡುವುದು, ಸುಲಿಗೆಗೆ ಇಳಿಯುವುದು, ಪರಮ ನೀಚತನ ಹೀಗಿರುವಾಗ ಆ ವ್ಯಕ್ತಿ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಜನರು ನೀಡಿದ ಹಣವನ್ನು ಜನರಿಗೆ ಕೊಟ್ಟು ತನ್ನ ಮಾನವೀಯತೆಯನ್ನು ಮೆರೆದಿದ್ದಾನೆ. ಆತ ಕೊಟ್ಟಿದ್ದು ಅಷ್ಟಿಷ್ಟಲ್ಲ ಬರೋಬ್ಬರಿ ಐವತ್ತು ಲಕ್ಷ ರೂಪಾಯಿಗಳನ್ನು ಈಗ ಅಲ್ಲಿರುವ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ
ಕಾಣಿಕೆಯಾಗಿ 50 ಲಕ್ಷ ರೂಪಾಯಿಗಳನ್ನು ಕೊಟ್ಟು ಎಲ್ಲರಿಗೂ ಮಾದರಿ ಯಾಗಿ ನಿಂತಿದ್ದಾರೆ. ಇವರ ಹೆಸರು ಪೂನ್ ಪಾಂಡಿಯನ್ ಇವರು ಮೂಲತಹ ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯವರಾದ ಇವರು ಈ ಮುನ್ನ 2020 ರ ಕಳೆದ ಲಾಕ್ ಡೌನ್ ಸಮಯದಲ್ಲಿ ಸುಮಾರು ಹತ್ತು ಸಾವಿರ ಹಣವನ್ನು ಪರಿಹಾರ ನಿಧಿಗೆ ಕೊಟ್ಟು ಸುದ್ದಿಯಾಗಿದ್ದರು. ಇದೀಗ ಒಂದಲ್ಲ ಎರಡಲ್ಲ ಬರೋಬರಿ 50 ಲಕ್ಷ ರೂಪಾಯಿಗಳನ್ನು ಪರಿಹಾರ ನಿಧಿಗೆ ಕೊಟ್ಟು
ಭಿಕ್ಷುಕನ ರೂಪದ ಭಗವಂತನಾಗಿ ಪರಿಣಮಿಸಿದ್ದಾರೆ. ಸಾಧಾರಣ ಭಿಕ್ಷುಕನಾದಂತಹ ಇವರಿಗೆ ಇಷ್ಟೆಲ್ಲಾ ಹಣವನ್ನು ಈ ರೀತಿ ಜನರ ಕಷ್ಟಕ್ಕೆ ಕೊಡುವುದಕ್ಕೆ ಮನಸ್ಸಾದರೂ ಬಂದಿದ್ದು ಯಾಕೆ? ಆತನೇ ಭಿಕ್ಷೆಯನ್ನು ಬೇಡಿ ಅವರಿವರು ಕೊಟ್ಟಂತಹ ಹಣವನ್ನು ಸಂಗ್ರಹಣೆ ಮಾಡಿ ಜೀವಿಸುವಂತಹ ಅತಂತ್ರ ಪರಿಸ್ಥಿತಿ ಇರುವಾಗ ತನ್ನ ಬಗ್ಗೆಯೂ ಲೆಕ್ಕಿಸದೆ ಈತ ಬೇರೆಯವರಿಗೆ ದಾನವಾಗಿ ಕೊಟ್ಟಿದ್ದಾನೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.