ಮನೆಯಲ್ಲಿ ಈ ಒಂದು ವಸ್ತು ಇದ್ದರೆ ಬಡತನ ನಿಮ್ಮ ಬೆನ್ನು ಬಿಡೋದಿಲ್ಲ..ಇಂದೆ ಈ ವಸ್ತು ತೆಗೆದು ಹೊರ ಹಾಕಿ » Karnataka's Best News Portal

ಮನೆಯಲ್ಲಿ ಈ ಒಂದು ವಸ್ತು ಇದ್ದರೆ ಬಡತನ ನಿಮ್ಮ ಬೆನ್ನು ಬಿಡೋದಿಲ್ಲ..ಇಂದೆ ಈ ವಸ್ತು ತೆಗೆದು ಹೊರ ಹಾಕಿ

ಮನೆಯಲ್ಲಿ ಈ ವಸ್ತು ಇದ್ದರೆ ಬಡತನ ಬೆನ್ನು ಬಿಡೋದಿಲ್ಲ……!!

WhatsApp Group Join Now
Telegram Group Join Now

ವಾಸ್ತು ಶಾಸ್ತ್ರದ ಪ್ರಕಾರ ಹಿಟ್ಟನ್ನು ರಾತ್ರಿ ಇಡೀ ಫ್ರಿಡ್ಜ್ ನಲ್ಲಿ ಇಡಬೇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹಾಗೆ ಉಳಿಯು ತ್ತದೆ. ಹಳಸಿದ ಹಿಟ್ಟನ್ನು ಬಳಸುವುದರಿಂದ ಕ್ಯಾನ್ಸರ್ ನಂತಹ ಕಾಯಿಲೆ ಗಳು ಕೂಡ ಬರುತ್ತದೆ. ಅಡುಗೆ ಮನೆಗಳಲ್ಲಿ ಔಷಧಿಗಳನ್ನು ಇಡುವುದು ಸಹ ತುಂಬಾ ಅಶುಭ. ಅಡುಗೆ ಮನೆಗಳಲ್ಲಿ ಔಷಧಿಗಳನ್ನು ಇಡುವುದರಿಂದ

ಒಬ್ಬ ವ್ಯಕ್ತಿಯು ಆಹಾರದಂತೆ ಔಷಧಿಗಳನ್ನು ತಿನ್ನುವುದಕ್ಕೆ ಪ್ರಾರಂಭಿಸು ತ್ತಾನೆ ಅಂತ ಹೇಳಲಾಗುತ್ತದೆ. ಅನೇಕ ರೋಗಗಳು ಅವರನ್ನು ಒಂದರ ಹಿಂದೆ ಒಂದು ಸುತ್ತುವರಿಯುತ್ತದೆ. ಅದರಲ್ಲೂ ವಿಶೇಷವಾಗಿ ಮನೆಯ ಮುಖ್ಯಸ್ಥರು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಒಡೆದ ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಇಡಬೇಡಿ. ಒಡೆದ ಪಾತ್ರೆಗಳು ಮನೆಯಲ್ಲಿ ಬಡತನವನ್ನು ತರುತ್ತದೆ. ಹಾಗೂ ಒಡೆದ ಪಾತ್ರೆಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಡಬೇಡಿ.

ಹೀಗೆ ಮಾಡುವುದರಿಂದ ಮನೆಯಲ್ಲಿ ಜಗಳ ವೈಶಮ್ಯ ಹೆಚ್ಚಾಗುತ್ತದೆ. ಹಾಗಾಗಿ ತಕ್ಷಣ ಅವುಗಳನ್ನು ತೆಗೆದುಹಾಕಿ. ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಮಹತ್ವವಿದೆ. ಹೀಗಾಗಿ ಪ್ರತಿ ಮನೆಯಲ್ಲಿಯೂ ಕೂಡ ತುಳಸಿ ಗಿಡವನ್ನು ಇಟ್ಟು ಪೂಜಿಸುವುದನ್ನು ಕಾಣಬಹುದು. ಮನೆಯಲ್ಲಿ ತುಳಸಿ ಗಿಡವನ್ನು ಇಡುವುದು ತುಂಬಾ ಶುಭ ಎಂದು ಹೇಳಲಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ತುಳಸಿ ಗಿಡಕ್ಕೆ ನೀರನ್ನು ಹಾಕಿ ಹಸಿರಾಗಿರುವ ಹಾಗೆ ನೋಡಿಕೊಳ್ಳಬೇಕು.

ಸಾಮಾನ್ಯವಾಗಿ ಮನೆಯಲ್ಲಿ ಅಲಂಕಾರಕ್ಕಾಗಿ ಫೋಟೋಗಳನ್ನು ಹಾಕುತ್ತಾರೆ. ಇದರಿಂದ ಮನೆ ತುಂಬಾ ಸುಂದರವಾಗಿ ಕಾಣುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವು ಫೋಟೋಗಳನ್ನು ಮನೆಯಲ್ಲಿ ಇಡ ಬಾರದು. ಅದರಲ್ಲೂ ಕೆಲವು ಹಿಂಸಾತ್ಮಕ ಪ್ರಾಣಿಗಳ ಫೋಟೋಗಳನ್ನು ಹಾಕುವುದರಿಂದ ಕುಟುಂಬ ಸದಸ್ಯರ ನಡುವೆ ವೈಮನಸ್ಸು ಶುರುವಾಗು ತ್ತದೆ. ಬಡತನ ಹೆಚ್ಚಾಗುತ್ತದೆ. ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಕನ್ನಡಿ ಕಂಡು ಬರುತ್ತದೆ.

ಕನ್ನಡಿ ಇಲ್ಲ ಎಂದರೆ ಜೀವನವನ್ನು ಕಲ್ಪಿಸಿಕೊಳ್ಳುವುದಕ್ಕೂ ಕೂಡ ಅಸಾಧ್ಯವಾಗುತ್ತದೆ. ಮನೆಗಳಲ್ಲಿ ಕನ್ನಡಿಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು ಆದರೆ ಕನ್ನಡಿ ಒಡೆದರೆ ಅಥವಾ ಸೀಳಾಗಿದ್ದರೆ ತಕ್ಷಣವೇ ಅದನ್ನು ಮನೆಯಿಂದ ತೆಗೆದುಹಾಕಿ. ಇಲ್ಲದೆ ಹೋದರೆ ಮನೆಯಲ್ಲಿ ಆರ್ಥಿಕ ಬಿಕಟ್ಟು ಪ್ರಾರಂಭವಾಗುತ್ತದೆ. ಗರುಡ ಪುರಾಣದಲ್ಲಿ ಒಬ್ಬ ವ್ಯಕ್ತಿಯು ಬಡತನವನ್ನು ಎದುರಿಸುವುದಕ್ಕೆ ಯಾವುದೆಲ್ಲ ಕಾರಣಗಳು ಇವೆ ಅನ್ನುವುದನ್ನು ಸ್ಪಷ್ಟವಾಗಿ ಹೇಳಲಾಗಿದೆ.

ಇದು ಕೇವಲ ಬಡತನ ಮಾತ್ರವಲ್ಲ ದುರಾದೃಷ್ಟವನ್ನು ಸಹ ತರುತ್ತದೆ. ಗರುಡ ಪುರಾಣದ ಪ್ರಕಾರ ಯಾವೆಲ್ಲ ವಿಚಾರಗಳು ನಮ್ಮನ್ನು ಬಡವ ರನ್ನಾಗಿ ದೂರದೃಷ್ಟರನ್ನಾಗಿ ಮಾಡುತ್ತದೆ ಎಂದು ನೋಡೋಣ. ಗರುಡ ಪುರಾಣವು ಹೇಳುವ ಪ್ರಕಾರ ನಾವು ಇತರರ ಭೂಮಿಯನ್ನು ಅಥವಾ ಸಂಪತ್ತನ್ನು ಒತ್ತಾಯ ಪೂರ್ವಕವಾಗಿ ಕಸಿದುಕೊಳ್ಳುವುದು ಮಹಾ ಪಾಪ ಇಂತಹ ಕೆಲಸವನ್ನು ಮಾಡುವ ಜನರು ಎಂದಿಗೂ ಜೀವನದಲ್ಲಿ ಸಂತೋಷವನ್ನು ಅನುಭವಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">