ಪ್ರತಿಯೊಬ್ಬ ಮನುಷ್ಯನು ತಿಳಿದುಕೊಳ್ಳಬೇಕಾದ ಮುಖ್ಯವಾದ ವಿಷಯ……..!!
ಹಿಂದೊಮ್ಮೆ ದೊಡ್ಡ ಆಶ್ರಮ ಇತ್ತು ಅದನ್ನು ಗುರು ಒಬ್ಬರು ನಡೆಸುತ್ತಿ ದ್ದರು. ಅವರ ಬಳಿ ಅವರದ್ದೇ ಆದಂತಹ ಶಿಷ್ಯ ಕೂಟ ಇತ್ತು ಪ್ರತಿದಿನ ಅವರನ್ನು ಕಾಣುವುದಕ್ಕೆ ಅಲ್ಲಿಗೆ ಬರುತ್ತಿದ್ದರು. ಗುರುಗಳು ಅವರುಗಳ ಪೈಕಿ ಕೆಲವರನ್ನು ಸುಲಭವಾಗಿ ನೇರವಾಗಿ ಆಶ್ರಮದೊಳಗೆ ಸೇರಿಸಿ ಕೊಳ್ಳುತ್ತಿದ್ದರು. ಇನ್ನೂ ಕೆಲವೊಂದಷ್ಟು ಜನರನ್ನು ನೀವು ಒಂದು ಇಡೀ ದಿನ ಸ್ಮಶಾನದಲ್ಲಿ ಇದ್ದು ಬನ್ನಿ
ಆ ಬಳಿಕ ನಿಮ್ಮನ್ನು ಆಶ್ರಮದೊಳಗಡೆ ಸೇರಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು ಹೀಗಿರುವಾಗ ವ್ಯಕ್ತಿ ಒಬ್ಬ ಅವರ ಬಳಿ ಬಂದು ನಾನು ನಿಮ್ಮ ಆಶ್ರಮಕ್ಕೆ ಸೇರಲು ಬಂದಿದ್ದೇನೆ. ನನ್ನನ್ನು ಸಹ ನಿಮ್ಮ ಶಿಷ್ಯರ ಪೈಕಿ ಒಬ್ಬರನ್ನಾಗಿಸಿಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತಾನೆ. ಅವನ ಮಾತಿಗೆ ಉತ್ತರವಾಗಿ ಗುರುಗಳು ನೀನು ಇಲ್ಲಿ ಶಿಷ್ಯನಾಗಿ ಸೇರಿಕೊಳ್ಳಬೇಕು ಎಂದರೆ ಒಂದು ಇಡೀ ರಾತ್ರಿ ಸ್ಮಶಾನದಲ್ಲಿ ಇದು ಬರಬೇಕು ಎಂದು ಹೇಳುತ್ತಾರೆ.
ಹಾಗೂ ನೀನು ಅಲ್ಲಿ ನೋಡುವ ಕೇಳುವ ವಿಚಿತ್ರ ಗಳನ್ನು ಹಾಗೂ ನಿನಗೆ ಅಲ್ಲಾಗುವ ಅನುಭವಗಳನ್ನು ಹಾಗೂ ನೀನು ಅಲ್ಲಿ ಕಲಿಯುವ ಸಂಗತಿ ಗಳ ಬಗ್ಗೆ ಮರುದಿನ ಬಂದು ನೀನು ನನಗೆ ವಿವರಿಸಬೇಕು ಎಂದು ಹೇಳಿದ್ದರು. ಇಷ್ಟು ಕೆಲಸ ಮಾಡಿದರೆ ಮಾತ್ರ ಆತನನ್ನು ಶಿಷ್ಯನನ್ನಾಗಿ ಸೇರಿಸಿಕೊಳ್ಳುತ್ತೇನೆ ಎಂದು ಗುರುಗಳು ಆತನಿಗೆ ತಾಕಿತ್ತನ್ನು ಮಾಡಿದ್ದರು
ಅವರ ಮಾತನ್ನು ಕೇಳಿದಂತಹ ಅವನು ಆಶ್ಚರ್ಯ ಪಡುತ್ತಾನೆ. ಹಾಗೂ ಸ್ವಲ್ಪ ಗಾಬರಿ ಕೂಡ ಪಡುತ್ತಾನೆ. ಅವನು ಚಿಂತೆ ಮಾಡುತ್ತಿದ್ದುದ್ದನ್ನು ಗಮನಿಸಿದಂತಹ ಗುರುಗಳು ಅವನನ್ನು ನೀನು ರಾತ್ರಿ ಇಡೀ ಸ್ಮಶಾನ ದಲ್ಲಿ ಇರುತ್ತೀಯ ಎಂದು ಕೇಳಿದ್ದಕ್ಕೆ ಆತ ಇಲ್ಲ ನಾನು ಇರುವುದಿಲ್ಲ ಎಂದು ಆತ ಹೇಳಿದ್ದ. ಯಾಕೆ ಅಂತ ಗುರುಗಳು ಕೇಳಿದ್ದಕ್ಕೆ ಅಲ್ಲಿ ರಾತ್ರಿಯ ಸಮಯದಲ್ಲಿ ಪ್ರೇತಾತ್ಮಗಳು ಸಂಚರಿಸುತ್ತದೆ.
ಅವು ತನಗೆ ರಾತ್ರಿಯ ಸಮಯದಲ್ಲಿ ಏನಾದರೂ ಮಾಡಬಹುದು ಎಂದು ಗುರುಗಳಿಗೆ ಹೇಳಿದ್ದ. ಆಗ ಗುರುಗಳು ನೀನು ಅವುಗಳನ್ನು ನೋಡಿದ್ದೀಯಾ ಅಂತ ಕೇಳುತ್ತಾರೆ ಆ ಮಾತಿಗೆ ಆತ ಇಲ್ಲ ಆದರೆ ಅನೇಕರು ಆ ರೀತಿ ಹೇಳುವುದನ್ನು ನಾನು ಕೇಳಿದ್ದೇನೆ ಹಾಗೂ ಅನೇಕ ರಿಗೆ ಬೂತವಾಹನೆ ಆಗುವುದನ್ನು ಗಮನಿಸಿದ್ದೇನೆ ಅಂತ ಹೇಳಿದ್ದ. ಆಗ ಗುರುಗಳು ಇತರರು ಹೇಳಿದ್ದನ್ನು ಬಿಡು
ಅದೆಲ್ಲವನ್ನು ನೀನು ಬೇರೆಯವರಿಂದ ಕೇಳಿರುವುದು ಅಷ್ಟೇ. ಪ್ರತ್ಯಕ್ಷವಾಗಿ ಅವುಗಳನ್ನು ನೋಡಿಲ್ಲ ಆ ಕಾರಣ ನೀನು ರಾತ್ರಿ ಅಲ್ಲಿ ತಂಗಿದರೆ ನಿನಗೆ ಅವು ಕಾಣಿಸಿಕೊಳ್ಳಬಹುದು ಒಂದು ಪಕ್ಷ ಅವುಗಳು ಕಾಣಿಸಿಕೊಂಡರೆ ಅವುಗಳ ಬಗ್ಗೆ ತಿಳಿದುಕೋ, ಅವುಗಳ ಕಥೆಯನ್ನು ಕೇಳು, ಅವು ಏನನ್ನು ಸೇವಿಸುತ್ತವೆ ಎಂದು ಕೇಳು, ಒಟ್ಟಿನಲ್ಲಿ ಯಾವುದಕ್ಕೂ ಕೂಡ ಭಯವನ್ನು ಪಡಬೇಡ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.