ಅಡುಗೆ ಮನೆಯಲ್ಲಿ ಈ ಎರಡು ಪಾತ್ರೆಗಳನ್ನು ಉಲ್ಟಾ ಇಟ್ಟರೆ ಬಡತನ ತಪ್ಪಿದ್ದಲ್ಲ……||
ಅಡುಗೆಮನೆಯನ್ನು ಮನೆಯ ದೇವಾಲಯ ಅಂತಲೇ ಪರಿಗಣಿಸಲಾಗು ತ್ತದೆ. ಮತ್ತು ಇದು ನಿಮ್ಮ ಮನೆಯಲ್ಲಿನ ಶಕ್ತಿಯ ಮೂಲವಾಗಿದೆ. ಆದ್ದರಿಂದ ಅಡುಗೆ ಮನೆಯಲ್ಲಿ ಮಾಡುವ ತಪ್ಪುಗಳು ನಿಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಮಾಡುವ ತಪ್ಪುಗಳಿಂದ ಆರ್ಥಿಕ ಸಮಸ್ಯೆಗಳು ಮಾನಸಿಕ ಸಮಸ್ಯೆಗಳು ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ.
ಅಡುಗೆ ಮನೆಯಲ್ಲಿ ಸಣ್ಣಪುಟ್ಟ ವಿಷಯಗಳನ್ನು ನೋಡಿಕೊಳ್ಳುವುದರ ಮೂಲಕ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೇಗೆ ತರುವುದು ಎನ್ನುವುದನ್ನು ಈ ದಿನ ತಿಳಿಯೋಣ. ಒಲೆಯ ಮೇಲೆ ಯಾವುದೇ ಅಡುಗೆ ಮಾಡದೆ ಇದ್ದರೂ ಯಾವುದಾದರೂ ಒಂದು ಪಾತ್ರೆಯನ್ನು ಇಡುವ ಅಭ್ಯಾಸ ಇರುತ್ತದೆ. ಆದರೆ ನೀವು ಅಡುಗೆ ಮಾಡದೆ ಇದ್ದರೆ
ಒಲೆಯ ಮೇಲೆ ಯಾವುದೇ ರೀತಿಯ ಖಾಲಿ ಪಾತ್ರೆಯನ್ನು ಇಡಬೇಡಿ. ಒಲೆಯ ಮೇಲೆ ಖಾಲಿ ಪಾತ್ರೆಯನ್ನು ಇಡುವುದು ನಿಮ್ಮ ಹಣಕಾಸಿನ ಬಜೆಟ್ ಅನ್ನು ಹಾಳು ಮಾಡುತ್ತದೆ. ಯಾವುದೇ ಕಾರಣಗಳು ಇಲ್ಲದೆ ವೆಚ್ಚಗಳು ಸೃಷ್ಟಿಯಾಗುತ್ತದೆ. ಮತ್ತು ಈ ಕಾರಣದಿಂದ ಮನೆಯಲ್ಲಿ ಅಸಮಾಧಾನಗಳು ಹೆಚ್ಚಾಗುತ್ತದೆ. ಯಾವುದೋ ಕಾರಣಕ್ಕೆ ಅಥವಾ ಸೋಮಾರಿತನದಿಂದ ಕೊಳಕು ಪಾತ್ರೆಗಳನ್ನು ಅಡುಗೆಮನೆಯ ಸಿಂಕ್ ನಲ್ಲಿ ಬಿಡುವುದು ಅನೇಕರ ಅಭ್ಯಾಸವಾಗಿರುತ್ತದೆ.
ಸಾಮಾನ್ಯವಾಗಿ ಜನರು ಊಟದ ನಂತರ ಪಾತ್ರೆಗಳನ್ನು ಸಿಂಕ್ ನಲ್ಲಿ ಹಾಕಿಬಿಡುತ್ತಾರೆ ಆದರೆ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಕೊಳಕು ಪಾತ್ರೆಗಳನ್ನು ಬಿಡಬಾರದು ಈ ಕಾರಣದಿಂದಾಗಿ ಧನ ಲಾಭವನ್ನು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ ಮತ್ತು ನಿಮ್ಮ ಶ್ರಮಕ್ಕೆ ಸರಿಯಾದ ಫಲಿತಾಂಶವನ್ನು ನೀವು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅಡುಗೆ ಮನೆಯಲ್ಲಿ ಎಂದಿಗೂ ಕೊಳಕು ಪಾತ್ರೆಗಳನ್ನು ಇಡಬೇಡಿ.
ಆಹಾರ ಸೇವಿಸಿದ ತಕ್ಷಣ ಪಾತ್ರೆಗಳನ್ನು ತೊಳೆಯಿರಿ. ಸಾಮಾನ್ಯವಾಗಿ ಹಂಚನ್ನು ಒಲೆಯ ಮೇಲೆ ಇಟ್ಟ ತಕ್ಷಣ ರೊಟ್ಟಿ ಅಥವಾ ಚಪಾತಿಯನ್ನು ಮಾಡುವುದು ಹಲವರ ಅಭ್ಯಾಸ ವಾಗಿರುತ್ತದೆ ಆದರೆ ನಂಬಿಕೆಗಳ ಪ್ರಕಾರ ಹಂಚಿನಲ್ಲಿ ರೊಟ್ಟಿ ಮಾಡುವುದಕ್ಕೂ ಮೊದಲು ನೀವು ಅದರ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಬೇಕು ನೀರಿನಿಂದ ಪವಿತ್ರ ಗೊಳಿಸಬೇಕು ಇದರ ನಂತರ ನೀವು ರೊಟ್ಟಿ ಮಾಡುವುದರ ಮೂಲಕ
ನೀವು ಅನ್ನಪೂರ್ಣೇಶ್ವರಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತೀರಿ. ಇದರಿಂದ ಮನೆಯಲ್ಲಿ ಯಾವುದೇ ಆಹಾರದ ಕೊರತೆ ಆಗುವುದಿಲ್ಲ ಜೊತೆಗೆ ಅದರ ಸಕಾರಾತ್ಮಕ ಪ್ರಭಾವವು ಮನೆಯ ಜನರ ಆರೋಗ್ಯದ ಮೇಲೆ ಕಂಡು ಬರುತ್ತದೆ. ಅನೇಕ ಜನರು ಅಡುಗೆ ಮನೆಯಲ್ಲಿ ತರಕಾರಿಗಳು ಇತ್ಯಾದಿಗಳನ್ನು ಕತ್ತರಿಸಿ ಅಡುಗೆ ಮನೆಯಲ್ಲಿ ಒಂದು ಮೂಲೆಯಲ್ಲಿ ಡಸ್ಟ್ ಬಿನ್ ಇಟ್ಟು ಅದರಲ್ಲಿ ಹಾಕುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.