ರಾಜ್ಯದ ಮೊದಲ ಮುಸ್ಲಿಂ ಸ್ಪೀಕರ್ ಯುಟಿ ಖಾದರ್ ಲೈಫ್ ಸ್ಟೋರಿ..ಐದು ಬಾರಿ ಶಾಸಕ ಎರಡು ಸಲ ಸಚಿವ.. - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಕೇಸರಿ ಕೋಟೆಯ ಏಕೈಕ ಮುಸ್ಲಿಂ ಶಾಸಕ ಖಾದರ್……||

ಕರ್ನಾಟಕ ವಿಧಾನಸಭಾ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಮುಸ್ಲಿಂ ಸದಸ್ಯರೊಬ್ಬರು ಸ್ಪೀಕರ್ ಸ್ಥಾನಕ್ಕೆ ಹೋಗಿದ್ದಾರೆ. ಹೌದು ಇಂತಹ ಸ್ಥಾನಕ್ಕೆ ಹೋದಂತಹ ಯು ಟಿ ಖಾದರ್ ಯಾರು? ಇವರು ಬೆಳೆದು ಬಂದದ್ದು ಹೇಗೆ? ಕೇಸರಿ ಕೋಟೆ ಎಂದು ಕರೆಯುವಂತಹ ದಕ್ಷಿಣ ಕನ್ನಡ ಮಂಗಳೂರಿನಲ್ಲಿ ಐದೈದು ಬಾರಿ ಗೆದ್ದಿದ್ದು ಹೇಗೆ?

ಶ್ರೀ ಬನಶಂಕರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕ್ ಶ್ರೀ ಗಣಪತಿ ಭಟ್ ಪೋನ್ – 9972030557.ಮಾಟಮಂತ್ರ,ಗಂಡ ಹೆಂಡತಿ ಕಲಹ,ಗುಪ್ತ ಸಮಸ್ಯೆಗಳು,ಹಣಕಾಸು,ಸಾಲಬಾಧೆ,ಪ್ರೀತಿ ಪ್ರೇಮ ವಿಚಾರ,ಶತ್ರು ಬಾಧೆ,ನಿಮ್ಮ ಜೀವನದಲ್ಲಿ ಏನೆ ಕಠಿಣ ಕಷ್ಟವಿದ್ದರೂ ಶೀಘ್ರವಾಗಿ ಪರಿಹಾರ ನೀಡಲಾಗುತ್ತದೆ ಈಗಲೆ ಕರೆ ಮಾಡಿ 9972030557

ಇವರ ತಂದೆ ಯಾರು ಗೊತ್ತಾ? ಇವರು ಓದಿದ್ದು ಎಷ್ಟು? ಇವರ ಬಳಿ ಒಟ್ಟು ಎಷ್ಟು ಆಸ್ತಿ ಇದೆ? ಹೀಗೆ ಇವರ ವಿಚಾರವಾಗಿ ಸಂಬಂಧಿಸಿದ ಇವರು ಯಾವ ಒಂದು ಕಾರಣದಿಂದ ರಾಜಕೀಯ ಪಕ್ಷವನ್ನು ಸೇರಿ ಕೊಂಡರು ಹೀಗೆ ಇವರಿಗೆ ಸಂಬಂಧಿಸಿದ ಹಾಗೂ ಇದರ ರಾಜಕೀಯದ ವಿಚಾರಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಯು ಟಿ ಖಾದರ್ ಅವರು ದಕ್ಷಿಣ ಕನ್ನಡ ಭಾಗದ ಪ್ರಭಾವಿ ಮುಸ್ಲಿಂ ನಾಯಕರಲ್ಲಿ ಒಬ್ಬರು ಇವರು 1969ರ ಅಕ್ಟೋಬರ್ 12ರಂದು ಕಾಸರಗೂಡಿನಲ್ಲಿ ಜನಿಸಿದರು. ತಂದೆ ಹಜಿ ಯು ಟಿ ಫರೀದ್. ಇವರ ತಾಯಿ ನಜೀಮಾ. ಇವರಿಗೆ ಮೂರು ಜನ ಸಹೋದರರು ಓರ್ವ ಸಹೋದರಿ ಕೂಡ ಇದ್ದಾರೆ. ಇವರ ತಂದೆ ಮೊದಲು ರಾಜಕೀಯದಲ್ಲಿ ಇದ್ದರು. ಇವರ ಕುಟುಂಬಕ್ಕೆ ಯಾವುದೇ ರೀತಿಯಾದಂತಹ ಬಡತನದ ಪರಿಸ್ಥಿತಿ ಇರಲಿಲ್ಲ.

ಈ ರೀತಿ ಬೆಳೆದಂತಹ ಖಾದರ್ ಅವರು ನಂತರದಲ್ಲಿ ಕಾನೂನು ಪದವಿ ಯನ್ನು ಪಡೆದುಕೊಂಡರು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಖಾದರ್ ಅವರು NSUI ನ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ನಾಲ್ಕು ಬಾರಿ ಶಾಸಕರಾಗಿದ್ದಂತಹ ಖಾದರ್ ಅವರ ತಂದೆ. ಇವರ ತಂದೆ ಮೊದಲಿನಿಂದಲೂ ಸಹ ಕಾಂಗ್ರೆಸ್ ಪಕ್ಷದಲ್ಲಿಯೇ ಗುರುತಿಸಿಕೊಂಡೇ ಬಂದಿದ್ದರು. 1972, 1978 ರಲ್ಲಿ ಉಲ್ಲಾಳ ಕ್ಷೇತ್ರದಿಂದ ಗೆದ್ದು.

ವಿಧಾನಸಭೆಯ ಮೆಟ್ಟಿಲೇರಿದ್ದರು. ಆಗಿನ ಉಲ್ಲಾಳ 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ವೇಳೆ ಮಂಗಳೂರು ಎಂದು ಬದಲಾವಣೆ ಆಯಿತು. ಎರಡು ಬಾರಿ ಗೆದ್ದಿದಂತಹ ಫರೀದ್ ನಂತರದಲ್ಲಿ ಅವರು ಯಾವುದೇ ರೀತಿಯ ಗೆಲುವನ್ನು ಕಾಣಲಿಲ್ಲ. ಆದರೆ 1999 ರಲ್ಲಿ ಮತ್ತೆ ಈ ಒಂದು ಕ್ಷೇತ್ರದಿಂದ ಗೆದ್ದಂತಹ ಫರೀದ್ 2004ರಲ್ಲೂ ಸಹ ಗೆದ್ದಿದ್ದರು. ಈ ಎರಡು ಗೆಲುವಿನ ಹಿಂದೆ ಮಗ ಯು ಟಿ ಖಾದರ್ ಅವರ ಪರಿಶ್ರಮ ಇತ್ತು ಎಂದು ಹೇಳುತ್ತಾರೆ ತಿಳಿದವರು.

ಆದರೆ 2007ರಲ್ಲಿ ಅವರು ವಿಧಿವಶರಾದರು. ಹೌದು ಆನಂತರ ಯು ಟಿ ಖಾದರ್ ಅವರು ರಾಜಕೀಯಕ್ಕೆ ಬರುತ್ತಾರೆ. ಇವರ ತಂದೆ ಸಾವಿನ ನಂತರ ಮತ್ತೆ ಚುನಾವಣೆ ನಡೆದು ಆ ಒಂದು ಸ್ಥಾನಕ್ಕೆ ಯುಟಿ ಖಾದರ್ ಅವರು ಬರುತ್ತಾರೆ. ಅಂದರೆ ಕಾಂಗ್ರೆಸ್ ಅವರಿಗೆ ಟಿಕೆಟ್ ಕೊಟ್ಟಿತು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *