ಇಂದಿರಾ ಗಾಂಧಿಯನ್ನೆ ಈ ದೇಗುಲದ ಒಳಗೆ ಬಿಡಲಿಲ್ಲ..17 ಬಾರಿ ದಾಳಿ ಮಾಡಿದರು ಈ ದೇಗುಲವನ್ನ ಏನು ಮಾಡೋಕಾಗಿಲ್ಲ

17 ಬಾರಿ ಈ ದೇವಸ್ಥಾನದ ಮೇಲೆ ದಾಳಿ ಯಾರು ಮಾಡಿದ್ರು ಯಾರು ವಶಪಡಿಸಿಕೊಳ್ಳಲು ಆಗಲಿಲ್ಲ……….||

WhatsApp Group Join Now
Telegram Group Join Now

ಈಗ ನಾವು ಹೇಳುತ್ತಿರುವಂತಹ ಈ ದೇವಸ್ಥಾನ ಸಾಮಾನ್ಯ ದೇವಸ್ಥಾನ ಅಲ್ಲ ಇಲ್ಲಿ ನಾವು ನೀವು ನಂಬುವಂತಹ ವಿಜ್ಞಾನ ಕೆಲಸ ಮಾಡುವುದಿಲ್ಲ. ಇಲ್ಲಿ ಸೌಂಡ್ ಎನರ್ಜಿ ಸಹ ಕೆಲಸಕ್ಕೆ ಬರುವುದಿಲ್ಲ. ಗಾಳಿ ಕೂಡ ಇಲ್ಲಿ ತನ್ನ ವಿರುದ್ಧ ದಿಕ್ಕಿಗೆ ಬೀಸುತ್ತದೆ. ಅನೇಕ ದೇಶದ ಆಕ್ರಮಣಕಾರರು

ಸುಮಾರು 17 ಕ್ಕೂ ಹೆಚ್ಚಿನ ಬಾರಿ ಈ ಒಂದು ಸ್ಥಳದ ಮೇಲೆ ಅತಿಕ್ರಮಣ ಮಾಡಿದರು ಕೂಡ ಅವರ್ಯಾರು ಇದನ್ನು ವಶಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಅಸಲಿಗೆ ಈ ದೇಶದ ಪ್ರಧಾನಿಯಾಗಿದ್ದಂತಹ ಶ್ರೀಮತಿ ಇಂದಿರಾ ಗಾಂಧಿಯವರು ಇಲ್ಲಿಗೆ ಬಾರದಂತೆ ಬ್ಯಾನ್ ಮಾಡಲಾಗಿತ್ತು ಎಂದರೆ ನಿಮಗೆ ನಂಬುವುದಕ್ಕೆ ಸಾಧ್ಯನ. ಆದರೂ ಕೂಡ ಇದು ಸತ್ಯ. ಅಷ್ಟಕ್ಕೂ ಈ ಒಂದು ದೇವಸ್ಥಾನಕ್ಕೆ ಇಷ್ಟೆಲ್ಲ ಶಕ್ತಿ ಇರುವುದಕ್ಕೆ ಸಾಧ್ಯವೆ

ಎಂಬ ಪ್ರಶ್ನೆಗೆ ಈ ಒಂದು ದೇಗುಲ ಜೀವಂತ ಉತ್ತರವಾಗಿ ನಿಲ್ಲುತ್ತದೆ. ಹೌದು ಈಗ ನಾವು ಹೇಳುತ್ತಿರುವಂತಹ ದೇವಸ್ಥಾನ ಇತಿಹಾಸ ಪ್ರಸಿದ್ಧ ವಾದಂತಹ ಜಗನ್ನಾಥ ದೇವಾಲಯದ ಬಗ್ಗೆ. ಇದು ಭಾರತದ ಅತ್ಯಂತ ಪುಣ್ಯ ಸ್ಥಳ ಹಾಗೂ ಅತ್ಯಂತ ಪವಿತ್ರವಾದಂತಹ ದೇವಾಲಯ ಎಂದು ಪರಿಗಣಿಸಲಾಗುತ್ತದೆ. ಜಗನ್ನಾಥ ದೇವಾಲಯ ಹಿಂದುಗಳು ವಿಶೇಷ ವಾಗಿ ಪೂಜಿಸುವಂತಹ ಹಾಗೂ ಆರಾಧಿಸುವಂತಹ ಪುಣ್ಯಕ್ಷೇತ್ರಗಳಲ್ಲಿ ಒಂದು.

ಇದು ಭಾರತದ ಮುಖ್ಯ ನಾಲ್ಕು ಶಕ್ತಿ ಪೀಠಗಳಲ್ಲಿ ಒಂದು ಎಂದು ಕರೆಸಿ ಕೊಂಡಿದೆ. ಇದು ಇರುವುದು ಒರಿಸ್ಸಾ ರಾಜ್ಯದ ಪೂರಿ ಎಂಬ ಸ್ಥಳದಲ್ಲಿ ಹೀಗಾಗಿ ಇದನ್ನು ಪೂರಿ ಜಗನ್ನಾಥ ಎಂದು ಕರೆಯಲಾಗುತ್ತದೆ. ಇದನ್ನು ಗಂಗರ ಕಾಲದ ಅರಸರು ನಿರ್ಮಿಸಿದರು ಎಂದು ಚರಿತ್ರೆ ಹೇಳುತ್ತದೆ. ಹಾಗೂ ಇದರ ರಚನೆಯ ಕಾಲಮಾನ ಸುಮಾರು ಕ್ರಿಸ್ತಶಕ 12ನೇ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ.

ಚಾರಿತ್ರಿಕ ಉಲ್ಲೇಖಗಳ ಪ್ರಕಾರ ಇದನ್ನು ಹತ್ತನೇ ಶತಮಾನದ ಮಧ್ಯ ಭಾಗದಲ್ಲಿ ಗಂಗರ ಅರಸನಾಗಿದ್ದಂತಹ ಅನಂತವರ್ಮನ್ ಚೋಳ ಗಂಗಾಧರನಾಥ ನಿರ್ಮಿಸಿದ್ದಾನೆ ಎಂದು ತಿಳಿದು ಬರುತ್ತದೆ. ಈತ ಮೂಲ ತಹ ಶೈವನಾಗಿದ್ದು ಉತ್ಕಲ ಪ್ರಾಂತ್ಯವನ್ನು ಈತ ಆಕ್ರಮಿಸಿಕೊಂಡ ಬಳಿಕ ತಾನು ವೈಷ್ಣವನಾಗಿ ಬದಲಾದ ಎಂದು ಹೇಳಲಾಗುತ್ತದೆ. ಈ ದೇವಸ್ಥಾನ ದಲ್ಲಿ ನಮಗೆ ತಿಳಿಯದೆ ಇರುವಂತಹ ರೋಚಕ ಸನ್ನಿವೇಶಗಳು ಕೂಡ ಇದೆ.

ಎಷ್ಟೋ ಧಾರ್ಮಿಕ ಹಾಗೂ ಆಧ್ಯಾತ್ಮಿಕ ನಿಗೂಢತೆಗಳು ಇವೆ ಅವು ಗಳಲ್ಲಿ ಕೆಲವೊಂದನ್ನು ಇವತ್ತಿಗೂ ಸಹ ಯಾರಿಂದಲೂ ಭೇದಿಸುವುದಕ್ಕೆ ಸಾಧ್ಯವಾಗಿಲ್ಲ. ಈ ನಿಗೂಢತೆಗಳಲ್ಲಿ ಸಾಕಷ್ಟು ನಿಮ್ಮನ್ನು ಕೂಡ ಬೆಚ್ಚಿಬೀಳಿಸುತ್ತವೆ. ಈ ಜಗನ್ನಾಥ ಮಂದಿರದ ಕುರಿತಾಗಿ ಕೆಲವೊಂದಷ್ಟು ಅಚ್ಚರಿಯನ್ನು ಉಂಟುಮಾಡುವಂತಹ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]