ಈ ವಸ್ತುಗಳು ಆಗಾಗ ಕಣ್ಣಿಗೆ ಬಿದ್ದರೆ ಶ್ರೀಮಂತರಾಗುತ್ತೀರಾ……||
ಜೀವನ ಅಂದಮೇಲೆ ಒಳ್ಳೆಯದ್ದು ಕೆಟ್ಟದ್ದು ಎರಡು ಇರುತ್ತದೆ ಹಾಗಾಗಿ ಜೀವನದಲ್ಲಿ ಏನೇ ಎದುರಾದರು ಸಮರ್ಥರಾಗಿ ಎದುರಿಸುವುದಕ್ಕೆ ಸಿದ್ಧವಿರಬೇಕು. ಆದರೆ ಪ್ರತಿಯೊಬ್ಬ ವ್ಯಕ್ತಿಯು ಕೆಟ್ಟ ಸಮಯವನ್ನು ತಪ್ಪಿಸುವುದಕ್ಕೆ ನೋಡುತ್ತಿರುತ್ತಾನೆ ಆದರೆ ಕೆಟ್ಟ ಸಮಯದ ನಂತರ ಒಳ್ಳೆಯ ಮತ್ತು ಸಂತೋಷದ ಸಮಯವೂ ಕೂಡ ಬರುತ್ತದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಜ್ಯೋತಿಷ್ಯ ಹಾಗೂ ಶಕುನದ ಪ್ರಕಾರ.
ಒಳ್ಳೆಯ ಸಮಯ ಬಂದಾಗ ಅದರ ಚಿನ್ಹೆಗಳು ಮುಂಚಿತವಾಗಿ ಸಿಗುವು ದಕ್ಕೆ ಪ್ರಾರಂಭಿಸುತ್ತದೆ. ಮನೆಯಲ್ಲಿ ತುಳಸಿ ಗಿಡವೂ ಇದ್ದಕ್ಕಿದ್ದಂತೆ ಗಾಡವಾಗಿ ಬೆಳೆದರೆ ನಿಮ್ಮ ಒಳ್ಳೆಯ ದಿನಗಳು ಪ್ರಾರಂಭವಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಗುಬ್ಬಚ್ಚಿಯ ಚಿಲಿಪಿಲಿ ಹೌದು ನಿಮ್ಮ ಮನೆಯ ಅಂಗಳ ಬಾಲ್ಕನಿಯಲ್ಲಿ ಗುಬ್ಬಚ್ಚಿಯು ಇದ್ದಕ್ಕಿದ್ದಂತೆ ಬಂದರೆ ಅಥವಾ ಅದರ ಚಿಲಿಪಿಲಿಯನ್ನು ಕೇಳಿದರೆ ತಕ್ಷಣ ಅದಕ್ಕೆ ನೀರು ಧಾನ್ಯವನ್ನು ನೀಡಬೇಕು.
ಯಾಕೆ ಎಂದರೆ ಈ ಗುಬ್ಬಚ್ಚಿಗಳು ನಿಮ್ಮ ಮನೆಗೆ ಆಗಮಿಸಲಿರುವ ಸಂತೋಷದ ಸಂಕೇತವಾಗಿರುತ್ತದೆ. ಏಕಾಏಕಿ ಮನೆಯ ಮುಂದೆ ಅಥವಾ ಒಳಗಡೆ ಎಕ್ಕದ ಗಿಡ ಬೆಳೆದರೆ ತುಂಬಾ ಶುಭವಾಗಿರುತ್ತದೆ ಇದು ನಿಮ್ಮ ಜೀವನದಲ್ಲಿ ಬಹಳಷ್ಟು ಹಣ ಮತ್ತು ಸಮೃದ್ಧಿಯನ್ನು ಪಡೆಯುವ ಪೂರ್ವ ಸೂಚಕವಾಗಿರುತ್ತದೆ. ಮನೆಯ ಮುಂದೆ ಹಸು ಸಗಣಿ ಹಾಕಿದರೆ ಅಥವಾ
ನಡೆದಾಡುವಾಗ ತಕ್ಷಣವೇ ನಿಂತರೆ ಆಗ ಖಂಡಿತವಾಗಿಯೂ ಅದಕ್ಕೆ ಆಹಾರವನ್ನು ನೀಡಿ. ಈ ಚಿನ್ಹೆಯು ಬಹಳ ಮಂಗಳಕರವಾಗಿರುತ್ತದೆ. ಇದು ಕೂಡ ಹಣ ಪಡೆಯುವ ಸಂಕೇತ. ನಿಮ್ಮ ಮನೆಗೆ ಬಿಳಿ ಪಾರಿವಾಳ ಬಂದು ಕೂತರೆ ನಿಮ್ಮ ಕೆಟ್ಟ ಸಮಯ ಮುಗಿಯಲಿದೆ ಮತ್ತು ಈಗ ಸುವರ್ಣ ಸಮಯ ಪ್ರಾರಂಭವಾಗಲಿದೆ ಎನ್ನುವ ಸೂಚನೆಯಾಗಿದೆ. ಕನಸಿನಲ್ಲಿ ಕಮಲದ ಹೂವನ್ನು ಕಂಡರೆ ಅಂತಹ
ವ್ಯಕ್ತಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಸಂಪತ್ತು ಸಿಗುತ್ತದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಕಮಲವು ಲಕ್ಷ್ಮೀದೇವಿಯ ಪ್ರತೀಕವಾಗಿದ್ದು ಇದ ರಿಂದ ಲಕ್ಷ್ಮಿಯ ಕೃಪೆ ಪ್ರಾಪ್ತವಾಗಲಿದೆ. ಹಾಗಾಗಿ ಕನಸಿನಲ್ಲಿ ಕಮಲದ ಹೂವನ್ನು ಕಂಡರೆ ಹಣ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಗಿಳಿ ಕಂಡರೆ ಅಂತಹ ವ್ಯಕ್ತಿಗೆ ಹೆಚ್ಚಿನ ಹಣ ಲಭಿಸಲಿದೆ ಅಂತ ಹೇಳಲಾಗುತ್ತದೆ. ಇದರಿಂದ ಸಂಬಂಧಿಗಳಿಂದ ಆಸ್ತಿ ಸಿಗುವಂತಹ ಸಂಭವ ಕೂಡ ಇರುತ್ತದೆ.
ಕನಸಿನಲ್ಲಿ ಜೇನುಗೂಡನ್ನು ಕಂಡರೆ ಅತ್ಯಂತ ಶುಭ ಅಂತ ಪರಿಗಣಿಸ ಲಾಗುತ್ತದೆ. ಇದರಿಂದ ಜೀವನದಲ್ಲಿ ಅತ್ಯಂತ ಖುಷಿ ಲಭಿಸುತ್ತದೆ ಅಷ್ಟೇ ಅಲ್ಲದೆ ಮುಂದಿನ ದಿನದಲ್ಲಿ ಹೆಚ್ಚಿನ ಹಣ ಲಭಿಸಲಿದೆ ಅಂತ ಕೂಡ ಹೇಳಲಾಗುತ್ತದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿದೆ. ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಹಾಲು ಕುಡಿಯುತ್ತಿರುವ ರೀತಿ ಕನಸು ಕಂಡರೆ ಅದರಿಂದ ಹೆಚ್ಚಿನ ಧನ ಲಾಭ ಉಂಟಾಗುತ್ತದೆ ಅಂತ ಹೇಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.