ಗಣಪತಿಗೆ ದಾಸವಾಳ ಹೂವು ಏಕೆ ಎಷ್ಟು ಇಷ್ಟ? ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವರಿಗೆ ಹೂವು ಬೇಕೇ ಬೇಕು. ಹೂ ಇಲ್ಲದೆ ಪೂಜೆ ಸಂಪನ್ನಗೊಳ್ಳುವುದಿಲ್ಲ. ಪೂಜೆ ಬಳಿಕ ಪ್ರಸಾದದ ರೂಪದಲ್ಲಿಯೂ ಕೂಡ ಹೂವನ್ನು ನೀಡಲಾಗುತ್ತದೆ. ಪುಷ್ಪಗಳು ದೇವರ ನಡುವಿನ ಸಮೂಹ ಮಾಧ್ಯಮ ಎಂದು ಕರೆಯುತ್ತಾರೆ. ನಮ್ಮ ಮನೆಯಂಗಳ ಮತ್ತು ತೋಟಗಳಲ್ಲಿ ಬೆಳೆದ ಪುಷ್ಪಗಳಿಂದ ದೇವರನ್ನು ಪೂಜಿಸುವುದು.
ಹೊರಗಿನಿಂದ ತಂದ ಪುಷ್ಪಗಳನ್ನು ದೇವರಿಗಿಟ್ಟು ಪೂಜಿಸುವುದಕ್ಕಿಂತ ಶ್ರೇಷ್ಠ ಮಳೆಗಳಲ್ಲಿ ಮತ್ತು ತೋಟಗಳಲ್ಲಿ ಅರಳುವ ಹೂಗಳನ್ನು ಇಟ್ಟರೆ ಶ್ರೇಷ್ಠ ಮತ್ತು ದೇವರ ಪೂಜೆಗೆ ಅತ್ಯಂತ ಶ್ರೇಷ್ಠವಾದ ಪುಷ್ಪ ಎಂದರೆ ಅದು ದಾಸವಾಳದ ಹೂ. ಒಂದು ಅಂಗೈಯಗಳ ಜಾಗ ಇದ್ದರೆ ಸಾಕು, ದಾಸವಾಳ ದಾಸವಾಳದ ಗಿಡ ತುಂಬಾ ಚೆನ್ನಾಗಿ ಬೆಳೆಯುತ್ತದೆ ಇದಕ್ಕೆ ಬಹುದೊಡ್ಡ ಜಾಗ ಬೇಕು ಅಂತ ಇಲ್ಲ ಒಂದು ಸ್ವಲ್ಪ ಜಾಗದಲ್ಲಿಯೇ ಕೂಡ ಅದು ಬೆಳೆಯುತ್ತದೆ.
ಅತ್ಯಂತ ವೇಗವಾಗಿ ಬೆಳೆಯುವ ಗಿಡ ಎಂಬ ಹೆಗ್ಗಳಿಕೆ ದಾಸವಾಳ ಹೂವಿನ ಗಿಡಕ್ಕಿದೆ. ಏಕೆಂದರೆ ಸ್ನೇಹಿತರೆ ಬಾಕಿ ಗಿಡಗಳೆಲ್ಲವ ಬೆಳಿಲಿಕ್ಕೆ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ ಆದರೆ ದಾಸವಾಳದ ಗಿಡ ಹೀಗೆ ನೆಟ್ಟು ಬರುವಷ್ಟರಲ್ಲಿ ಒಂದು ಸ್ವಲ್ಪ ದಿನದಲ್ಲೇ ಅದು ದೊಡ್ಡದಾಗಿ ಹೂ ಬಿಡಲು ಪ್ರಾರಂಭ ಮಾಡುತ್ತದೆ. ಹೀಗೆ ಅಂಗಳದ ತುಳಿ ತುದಿಗೆ ಬೆಳೆಯುವ ಈ ಪುಷ್ಪ ವಾಸ್ತು ಶಾಸ್ತ್ರದಲ್ಲೂ ಕೂಡ ಇದರ ಮಹತ್ವವನ್ನು ತಿಳಿಸಿಕೊಟ್ಟಿದೆ.
ನೋಡಿ ಕೆಂಪು ದಾಸವಾಳ ಧನಾತ್ಮಕ ಶಕ್ತಿಯನ್ನು ಕೊಡುತ್ತದೆ. ಮನೆಯ ಪೂರ್ವ ಭಾಗದಲ್ಲಿ ಕೆಂಪು ದಾಸವಾಳ ಹೂವಿನ ಗಿಡವನ್ನು ನೋಡಬೇಕು ಈ ರೀತಿ ಕೆಂಪು ದಾಸವಾಳದ ಹೂವಿನ ಗಿಡವನ್ನು ನೀವು ಪೂರ್ವ ಭಾಗದಲ್ಲಿ ನೆಟ್ಟರೆ ಖಂಡಿತವಾಗಲೂ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ದೂರ ಆಗುತ್ತದೆ. ಮನೆಯಲ್ಲಿ ಕೆಂಪು ದಾಸವಾಳದ ಹೂವಿನ ಗಿಡ ನೆಡುವುದರಿಂದ ಮನೆಯವರ ಜಾತಕದಲ್ಲಿರುವ ಕುಜದೋಷ ಕಡಿಮೆಯಾಗುತ್ತದೆ.
ಸ್ನೇಹಿತರೆ ಹಾಗಾದರೆ ದೇವರ ಪೂಜೆಯಲ್ಲಿ ದಾಸವಾಳದ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ. ದೇವರ ಪೂಜೆಗೆ ದಾಸವಾಳ ಹೂವನ್ನ ಇಡುವುದು ತುಂಬಾ ಶ್ರೇಷ್ಠ ಇದರ ಜೊತೆಗೆ ಕೆಂಪು ದಾಸವಾಳ ಹೂವು ಎಲ್ಲ ದೇವರಿಗೂ ಶ್ರೇಷ್ಠ ಅದರಲ್ಲೂ ಗಣಪತಿಗೆ ಅಂತೂ ತುಂಬ ಪ್ರೀತಿಯ ಹೂವು ಅಂತಾನೇ ಹೇಳಬಹುದು. ಪುಷ್ಪವಾಗಿದೆ.
ಈ ಹೂವು ಮತ್ತು ಎಸುಳಿನ ಆಕಾರವು ಗಾಳಿಯಲ್ಲಿ ನಾಲಿಗೆಯನ್ನೇ ಹೋಲುತ್ತದೆ. ಕಾಳಿ ದೇವಿಯನ್ನು ಪೂಜಿಸುವಾಗ ಈ ಕೆಂಪು ದಾಸವಾಳ ಹೂವಿನಿಂದ 108 ಪುಷ್ಪಗಳಿಂದ ಒಂದು ಆಹಾರವನ್ನು ಮಾಡಿ ಕಾಳಿದೇವಿಗೆ ಹಾಕಿ ಪೂಜಿಸಲಾಗುತ್ತದೆ. ಗಣಪತಿ ಪೂಜೆಯಲ್ಲೂ ಕೂಡ ಕೆಂಪು ದಾಸವಾಳದ ಹೂವು ಬಾರಿ ಮಹತ್ವದ ಪಾತ್ರವನ್ನು ಪಡೆದುಕೊಂಡಿದೆ. ಗಣಪತಿಗೆ ರಕ್ತವರ್ಣ ಅಂದ್ರೆ ತುಂಬಾ ಇಷ್ಟ.ಅದಕ್ಕೆ ಗಣಪತಿಗೆ ಚಂದನ ಲೇಪನವನ್ನು ಮಾಡಿ ಕೆಂಪು ದಾಸವಾಳದ ಹೂವಿನಿಂದ ಪೂಜಿಸಲಾಗುತ್ತದೆ.
ಕೆಂಪು ದಾಸವಾಳ ಗಣಪತಿ ದೇವರಿಗೆ ಏಕೆ ಅಷ್ಟು ಪ್ರಿಯ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಬಹುದು. ಸರಿಯಾಗಿ ಗಮನಿಸಿದಾಗ ಕೆಂಪು ದಾಸವಾಳದಲ್ಲಿ ಗಣಪತಿ ದೇವರ ಆಕಾರ ಮೂಡಿ ಬಂದಿರುತ್ತದೆ. ದಾಸವಾಳ ಹೂವಿನ ಮೇಲಿನ ಎರಡು ದಳ ಗಣಪತಿ ದೇವರ ಕಿವಿಯಂತೆಯೂ ಮಧ್ಯದ ಕೆಳಗಿನ ದಳ ಸುಂಡಿಲಂತೆಯು ಭಾಸವಾಗುತ್ತದೆ. ಗಣಪತಿ ದೇವರ ರೂಪ ಮೂಡಿ ಬಂದಿರುವುದರಿಂದ ಮತ್ತೆ ಗಣಪತಿ ದೇವರಿಗೆ ತುಂಬಾ ಇಷ್ಟವಾಗಿರುವುದರಿಂದ ಈ ಹೂವು ಮತ್ತು ಕೆಂಪಾಗಿರುವುದರಿಂದ ಗಣೇಶ ದೇವರ ಪೂಜೆಗೆ ದಾಸವಾಳ ಹೂವು ಬಹಳ ಶ್ರೇಷ್ಠವಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.