ತುಳಸಿ ಹಬ್ಬ, ಪೂಜೆಯ ಸಮಯ ಸಂಕಲ್ಪ ದಿಂದ ವಿಸರ್ಜನೆ ವರೆಗೂ ಸಂಪೂರ್ಣ ಮಾಹಿತಿ, ಹಸಿರು ಸೀರೆ, ಹಸಿರು ಬಳೆ, ಮಲ್ಲಿಗೆ ಹೂವು

ಇನ್ನೇನು ತುಳಸಿ ಹಬ್ಬ ಕೂಡ ಬಂದ್ಬಿಡ್ತು ಮನೆ ಹತ್ತಿರದಲ್ಲಿ ಇದೆ. ಇದೇ ನವೆಂಬರ್ 2023, 24 ನೇ ತಾರೀಖು ಶುಕ್ರವಾರ ಉತ್ಥಾನ ದ್ವಾದಶಿ ಆ ದಿನ ನಾವು ತುಳಸಿ ಹಬ್ಬವನ್ನ ಆಚರಣೆ ಮಾಡ್ತೀವಿ. ಇದನ್ನ ತುಳಸಿ ವಿವಾಹ ಅಂತ ಕೂಡ ಹೇಳಲಾಗುತ್ತೆ. ತುಳಸಿ ಹಬ್ಬದ ದಿನ ತುಳಸಿ ಪೂಜೆಯನ್ನು ಯಾವ ರೀತಿ ಮಾಡಬೇಕು, ಯಾವ ರೀತಿ ಎಲ್ಲ ಸಿದ್ಧತೆಗಳನ್ನು ಮಾಡಬೇಕು, ಯಾವೆಲ್ಲ ವಸ್ತುಗಳನ್ನು ಪೂಜೆಗೆ ಇಡಲೇಬೇಕು, ಯಾವ ರೀತಿ ನಮ್ಮ ಒಂದು ತುಳಸಿಗಿಡವನ್ನು ಅಲಂಕಾರ ಮಾಡಬೇಕು. ಅಷ್ಟೇ ಅಲ್ಲ, ಸ್ನೇಹಿತರು ಯಾವ ದಿನವೂ ತುಳಸಿ ಗಿಡಗಳನ್ನ ಅಂದ್ರೆ ತುಳಸಿ ಪಾಟ್ ಅನ್ನು ಡೆಕೋರಟ್ ಮಾಡಬೇಕು.

WhatsApp Group Join Now
Telegram Group Join Now

ಯಾವ ಸಮಯದಲ್ಲಿ ಪೂಜೆ ಮಾಡಬೇಕು, ವಿಸರ್ಜನೆ ಮಾಡಬೇಕು ಅನ್ನೋದನ್ನ ಸಂಕಲ್ಪ ಸಹಿತವಾಗಿ ವಿಸರ್ಜನೆವರೆಗೂ ಕೂಡ ಸಂಪೂರ್ಣ ಮಾಹಿತಿಯನ್ನ ಹಂತ, ಹಂತವಾಗಿ ತಿಳಿಸಿ ಕೊಡ್ತಾ ಇದೀನಿ. ದಿನ ಪೂರ್ತಿಯಾಗಿ ನೋಡಿ ಅಷ್ಟೇ ಅಲ್ಲ, ಸ್ನೇಹಿತರೆ, ಹಸಿರು ಸೀರೆ, ಹಸಿರು ಬಳೆ, ಮಲ್ಲಿಗೆ ಹೂವು ತುಂಬಾನೇ ಮುಖ್ಯ. ಇದನ್ನ ಪೂಜೆ ಮಾಡಬೇಕಾ ಅಥವಾ ಏನು ಮಾಡಬೇಕು ಅದನ್ನು ಕೂಡ ತಿಳಿಸಿ ಕೊಡ್ತಾ ಇದೀನಿ ದಿನ ಪೂರ್ತಿಯಾಗಿ ನೋಡಿ ವರ್ಷದಲ್ಲಿ ಬರುವಂತಹ ಇಪ್ಪತ್ತ್ನಾಲ್ಕು ಏಕಾದಶಿಗಳಲ್ಲಿ ಕಾರ್ತಿಕ ಮಾಸದಲ್ಲಿ ಬರುವಂತ ಈ ದೇವ ಉತ್ಥಾನ ಏಕಾದಶಿ ತುಂಬಾನೇ ಅರ್ಥಪೂರ್ಣವಾದದ್ದು ಅಂದರೆ ಭಗವಾನ್ ವಿಷ್ಣು ಈ ಸಮಯದಲ್ಲಿ ತನ್ನ ಯೋಗ ನಿದ್ರೆಯಿಂದ ಎಚ್ಚರ ವಾಗುವಂತಹ ಸಮಯ.

ಹಾಗಾಗಿ ಉತ್ಥಾನ ಏಕಾದಶಿ ಅಂದ್ರೆ ದೇವ ಉತ್ಥಾನ ಏಕಾದಶಿ ಭಗವಂತ ಎಚ್ಚರ ಆಗುವಂತ ಏಕಾದಶಿ ಮಾರನೇ ದಿನ ದ್ವಾದಶಿ ದ್ವಾದಶಿಯ ದಿನ ತುಳಸಿಯ ವಿವಾಹ ಆಗುತ್ತೆ. ಇದಕ್ಕೆ ಒಂದು ಪುರಾಣದ ಪ್ರಕಾರ ಕಥೆ ಕೂಡ ಇದೆ. ಅದನ್ನು ಕೂಡ ಚುಟುಕಾಗಿ ನಿಮಗೆ ಹೇಳ್ತಾ ಇದ್ದೀನಿ. ಮೊದಲು ಆ ಕತೆ ಏನು ಅನ್ನೋದನ್ನ ತಿಳ್ಕೊಳಿ ಆಗ ನಿಮಗೆ ತುಳಸಿ ಹಬ್ಬ ವನ್ನು ಯಾಕೆ ಮಾಡ್ತೀವಿ ಅನ್ನೋದು ಗೊತ್ತಾಗುತ್ತೆ ಹಿಂದೆ ಜಲಂದರ್ ಅಂತ ಒಬ್ಬ ರಾಕ್ಷಸ ಇರ್ತಾನೆ ಅವನ ಹೆಂಡತಿ ವೃಂದಾ. ಅವಳ ಪತಿ ಭಕ್ತಿ ಎಷ್ಟಿತ್ತು ಅಂದ್ರೆ ಆ ಜಲಂಧರನನ್ನ ಯಾರು ಕೂಡ ಸೋಲಿಸಿದ್ದಕ್ಕೆ ಆಗ್ತಾ ಇರ್ಲಿಲ್ಲ ಅಂದ್ರೆ ಆಕೆಯ ಒಂದು ಪ್ರತಿ ವೃತ್ತ ಭಕ್ತಿಯ ಶಕ್ತಿಯಿಂದ ಅವನನ್ನು ಯಾರು ಕೂಡ ಸೋಲಿಸೋದಕ್ಕೆ ಆಗ್ತಾ ಇರ್ಲಿಲ್ಲ.

ವೃಂದ ಕೂಡ ಭಗವಾನ್ ವಿಷ್ಣುವಿನ ಭಕ್ತೆಯಾಗಿರುತ್ತಾಳೆ ಮತ್ತು ಸದ್ಗುಣ ಶೀಲ ಮಹಿಳೆಯಾಗಿದ್ದು ಗಂಡನ ಯೋಗಕ್ಷೇಮ ಕ್ಕಾಗಿ ಹಗಲಿರಳು ಪ್ರಾರ್ಥನೆ ಮಾಡ್ತಾ ಇರ್ತಾಳೆ. ಆಕೆಯ ಪತಿವ್ರತ ಶಕ್ತಿಯಿಂದನೇ ಜಲಂಧರನನ್ನ ಯಾರು ಕೂಡ ಸೋಲಿಸೋದಕ್ಕೆ ಆಗುತ್ತಿಲ್ಲ. ಇದರಿಂದ ಅಟ್ಟಹಾಸ ಕೂಡ ತುಂಬಾನೇ ಜಾಸ್ತಿ ಇರುತ್ತೆ. ಹೀಗೆ 1 ದಿನ ಋಷಿ ಮುನಿಗಳು ಮತ್ತೆ ದೇವತೆಗಳೆಲ್ಲ ಸೇರಿ ಹೇಗಾದರೂ ಮಾಡಿ ಅವನ ದುಷ್ಕೃತ್ಯ ಗಳಿಂದ ನಮಗೆ ಮುಕ್ತಿಯನ್ನು ಕೊಡಿ, ಅವನಿಗೆ ಒಂದು ಅಂತ್ಯವನ್ನು ಮಾಡಿ ಅಂತ ಹೇಳಿ ಭಗವಾನ್ ವಿಷ್ಣುವಿನ ಹತ್ರ ಹೋಗಿ ಪ್ರಾರ್ಥನೆ ಮಾಡ್ತಾರೆ. ಆಗ ಭಗವಾನ್ ವಿಷ್ಣು ತಿಳ್ಕೊಳ್ತಾರೆ.

ಆ ಜಲಂದರ್ ನಿಗೆ ಇಷ್ಟು ಶಕ್ತಿ ಎಲ್ಲಿಂದ ಬರ್ತಾ ಇದೆ ಇದಕ್ಕೆ ಏನು ಕಾರಣ ಅಂತ ಆಗ ವೃಂದಾಳ ಪತಿ ಭಕ್ತಿ ಮತ್ತು ವಿಷ್ಣುವಿನ ಮೇಲೆ ಅವಳಿಗೆ ಇರುವಂತ ನಿಸ್ವಾರ್ಥವಾದ ಭಕ್ತಿಯ ಶಕ್ತಿಯಿಂದ ಅವನು ಇಷ್ಟೊಂದು ಪ್ರಭಾವಶಾಲಿಯಾಗಿರುತ್ತಾನೆ ಅಂತ ಗೊತ್ತಾಗುತ್ತೆ. ಆಗ ಭಗವಾನ್ ವಿಷ್ಣು ಜಲಂಧರನ ರೂಪವನ್ನು ಪಡೆದು ವೃಂದಾಳ ಪತಿ ವ್ರತಾ ಭಂಗವನ್ನ ಮಾಡ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]