ದರ್ಶನ್ ಬಗ್ಗೆ ಕೋಡಿ ಶ್ರೀ ಸ್ಪೋಟಕ ಭವಿಷ್ಯ.ಇಷ್ಟೆಲ್ಲಾ ನಡೆಯೋದಕ್ಕೆ ನೈಜ ಕಾರಣ ತಿಳಿಸಿದ ಶ್ರೀಗಳು

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪೊಲೀಸ್ ಠಾಣೆಯಲ್ಲಿ ಇದ್ದು ವಾರಗಳೆ ಕಳೆದು ಹೋಗಿದೆ ಸಿನಿಮಾ ಶೂಟಿಂಗ್ ಎಂದು ಓಡಾಡಬೇಕಾದ ನಟ ಇವಾಗ ಪೊಲೀಸ್ ಠಾಣೆಯಲ್ಲಿ ಇರಬೇಕಾಗಿದೆ ಹಲವು ತನಿಖೆಗಳು ಪೂರ್ಣಗೊಂಡ ಹಿನ್ನಲೆ ಪೊಲೀಸರು ಪುನಃ ಕಸ್ಟಡಿಗೆ ಕೇಳದಿರುವುದಕ್ಕೆ ಪೊಲೀಸರು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತದೆ. ಬಹುತೇಕ ನಾಳೆ ದರ್ಶನ್ ಹಾಗೂ ಪವಿತ್ರ ಮತ್ತು ಅವರ ಗ್ಯಾಂಗ್ ಸೇರಿದಂತೆ ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆಗಳಿವೆ ಕೋಪದ ಕೈಗೆ ಬುದ್ಧಿಯನ್ನು ಕೊಟ್ಟ ದರ್ಶನ್ ಬಗ್ಗೆ ಈಗ ತೀವ್ರವಾದ ಆಕ್ರೋಶ ಕೇಳಿ ಬರುತ್ತಿದೆ ನಟ ದರ್ಶನ್ ಗೆ ಎಲ್ಲವೂ ಇದ್ದಂತಹ ಸಂದರ್ಭದಲ್ಲಿ ಇದು ಯಾಕೆ ಬೇಕಿತ್ತು ಎಂದು ಮಾತುಗಳು ಕೇಳಿ ಬರುತ್ತಾ ಇದೆ.

WhatsApp Group Join Now
Telegram Group Join Now

ಹೀಗಿರುವಾಗ ಕೊಲೆ ಆರೋಪಿಯಾಗಿರುವ ದರ್ಶನ ಬಗ್ಗೆ ಶ್ರೀ ಕೋಡಿ ಮಠದ ಶ್ರೀಗಳಾದ ಶಿವಾನಂದ ಶ್ರೀ ಯೋಗಿ ರಾಜೇಂದ್ರ ಸ್ವಾಮಿ ಅವರು ಭವಿಷ್ಯವನ್ನು ನುಡಿದಿದ್ದಾರೆ ಕೇವಲ ದರ್ಶನ್ ಅವರ ಬಗ್ಗೆ ಮಾತ್ರವಲ್ಲದೆ ನರೇಂದ್ರ ಮೋದಿಯವರ ಬಗ್ಗೆಯೂ ಸಹ ಮಾತನಾಡಿದ್ದಾರೆ ಅಲ್ಲದೆ ರಾಜ್ಯದ ರಾಜಕಾರಣಿಗಳ ಬಗ್ಗೆ ಮಾತಾಡಿದ ಶ್ರೀಗಳು ರಾಜ್ಯ ಸರ್ಕಾರದ ಬಗ್ಗೆಯೂ ಸಹ ಒಂದು ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ ಹಾಗಾದರೆ ನಟ ದರ್ಶನ ಬಗ್ಗೆ ಅವರ ಬಂಧನದ ಬಗ್ಗೆ ಹಾಗೂ ಅವರ ಭವಿಷ್ಯದ ಬಗ್ಗೆ ಕೊಡಿ ಶ್ರೀಗಳು ಹೇಳಿದ್ದೇನು? ರಾಜ್ಯ ಸರ್ಕಾರದ ಬಗ್ಗೆ ನುಡಿದ ಆ ಸ್ಫೋಟಕ ನುಡಿಗಳೇನು ರಾಜ್ಯ ರಾಜಕಾರಣಗಳಲ್ಲಿ ಏನಾಗುತ್ತದೆ, ಕೇಂದ್ರ ರಾಜಕಾರಣಗಳಲ್ಲಿ ಏನಾಗುತ್ತದೆ ,ಮೋದಿ ಸರ್ಕಾರದ ಬಗ್ಗೆ ಶ್ರೀಗಳು ಏನು ಹೇಳಿದರು, ಅವರಿಗೆ ಎದುರಾಗುವಂತಹ ಮತ್ತೊಂದು ಕಂಠಕವೇನು ಇದೆಲ್ಲರದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಸಿಕೊಡುತ್ತೇವೆ

ಹಾಸನದ ಅರಸೀಕೆರೆಯ ಹಾರನಹಳ್ಳಿಯ ಕೋಡಿಮಠದ ಖ್ಯಾತಿ ನಿಮ್ಮೆಲ್ಲರಿಗೂ ತಿಳಿದಿರುವಂತಹ ಕೋಡಿಮಠದ ಖ್ಯಾತಿ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳಿಗೆ ಹಬ್ಬಿದೆ ಅಪಾರ ಭಕ್ತಿಯಿಂದ ಕೋಡಿಮಠಗಳಿಗೆ ನಡೆದುಕೊಳ್ಳುತ್ತಾರೆ ಅದರಲ್ಲೂ ಶ್ರೀಗಳು ನುಡಿಯುವ ಭವಿಷ್ಯದ ಬಗ್ಗೆ ಭಕ್ತರು ಅಪಾರ ನಂಬಿಕೆಯನ್ನು ಇಟ್ಟಿದ್ದಾರೆ ರಾಜ್ಯದಲ್ಲಿ ಆಗುವ ಮಳೆ ಬೆಳೆ ದೇಶದಲ್ಲಿ ಆಗುವ ಕಂಠಕ ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುವ ಅವಗಡಗಳ ಬಗ್ಗೆ ಶ್ರೀಗಳು ಭವಿಷ್ಯವನ್ನು ನುಡಿಯುತ್ತಾರೆ.

ಅಲ್ಲದೆ ಶ್ರೀಗಳ ಕಾಲಜ್ಞಾನದ ಬಗ್ಗೆ ಹಲವಾರು ಉದಾಹರಣೆಗಳಿವೆ ಅಲ್ಲದೆ ಇದೇ ಶ್ರೀಗಳು ದರ್ಶನ ಅವರ ಭವಿಷ್ಯದ ಬಗ್ಗೆ ಹಾಗೂ ಅವರ ಬಂಧನದ ಬಗ್ಗೆ ಮಾತನಾಡಿದ್ದಾರೆ ಇಲ್ಲಿ ಎಲ್ಲರಿಗೂ ಆಘಾತಕಾರಿಯಾದ ವಿಷಯವೆಂದರೆ ಸ್ಟಾರ್ ನಟನೊಬ್ಬ ಇಂತಹ ಕೃತ್ಯ ಹೇಸಗಿರುವುದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಈ ಪ್ರಕರಣ ರಾಜ್ಯದೆಲ್ಲಡೆ ಬಾರಿ ಸಂಚಲನವನ್ನ ಮೂಡಿಸುತ್ತಿದೆ ದರ್ಶನ್ ಅವರ ಅಭಿಮಾನಿ ಸಹ ಆತಂಕದಲ್ಲಿದ್ದಾರೆ ನಟ ದರ್ಶನ್ ಅವರು ಬಂಧನಕ್ಕೆ ಒಳಗಾಗುವುದು ಬಹುತೇಕ ಖಚಿತವಾಗಿದೆ ಕೋಪದ ಕೈಗೆ ಬುದ್ಧಿ ಕೊಟ್ಟಿದ್ದೆ ಇಷ್ಟಕ್ಕೆಲ್ಲ ಕಾರಣ ಎಂದು ರಾಜ್ಯದಲ್ಲೆಡೆ ಮಾತು ಕೇಳಿ ಬರುತ್ತಿದೆ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವು ವಿಚಾರಗಳು ಹೊರಬಂದಿವೆ.

ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿಯ ನಡುವಿನ ವಿವಾದ ಎಲ್ಲರಿಗೂ ತಿಳಿದೆ ಇದೆ ದರ್ಶನ್ ಅವರ ಬಂಧನದ ಬಗ್ಗೆ ತಿಳಿದು ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರು ಹಳೆಯ ಘಟನೆಗಳನ್ನು ನೆನೆದು ದರ್ಶನ್ ಜನ್ಮವನ್ನು ಜಾಲಾಡುತ್ತಿದ್ದಾರೆ ಇಷ್ಟು ದಿನ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ನೋವನ್ನ ಹೊರಹಾಕುತ್ತಿದ್ದಾರೆ ಅವರ ಮಾತುಗಳನ್ನ ಕೇಳಿದರೆ ದರ್ಶನ್ ಇಂತಹ ವ್ಯಕ್ತಿನ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಈ ಹಿಂದೆ ವಿವಾದ ಉಂಟಾದ ಸಂದರ್ಭದಲ್ಲಿ ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ ಎಂದು ಉಮಾಪತಿಯವರು ತಾಳ್ಮೆಯಿಂದ ಉತ್ತರವನ್ನು ನೀಡಿದರು ನಟ ದರ್ಶನ್ ಅವರು ಪ್ರತಿಕ್ರಿಯೆ ಮಾಡಿ ಎಷ್ಟೇ ಕೆರಳಿಸಿದರು ಉಮಾಪತಿಯವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸೈಲೆಂಟಾಗಿ ಇರುತ್ತಿದ್ದರು ಇದೀಗ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.

ಇವತ್ತು ದರ್ಶನ್ ಅವರು ಹೀನಾಯ ಪರಿಸ್ಥಿತಿಗೆ ತಲುಪಿದ್ದಾರೆ ಆ ದಿನ ನಾನು ತಾಳ್ಮೆಯಿಂದ ಇದ್ದೆ, ತಾಳ್ಮೆಯಿಂದ ಇದ್ದು ಎಲ್ಲವನ್ನು ಕಾಯುತ್ತಾ ಇದ್ದೆ ಹಾಗಾಗಿ ನಾನು ಇಲ್ಲಿದ್ದೇನೆ ದರ್ಶನ್ ಅವರು ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ ಎನ್ನುವ ಮಾತನ್ನು ಹೇಳಿ ದರ್ಶನವರಿಗೆ ತಿರುಗೇಟನ್ನು ಕೊಟ್ಟಿದ್ದಾರೆ ಇದೇ ಸಂದರ್ಭದಲ್ಲಿ ಉಮಾಪತಿಯವರು ಮತ್ತೊಂದು ವಿಚಾರವನ್ನು ಹೊರಹಾಕಿದರು ಉಮಾಪತಿ ಅವರ ತಂದೆ ಕೂಡಿ ಮಠದ ಭಕ್ತರು ಎಂದು ಹೇಳಿದರು ಉಮಾಪತಿಯವರು ಚಿಕ್ಕವರಿದ್ದ ಸಂದರ್ಭದಲ್ಲಿ ಅತಿಯಾಗಿ ಕೋಪಿಸಿಕೊಳ್ಳುತ್ತಿದ್ದರು ಉಮಾಪತಿಗೆ ಸ್ವಲ್ಪ ಬುದ್ಧಿ ಹೇಳಿ ಅಂತ ಅವರ ತಂದೆ ಕೂಡಿ ಮಠಕ್ಕೆ ಶ್ರೀಗಳ ಬಳಿಗೆ ಕರೆದುಕೊಂಡು ಹೋಗಿದ್ದರು

ಆಗ ಉಮಾಪತಿಗೆ ಕಿವಿಮಾತು ಹೇಳಿದ ಕೋಡಿ ಶ್ರೀಗಳು” ಕರಿಯದೆ ಬರುವವನು ಕೋಪ,ಬರೆಯದೆ ಓದುವವನು ಕಣ್ಣು, ಬರಿಗಾಲಲ್ಲಿ ನಡೆಯುವವನು ಮನಸ್ಸು” ಎಂದು ಉಮಾಪತಿಗೆ ಅಂದು ಕೊಡಿಶ್ರೀಗಳು ಬುದ್ಧಿ ಹೇಳಿ ಕಳುಹಿಸಿದರು ಆ ಮಾತನ್ನು ಉಮಾಪತಿಯವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ ಅದರಿಂದ ನಾನು ಬುದ್ಧಿ ಕಲಿತಿದ್ದೆ ಕೋಪದ ಕೈಗೆ ಬುದ್ಧಿ ಕೊಡಬಾರದು ಎಲ್ಲವನ್ನು ತಾಳ್ಮೆಯಿಂದ ನೋಡಬೇಕು ಇದರ ಬೆನ್ನೆಲೆ ಈಗ ಕೂಡಿಶ್ರಿಗಳು ಸ್ಪೋಟಕ ನುಡಿಯನ್ನ ನುಡಿದಿದ್ದಾರೆ ಕೊಡಿ ಶ್ರೀಗಳು ಮಾಧ್ಯಮದ ಮುಂದೆ ಬಂದು ಹಲವು ತಿಂಗಳುಗಳ ಕಳೆದಿತ್ತು ಆದರೆ ಈಗ ಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ ದೇಶಗಳ ಬಗ್ಗೆ ಹಾಗೂ ಸರ್ಕಾರದ ಬಗ್ಗೆ ಮಾತನಾಡುವಾಗ ದರ್ಶನ್ ಬಗ್ಗೆ ಕೂಡ ಮಾತನಾಡಿದ್ದಾರೆ ಚಿಕ್ಕಬಳ್ಳಾಪುರಕ್ಕೆ ಕಾರ್ಯನಿಮಿತವಾಗಿ ತೆರಳಿದ್ದ ಶ್ರೀಗಳು ಮಾಧ್ಯಮದ ಮುಂದೆ ಮಾತನಾಡುವಾಗ ದರ್ಶನ್ ಭವಿಷ್ಯದ ಬಗ್ಗೆ ನುಡಿದಿದ್ದಾರೆ

ದರ್ಶನ್ ಗೆ ಕೋಪ ಜಾಸ್ತಿ ಇದೆ ನಿರ್ಮಾಪಕರಾದ ಉಮಾಪತಿಗೆ ತಾಳ್ಮೆ ಜಾಸ್ತಿ ಇದೆ ಎಂದು ಇಬ್ಬರ ವಿವಾದಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಅಂದು ನಾನು ಹೇಳಿದ ಮಾತಿನಂತೆ ಉಮಾಪತಿಯು ತಾಳ್ಮೆಯಿಂದ ಇದ್ದಿದ್ದರಿಂದ ಇಂದು ಅವನು ದೊಡ್ಡ ಸ್ಥಾನದಲ್ಲಿದ್ದಾನೆ ಆದರೆ ದರ್ಶನ್ ಕೋಪದ ಕೈಗೆ ಬುದ್ಧಿಯನ್ನು ಕೊಟ್ಟು ಜೀವನವನ್ನು ಹಾಳು ಮಾಡಿಕೊಂಡಿದ್ದಾನೆ ಎಂದು ಮಾಧ್ಯಮದ ಮುಂದೆ ಹೇಳಿದರು ಹಾಗೂ ರಾಜ್ಯದ ಮಳೆ ಬೆಳೆ ಬಗ್ಗೆ ಕೂಡ ಭವಿಷ್ಯವನ್ನ ನುಡಿದ ಶ್ರೀಗಳು ರಾಜ್ಯದಲ್ಲಿ ಕ್ರೋಧಿ ನಾಮ ಸಂವತ್ಸರ ಇದೆ ಕ್ರೋಧಿ ಎಂದರೆ ಕ್ರೋಧ ಹೀಗಾಗಿ ಜಾಸ್ತಿ ಕೆಟ್ಟದೇ ನಡೆಯುತ್ತದೆ ಶುಭಗಳಿಗಿಂತ ಅಶುಭಗಳೇ ಹೆಚ್ಚಾಗಿ ನಡೆಯುತ್ತದೆ ಹೀಗಾಗಿ ದೇಶದಲ್ಲಿಯೂ ಪ್ರಾಕೃತಿಕ ವಿಕೋಪಗಳು ಸಂಭವಿಸಲಿದೆ ಎಂದು ಹೇಳಿದ್ದಾರೆ ಜಲಕಂಠಕ, ಅಗ್ನಿಕಂಠಕ, ವಾಯುಕಂಠಕ ಹೆಚ್ಚಾಗುವ ಸಾಧ್ಯತೆ ಇದೆ ಇನ್ನು ರಾಜ್ಯದ ಬಗ್ಗೆ ಮಾತನಾಡಿ ರಾಜ್ಯದಲ್ಲಿ ಈ ಬಾರಿ ಅತೃಷ್ಟಿ ಸಾಧ್ಯತೆ ಇದೆ ಎಂದು ಕೊಡಿ ಶ್ರೀಗಳು ಭವಿಷ್ಯವನ್ನು ನೋಡಿದಿದ್ದಾರೆ ಈ ಬಾರಿ ಅತಿ ಹೆಚ್ಚು ಮಳೆಯಾಗಿ ದವಸ ಧಾನ್ಯಗಳಿಗೆ ರಾಜ್ಯಕ್ಕೆ ಬಹಳ ತೊಂದರೆಯಾಗಬಹುದು ಎಂದು ಕೋಳಿ ಶ್ರೀಗಳು ಭವಿಷ್ಯವನ್ನು ನೋಡಿದಿದ್ದಾರೆ,ಇನ್ನು ಸಾಕಷ್ಟು ಮಾಹಿತಿಗಳನ್ನು ಹೇಳಿದ್ದಾರೆ ಗುರುಗಳು ಶಿಷ್ಯರಾಗುತ್ತಾರೆ ಶಿಷ್ಯರು ಗುರುಗಳಾಗುತ್ತಾರೆ ರಾಜ್ಯದಲ್ಲಿ ಹೆಣ್ಣಿನ ಹೆಣ್ಣು ಮಕ್ಕಳ ಪ್ರಾಬಲ್ಯ ಜಾಸ್ತಿಯಾಗುತ್ತದೆ ಶ್ರೀಗಳು ನುಡಿದಿದ್ದಾರೆ.

[irp]