ನಿಮಗೆ ತಾಕತ್ತಿದ್ದರೆ ನನ್ನನ್ನು ಹಿಡಿಯಿರಿ ಎಂದು ಜೈಲಿನ ಗೇಟಿನ ಮುಂದೆ ಬೀಳುತ್ತಿದ್ದ..ಯಾಕೆ ಗೊತ್ತಾ ?

20 ಅಕ್ಟೋಬರ್ 2006 ರಂದು ದೆಹಲಿಯ ಬಿಹಾರ್ ಜೈಲಿಗೆ ಒಂದು ಕರೆ ಬರುತ್ತದೆ ಕರೆ ಮಾಡಿದ ಆ ವ್ಯಕ್ತಿ ಬಿಹಾರಿಯಾ ದಾಟಿಯಲ್ಲಿ ಮಾತನಾಡುತ್ತಿದ್ದ ನಿಮ್ಮ ಜೈಲಿನ ಗೇಟ್ ಮೂರರಲ್ಲಿ ಒಂದು ಮೂಟೆ ಇದೆ ಆ ಮೂಟೆಯಲ್ಲಿ ವ್ಯಕ್ತಿಯೊಬ್ಬನ ಶವವಿದೆ ಎಂದು ಹೇಳಿ ಕರೆಯನ್ನು ಕೊನೆಗೊಳಿಸುತ್ತಾನೆ, ಪೊಲೀಸರು ತಕ್ಷಣ ಅಲ್ಲಿ ಹೋಗಿ ನೋಡಿದಾಗ ನಿಜವಾಗಲೂ ಅಲ್ಲಿ ಹಗ್ಗದಿಂದ ಬಿಗಿಯಾಗಿ ಕಟ್ಟಿದ್ದ ಮೂಟೆಯೊಂದು ಕಾಣಿಸುತ್ತದೆ ಪೊಲೀಸರು ಅದನ್ನು ತೆಗೆದು ನೋಡಿದಾಗ ತುಂಡು ತುಂಡಾಗಿ ಕತ್ತರಿಸಿದ ಶವ ಒಂದು ಆ ಮೂಟೆಯಲ್ಲಿ ಇತ್ತು ಅದರಲ್ಲಿ ತಲೆಯ ಭಾಗ ಇರುವುದಿಲ್ಲ ಜೊತೆಗೆ ಒಂದು ಲೆಟರ್ ಇರುತ್ತದೆ ಅದರಲ್ಲಿ ಪೊಲೀಸರಿಗೆ ಬೈದು ಸಾಧ್ಯವಾದರೆ ನನ್ನನ್ನು ಹಿಡಿಯಿರಿ ಎಂದು ಸವಾಲನ್ನು ಹಾಕಿ ಬರಿಯಲಾಗಿತ್ತು

WhatsApp Group Join Now
Telegram Group Join Now

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372


ಹಾಗಾದರೆ ಪೊಲೀಸರಿಗೆ ಸವಾಲು ಹಾಕಿದ ಆ ವ್ಯಕ್ತಿ ಯಾರು? ತನ್ನ ಸರಣಿ ಕೊಲೆಗಳಿಂದ ದೆಹಲಿಯನ್ನೇ ನಡುಗಿಸಿದ್ದ ಕೊಲೆಗಡಕ ಯಾರು ಭಾರತದಲ್ಲಿ ಸಂಚಲನ ಮೂಡಿಸಿದ ಒಬ್ಬ ಭಯಾನಕ ಪಾತಗಿಯ ಸ್ಟೋರಿಯನ್ನ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ. ರಾಜಧಾನಿ ದೆಹಲಿಯಲ್ಲಿ 1998 ರಿಂದ 2007 ರವರೆಗೆ ಜನರ ಮನಸ್ಸಿನಲ್ಲಿ ಭೀತಿ ಹುಟ್ಟಿಸಿದ ಒಬ್ಬ ಭಯಾನಕ ಕೊಲೆಗಾರ ಇದ್ದ ಸ್ನೇಹಿತರ ಹಾಗೂ ಪರಿಚಯಸ್ತರ ಸಣ್ಣಪುಟ್ಟ ತಪ್ಪುಗಳಿಗಾಗಿ ಅವರನ್ನೇ ಕೊಲೆ ಮಾಡಿ ಬಿಡುತ್ತಿದ್ದ.

ತನಗೆ ಸುಳ್ಳು ಹೇಳಿದರೆ ಅಥವಾ ತನ್ನ ಮನೆಯಲ್ಲಿ ಊಟ ಮಾಡಿ ಪಾತ್ರೆ ತೊಳೆಯುದಿದ್ದರೆ ಅವರನ್ನೇ ಕೊಂದು ಮುಗಿಸುತ್ತಿದ್ದ ಆ ಪಾಪಿ ಅಷ್ಟೇ ಅಲ್ಲದೆ ತಾನು ಹತ್ಯೆಗೈದ ಶವದ ಮುಂದೇನೆ ಕುಳಿತುಕೊಂಡು ಊಟ ತಿಂಡಿ ಮಾಡುತ್ತಿದ್ದ ಆದರೂ ಅವನು ಮಾಡುತ್ತಿದ್ದ ಕೆಲಸದ ಬಗ್ಗೆ ಸ್ವಲ್ಪವೂ ಪಶ್ಚಾತಾಪ ಇರಲಿಲ್ಲ 25 ಏಪ್ರಿಲ್ 2007 ದೆಹಲಿಯ ಬಿಹಾರ್ ಜೈಲಿಗೆ ಮತ್ತೊಂದು ಕರೆ ಬರುತ್ತದೆ ಅದೇ ಧ್ವನಿ ಅದೇ ಬಿಹಾರಿ ದಾಟಿಯಲ್ಲಿ ಕರೆ ಮಾಡಿದ ಆ ವ್ಯಕ್ತಿ ಮೂರನೆಯ ಗೇಟಿನ ಬಳಿ ಒಂದು ಮೂಟೆ ಇದೆ ಅದರೊಳಗೆ ಶವವಿದೆ ಎಂದು ಹೇಳಿ ಕರೆಯನ್ನು ಕೋನಗೊಳಿಸುತ್ತಾನೆ ಪೊಲೀಸರು ಹೋಗಿ ನೋಡಿದಾಗ ಅದೇ ರೀತಿಯ ಶವವಿತ್ತು ಅದರ ತಲೆಯೂ ಕೂಡ ಕಾಣೆಯಾಗಿತ್ತು ಅದೇ ರೀತಿಯಾಗಿ ಮತ್ತೊಂದು ಲೆಟರ್ ಪೊಲೀಸರಿಗೆ ಸವಾಲು ಹಾಕಿ ಬರೆಯಲಾಗಿತ್ತು ಪೊಲೀಸರಿಗೆ ಇದು ಬಾರಿ ತಲೆ ನೋವಿನ ಕೆಲಸವಾಗಿತ್ತು ಹಾಗೂ ಇದು ಪೊಲೀಸರ ಪ್ರತಿಷ್ಠೆಯ ವಿಷಯವಾಗಿ ಬಿಡುತ್ತದೆ.

ಕೊಲೆಗಾರನೊಬ್ಬ ಕೊಲೆ ಮಾಡಿ ಆ ಶವವನ್ನು ಪೊಲೀಸ್ ಠಾಣೆಯ ಮುಂದೆ ತಂದು ಇಟ್ಟು ಹೋಗುತ್ತಿದ್ದಿದ್ದು ಇನ್ನೂ ಸಹ ಅವನು ಯಾರು ಎಂದು ಕಂಡುಹಿಡಿಯಲು ಸಾಧ್ಯವಾಗಿಲ್ಲವೆಂದು ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು ಪೊಲೀಸರು ತನಿಖೆಯನ್ನು ಶುರು ಮಾಡುತ್ತಾರೆ ಆದರೆ ಪೊಲೀಸರಿಗೆ ಮನದಟ್ಟಾಗಿದ್ದು ಇವನೊಬ್ಬ ಸಾಮಾನ್ಯವಾದ ಕೊಲೆಗಾರನಲ್ಲ ಎಂದು ಇವನು ಶವಗಳನ್ನು ಕತ್ತರಿಸಿದ ರೀತಿ ಹಾಗೂ ಗುರುತು ಸಿಗಬಾರದೆಂದು ಅವರ ತಲೆಗಳನ್ನು ಬೇರ್ಪಡಿಸುವ ಬಗ್ಗೆ ಈ ರೀತಿಯಾಗಿ ಮೂಟೆಯಲ್ಲಿ ಬಿಗಿಯಾಗಿ ಕಟ್ಟಿ ತಂದು ಅದು ಸಹ ದೆಹಲಿಯ ಪ್ರಸಿದ್ಧ ತಿಹಾರ್ ಜೈಲಿನ ಮುಂದೆ ಹಾಕಿ ಪೊಲೀಸರಿಗೆ ಕರೆ ಮಾಡುತ್ತಾನೆ ಎಂದರೆ ಇವನು ಒಬ್ಬ ಸೈಕೋಪಾತ್ ಕಿಲ್ಲರ್ ಎಂದು ಪೊಲೀಸರು ಭಾವಿಸುತ್ತಾರೆ

ಈ ಕೊಲೆಗಾರನನ್ನು ಕಂಡುಹಿಡಿಯಲು ಪೊಲೀಸರು ಒಂದು ಸ್ಪೆಷಲ್ ಯೂನಿಟನ್ನ ತಯಾರು ಮಾಡುತ್ತಾರೆ ತನಿಖೆ ಬಹಳ ಕಠಿಣವಾಗಿತ್ತು ಕಾರಣ ಸಿಗುತ್ತಿದ್ದ ಶವಗಳ ತಲೆಗಳು ಯಾವುದು ಆ ವ್ಯಕ್ತಿಗಳು ಯಾರು ಎಂದು ಗುರುತು ಸಹ ಸಿಗುತ್ತಿರಲಿಲ್ಲ ಹೀಗಿರುವಾಗ ತಿಹಾರಿ ಜೈಲಿನ ಗೇಟ್ ನ ಮುಂದೆ ಅದೇ ಸ್ಥಿತಿಯಲ್ಲಿ ಇನ್ನೊಂದು ದೇಹ ಅದೇ ಸ್ಥಿತಿಯಲ್ಲಿ ಮತ್ತೊಂದು ಲೆಟರ್ ನೊಂದಿಗೆ ಇತ್ತು ತನಿಖೆಗಳು ಬಿರುಸಿನಿಂದ ನಡೆಯುತ್ತಿದ್ದಂತೆ ಅಕ್ಟೋಬರ್ 20 2006 ತಿಹಾರ್ ಜಲ್ಲಿಗೆ ಕರೆ ಮಾಡಿದ್ದು ಒಂದು ಟೆಲಿಫೋನ್ ಬೂತ್ ಇಂದ ಎಂದು ತಿಳಿದು ಬರುತ್ತದೆ ಪೊಲೀಸರು ಅಲ್ಲಿ ಹೋಗಿ ವಿಚಾರಿಸಿದಾಗ ಟೆಲಿಫೋನ್ ಬೂತನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಆ ವ್ಯಕ್ತಿಯನ್ನ ಗುರುತಿಸುತ್ತಾನೆ ಕೊಲೆಗಾರ ಬಿಹಾರಿ ದಾಟಿಯಲ್ಲಿ ಮಾತನಾಡುತ್ತಿದ್ದ ಎಂದು ಹೇಳಿ ಆತನ ಚಿತ್ರವನ್ನು ಬಿಡಿಸಲು ಸಹಾಯ ಮಾಡುತ್ತಾನೆ

ನಂತರ ಪೊಲೀಸರಿಗೆ ಆ ವ್ಯಕ್ತಿಯ ಸ್ಕೆಚ್ ಸಿಗುತ್ತದೆ ಹಾಗೂ ಆ ವ್ಯಕ್ತಿಯೇ ಬಿಹಾರಿ ದಾಟಿಯಲ್ಲಿ ಮಾತನಾಡುತ್ತಿದ್ದ ಎಂದು ಕನ್ಫರ್ಮ್ ಆಗುತ್ತದೆ ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಕೆಲವೇ ದಿನಗಳಲ್ಲಿ ಒಂದು ಮಾಹಿತಿ ಬರುತ್ತದೆ ಅದೇ ರೀತಿಯ ವ್ಯಕ್ತಿಯು ಆಜಾದ್ ನಗರದ ಡಾಕ್ಟರ್ ಅನ್ನು ಭೇಟಿಯಾಗಲು ಆಗಾಗ ಬರುತ್ತಿದ್ದಾನೆ ಹಾಗೂ ಹೆಚ್ಚಿನ ಸಮಯ ಅಲ್ಲೇ ಇರುತ್ತಾನೆ ಎಂದು ಪೊಲೀಸರಿಗೆ ಮಾಹಿತಿ ತಿಳಿಯುತ್ತದೆ ನಂತರ ಪೊಲೀಸರು ಆಜಾದ್ ನಗರದ ಡಾಕ್ಟರ್ ಅನ್ನು ವಿಚಾರಿಸಿದಾಗ ಆತನ ಹೆಸರು ಚಂದ್ರಕಾಂತ್ ಜಾ ಎಂದು ಆತನಿಗೆ ಐದು ಜನ ಹೆಣ್ಣು ಮಕ್ಕಳು ಆ ಹೆಣ್ಣು ಮಕ್ಕಳ ಡೆಲಿವರಿ ನಮ್ಮ ಹಾಸ್ಪಿಟಲ್ ನಲ್ಲಿ ಆಯಿತು ಎಂದು ತಿಳಿಯುತ್ತದೆ ಚಂದ್ರಕಾಂತ್ ಒಂದು ಸಣ್ಣ ಟು ವೀಲರ್ ನಲ್ಲಿ ತರಕಾರಿಯನ್ನು ಮಾರುತ್ತಾನೆ ಎಂದು ತಿಳಿಯುತ್ತದೆ.

ಈ ಮಾಹಿತಿಯನ್ನ ಪಡೆದ ಪೊಲೀಸರು ಮೇ 20 2007 ರಂದು ಚಂದ್ರಕಾಂತ್ ನನ್ನು ಅರೆಸ್ಟ್ ಮಾಡುತ್ತಾರೆ ಇದೊಂದು ಅದ್ಭುತ ಕ್ಷಣ ದೆಹಲಿಯ ಜನರು ಹಾಗೂ ಅಲ್ಲಿನ ಪೊಲೀಸರು ನಿಟ್ಟುಸಿರನ್ನು ಬಿಟ್ಟ ದಿನವೆಂದು ಹೇಳಬಹುದು ಈ ಚಂದ್ರಕಾಂತ್ ಜಾ ದುಡಿಯಲೆಂದು ಬಿಹಾರಿನಿಂದ ದೆಹಲಿಗೆ ಬಂದಿದ್ದ ವಿದ್ಯಾಭ್ಯಾಸವಿಲ್ಲದ ಈತ ಒಂದು ತರಕಾರಿ ಮಾರ್ಕೆಟ್ನಲ್ಲಿ ತರಕಾರಿಗಳನ್ನು ಲೋಡಿಂಗ್ ಮತ್ತು ಅನ್ ಲೋಡಿಂಗ್ ಮಾಡುವ ಕೆಲಸವನ್ನು ಮಾಡುತ್ತಿದ್ದ ಮೊದಲೇ ಇಲ್ಲಿನ ಜನರಿಂದ ಅನೇಕ ತಾರತಮ್ಯ ಹಿಂಸೆಯನ್ನು ಅನುಭವಿಸಿದ್ದ ಒಂದು ದಿನ ರಾತ್ರಿ ಒಬ್ಬ ಗೂಂಡ ಒಬ್ಬ ಬಡಪಾಯಿಯನ್ನ ಹಿಡಿದು ಹೊಡೆಯುತ್ತಿದ್ದು ದನ್ನು ನೋಡಿ ತಡೆಯಲು ಹೋಗುತ್ತಾನೆ ಆದರೆ ಆ ಗೂಂಡ ಚಂದ್ರಕಾಂತನ್ನು ಹಿಡಿದು ಅವನಿಗೆ ಸರಿಯಾಗಿ ಒಡೆದು ಚಂದ್ರಕಾಂತ್ ಗೆ ಚಾಕುವಿನಿಂದ ಚುಚ್ಚಿ ಬಿಡುತ್ತಾನೆ ಹೆಚ್ಚು ಕಡಿಮೆ ಸತ್ಯ ಹೋಗಿದ್ದ ಚಂದ್ರಕಾಂತ್ ಹಾಸ್ಪಿಟಲ್ ನಲ್ಲಿ ಹೇಗೋ ಬದುಕಿ ಬರುತ್ತಾನೆ.

ಈ ಘಟನೆಯ ಬಳಿಕ ಚಂದ್ರಕಾಂತ್ ಸಂಪೂರ್ಣವಾಗಿ ಬದಲಾಗುತ್ತಾನೆ ದುರ್ಬಲರಿಗೆ ಈ ಸಮಾಜದಲ್ಲಿ ಜಾಗವಿಲ್ಲ ಶಕ್ತಿ ಇದ್ದವರು ಏನು ಬೇಕಾದರೂ ಮಾಡಬಹುದು ಎಂದು ಅಂದುಕೊಂಡ ಚಂದ್ರಕಾಂತ್ ಒಬ್ಬ ವಿಭಿನ್ನ ವ್ಯಕ್ತಿಯಾಗಿ ಬದಲಾಗುತ್ತಾನೆ ಇವನು ಕೆಲಸ ಮಾಡುತ್ತಿದ್ದ ತರಕಾರಿ ಮಾರ್ಕೆಟಿನಲ್ಲಿ ಒಬ್ಬ ಯೂನಿಯನ್ ಲೀಡರ್ ಇದ್ದ ಆತ ಎಲ್ಲರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದ ಒಂದು ದಿನ ಚಂದ್ರಕಾಂತ್ ಇದನ್ನು ವಿರೋಧ ಮಾಡುತ್ತಾನೆ ನನಗೆ ಯೂನಿಯನ್ ಲೀಡರ್ ನ ಅಗತ್ಯವಿಲ್ಲ ನಾನು ಕಷ್ಟಪಟ್ಟು ದುಡಿಯುತ್ತಿದ್ದೇನೆ ನಾವು ಕಷ್ಟಪಟ್ಟ ಹಣವನ್ನು ಅವನಿಗೆ ಕೊಡುವುದು ಗಂಡ ಎಂದು ವಾದಕ್ಕೆ ಇಳಿದುಬಿಡುತ್ತಾನೆ.

ವಾದದಿಂದ ಜಗಳಕ್ಕೆ ತಿರುಗಿ ಚಂದ್ರಕಾಂತ್ ಆ ಯೂನಿಯನ್ ಲೀಡರ್ನ ಕೈಯನ್ನು ತನ್ನ ಚಾಕುವಿನಿಂದ ಸೀಳಿಬಿಟ್ಟ ಇದರಿಂದ ಚಂದ್ರಕಾಂತನನ್ನು ತಕ್ಷಣ ಅರೆಸ್ಟ್ ಮಾಡಲಾಗಿತ್ತು ಇದಲ್ಲದೆ ತನ್ನ ಪಾಡಿಗೆ ತಾನು ಎನ್ನುವಂತೆ ಇದ್ದ ಚಂದ್ರಕಾಂತ್ ಪತ್ನಿಯನ್ನು ಯಾವುದೇ ಕಾರಣವಿಲ್ಲದೆ ಅರೆಸ್ಟ್ ಮಾಡಲಾಗಿತ್ತು ಜೈಲಿನಲ್ಲಿ ಇವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿತ್ತು ಊಟವು ಸರಿಯಾಗಿ ಸಿಗುತ್ತಿರಲಿಲ್ಲ ಕಾರಣವಿಲ್ಲದೆ ಏಟುಗಳು ಬೀಳುತ್ತಿದ್ದವು ಈ ಎಲ್ಲಾ ಘಟನೆಗಳು ಚಂದ್ರಕಾಂತನನ್ನು ಮಾನಸಿಕವಾಗಿ ಕ್ರೋದಕ್ಕೆ ಒಳಪಡಿಸಿತು

ಚಂದ್ರಕಾಂತ್ ಜೈಲಿನಿಂದ ಹೊರಬಂದ ಕೂಡಲೇ ಮಾಡಿದ ಮೊದಲ ಕೆಲಸ ಆ ಯೂನಿಯನ್ ಲೀಡರ್ನ ಕೊಲೆ ಚಂದ್ರಕಾಂತ್ ಯೂನಿಯನ್ ಲೀಡರ್ನ ಕೊಲೆ ಮಾಡಿ ಅವನ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಅವನ ತಲೆಯನ್ನು ಯಮುನಾ ನದಿಗೆ ಬಿಸಾಕಿದನು ಉಳಿದ ದೇಹವನ್ನ ತುಂಡು ತುಂಡಾಗಿ ಕತ್ತರಿಸಿ ಒಂದು ಗೋಣಿಚೀಲಕ್ಕೆ ಹಾಕಿ ಅದನ್ನು ಬಿಗಿಯಾಗಿ ಕಟ್ಟಿ ತಿಹಾರ್ ಪೊಲೀಸ್ ಠಾಣೆಯ ಮೂರನೇ ಗೇಟಿನ ಮುಂದೆ ಬಿಸಾಕಿ ಪರಾರಿಯಾಗಿದ್ದ 1998ರಲ್ಲಿ ಈತ ಮಾಡಿದ ಮೊದಲನೆಯ ಕೊಲೆಯಿದು ಅಲ್ಲಿಂದ ಇದೇ ರೀತಿಯ ಕೊಲೆಗಳ ಸರಮಾಲೆ ಶುರುವಾಗುತ್ತದೆ

2003ರಲ್ಲಿ ಉಮೇಶ್ ಮತ್ತು ಶೇಖರ್ ನನ್ನು ಇದೇ ರೀತಿ ಕೊಂದ ಹಾಗೂ ಮುಂದೆ ಎಲ್ಲಾ ಕೊಲೆಗಳನ್ನು ಒಂದೇ ರೀತಿಯಲ್ಲಿ ಮಾಡಲು ಶುರು ಮಾಡಿದ ಕೊಲ್ಲುವ ಮುಂಚೆ ಒಂದು ಚಿಕ್ಕ ಕ್ಯಾಮರಾದಿಂದ ಆ ವ್ಯಕ್ತಿಗಳ ಫೋಟೋಗಳನ್ನು ತೆಗೆಯುತ್ತಿದ್ದ ಕೊಂದ ನಂತರ ದೇಹವನ್ನು ತುಂಡು ತುಂಡಾಗಿ ಮಾಡಿ ತಲೆಯನ್ನು ಯಮುನಾ ನದಿಗೆ ಎಸೆಯುತ್ತಿದ್ದ ಈತನ ಹೇಳಿಕೆಯ ಪ್ರಕಾರ 9 ವರ್ಷಗಳಲ್ಲಿ 40 ಕೊಲೆಗಳನ್ನು ಮಾಡಿದ್ದ ಎಂದು ಒಪ್ಪಿಕೊಂಡಿದ್ದಾನೆ ಆದರೆ ಈತ ಸಿಕ್ಕಿ ಬಿದ್ದಿದ್ದು ಕೇವಲ ಏಳು ಕೊಲೆಗಳಲ್ಲಿ ಮಾತ್ರ ಆದರೆ ಆತನಿಗೆ ಶಿಕ್ಷೆಯಾಗಿದ್ದು ಕೇವಲ 3 ಕೊಲೆಗಳಿಗೆ ಮಾತ್ರ ಇದಕ್ಕೆಲ್ಲ ಕಾರಣ ಇವನು ಒಬ್ಬ ಸೈಕೋ ಪಾತ್ ಹಿತ ಸಣ್ಣ ವಯಸ್ಸಿನಲ್ಲಿದ್ದಾಗ ಈಕೆ ತಾಯಿ ಇವನನ್ನು ನಿರ್ಲಕ್ಷಿಸುತ್ತಿದ್ದಳಂತೆ ಪ್ರೀತಿ ಕಾಳಜಿ ಇಲ್ಲದ ಮನೆಯಲ್ಲಿ ಇತರ ಬಾಲ್ಯದಿಂದ ಬೆಳೆದ ನಂತರ ಬಡತನದಿಂದ ಬೇಸತ್ತು ಇವನ ಊರಾದ ಬಿಹಾರ ಗೋ ಸಾಯಿ ಹಳ್ಳಿಯಿಂದ ದೆಹಲಿಗೆ ಬಂದಿದ್ದ ಅಕ್ಷರ ಜ್ಞಾನವಿಲ್ಲದ ಈತ ದೆಹಲಿಯ ಮಾರ್ಕೆಟ್ ನಲ್ಲಿ ಮೂಟೆ ಓರುವ ಕೆಲಸವನ್ನು ಮಾಡುತ್ತಿದ್ದ ದೆಹಲಿಯ ಮಾರ್ಕೆಟಿನಲ್ಲೂ ಸಹ ಈತ ಬಾರಿ ನಿರ್ಲಕ್ಷಕ್ಕೆ ಒಳಗಾದ ಅವಮಾನ ಎಲ್ಲವನ್ನು ಅನುಭವಿಸಿದ್ದ ಹೀಗೆ ಬಾಲ್ಯದಿಂದ ಈತ ನೋವಿನಲ್ಲಿ ಬೆಳೆದಿದ್ದರಿಂದ ಈತನ ಮನಸ್ಸಿನಲ್ಲಿ ಸೈಕೋ ಕಾರ್ತಿಕ್ ಗುಣ ಬೆಳೆದು ಬಂದಿದ್ದು ಈ ಘಟನೆಗಳಿಗೆ ಕಾರಣವಾಗಿತ್ತು.