ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

WhatsApp Group Join Now
Telegram Group Join Now

ನಮ್ಮ ಕನ್ನಡ ಚಿತ್ರರಂಗ ಇದುವರೆಗೂ ಸಾಕಷ್ಟು ಬೇರೆ ಬೇರೆ ಭಾಷೆಯಿಂದ ಬಂದಿರುವಂತಹ ಹಾಗೂ ಕನ್ನಡದಿಂದಲೇ ಬಂದಿರುವಂತಹ ಪ್ರತಿಭೆಗಳಿಗೆ ಸೂರು ನೀಡಿರುವಂತಹ ಸ್ಥಳ.

ಇನ್ನು ಕನ್ನಡ ಚಿತ್ರರಂಗದಲ್ಲಿ ಬೇರೆ ಬೇರೆ ಪ್ರೊಫೆಷನ್ ಇಂದ ನಟನೆಗೆ ಬಂದಂತಹ ಪ್ರತಿಭೆಗಳು ಕೂಡ ಇದ್ದಾರೆ. ಇವತ್ತು ನಾವು ಮಾತನಾಡೋಕೆ ಹೊರಟಿರೋದು ಕನ್ನಡ ಚಿತ್ರರಂಗಕ್ಕೆ ನಾಯಕ ನಟರಾಗಿ ಎಂಟ್ರಿ ಕೊಟ್ಟಂತಹ ಕೆಲವೊಂದು ಪ್ರಮುಖ ರಾಜಕೀಯ ನಾಯಕರ ಮಕ್ಕಳ ಬಗ್ಗೆ .

ಈ ಲಿಸ್ಟ್ ನಲ್ಲಿ ಮೊದಲನೆಯದಾಗಿ ಕಾಣಿಸಿಕೊಳ್ಳುವುದು ಗಾಲಿ ಜನಾರ್ಧನ ರೆಡ್ಡಿ ಅವರ ಮಗ ಆಗಿರುವಂತಹ ಕಿರೀಟಿ ರೆಡ್ಡಿ ಜೂನಿಯರ್ ಸಿನಿಮಾದ ಮೂಲಕ ಇವರು ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪಾದಾರ್ಪಣೆ ಮಾಡಿದ್ದಾರೆ.

ಈ ಸಿನಿಮಾದ ನಿರ್ಮಾಣ ಮಾಡಿರೋದು ಈಗ ಖ್ಯಾತಿಯ ವಾರಾಹಿ ಪ್ರೊಡಕ್ಷನ್ ಬಾಹುಬಲಿ ಖ್ಯಾತಿಯ ಕ್ಯಾಮೆರಾಮ್ಯಾನ್ ಆಗಿರುವಂತಹ ಸೆಂದಿಲ್ ಕುಮಾರ್ ಈ ಸಿನಿಮಾಗೆ ಕ್ಯಾಮೆರಾ ಹಿಡಿದಿದ್ದಾರೆ.

ಗಾಲಿ ಜನಾರ್ದನ್ ರೆಡ್ಡಿ ಅವರ ಮಗ ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಈ ಸಿನಿಮಾ ಕೇವಲ ಕನ್ನಡದಲ್ಲಿ ಮಾತ್ರ ಅಲ್ಲದೆ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಕೂಡ ಬಿಡುಗಡೆ ಕಾಣಲಿದೆ.

ಸಿನಿಮಾ ಜೀವನ ಕಿರೀಟಿ ರೆಡ್ಡಿ ಅವರಿಗೆ ಯಾವ ರೀತಿಯಲ್ಲಿ ಯಶಸ್ಸನ್ನ ನೀಡುತ್ತೆ ಎಂಬುದನ್ನ ಕಾದು ನೋಡಬೇಕಾಗಿದೆ. ಜಮೀರ್ ಅಹಮದ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಾಂಗ್ರೆಸ್ ಪಕ್ಷದ ಖ್ಯಾತ ನಾಯಕ ಆಗಿರುವಂತಹ ಇವರು ಈಗ ಮಿನಿಸ್ಟರ್ ಕೂಡ ಆಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವಂತಹ ಸ್ಟ್ರಾಲ್ ಗಳಲ್ಲಿ ಕೂಡ ಇವರನ್ನ ನೀವು ಹೆಚ್ಚಾಗಿ ಕಾಣಬಹುದಾಗಿದೆ. ಇನ್ನು ಇವರ ಮಗ ಆಗಿರುವಂತಹ ಜೈದ್ ಖಾನ್ ಮುಂಬೈನ ಅನುಪಂ ಕೇರ್ ನಟನ ಶಾಲೆಯಲ್ಲಿ ತರಬೇತಿ ಪಡೆದು ಬಂದಿದ್ದಾರೆ.

ಈಗಾಗಲೇ ಇವರು ನಾಯಕನಾಗಿ ಕಾಣಿಸಿಕೊಂಡಿರುವಂತಹ ಮೊದಲ ಸಿನಿಮಾ ಬನಾರಸ್ ಬಿಡುಗಡೆಯಾಗಿದೆ ಆಗಿದೆ ಬಿಲ್ ಬಾಟಮ್ ಖ್ಯಾತಿಯ ಜಯತೀರ್ಥ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿತ್ತು ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನ ಸಾಧಿಸದೆ ಇದ್ದರೂ ಕೂಡ ಪ್ರೇಕ್ಷಕರಿಗೆ ಇವರ ಪರಿಚಯವನ್ನ ಈ ಸಿನಿಮಾ ಮಾಡಿಕೊಟ್ಟಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಆಪ್ತ ಬಳಗದಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದಾರೆ ಇವರ ಮುಂದಿನ ಸಿನಿಮಾ ಕೂಡ ಚಿತ್ರೀಕರಣಕ್ಕೆ ಸಜ್ಜಾಗಿದೆ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಕುಮಾರ್ ಬಂಗಾರಪ್ಪ ಅವರ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತೇ ಇದೆ.

ಕುಮಾರ್ ಬಂಗಾರಪ್ಪ ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವಂತಹ ರಾಜಕೀಯ ನಾಯಕ ಇನ್ನು ಇವರ ಮಗ ಕೂಡ ಈಗ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ನಾವು ಮಾತನಾಡುತ್ತಿರುವುದು ಅರ್ಜುನ್ ಬಂಗಾರಪ್ಪ ಅವರ ಬಗ್ಗೆ ತಮ್ಮ ತಂದೆಯ ರೇಣುಕಾಂಬ ಸ್ಟುಡಿಯೋವನ್ನ ನೋಡಿಕೊಳ್ಳುತ್ತಿರುವಂತಹ ಅರ್ಜುನ್ ಚೆನ್ನೈನಲ್ಲಿ ನಟನಾ ತರಬೇತಿಯನ್ನ ಪಡೆದಿದ್ದಾರೆ. ಈಗಾಗಲೇ ಶಾರ್ಟ್ ಫಿಲಂಸ್ ಮಾಡಿರುವಂತಹ ಅರ್ಜುನ್ ಬಂಗಾರಪ್ಪ ಮುಂದಿನ ದಿನಗಳಲ್ಲಿ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಂಪೂರ್ಣ ತಯಾರಿಯನ್ನ ನಡೆಸಿಕೊಳ್ಳುತ್ತಿದ್ದಾರೆ.

ಗುಬ್ಬಿ ಕ್ಷೇತ್ರದ ಶಾಸಕರಾಗಿರುವಂತಹ ಎಸ್ ಆರ್ ಶ್ರೀನಿವಾಸ್ ರವರ ಮಗ ಸುಶಾಂತ್ ಅವರನ್ನು ಕೂಡ ನಾವು ಈ ಲಿಸ್ಟ್ ನಲ್ಲಿ ಕಾಣಬಹುದಾಗಿದೆ. ಇತ್ತೀಚಿಗಷ್ಟೇ ಅವರು ಸಿಂಪಲ್ ಸುನಿಲ್ ನಿರ್ದೇಶನದ ಸಿನಿಮಾದಲ್ಲಿ ನಾಯಕನನ್ನಾಗಿ ಪಾದಾರ್ಪಣೆ ಮಾಡಿರುವುದಕ್ಕೆ ಸಜ್ಜಾಗಿ ನಿಂತಿದ್ದು.

ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ ಇನ್ನು ಈ ಸಿನಿಮಾದಲ್ಲಿ ದುಶ್ಯಂತ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ಆಶಿಕಾ ರಂಗನಾಥ್ ಫಿಲಂ ಅಕಾಡೆಮಿಯಲ್ಲಿ ನಟನಾ ತರಬೇತಿಯನ್ನ ಪಡೆದುಕೊಂಡು ಮಾರ್ಷಲ್ ಆರ್ಟ್ಸ್ ಹಾಗೂ ಜಿಮ್ನಾಸ್ಟಿಕ್ ನಲ್ಲಿ ಕೂಡ ದುಶ್ಯಂತ್ ತರಬೇತಿಯನ್ನ ಪಡ್ಕೊಂಡು ತಯಾರಿಯನ್ನ ನಡೆಸಿಕೊಂಡೆ ಕನ್ನಡ ಚಿತ್ರರಂಗಕ್ಕೆ ಕಾಲಿಡಬೇಕು ಅನ್ನೋದಾಗಿ ಈಗ ಬಂದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ