ಇವರೆಲ್ಲ ಕನ್ನಡಿಗರ ಬಳಿ ಕ್ಷಮೆ ಕೇಳುವಂತದ್ದು ಏನು ಮಾತನಾಡಿದ್ರು ಗೊತ್ತಾ??ಕನ್ನಡಿಗರು ಸ್ವಾಭಿಮಾನ ಆತ್ಮ ಗೌರವಕ್ಕೆ ಹೆಸರಾದ ಜನ ನಾಡು ನುಡಿ ಭಾಷೆ ಸಂಸ್ಕೃತಿಯ ವಿಷಯಕ್ಕೆ ಬಂದರೆ ಕನ್ನಡಿಗರು ಯಾರ ವಿರುದ್ಧವಾದರೂ ನಿಲ್ಲುತ್ತಾರೆ ಕನ್ನಡಿಗರು ಯಾರ ತಂಟೆಗೂ ಓಗುವುದಿಲ್ಲ ಎಲ್ಲರನ್ನು ಗೌರವವಾಗಿ ಸಮಾನವಾಗಿ ಕಾಣುವ ಜನ ಇನ್ನೂ ಆತ್ಮಾಭಿಮಾನಕ್ಕೆ ಧಕ್ಕೆ ಒದಗಿದಾಗ ಹುಲಿಗಳಂತೆ ಆಗುವ ಜನ ಅಂತ ಅಂದಿನ ಎಷ್ಟೆಷ್ಟೋ ಮಹಾಕವಿಗಳೇ
ಕನ್ನಡಿಗರನ್ನು ಹಾಡಿ ಹೊಗಳಿದ್ದಾರೆ ಕೆಲವು ವರ್ಷಗಳ ಹಿಂದೆ ನಟ ರಜನಿಕಾಂತ್ ಯಾವುದೋ ಒಂದು ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟು ಕನ್ನಡಿಗರಿಗೆ ಕ್ಷಮೆ ಯಾಚಿಸಿದ್ದರು ಈ ರೀತಿ ಕನ್ನಡಿಗರನ್ನು ಕೆಣಕಿ ಆ ಬಳಿಕ ಕನ್ನಡಿಗರನ್ನು ಕ್ಷಮೆ ಕೇಳಿದಂತಹ ಪರಭಾಷಿಕ ನಟ ಮತ್ತು ಚಿತ್ರ ತಂತ್ರಜ್ಞನರ ಬಗ್ಗೆ ಜೊತೆಗೆ ಅವರು ಯಾವುದರ ಹಿನ್ನೆಲೆಯಲ್ಲಿ ಕನ್ನಡಿಗರನ್ನು ಕ್ಷಮೆ ಕೇಳಬೇಕಾಗಿ ಬಂತು.
ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿದು ಕೊಳ್ಳೋಣ ಮೊದಲನೆಯದಾಗಿ ನಾವು ತಿಳಿಯ ಬೇಕಾದದ್ದು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಗ್ಗೆ ರಜನಿಕಾಂತ್ ಅವರು ಕನ್ನಡಿಗರ ಬಳಿ ಯಾವ ವಿಷಯಕ್ಕಾಗಿ ಕ್ಷಮೆ ಕೇಳಬೇಕಾಗಿ ಬಂತು ಎಂದರೆ ಅದು 2008ರ ಜುಲೈ ಮತ್ತು ಆಗಸ್ಟ್ ತಿಂಗಳ ಸಮಯ ಆಗ ಹೊಗೆನಕಲ್ ವಿವಾದ ಎರಡು ರಾಜ್ಯಗಳ ನಡುವೆ ಭುಗಿಲೆದ್ದಿತ್ತು.
ಈ ಬಗ್ಗೆ ಅಲ್ಲಿ ಕನ್ನಡ ರಕ್ಷಣಾ ವೇದಿಕೆಯವರು ಇತರ ಕನ್ನಡ ಹೋರಾಟಗಾರರು ಹೋರಾಟವನ್ನು ಮಾಡುವಾಗ ಅತ್ತ ನಟ ರಜನಿಕಾಂತ್ ತಮಿಳರ ಪರ ಬ್ಯಾಟಿಂಗ್ ಮಾಡುತ್ತಾ ಮಾತಿನ ಭರದಲ್ಲಿ ಕನ್ನಡದ ಕಿಡಿಗೇಡಿಗಳನ್ನು ಒದ್ದು ಓಡಿಸಿ ಎಂಬ ಹೇಳಿಕೆಯನ್ನು ನೀಡಿದ್ದರು ಈ ಒಂದು ಸುದ್ದಿ ಹಬ್ಬುತಿದ್ದ ಹಾಗೆ ಇತ್ತ ಕನ್ನಡಿಗರೆಲ್ಲ ಆಕ್ರೋಶ ಭರಿತರಾದರು ಈ ಸಮಯದಲ್ಲಿ ಅವರ ಕುಚೇಲನ್ ಚಿತ್ರ.
ರಿಲೀಸ್ ಗೆ ರೆಡಿ ಇತ್ತು ಈಗ ರಜನಿಕಾಂತ್ ಕನ್ನಡಿಗರ ಕ್ಷಮೆಯನ್ನು ಯಾಚಿಸದ ಹೊರತು ಅವರ ಸಿನಿಮಾವನ್ನು ಇಲ್ಲಿ ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಕನ್ನಡ ಪರ ಹೋರಾಟಗಾರರು ಹೋರಾಟವನ್ನು ಮಾಡಿದರು ಇದರ ಜೊತೆ ಕನ್ನಡ ಸಿನಿಮಾ ಚೇಂಬರ್ ಕೂಡ ಈ ಒಂದು ಆಗ್ರಹಕ್ಕೆ ಕೈಜೋಡಿಸಿ ರಜನಿಕಾಂತ್ ಕ್ಷಮೆ ಕೇಳಲೇಬೇಕು ಇಲ್ಲವಾದಲ್ಲಿ ಕರ್ನಾಟಕದಲ್ಲಿ ಎಲ್ಲಿಯೂ ಕೂಡ.
ಅವರ ಚಿತ್ರಕ್ಕೆ ಅನುಮತಿಯನ್ನು ಕೊಡುವುದಿಲ್ಲ ಎನ್ನುವುದರ ಮೂಲಕ ಪ್ರತಿಭಟಿಸಿದ್ದರು ಇದರಿಂದ ಎಚ್ಚೆತ್ತ ರಜನಿಕಾಂತ್ ತಕ್ಷಣ ಹೈದರಾಬಾದ್ ನಲ್ಲಿ ಒಂದು ಪ್ರೆಸ್ ಮೀಟ್ ಅನ್ನು ಕರೆದು ಕನ್ನಡಿಗರನ್ನು ಉದ್ದೇಶಿಸಿ ನನಗೆ ಕನ್ನಡ ನೆಲ ಈ ಹಿಂದೆ ಆಶ್ರಯವನ್ನು ಕೊಟ್ಟಿದೆ ಕನ್ನಡಿಗರೆಲ್ಲರೂ ನನ್ನ ಸಹೋದರರಿದ್ದ ಹಾಗೆ ಕರ್ನಾಟಕವೇ ನನ್ನ ಹುಟ್ಟೂರು ಎಂದು ಹೇಳುವುದರ ಮುಖಾಂತರ ಕ್ಷಮಿಯಾಚಿಸಿದರು ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.