ಈ ದೇವಸ್ಥಾನಕ್ಕೆ ಒಂದು ಸಲ ಹೋಗಿ ಬನ್ನಿ, ವರ್ಷದ ಒಳಗೆ ಮದುವೆ ಫಿಕ್ಸ್ ಆಗುತ್ತದೆ……||
ನಮ್ಮಲ್ಲಿ ಹೆಚ್ಚಿನವರಿಗೆ ಎಷ್ಟೇ ವಯಸ್ಸಾದರೂ ಕೂಡ ಅವರಿಗೆ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ. ಅದಕ್ಕಾಗಿ ಹಲವಾರು ಶಾಸ್ತ್ರಗಳನ್ನು ಕೇಳುವುದರ ಮೂಲಕ ಕೆಲವೊಂದು ಪರಿಹಾರವನ್ನು ಮಾಡಿಕೊಳ್ಳುವು ದರ ಮೂಲಕ ಪೂಜೆಯನ್ನು ಮಾಡುವುದರ ಮೂಲಕ ಹೀಗೆ ಎಲ್ಲಾ ವಿಧಾನಗಳನ್ನು ಅನುಸರಿಸಿ ಪೂಜೆಯನ್ನು ಮಾಡುತ್ತಿರುತ್ತಾರೆ.
ಆದರೆ ಕೆಲವೊಮ್ಮೆ ಅವರು ಎಷ್ಟೇ ಪೂಜೆಯನ್ನು ಮಾಡಿದರು ಕೂಡ ಅವರಿಗೆ ಮದುವೆ ಫಿಕ್ಸ್ ಆಗುವುದೇ ಇಲ್ಲ. ಕೆಲವೊಬ್ಬರು ಇದಕ್ಕೆ ಆ ಹುಡುಗ ಅಥವಾ ಹುಡುಗಿಯಲ್ಲಿ ಯಾವುದೋ ದೋಷ ಇದೆ ಎಂದೇ ಅಕ್ಕಪಕ್ಕದ ಜನ ಹೇಳುತ್ತಿರುತ್ತಾರೆ ಹಾಗೆ ಯಾರೇ ಬೇರೆ ಹುಡುಗ ಅಥವಾ ಹುಡುಗಿ ಬಂದರೂ ಅವರಿಗೆ ಆ ವಿಷಯವನ್ನು ಹೇಳುವುದರ ಮೂಲಕ ಅವರ ಭವಿಷ್ಯವನ್ನು ಹಾಳು ಮಾಡುತ್ತಿರುತ್ತಾರೆ.
ಆದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾರಿಗೆ ಎಷ್ಟೇ ವರ್ಷ ವಯಸ್ಸಾದರೂ ಮದುವೆಯಾಗದೆ ಹಾಗೆ ಇರುತ್ತಾರೋ ಅಂತವರು ಈಗ ನಾವು ಹೇಳುವ ಈ ಒಂದು ದೇವಸ್ಥಾನಕ್ಕೆ ಹೋಗಿ ಬರುವುದರಿಂದ ವರ್ಷದೊಳಗೆ ನಿಮಗೆ ಮದುವೆ ಫಿಕ್ಸ್ ಆಗುತ್ತದೆ. ಅಂದರೆ ನೀವು ಆ ದೇವಸ್ಥಾನಕ್ಕೆ ಹೋಗಿ ಬಂದ ಒಂದು ವರ್ಷದ ಒಳಗಡೆ ನಿಮ್ಮ ಮದುವೆಯಾಗುತ್ತದೆ ಎಂದೇ ಇಲ್ಲಿಯ ಜನ ನಂಬುತ್ತಾರೆ.
ಹಾಗಾದರೆ ಇಂತಹ ಅದ್ಭುತ ಪವಾಡವನ್ನು ಸೃಷ್ಟಿ ಮಾಡುತ್ತಿರುವಂತಹ ಆ ದೇವಸ್ಥಾನ ಯಾವುದು? ಆ ದೇವಸ್ಥಾನ ಇರುವುದಾದರೂ ಎಲ್ಲಿ ಇದರ ಸಂಪೂರ್ಣವಾದಂತಹ ವಿಳಾಸವನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ದೇವಸ್ಥಾನಕ್ಕೆ ಹೋಗಿ ಪರಿಹಾರವನ್ನು ಪಡೆಯುವುದಕ್ಕೂ ಮೊದಲು ಮನೆಯಲ್ಲಿ ನೀವು ಇದಕ್ಕೆ ಎರಡು ಪರಿಹಾರವನ್ನು ಮಾಡಿಕೊಳ್ಳಲೇ ಬೇಕಾಗುತ್ತದೆ ಹಾಗೆಯೇ ಬಹಳ ಮುಖ್ಯವಾಗಿ ಈ ಒಂದು ಸಮಸ್ಯೆಗೆ ಕಾರಣ ಏನಿರಬಹುದು ಎಂದರೆ.
ಮೊದಲನೆಯದಾಗಿ ಪಿತೃ ದೋಷ ಹಾಗೂ ಎರಡನೆಯದಾಗಿ ಸರ್ಪದೋಷ ಇವೆರಡನ್ನೂ ಕೂಡ ನೀವು ನಿಮ್ಮ ಮನೆಯಲ್ಲಿಯೇ ಪರಿಹಾರವನ್ನು ಮಾಡಿ ನಂತರ ನೀವು ಈ ದೇವಸ್ಥಾನಕ್ಕೆ ಹೋಗಿ ಆ ದೇವರ ದರ್ಶನವನ್ನು ಮಾಡಿಕೊಂಡು ಬಂದರೆ ನಿಮಗೆ ಮದುವೆ ಫಿಕ್ಸ್ ಆಗುವುದು ಖಚಿತ. ಪ್ರತಿ ಮಂಗಳವಾರ ಹಸುವಿಗೆ ಬೆಲ್ಲ ಮತ್ತು ಕಡಲೆಕಾಳನ್ನು ತಿನ್ನಿಸುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ.
ಹಾಗೆಯೇ ಪ್ರತಿ ತಿಂಗಳು ಬರುವಂತಹ ಷಷ್ಠಿ ಪೂಜೆಯನ್ನು ಮಾಡಿ ಈ ರೀತಿ ಮಾಡುವುದರಿಂದ ಸುಬ್ರಮಣ್ಯೇಶ್ವರ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಕೂಡ ದೂರ ಮಾಡುತ್ತಾರೆ. ಹಾಗಾದರೆ ಮೇಲೆ ಹೇಳಿದಂತೆ ಆ ಒಂದು ದೇವಸ್ಥಾನ ಯಾವುದು ಎಂದರೆ ಶ್ರೀ ಕ್ಷೇತ್ರ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.