ಕುಟುಂಬಗಳು ಸಂಭ್ರಮಿಸುವಂತಹ ಗಳಿಗೆ ನೋವಿನ ಮಧ್ಯದಲ್ಲಿ ಎಲ್ಲೋ ಒಂದು ಕಡೆ ಮತ್ತೆ ಮರುಭೂಮಿಯಲ್ಲಿ ನೀರು ನೋಡಿದಂತೆ ಆಯಿತು. ಮೊಮ್ಮಗ ಹುಟ್ಟಿದ ಮತ್ತೆ ಮತ್ತೆ ಮಗು ನೋಡಿದಾಗ ಚಿರು ನೆನಪಾಯಿತು ಮತ್ತು ಎಲ್ಲೋ ಒಂದು ಕಡೆ ದೇವರಿದ್ದಾನೆ ಅನ್ನೋದು ಸಾಬೀತುಪಡಿಸಿತು ಖಂಡಿತವಾಗಿಯೂ ನಮ್ಮ ಪೂಜೆ ಫಲಿಸಿತು.
26 ನೇ ತಾರೀಕು ಸಂಜೆ 5:004 ನಿಮಿಷದಲ್ಲಿ ಮೊಮ್ಮಗ ಮನೆಗೆ ಬಂದಿದ್ದಾನೆ. ಬಂದ ನಂತರ ನಮ್ಮ ಮನೆಯಲ್ಲಿ ಎಲ್ಲವೂ ಸುಭಿಕ್ಷವಾಗಿ ನಡೆಯುತ್ತಿದೆ.ಈ ಮಗು ನಮ್ಮ ಕುಟುಂಬಕ್ಕೆ ಮಾತ್ರವಲ್ಲ ಇಡೀ ಮನುಕುಲಕ್ಕೆ ಬಂದಿರುವ ಕಷ್ಟಗಳನ್ನು ನೀಗಿಸುವ ಶಕ್ತಿಯನ್ನು ಹೊಂದಿದೆ ಎಂಬ ಮಾತು ಹುಸಿಯಾಗುವುದಿಲ್ಲ. ಕನ್ನಡದ ಮಣ್ಣಿನಲ್ಲಿ ದಸರಾ ಹಬ್ಬದ ಸಮಯದಲ್ಲಿ ಹುಟ್ಟಿರುವುದು ಶುಭಸೂಚನೆ.
ಕೊರೋನಾ ಇರುವುದರಿಂದ ಮಗುವನ್ನು ಆಚೆತರಲು ಆಗಿಲ್ಲ, ನನ್ನ ಪ್ರೀತಿಯ ಹುಡುಗ ಚಿರಂಜೀವಿ ಸರ್ಜಾ ಇಲ್ಲದೆ ಇರುವುದು ತಡೆದುಕೊಳ್ಳೋಕೆ ಆಗ್ತಾ ಇಲ್ಲ ಎಂದು ಹೇಳಿದರು. ಮಗಳನ್ನು ಗಂಡನಿಗೆ ಕೊಟ್ಟು ಮದುವೆ ಮಾಡಿಸಿ ನನ್ನ ಕಷ್ಟ ನಿವಾರಣೆ ಆಯಿತು ಅಪ್ಪ ಎಂದು ಹೇಳುವ ಸಂದರ್ಭದಲ್ಲಿ ಕೇವಲ ಮದುವೆಯಾದ ಎರಡು ವರ್ಷದಲ್ಲಿ ಹೇಗಾಗಿದ್ದು ಸಹಿಸಿಕೊಳ್ಳಲು ಕಷ್ಟವಾಗುತ್ತಿದೆ.
ದೃಷ್ಟಿ ಇಲ್ಲದೆ ಇಲ್ಲದವರಿಗೆ ಮಧ್ಯೆ ಕಣ್ಣು ಕೊಟ್ಟು ನಂತರದಲ್ಲಿ ಕಣ್ಣನ್ನು ಕಿತ್ತುಕೊಂಡರೆ ಹೇಗಾಗುತ್ತದೆ, ಅದೇ ಪರಿಸ್ಥಿತಿ ನನ್ನ ಮಗಳದ್ದಾಗಿದೆ. ಎಲ್ಲೋ ಒಂದು ಕಡೆ ನಂಬಿಕೆ ಮೇಲೆ ನಿಂತಿರುವ ಜಗತ್ತಿನಲ್ಲಿ ಕೃಷ್ಣನಾಗಿ, ರಾಮನಾಗಿ ಹುಟ್ಟಿದ್ದಾನೆ ನನ್ನ ಮೊಮ್ಮಗ ಎಂದು ಹೇಳಿದ್ದಾರೆ. ಹಾಗೂ ಹಲವಾರು ವಿಚಾರಗಳನ್ನು ಈ ಕೆಳಕಂಡ ವಂತಹ ವಿಡಿಯೋದಲ್ಲಿ ನಾವು ಕಾಣಬಹುದು ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.