ಸಾಹಸಸಿಂಹ ವಿಷ್ಣುವರ್ಧನ್ ಭೌತಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ ಅವರ ನೆನಪುಗಳು ಮಾತ್ರ ಎಂದಿಗೂ ಕನ್ನಡಿಗರ ಮನದಲ್ಲಿ ಸ್ಥಿರವಾಗಿ ನೆಲೆಸಿದೆ ತಮ್ಮ ಹಲವಾರು ಸಿನಿಮಾಗಳ ಮೂಲಕ ಕನ್ನಡಿಗರ ಹೃದಯ ವನ್ನು ಗೆದ್ದಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರು ತಮ್ಮ ವಯಕ್ತಿ ಕ ಬದುಕಿನಲ್ಲಿಯೂ ಕೂಡ ವಿಶಾಲ ಹೃದಯ ಉಳ್ಳವರಾಗಿದ್ದರು ಸಹನೆ ಮತ್ತು ತಾಳ್ಮೆಯನ್ನು ಮೈಗೂಡಿಸಿಕೊಂಡಿದ್ದರು. ಧಾನ, ಧರ್ಮ ಗಳು ಯಾರಿಗೂ ತಿಳಿಯದಂತೆ ಮಾಡುವಂತಹ ಸರಳ ವ್ಯಕ್ತಿ ಎನಿಸಿ ಕೊಂಡಿ ದ್ದರು. ಇನ್ನು ಅಧ್ಯಾತ್ಮದಲ್ಲಿ ಕೂಡ ವಿಷ್ಣುವರ್ಧನ್ ಅವರು ಅಪಾರ ಒಲವು ಹೊಂದಿದ್ದರು ಧರ್ಮಗುರುಗಳ ಒಡ ನಾಟ ವನ್ನು ಬೆಳೆಸಿ ಕೊಂಡಿದ್ದರು. ವಿಷ್ಣುವರ್ಧನ್ ಅವರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೊಂದಿಗೆ ತುಂಬಾ ಆಪ್ತತೆ ಹೊಂದಿದ್ದರು ಇನ್ನು ಡಾಕ್ಟರ್ ವೀರೇಂದ್ರ ಹೆಗ್ಗಡೆ ಕೂಡ ವಿಷ್ಣುವರ್ಧನ್ ಅವರೆಂದರೆ ತುಂಬಾ ಅಭಿಮಾನ, ಪ್ರೀತಿ, ಗೌರವ ಬೆಳೆಸಿಕೊಂಡಿದ್ದರು.
ಹೀಗೆ ಒಮ್ಮೆ ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಲ್ಲಿ ಮ್ಯೂಸಿಯಂ ತೆರೆಯುವ ಬಗ್ಗೆ ವಿಷ್ಣುವರ್ಧನ್ ಅವರ ಬಳಿ ಹೇಳಿದರು ತಕ್ಷಣವೇ ವಿಷ್ಣುವರ್ಧನ್ ಅವರು ಏನು ಆಲೋಚನೆ ಮಾಡಿದ ತಮ್ಮ KA04 ನಂಬರಿನ ಜಪಾನಿನ ಡಾಟ್ಸನ್ ಕಂಪನಿಯ ಕಾರನ್ನು ಮ್ಯೂಸಿಯಂ ಗೆ ಕೊಡುಗೆಯಾಗಿ ನೀಡಿದರು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ನೇಹದ ಗುರುತಾಗಿ ವಿಷ್ಣು ವರ್ಧನ್ ಅವರ ಕಾರು ಇಂದಿಗೂ ಧರ್ಮಸ್ಥಳದ ಮ್ಯೂಸಿ ಯಂನಲ್ಲಿ ಉಳಿದಿದೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಕಾರನ್ನು ನೋಡಲು ಅಭಿಮಾನಿಗಳಿಗೆ ಅವಕಾಶ ಕಲ್ಪಿಸಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ವಿಷ್ಣುವರ್ಧನ್ ಅಭಿಮಾನಿಗಳ ಪರವಾಗಿ ತುಂಬು ಹೃದಯದ ನಮನಗಳು. ಈ ಮೇಲೆ ಕಾಣುವಂತಹ ವಿಡಿಯೋ ಸಂಪೂರ್ಣವಾಗಿ ನೋಡಿ ಧನ್ಯವಾದಗಳು ಸ್ನೇಹಿತರೆ.