ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ವಿವಾದ ದಿನದಿಂದ ದಿನಕ್ಕೆ ಬೇರೆ ಬೇರೆ ರೂಪಗಳನ್ನು ಪಡೆದುಕೊಳ್ಳುತ್ತಿದ್ದು ದರ್ಶನ್ ಮತ್ತು ಇಂದ್ರಜಿತ್ ನಡುವಿನ ಗುದ್ದಾಟ ದೊಡ್ಡ ಮಟ್ಟಕ್ಕೆ ಬಂದು ನಿಂತುಬಿಟ್ಟಿ ದೆ. ಇನ್ನು ಇದರ ಮಧ್ಯ ದರ್ಶನ್ ಹೇಳಿದ ಒಂದು ಮಾತಿನಿಂದ ನಿರ್ದೇಶಕ ಪ್ರೇಮ್ ಕೂಡ ತಮ್ಮ ಅನಿಸಿಕೆಯನ್ನು ಮಾಧ್ಯಮಗಳ ಮುಂದೆ ಇಟ್ಟಿದ್ದರು, 25ಕೋಟಿ ಇಂದ ಶುರುವಾದ ದರ್ಶನ್ ಮತ್ತು ಉಮಾಪತಿ ವಿವಾದ ದೊಡ್ಡಮನೆ ಆಸ್ತಿ ವಿಚಾರದ ವರೆಗೂ ಬಂದು ನಿಂತಿದೆ ಕಾನೂನು ಹೋರಾಟಕ್ಕೆ ಸಿದ್ಧವಾಗುತ್ತಿದೆ. ಅಭಿಮಾನಿಗಳು ಮಾತ್ರ ಯಾವುದನ್ನು ಬಿಟ್ಟುಕೊಡದೆ ದರ್ಶನ್ ಅವರ ಪರವಾಗಿ ನಿಂತಿದ್ದಾರೆ ಹಾಗೆ ಸ್ಯಾಂಪಲ್ ವುಡ್ ಕೆಲ ನಟರು ಕೂಡ ದರ್ಶನ್ ಪರವಾಗಿ ಮಾತನಾಡಿದ್ದಾರೆ.
ಬಜಾರ್ ಸಿನಿಮಾ ನಟ ಧನ್ವೀರ್ ದರ್ಶನ್ ರವರ ವಿಚಾರವಾಗಿ ಸೋ ಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ದರ್ಶನ್ ಅಂದರೆ ಅಪಾರ ಪ್ರಮಾಣದಲ್ಲಿ ಹರಿದು ಬರುವುದು ಅವರ ಅಭಿಮಾನಿಗಳು ಎಷ್ಟೇ ಕಲ್ಲೆಸೆದರು ಅವರು ಅದನ್ನು ದಾಟಿ ಬರುತ್ತಾರೆ ಇಡೀ ಜಗತ್ತೇ ದರ್ಶನ್ ಅವರಿಗೆ ಎದುರಾದರೂ ನಾನು ಅವರ ಜೊತೆ ನಿಲ್ಲುತ್ತೇನೆ ಎಂದು ಹೇ ಳಿದ್ದಾರೆ. ಇನ್ನು ದರ್ಶನ್ ಆಪ್ತ ಸ್ನೇಹಿತ ನಟ ಆದಿತ್ಯ ಕೂಡ ಇಂತಹ ಸಮಯದಲ್ಲಿ ಯಾರು ನಿಮ್ಮೊಂದಿಗೆ ಇರುತ್ತಾರೋ ಇಲ್ಲವೋ ನಾನು ನಿಮ್ಮ ಪರವಾಗಿ ಇರುತ್ತೇನೆ ನಿಮ್ಮ ಸೆಲೆಬ್ರಿಟಿಗಳು ಬೆಂಬಲ ನಿಮಗೆ ಸಿಗುತ್ತದೆ ಎಂದು ತಿಳಿಸಿದ್ದಾರೆ. ನಟ ಕಾಮಿಡಿಯನ್ ಶಿವರಾಜ್ ಕೆಆರ್ ಪೇಟೆ ಅವರ ಪಿ ಲಂಕೇಶ್ ಕವಿತೆಯನ್ನು ಕರೆದುಕೊಳ್ಳುವ ಮೂಲಕ ಇಂದ್ರಜಿತ್ ಅವರಿಗೆ ತಿರುಗೇಟು ನೀಡಿದ್ದಾರೆ ಹಾಗೆ ಪ್ರಭಾಕರ್ ಮಗ ವಿನೋದ್ ಪ್ರಭಾಕರ್ ಕೂಡ ನಟ ದರ್ಶನ್ ಪರವೆಗಿ ನಿಂತಿದ್ದಾರೆ.