ದಿನದಿಂದ ದಿನಕ್ಕೆ ಕೋರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ರಾಜ್ಯಕ್ಕೆ ಲಾಕ್ಡೌನ್ ಅನಿವಾರ್ಯ ಅಂತ ಇದೀಗ ತಜ್ಞರು ವರದಿಯನ್ನು ನೀಡಿದ್ದಾರೆ. ಹೌದು ಈ ಒಂದು ವರದಿಯನ್ನು ಕೇಳಿದಂತಹ ಜನತೆ ಇದೀಗ ನಿಜಕ್ಕೂ ಅಚ್ಚರಿ ಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಮುಂದೆ ನಮ್ಮ ಜೀವನ ಹೇಗೆ ಅಂತ ತುಂಬಾನೇ ಭಯ ಭೀತರಾಗಿದ್ದಾರೆ ಹೌದು ಈಗಾಗಲೇ ಕರ್ನಾಟಕದಲ್ಲಿ ಕೋರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ವರದಿಯ ಪ್ರಕಾರ ಶೇಕಡ ಹತ್ತರಷ್ಟು ಜನರಿಗೆ ಈ ಸೋಂಕು ತಗುಲಿದೆ ಎಂಬ ವರದಿ ಹೊರ ಬಿದ್ದಿದೆ. ಹಾಗಾಗಿ ಇದನ್ನು ನೋಡಿದಂತಹ ತಜ್ಞರು ಈಗ ಲಾಕ್ಡೌನ್ ಅನಿವಾರ್ಯ ಅಂತ ಹೇಳುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಯಾವುದೇ ಕಾರಣಕ್ಕೂ ಇನ್ನು ಮುಂದೆ ಎಲ್ಲಾ ಲಾಕ್ಡೌನ್ ಮಾಡಲಾಗುವುದಿಲ್ಲ ಅಂತ ಸರ್ಕಾರ ತಿಳಿಸಿತ್ತು ಈ ಒಂದು ಮಾತನ್ನು ಕೇಳಿದ ಜನರು ನಿಟ್ಟುಸಿರು ಬಿಟ್ಟಿದ್ದರು ಆದರೆ ಇದೀಗ.
ಇದ್ದಹಾಗೆ ಲಾಕ್ಡೌನ್ ಅನಿವಾರ್ಯ ಅಂತ ವೈದ್ಯರು ಹಾಗೂ ವರದಿಗಾರರು ನೀಡಿರುವಂತಹ ಈ ಮಾಹಿತಿಯನ್ನು ಕೇಳಿ ನಿಜಕ್ಕೂ ಜನರು ತುಂಬಾನೇ ಅಚ್ಚರಿಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲದೆ ಈಗ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಕೂಡ ಶೇಕಡಾ 40ರಷ್ಟು ಬೆಡ್ ಭರ್ತಿಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕೋವಿಡ್ ಶಂಕಿತರ ಸಂಖ್ಯೆ ಹೆಚ್ಚಾದರೆ ಅವರಿಗೆ ಸರಿಯಾದ ರೀತಿಯಲ್ಲಿ ಟ್ರೀಟ್ ಮೆಂಟ್ ಅನ್ನು ನೀಡಲು ಸಾಧ್ಯವಾಗುವುದಿಲ್ಲ. ಈ ಒಂದು ಕಾರಣದಿಂದಾಗಿ ಸೊಂಕು ಹರಡದೆ ಇರುವ ರೀತಿಯಲ್ಲಿ ನಾವು ನೋಡಿಕೊಳ್ಳಬೇಕಾದರೆ ಲಾಕ್ಡೌನ್ ಅನಿವಾರ್ಯ ಎಂಬ ಮಾಹಿತಿಯನ್ನು ಹೇಳಿದ್ದಾರೆ. ಈ ಹಿಂದೆ ವೀಕೆಂಡ್ ಕರ್ಫ್ಯೂ ಅನ್ನು ಮಾತ್ರ ವಿಧಿಸಲಾಗಿತ್ತು ಅಂದರೆ ವಾರದ ಎರಡು ದಿನಗಳು ಆದಂತಹ ಶನಿವಾರ ಮತ್ತು ಭಾನುವಾರ ಮಾತ್ರ. ಆದರೆ ಈಗ ಕೋವಿಡ್ ಅನ್ನು ನಿಯಂತ್ರಣಕ್ಕೆ ತರುವ ದೃಷ್ಟಿಯಿಂದ ವಾರದ ಎಲ್ಲ ದಿನವೂ ಕೂಡ ಲಾಕ್ಡೌನ್ ಮಾಡಬಹುದಾದಂತ ಸಂಭವ ಇದೆ.