ಲವಂಗ ಸುಟ್ಟ ಬೂದಿಯಿಂದ ಈ ಕೆಲಸ ಮಾಡಿ ಮಾಟ-ಮಂತ್ರ ಮಾಡಿದ್ದಾರೆ ಆ ವ್ಯಕ್ತಿ ನಿಮ್ಮ ಕಾಲಡಿಯಲ್ಲಿ ಇರುತ್ತಾನೆ.ನಮಸ್ತೆ ಸ್ನೇಹಿತರೆ, ಮಾಟ-ಮಂತ್ರ, ವಾಮಾಚಾರದಂತಹ ಮಹಾಪಾಪ ಮತ್ತೊಂದಿಲ್ಲ ಎಂದರೆ ತಪ್ಪಾಗಲಾರದು. ಮಾಟ-ಮಂತ್ರ ಮಾಡುವುದು, ಅದನ್ನು ಪ್ರೋತ್ಸಾಹಿಸುವುದು ನಿಷೇಧನೀಯ. ನಿಮ್ಮ ಮನೆಯಲ್ಲಿ ಈ ರೀತಿಯ ನಕಾರಾತ್ಮಕ ಶಕ್ತಿ ಇರಬಹುದು, ನಾವು ತಿಳಿಸಿದ ಕೆಲಸವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಅಂತಹದೇ ನಕಾರಾತ್ಮಕ ಶಕ್ತಿ ಇದ್ದರು ದೂರಾಗುತ್ತದೆ. ಹೌದು ಸ್ನೇಹಿತರೆ ಯಾರಾದರೂ ನಿಮ್ಮ ಮನೆಯ ಮೇಲೆ ಕೆಟ್ಟ ದೃಷ್ಟಿ, ಬೀರಿದ್ದರೆ ನಿಮ್ಮ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಮನೆಯಲ್ಲಿ ಯಾವಾಗಲೂ ಕಿರಿಕಿರಿ ಜಗಳ ಉಂಟಾಗುತ್ತಿರುತ್ತದೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಹೀಗೆ ನಿಮ್ಮ ಮನೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಆಗ ನಿಮ್ಮ ಮನೆಯ ಮೇಲೆ ನಕಾರಾತ್ಮಕ ಶಕ್ತಿ ಒಂದು ಪರಿಣಾಮ ಬೀರುತ್ತಿದೆ ಎಂದು ತಿಳಿದುಕೊಳ್ಳಿ. ಹಾಗಾದರೆ ಈ ರೀತಿಯ ನಕಾರಾತ್ಮಕ ಶಕ್ತಿ ಪ್ರಭಾವವನ್ನು ತಡೆಗಟ್ಟುವುದು ಹೇಗೆ.
ಯಾವ ಕೆಲಸ ಮಾಡಿದರೆ ಈ ನಕಾರಾತ್ಮಕ ಶಕ್ತಿಯಿಂದ ನಿವಾರಣೆ ಪಡೆದುಕೊಳ್ಳಬಹುದು ಎಂದು ತಿಳಿಯೋಣ ಬನ್ನಿ. ಇಂದಿಗೂ ಹಿಂದೂ ಧರ್ಮದಲ್ಲಿ ದುಷ್ಟಶಕ್ತಿಯನ್ನು ದೂರವಿಡಲು ನಕಾರಾತ್ಮಕ ಆಲೋಚನೆಯಿಂದ ದೂರವಿರಲು ಬಸ್ಮಾ ಅಥವಾ ವಿಭೂತಿಯನ್ನು ಹಚ್ಚಿಕೊಳ್ಳುತ್ತಾರೆ. ಪಾಪವನ್ನು ದೂರಮಾಡಿ ನಮ್ಮನ್ನು ಕ್ಷಮಿಸು ಎಂದು ಪ್ರಾರ್ಥನೆ ಮಾಡಿಕೊಂಡು ಹಣೆಗೆ ಇಟ್ಟುಕೊಳ್ಳುತ್ತಾರೆ. ಆದರೆ ಯಾವ ವಸ್ತುವನ್ನು ಸುಟ್ಟರೂ ವಿಭೂತಿ ಆಗುವುದಿಲ್ಲ, ಹಾಲು, ತುಪ್ಪ ಜೇನುತುಪ್ಪ, ಹಸುವಿನ ಸಗಣಿಯ ಜೊತೆಗೆ ಸುಟ್ಟರೆ ಸಿಗುವುದೇ ವಿಭೂತಿ, ಇದು ಶಿವನ ಆರಾಧನೆಯಲ್ಲಿ ತತ್ವ ಸಂಸ್ಕಾರವಾಗಿದೆ. ಜೀವನದಲ್ಲಿ ಎಂತಹ ಒಳ್ಳೆಯ ವ್ಯಕ್ತಿಯಾದರು ಆತನಿಗೆ ಶತ್ರುಗಳ ಬಾದೆ ಇದ್ದೇ ಇರುತ್ತದೆ. ಅಂತಹ ಶತ್ರುಗಳನ್ನು ತೊಡೆದುಹಾಕಲು ಲವಂಗ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಪ್ರತಿ ಶನಿವಾರ ಮತ್ತು ಮಂಗಳವಾರ ಸಂಜೆ ಹನುಮನ ಮೂರ್ತಿ ಮುಂದೆ ಪ್ರಾರ್ಥನೆ ಮಾಡಿ.
ಮೂರ್ತಿಯ ಮುಂದೆ ಐದು ಲವಂಗವನ್ನು ಇಟ್ಟು ಕರ್ಪೂರ ಬೆಳಗಿಸಿ ಪೂರ್ತಿಯಾಗಿ ಸುಟ್ಟ ನಂತರ ಲವಂಗದ ಬೂದಿಯನ್ನು ಹಣೆಗೆ ಹಚ್ಚಿಕೊಳ್ಳಿ, ಇದರಿಂದ ಶತ್ರುಗಳ ಬಾಧೆಯಿಂದ ಮುಕ್ತಿ ಪಡೆಯಬಹುದು. ನಕಾರಾತ್ಮಕ ಶಕ್ತಿ ಪ್ರಭಾವದಿಂದ ಮನೆಯಲ್ಲಿ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಮನೆಯಲ್ಲಿ ಅಡುಗೆ ಮಾಡಿದ ನಂತರ ಒಲೆಯಲ್ಲಿ ಉಳಿದ ಬೂದಿಯನ್ನು ಸ್ವಲ್ಪ ತೆಗೆದುಕೊಂಡು, ಅದಕ್ಕೆ ನೀರು ಅಥವಾ ಹಾಲು ಬೆರೆಸಿ ಅದನ್ನ ಮಿಶ್ರಣ ಮಾಡಿಕೊಳ್ಳಿ. ಮನೆಯ ಬಾಗಿಲಿಗೆ ಮನೆಯ ಮುಂದೆ ಬೂದಿ ಮಿಶ್ರಣದಿಂದ ಸ್ವಸ್ತಿಕ್ ಚಿಹ್ನೆ ಬರೆಯಿರಿ. ಇದರಿಂದ ಅಗೋಚರವಾದ ನಿಗೂಢ ಶಕ್ತಿ ಪ್ರಚಾರವಾಗಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ. ಜೊತೆಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದ ಮನೆಯಲ್ಲಿ ಆರೋಗ್ಯ ಹಣಕಾಸು ಸುಧಾರಣೆ ಕಾಣಬಹುದು.