ಹಳೆಯ ಪೊರಕೆಯನ್ನು ಈ ದಿನ ಈ ದಿಕ್ಕನಲ್ಲಿ ಬಿಸಾಡಿ ಶ್ರೀಮಂತಿಕೆ ಹೆಚ್ಚಾಗುತ್ತೆ.ಶ್ರೀ ಮಹಾಲಕ್ಷ್ಮಿ ದೇವಿಯನ್ನು ನಾವು ಸ್ಮರಿಸುತ್ತೇವೆ ಏಕೆಂದರೆ ಯಾರ ಮನೆಯಲ್ಲಿ ಶ್ರೀ ಮಹಾಲಕ್ಷ್ಮಿಯ ವಾಸ ಇರುತ್ತದೆ ಅಂತವರ ಮನೆಯಲ್ಲಿ ಯಾವುದೇ ರೀತಿಯಾದಂತಹ ಕಷ್ಟ ಕಾರ್ಪಣ್ಯಗಳು ಇರುವುದಿಲ್ಲ ಈ ಒಂದು ಕಾರಣಕ್ಕಾಗಿಯೇ ಭಾರತದಲ್ಲಿರುವಂತಹ ಪ್ರತಿಯೊಬ್ಬರು ಕೂಡ ಶ್ರೀ ಮಹಾಲಕ್ಷ್ಮಿ ದೇವಿಯನ್ನು ಪೂಜಿಸುವುದನ್ನು ನಾವು ನೋಡಬಹುದಾಗಿದೆ. ಅದರಲ್ಲಿಯೂ ಕೂಡ ಮನೆಯಲ್ಲಿ ಇರುವಂತಹ ಕೆಲವು ವಸ್ತುಗಳನ್ನು ನಾವು ಶ್ರೀ ಮಹಾಲಕ್ಷ್ಮಿ ದೇವಿಗೆ ಹೋಲಿಕೆ ಮಾಡುವುದನ್ನು ನೋಡಬಹುದಾಗಿದೆ. ಹೌದು ಮನೆಯಲ್ಲಿ ಸಾಮಾನ್ಯವಾಗಿ ನಾವು ಬಳಕೆ ಮಾಡುವಂತಹ ಪೊರಕೆಯನ್ನು ಶ್ರೀ ಮಹಾಲಕ್ಷ್ಮಿ ದೇವಿಯ ಸ್ವರೂಪ ಎಂದು ಕರೆಯುತ್ತೇವೆ. ಈ ಒಂದು ಕಾರಣಕ್ಕಾಗಿಯೇ ಪೊರಕೆಯನ್ನು ಕಾಲಿನಲ್ಲಿ ಒದೆಯಬಾರದು ಅಥವಾ ತುಳಿಯಬಾರದು ಎಂಬುವುದನ್ನು ಹಿರಿಯರು ಹೇಳುವುದನ್ನು ಕೇಳುತ್ತೇವೆ.ಯಾರ ಮನೆಯಲ್ಲಿ ಹೆಚ್ಚು ಅಶುದ್ಧ ಇರುತ್ತದೆ ಕಸ ಇರುತ್ತದೆ ಅಂಥವರ ಮನೆಯಲ್ಲಿ ಶ್ರೀ ಮಹಾಲಕ್ಷ್ಮಿದೇವಿ ನೆನೆಸುವುದಿಲ್ಲ ಅಲ್ಲಿಂದ ಹೊರಟು ಹೋಗುತ್ತಾಳೆ ಅಂಥವರ ಮನೆಯಲ್ಲಿ ಸದಾಕಾಲ
ಯಾವುದಾದರೂ ಒಂದು ಕಷ್ಟಗಳು ತೊಂದರೆಗಳು ಸಮಸ್ಯೆಗಳು ಇರುತ್ತದೆ ಎಂಬುದನ್ನು ಇತಿಹಾಸಗಳು ಮತ್ತು ಪುರಾಣಗಳು ತಿಳಿಸುತ್ತದೆ. ಈ ಒಂದು ಕಾರಣಕ್ಕಾಗಿಯೇ ತಾಯಿ ಮಹಾಲಕ್ಷ್ಮಿಯ ಅನುಗ್ರಹ ಪಡೆಯಲು ಹಾಗೂ ಮಹಾಲಕ್ಷ್ಮಿಯ ಕೃಪ ರಕ್ಷಣೆ ನಮ್ಮ ಮೇಲೆ ಇರಲು ನಮ್ಮ ಮನೆಯವರ ಮೇಲೆ ನಮ್ಮ ಕುಟುಂಬದ ಮೇಲೆ ಸದಾಕಾಲ ಇರಬೇಕು ಅಂದರೆ ನಾವು ಮನೆಯನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಬೇಕು. ಅದರಲ್ಲಿಯೂ ಕೂಡ ಸ್ವಚ್ಛತೆಗೆ ಮೊದಲ ಆದ್ಯತೆಯನ್ನು ನೀಡಬೇಕು ಇದರ ಜೊತೆಗೆ ಪ್ರತಿನಿತ್ಯವೂ ಕೂಡ ದೇವರ ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಬೇಕು.
ಈ ನಿಯಮ ಮಾಡಿದಾಗ ಮಾತ್ರ ಮಹಾಲಕ್ಷ್ಮಿ ದೇವಿಯ ಕೃಪಾದೃಷ್ಟಿ ನಮ್ಮ ಮೇಲೆ ಬೀಳುತ್ತದೆ ಒಂದು ವೇಳೆ ನಾವು ಮನೆಯಲ್ಲಿ ಸ್ವಚ್ಛವಾಗಿ ಇಡುವಂತಹ ಕಾರ್ಯಗಳನ್ನು ನಿರ್ಲಕ್ಷ ಮಾಡಿದರೆ ಅಲ್ಲಿಂದ ನಮ್ಮ ದುರದೃಷ್ಟ ಪಾರಂಭವಾಯಿತು ಅಂತ ಹೇಳಿದರೂ ಕೂಡ ತಪ್ಪಾಗಲಾರದು. ನಾವು ವಾಸ ಮಾಡುವಂತಹ ಮನೆಯಲ್ಲಿ ವಾಸ್ತುವಿನ ಮೇಲೆ ಪ್ರಭಾವ ಬೀರುವಂತಹ ಅನೇಕ ವಸ್ತುಗಳಲ್ಲಿ ಪೊರಕೆಯೂ ಕೂಡ ಒಂದು ಹಾಗಾಗಿ ನಾವು ಪೊರಕೆಗಳನ್ನು ಬೇಕಾಬಿಟ್ಟಿ ಬಿಸಾಡುವುದರಿಂದ ಇದರಿಂದ ಮಹಾಲಕ್ಷ್ಮಿದೇವಿ ಕೋಪ ಬರೋದು ಬರಬಹುದು.