ಶಿರಡಿ ಸಾಯಿಬಾಬಾ ಅವರು ಸಾವಿಗೂ ಮುಂಚೆ ಹೇಳಿದಂತಹ ರಹಸ್ಯ.ಒಂದು ಬಾರಿ ವಿದೇಶಿಗ ಒಬ್ಬನು ಸಾಯಿಬಾಬಾ ಅವರ ಫೋಟೋವನ್ನು ತೆಗೆಯಲು ಇಚ್ಚಿಸುತ್ತಾನೆ ಆದರೆ ಸಾಯಿಬಾಬಾ ಇವರಿಗೆ ಫೋಟೋವನ್ನು ತೆಗೆಯಲು ಅನುಮತಿ ನೀಡುವುದಿಲ್ಲ. ಆದರೂ ಕೂಡ ವಿದೇಶಿಗ ತುಂಬಾನೇ ಒತ್ತಾಯ ಮಾಡುತ್ತಾನೆ ಈತನ ಒತ್ತಾಯಕ್ಕೆ ಮಣಿದಂತಹ ಸಾಯಿಬಾಬಾ ಅವರು ನನ್ನ ಪದಗಳನ್ನು ಮಾತ್ರ ಫೋಟೋ ತೆಗೆಯಬೇಕು ಅಂತ ಹೇಳುತ್ತಾರೆ. ಇದಕ್ಕೆ ವಿದೇಶಿಗ ಆಯಿತು ಅಂತ ಒಪ್ಪಿಕೊಳ್ಳುತ್ತಾನೆ ಆದರೆ ವಿದೇಶಿಗ ಸಾಯಿಬಾಬಾ ಅವರ ಪೂರ್ತಿ ಚಿತ್ರವನ್ನು ತೆಗೆಯುತ್ತಾನೆ. ತದನಂತರ ವಿದೇಶನಿಗೆ ಒಂದು ಅಚ್ಚರಿ ಕಾದಿತ್ತು ಅಂತ ಹೇಳಬಹುದು ಏಕೆಂದರೆ ವಿದೇಶಿಗ ಬಾಬಾ ಅವರ ಫೋಟೋಗಳನ್ನು ತೆಗೆದು ನಂತರ ಅದನ್ನು ಡೆವಲಪ್ ಮಾಡುತ್ತಾನೆ ಆಗ ಆತನಿಗೆ ಒಂದು ಬಹುದೊಡ್ಡ ಆಘಾತವೇ ಎದುರಾಗುತ್ತದೆ.
ಅದೇನೆಂದರೆ ಫೋಟೋಗಳನ್ನು ಡೆವಲಪ್ ಮಾಡಿದಾಗ ಆತನಿಗೆ ಕಾಣಿಸಿದ್ದು ಕೇವಲ ಬಾಬಾ ಅವರ ಪಾದದ ಫೋಟೋಗಳು ಮಾತ್ರ ಹೀಗೆ ನೂರಾರು ಚಮತ್ಕಾರಗಳನ್ನು ಮತ್ತು ಪವಾಡಗಳನ್ನು ಬಾಬಾ ಅವರು ಮಾಡಿದಂತಹ ಅದೆಷ್ಟೋ ನಿದರ್ಶನಗಳನ್ನು ನಾವು ಕೇಳಿದ್ದೇವೆ. ಇಂತಹ ಪವಾಡ ಪುರುಷ ಶಿರಡಿಯ ಶ್ರೀ ಸಾಯಿಬಾಬಾ ಹಾಗಾಗಿ ಇಂದು ಶ್ರೀ ಶಿರಡಿ ಸಾಯಿಬಾಬಾ ಅವರ ಬಗ್ಗೆ ಇರುವಂತಹ ಸಾಕಷ್ಟು ವಿಚಾರಗಳನ್ನು ತಿಳಿಸುತ್ತೇವೆ ಈ ವಿಚಾರವನ್ನು ಕೇಳುತ್ತಿದ್ದ ಹಾಗೆ ನಿಮಗೆ ಆಶ್ಚರ್ಯ ಉಂಟಾಗಬಹುದು ಆದರೂ ಕೂಡ ಇದು ಸತ್ಯ. ಶಿರಡಿ ಸಾಯಿಬಾಬಾ ಅವರ ಆರಾಧನೆ ಪ್ರಾರಂಭವಾಗಿದ್ದು 18ನೇ ಶತಮಾನದಲ್ಲಿ ಸಾಯಿಬಾಬಾ ಅವರು ಶಿರಡಿಯಲ್ಲಿ ವಾಸವಾಗಿದ್ದರು 19ನೇ ಶತಮಾನದಲ್ಲಿ ಶಿರಡಿಯ ಸುತ್ತಮುತ್ತಲಿನ ಜನ ಹಾಗೂ ಮುಂಬೈನಲ್ಲಿ ಇರುವಂತಹ ಅಕ್ಕಪಕ್ಕದ ಪ್ರದೇಶದ ಜನರು ಮಾತ್ರ ಶಿರಡಿ ಸಾಯಿಬಾಬಾ ಅವರ ಭಕ್ತರಾಗಿದ್ದರು.
20ನೇ ಶತಮಾನದಲ್ಲಿ ಶಿರಡಿ ಸಾಯಿಬಾಬಾ ಅವರ ಭಕ್ತಾದಿಗಳು ಇಡೀ ಪ್ರಪಂಚದಾದ್ಯಂತ ಇರುವುದನ್ನು ನಾವು ನೋಡಬಹುದಾಗಿದೆ ಅಷ್ಟೇ ಅಲ್ಲದೆ ಶಿರಡಿ ಸಾಯಿಬಾಬಾ ಕ್ಷೇತ್ರವು ಇಂದು ಒಂದು ಪ್ರಮುಖ ಮುಖ್ಯ ಧಾರ್ಮಿಕ ಕ್ಷೇತ್ರವಾಗಿ ಬೆಳೆದಿದೆ. ಶಿರಡಿ ಸಾಯಿಬಾಬಾ ಅವರ ಭಕ್ತಾದಿಗಳು ಶಿರಡಿ ಸಾಯಿಬಾಬಾ ಅವರ ಹಲವಾರು ಪವಾಡಗಳನ್ನು ಕಣ್ಣಾರೆ ಕಂಡಿದ್ದೇವೆ ಎಂದು ತಮ್ಮ ಅಭಿಪ್ರಾಯಗಳನ್ನು ಹಾಗೂ ತಮಗೆ ಆದಂತಹ ಅನುಭವಗಳನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಪವಾಡಗಳಲ್ಲಿ ಮುಖ್ಯವಾದಂತಹ ಪವಾಡ ಅಂದರೆ ಶಿರಡಿ ಸಾಯಿಬಾಬಾ ಅವರು ಒಂದೇ ಸಮಯದಲ್ಲಿ ಎರಡು ಭಾಗದಲ್ಲಿ ಕಾಣಿಸಿಕೊಳ್ಳುವುದು ಗಾಳಿಯಲ್ಲಿ ತೇಲಾಡುವುದು ಹೀಗೆ ಹತ್ತು ಹಲವಾರು ಪವಾಡಗಳನ್ನು ಮಾಡಿ ತಮ್ಮ ಭಕ್ತಾದಿಗಳಿಗೆ ದರ್ಶನವನ್ನು ನೀಡಿದ್ದಾರೆ.