ರಿಷಬ್ ಮೇಲೆ ದೈವ ಆವಾಹನೆ ಆಗಿದ್ದು ಎಷ್ಟು ಸತ್ಯ..ದೈವ ನರ್ತಕರು ಬಿಚ್ಚಿಟ್ಟ ದೈವ ರಹಸ್ಯ.. - Karnataka's Best News Portal

ರಿಶಬ್ ಶೆಟ್ಟರ ಮೇಲೆ ದೈವ ಆವಾಹನೆ ಆಗಿದ್ದು ಎಷ್ಟು ಸತ್ಯ ? ಕಾಂತಾರ ಪಂಜುರ್ಲಿ ಗುಳಿಗ||ಕಾಂತಾರ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ ಒಂದು ಲೆಕ್ಕದಲ್ಲಿ ಹೇಳುವುದಾದರೆ ಎಲ್ಲೋ ಎಲೆ ಮರಿ ಕಾಯಿಯಂತೆ ಕಳೆದು ಹೋಗುತ್ತಾ ಎಂದು ಅಂದು ಕೊಂಡಿದ್ದಂತಹ ರಿಷಬ್ ಶೆಟ್ಟಿ ಅವರಿಗೆ ದೈವವೇ ಕಾಂತಾರ ಮುನ್ನಡೆಸುವ ಹೊಣೆ ಹೊತ್ತಂತೆ ಕಾಣುತ್ತಿದೆ ಯಾಕೆ ಎಂದರೆ ಕಾಂತಾರ ಸಿನಿಮಾ ರಿಲೀಸ್ ಗು ಮುನ್ನ ಅಷ್ಟೇನೂ ಸದ್ದು ಮಾಡಿಲ್ಲ ಹೇಳಬೇಕು ಅಂದರೆ ಟ್ರೈಲರ್ ನಲ್ಲಿಯೂ ಕೂಡ ಈ ಗುಳಿಗ ಪಾತ್ರವನ್ನು ತೋರಿಸೇ ಇರಲಿಲ್ಲ ಆದರೆ ಬಾಯಿಂದ ಬಾಯಿಗೆ ಕಾಂತಾರ ಸಿನಿಮಾ ಸುದ್ದಿ ವ್ಯಾಪಿಸಿತು ಇದೀಗ ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಸದ್ದು ಮಾಡುತ್ತಿದೆ ಆದರೆ ಇಲ್ಲಿ ಎಲ್ಲರಲ್ಲೂ ಮೂಡುತ್ತಿರುವಂತಹ ಪ್ರಶ್ನೆ ಒಂದೇ ಕಾಂತಾರ ಸಿನಿಮಾದ ಕ್ಲೈಮಾಕ್ಸ್ ನಲ್ಲಿ ರಿಷಬ್ ಶೆಟ್ಟಿ ಅವರ ಮೈಮೇಲೆ ದೈವ ಆಹ್ವಾನ ಆಗಿತ್ತಾ.

ಆಗಿದ್ದರೆ ಅದು ಎಷ್ಟು ಸತ್ಯ ಕಾಂತಾರ ಸಿನಿಮಾವನ್ನು ಕುರಿತು ದೈವ ನರ್ತಕರು ಏನು ಹೇಳುತ್ತಾರೆ ಎಂದರೆ ಕಾಂತರಾ ಸಿನಿಮಾಗೆ ಪಂಜುರ್ಲಿ ದೈವವೇ ಮಾಡು ಎಂದು ಶೆಟ್ಟರಿಗೆ ಹೇಳಿದ್ದ ರಹಸ್ಯದ ಕುರಿತು ಈ ದಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಕಾಂತರಾ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಪಂಜುರ್ಲಿ ದೈವದ ವೇಷವನ್ನು ಧರಿಸಿ ನೃತ್ಯವನ್ನು ಮಾಡಿದ್ದಾರೆ ಅದೇ ಕೊನೆಗೆ ರಿಷಬ್ ಶೆಟ್ಟಿ ಮೈಮೇಲೆ ಗುಳಿಗ ದೇವರ ಆಹ್ವಾನ ಆಗುತ್ತದೆ ನಿಜಕ್ಕೂ ಆ ದೃಶ್ಯವನ್ನು ನೋಡಿದ ವರು ಒಂದು ಕ್ಷಣ ಬೆಚ್ಚಿ ಬೀಳದೆ ಇರುವುದಿಲ್ಲ ಇನ್ಫ್ಯಾಕ್ಟ್ ಸಿನಿಮಾ ನೋಡಿ ಬಂದವರು ಅದೇ ಕೊನೆಯ 10 ನಿಮಿಷದ ಕ್ಲೈಮ್ಯಾಕ್ಸ್ ನ ಬಗ್ಗೆ ಆದರೆ ಸಿನಿಮಾ ಹೊರತುಪಡಿಸಿ ರಿಷಬ್ ಶೆಟ್ಟಿ ಮೈಮೇಲೆ ದೈವದ ಆಹ್ವಾನ ಆಗಿತ್ತಾ.

ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವದ ಪಾತ್ರವ ನ್ನು ಮಾಡುವುದಾಗಿ ಸ್ವತಹ ಪಂಜುರ್ಲಿ ದೈವದ ಮುಂದೆ ಕೇಳಿಕೊಂಡಿದ್ದರಂತೆ ರಿಷಬ್ ಶೆಟ್ಟಿ ಅವರು ಆಗ ಆಹ್ವಾನೆ ಯಾಗಿದ್ದ ದೈವ ತನ್ನ ಮುಖದ ಮೇಲೆ ಇದ್ದಂತಹ ಬಣ್ಣವನ್ನು ತೆಗೆದು ರಿಷಬ್ ಶೆಟ್ಟಿ ಅವರಿಗೆ ಹಚ್ಚಿ ಅಸ್ತು ಎಂದಿತ್ತಂತೆ ಅಲ್ಲದೆ ಸಿನಿಮಾ ಮಾಡುವ ಮುನ್ನ ರಿಷಬ್ ಶೆಟ್ಟಿ ಅವರು ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದರಂತೆ ರಿಷಬ್ ಶೆಟ್ಟಿ ಅವರು ನಟಿಸುವ ಮೊದಲು ಮಂಗಳೂರಿನ ಸುತ್ತಮುತ್ತ ಇರುವಂತಹ ದೈವ ನರ್ತಕರು ದ್ರುವರಾಧನೆ ಮಾಡುವಂತಹ ಹಿರಿಯರು ಮತ್ತು ಅವರ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಹೇಗೆ ನಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದರು ಯಾಕೆ ಎಂದರೆ ಒಂದು ಭಾಗದ ಜನರು ಮಾತ್ರ ಇದನ್ನು ಮಾಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *