ರಾಂಪ ಮಲ್ಲಕ್ಕ ದೈವದ ನರ್ತಕ ಇವರೆಲ್ಲಾ ನಿಜಕ್ಕೂ ಯಾರಯ ಗೊತ್ತಾ ? ಇಂತವರೆ ಬೇಕು ಅಂತ ಕಾಂತಾರಾಗೆ ಹೇಗೆ ಆಯ್ಕೆ ಮಾಡಿದ್ರು ನೋಡಿ. » Karnataka's Best News Portal

ರಾಂಪ ಮಲ್ಲಕ್ಕ ದೈವದ ನರ್ತಕ ಇವರೆಲ್ಲಾ ನಿಜಕ್ಕೂ ಯಾರಯ ಗೊತ್ತಾ ? ಇಂತವರೆ ಬೇಕು ಅಂತ ಕಾಂತಾರಾಗೆ ಹೇಗೆ ಆಯ್ಕೆ ಮಾಡಿದ್ರು ನೋಡಿ.

ಕಾಂತಾರ ಚಿತ್ರದಲ್ಲಿ ರಾಂಪ, ದೇವನರ್ತಕ, ಕಮಲಕ ನಿಜಕ್ಕೂ ಇವರೆಲ್ಲಾ ಯಾರು?ಒಂದು ಚಲನಚಿತ್ರವು ಯಶಸ್ವಿಯಾಗಿ ಪ್ರದರ್ಶಿಸಬೇಕು ಎಂದರೆ ಅದರಲ್ಲಿ ಇರುವಂತಹ ಕಥೆ, ನಿರ್ದೇಶನ ಹಾಗೂ ಪಾತ್ರಕ್ಕೆ ತಕ್ಕಂತೆ ನಟನೆಗಳು ಮುಖ್ಯವಾಗಿರುತ್ತದೆ, ನಮ್ಮ ಕನ್ನಡದ ಚಿತ್ರರಂಗವು ಸ್ಯಾಂಡಲ್ ವುಡ್ ಎಂದೆ ಪ್ರಸಿದ್ಧವಯಾಗಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡದ ಹಲವು ಚಿತ್ರಗಳು ವಿಶ್ವದಾದ್ಯಂತ ಸದ್ದು ಮಾಡಿವೆ ಈ ಪೈಕಿ ತುಳುನಾಡು ದೈವವನ್ನು ತೋರಿಸಿದ ಕಾಂತಾರ ಚಿತ್ರವು ವಿಶ್ವದಾದ್ಯಂತ ಹೆಸರು ಗಳಿಸಿದೆ ಹಾಗೂ ಪ್ರೇಕ್ಷಕರಿಗೆ ಸಂತೃಪ್ತಿಯನ್ನು ತಂದು ಹೊಸ ಹೆಸರುಗಳನ್ನು ಮಾಡಿದೆ. ಇಡೀ ಭಾರತಾದ್ಯಂತ ಎಲ್ಲರ ಬಾಯಲ್ಲಿ ಸಾಮಾನ್ಯವಾಗಿ ಹಾಗೂ ಹೆಚ್ಚಾಗಿ ಕೇಳುತ್ತಿರುವಂತಹ ಚಿತ್ರದ ಹೆಸರು ಕಾಂತರ. ಈ ಚಿತ್ರದ ಯಶಸ್ಸಿಗೆ ಕಾರಣ ಚಿತ್ರದ ಕಥೆಯು ಹಾಗೂ ಇದರಲ್ಲಿ ಬರುವಂತಹ ಪಾತ್ರಗಳ ಅಭಿನಯವು ಪ್ರೇಕ್ಷಕರನ್ನು ಹೆಚ್ಚು ಆಕರ್ಷಣೆ ಮಾಡಿದೆ ಹಾಗೆ ಇದರಲ್ಲಿ ಎಷ್ಟೋ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿದೆ.ಹಾಗೆ ಕಾಂತದಲ್ಲಿ ರಾಂಪ ಎನ್ನುವ ಪಾತ್ರವೂ ಪ್ರೇಕ್ಷಕರಿಗೆ ಬಹಳ ಹತ್ತಿರವಾಗಿದೆ. ರಾಂಪ ಪಾತ್ರವನ್ನು ಮಾಡಿರುವಂತಹ ನಮ್ಮ ರಂಗಭೂಮಿಯ ಕಲಾವಿದ ಪ್ರಕಾಶ್ ತುಂಬಿನಾಡು ಅವರು ಮೂಲತಹ ಕೇರಳ ರಾಜ್ಯದವರು.

WhatsApp Group Join Now
Telegram Group Join Now

ಓಂ ಶ್ರೀ ಸಾಯಿ ಶಕ್ತಿ ಜ್ಯೋತಿಷ್ಯ ಪೀಠಂ.ಪಂಡಿತ್ ಗಣೇಶ್ ರಾವ್ ಗುರೂಜಿ ನಿಮ್ಮ ಯಾವುದೇ ಕಠಿಣ ಸಮಸ್ಯೆ ಇರಲಿ,ಕೇರಳ ಕೊಳ್ಳೇಗಾಲ ಮತ್ತು ಆ ಗೋರಿ ನಾಗಸಧುಗಳು ರಹಸ್ಯ ಪೂಜಾಶಕ್ತಿಯಿಂದ 100% ಗ್ಯಾರಂಟಿ ಪರಿಹಾರ ಶತಸಿದ್ದ .ನೀವು ಇಷ್ಟ ಪಟ್ಟವರು ನಿಮ್ಮಂತೆ ಆಗಲು ವಿಶಿಷ್ಟ ಪದ್ಧತಿಯಿಂದ ಯಂತ್ರವನ್ನು ಮಾಡಿಕೊಡಲಾಗುತ್ತದೆ.ಕೇವಲ 2 ದಿನದಲ್ಲಿ ಪರಿಹಾರ ಕಲ್ಪಿಸುವರು 9036311107.

ಅವರು ಕೇರಳ ಹಾಗೂ ಕರ್ನಾಟಕದ ಬಾರ್ಡರ್ ನಲ್ಲಿರುವಂತಹ ತುಂಬಿನಾಡು ಎಂಬ ಹಳ್ಳಿಯವರಾಗಿದ್ದು, ಅವರು ರಿಕ್ಷಾ ಹೋಡಿಸಿಕೊಂಡು, ಕೂಲಿ ಮಾಡಿಕೊಂಡು ಕೊನೆಯಾಗಿ ಗಾರೆಕೆಲಸ ಮಾದುತ್ತಿದ್ದರು. ಇವರು ಸಿನಿಮಾಗು ಮುನ್ನ ನಾಟಕದಲ್ಲಿ ಅಭಿನಯ ಮಾಡುತ್ತಿದ್ದವರು,ಅವರು ರಾಜ್ ಬೀ ಶೆಟ್ಟಿ ರವರ ಒಂದು ಮೊಟ್ಟೆಯ ಕಥೆ, ಉಳಿದವರು ಕಂಡಂತೆ, ಗಾಳಿಪಟ 2 ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಂತಾರ ಚಿತ್ರದಲ್ಲಿ ಇವರ ಅಭಿನಯನವನ್ನು ನೋಡಿ ಪ್ರೇಕ್ಷಕರು ಮನಸೋತಿದ್ದಾರೆ. ಇನ್ನು ಎರಡನೆಯದಾಗಿ ರಾಜನ ಬಳಿ ಜಾಗ ಕೇಳುವ ದೇವನರ್ತಕನಾಗಿ ಪಾತ್ರವಹಿಸಿದ ನವೀನ್ ಬೋಂದಲ್ ರವರು ಅವರ ಅದ್ಭುತವಾದ ಕಣ್ಣಿನಿಂದ ಜನರಿಗೆ ಬಹಳ ಆಕರ್ಷಿತವಾಗಿದ್ದಾರೆ ಹಾಗೂ ಅವರ ಅದ್ಭುತವಾದ ನಟನೆಯು ಅವರಿಗೆ ಹೆಚ್ಚು ಜನಪ್ರಿಯವನ್ನಾಗಿ ಮಾಡಿದೆ ಇವರು ತುಳುನಾಡಿನ ನಾಟಕಗಳಲ್ಲಿ ಅಭಿನಯಿಸುತ್ತಿದ್ದು ಇವರ ಈ ಪಾತ್ರವು ಜನರ ಮೆಚ್ಚಿನ ಪಾತ್ರಗಳಲ್ಲಿ ಒಂದಾಗಿದೆ.

ಇನ್ನು ಕಾಂತಾರ ಚಿತ್ರದ ನಾಯಕನ ತಾಯಿಯಾಗಿ ಅಭಿನಯಿಸಿದ ಕಮಲಕ್ಕನ ಪಾತ್ರವೂ ಕೂಡ ಹೆಚ್ಚು ಜನಪ್ರಿಯವಾಗಿದೆ. ಒಂದು ಪುಟ್ಟ ಪ್ರಪಂಚದ ಒಳಗೆ ಇರುವಂತಹ ಮುಗ್ದ ಪಾತ್ರವಾಗಿದೆ. ಈ ಪಾತ್ರವನ್ನು ಮಾನಸಿ ಸುಧೀರ್ ಅವರು ತುಂಬಾ ಅಚ್ಚುಕಟ್ಟಾಗಿ ನಟನೆ ಮಾಡಿದ್ದಾರೆ ಮಾನಸಿ ಸುಧೀರ್ ರವರು ಮೂಲತಃ ಭರತನಾಟ್ಯ ಕಲಾವಿದೆ ಆಗಿದ್ದಾರೆ. ಈ ಹಿಂದೆ ಹಲವು ಸಿನಿಮಾಗಳಲ್ಲಿ ಹಾಗೂ ನಾಟಕಗಳಲ್ಲಿ ಅಭಿನಯಿಸಿದ್ದಾರೆ ಇವರ ಕೆಲವೊಂದು ಭಾವಗೀತೆಗಳು ಹಾಗೂ ಮಕ್ಕಳ ಹಾಡುಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿತ್ತು. ಈ ಮೂಲಕ ಕಾಂತಾರ ಚಿತ್ರದಲ್ಲಿ ಅಭಿನಯಸಲು ಅವಕಾಶವನ್ನು ಮಾನಸಿ ಸುಧೀರ್ ಅವರು ಗಿಟ್ಟಿಸಿಕೊಂಡ್ಡಿದ್ದಾರೆ.ಈ ಕೆಳಗಿನ ವಿಡಿಯೋ ನೋಡಿ.

[irp]


crossorigin="anonymous">