ನಮ್ಮವರೇ ದರ್ಶನ್ ಗೆ ಚಪ್ಪಲಿಯಲ್ಲಿ ಹೊಡೆಯಬಾರದಿತ್ತು ||
ಡಿಸೆಂಬರ್ 19 ನೇ ತಾರೀಖು ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಬಗ್ಗೆ ಪ್ರಚಾರ ಮಾಡುವಂತಹ ವೇಳೆ ಕಿಡಿಗೇಡಿಗಳು ನಟ ದರ್ಶನ್ ಅವರಿಗೆ ಚಪ್ಪಲಿ ಎಸೆದಂತಹ ಘಟನೆ ಬಳ್ಳಾರಿಯ ಹೊಸಪೇಟೆಯಲ್ಲಿ ನೆನ್ನೆ ನಡೆದಿದೆ ಈ ಒಂದು ವಿಚಾರ ಬಹಳಷ್ಟು ಸುದ್ದಿಯಾಗುತ್ತಿದ್ದು ದರ್ಶನ ಅಭಿಮಾನಿಗಳು ಇದಕ್ಕೆ ಹೆಚ್ಚಿನ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿ ಇರುವಂತಹ ನಟ ತೂಗುದೀಪ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ವಾದಂತಹ ಕ್ರಾಂತಿ ಸಿನಿಮಾದಲ್ಲಿ ಬರುವಂತಹ ಒಂದು ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡುವಂತಹ ಸಮಾರಂಭವನ್ನು ಆಯೋಜಿಸಿದ್ದರು ಕ್ರಾಂತಿ ಚಿತ್ರದ ಬೊಂಬೆ ಬೊಂಬೆ ಆಡಿಯೋ ಬಿಡುಗಡೆ ಸಮಾರಂಭ ವು ಹೊಸಪೇಟೆ ನಗರದ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ಸಂಜೆ ಈ ಒಂದು ಕಾರ್ಯಕ್ರಮ ನಡೆಯಿತು
ಈ ಒಂದು ಸಮಾರಂಭದಲ್ಲಿ ದರ್ಶನ್ ಅವರ ಅಭಿಮಾನಿಗಳು ಸಾವಿರ ಸಂಖ್ಯೆಯಲ್ಲಿ ಸೇರಿದ್ದರು ಈ ಒಂದು ಸಮಯದಲ್ಲಿ ಕಿಡಿಗೇಡಿಗಳು ದರ್ಶನ ಅವರು ಸ್ಟೇಜ್ ಮೇಲೆ ಇದ್ದಂತಹ ಸಮಯದಲ್ಲಿ ಅವರ ಮೇಲೆ ಚಪ್ಪಲಿಯನ್ನು ಎಸೆದು ದರ್ಶನ್ ಅವರಿಗೆ ಅವಮಾನ ವನ್ನು ಮಾಡಿದ್ದಾರೆ ಈ ಒಂದು ವಿಷಯ ಹೇಳುವು ದಕ್ಕೂ ಕೂಡ ಬೇಸರವಾಗುತ್ತಿರುವಂತಹ ಸಂಗತಿ ಯಾಗಿದೆ ಯಾರೇ ಆಗಲಿ ಆ ವ್ಯಕ್ತಿಯನ್ನು ಇಷ್ಟ ಇಲ್ಲ ಎಂದರೆ ಅವರನ್ನು ಇಷ್ಟಪಡಬಾರದು.
ಬದಲಿಗೆ ಅವರಿಗೆ ಅವಮಾನವಾಗುವಂತಹ ಅದರಲ್ಲೂ ಈ ರೀತಿ ಚಪ್ಪಲಿ ಎಸೆದು ಅವಮಾನ ಮಾಡುವಂತಹ ಕೆಲಸ ಯಾವತ್ತೂ ಯಾರು ಕೂಡ ಮಾಡಬಾರದು ಇಂತಹ ತಪ್ಪುಗಳನ್ನು ಮಾಡುವುದ ರಿಂದ ಯಾರು ಯಾರನ್ನು ಹಿಂದೆ ಹಾಕುವಂತಹ ಪರಿಸ್ಥಿತಿ ಬರುವುದಿಲ್ಲ ಬದಲಾಗಿ ಎಸೆದಂತಹ ವ್ಯಕ್ತಿ ತನಗೆ ಖುಷಿಯಿಂದ ನಾನು ಈ ರೀತಿ ಮಾಡಿದೆ ಎಂದು ಖುಷಿ ಪಡಬಹುದು ಹೊರತು.
ದರ್ಶನ್ ಅವರ ಯಶಸ್ಸು ಹಾಗೂ ಅವರ ಯಾವುದೇ ಒಂದು ಹೆಗ್ಗಳಿಕೆಯನ್ನು ಆ ವ್ಯಕ್ತಿ ಕಳೆಯಲು ಸಾಧ್ಯವಿಲ್ಲ ಹಾಗೂ ಈ ಒಂದು ಸಮಾರಂಭದಲ್ಲಿ ಕೆಲವೊಂದಷ್ಟು ಕಲ್ಲು ತೂರಾಟ ಆಗಿರುವುದರಿಂದ ಪೊಲೀಸರು ಲಘು ಲಾಟಿ ಪ್ರಹಾರವನ್ನು ಕೂಡ ನಡೆಸಿದ್ದಾರೆ ಈ ಒಂದು ಕಾರ್ಯಕ್ರಮದಲ್ಲಿ ದರ್ಶನ್ ಫೋಟೋ ಎಲ್ಲವನ್ನು ಕೂಡ ಕಿಡಿಗೇಡಿಗಳು ಹರಿದು ಹಾಕಿದ್ದಾರೆ.
ಇದರ ಬೆನ್ನಲ್ಲಿಯೇ ಮೂರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಆ ಮೂವರನ್ನು ವಿಚಾರಿಸುತ್ತಿದ್ದು ಈ ಒಂದು ಕೆಲಸವನ್ನು ಯಾರು ಮಾಡಿದ್ದಾರೋ ಅವರಿಗೆ ತಕ್ಕ ಶಿಕ್ಷೆಯನ್ನು ಕೊಡಲೇಬೇಕು ಎಂದು ದರ್ಶನ್ ಅಭಿ ಮಾನಿಗಳು ಎಲ್ಲಾ ಕಡೆ ಪ್ರಚಾರ ಮಾಡುತ್ತಿದ್ದಾರೆ ಹಾಗೂ ದರ್ಶನ್ ಅಭಿಮಾನಿಗಳು ಕ್ರಾಂತಿ ಸಿನಿಮಾ ವನ್ನು ನೋಡುವುದಕ್ಕಾಗಿ ಕಾದುಕೊಳ್ಳುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.