ಅಕ್ಷಯ ತೃತೀಯ ದಿನ ತಪ್ಪದೇ ಈ ವಸ್ತುಗಳನ್ನು ಮನೆಗೆ ತನ್ನಿ ಜೀವನಪೂರ್ತಿ ನೆಮ್ಮದಿ ಸಿಗುತ್ತೆ…….!!
ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬರಬಾರದು ಯಾವುದೇ ರೀತಿಯ ಕಷ್ಟಗಳು ಬರಬಾರದು ನಾವು ಕೂಡ ಎಲ್ಲರಂತೆ ನೆಮ್ಮದಿಯಾಗಿ ಜೀವನ ಸಾಗಿಸಬೇಕು ಎಂದು ಅಂದುಕೊಂಡಿರುತ್ತಾರೆ. ಆದರೆ ಅವರಿಗೆ ಒಂದಲ್ಲ ಒಂದು ವಿಧವಾಗಿ ಸಮಸ್ಯೆಗಳು ಎದುರಾಗುತ್ತಿರುತ್ತದೆ. ಎಷ್ಟೇ ರೀತಿಯ ಹಣಕಾಸು ಇದ್ದರೂ ಸಹ
ಅವರಿಗೆ ನೆಮ್ಮದಿ ಎನ್ನುವುದು ಇರುವುದಿಲ್ಲ. ಅದಕ್ಕಾಗಿ ಅವರು ಹಲವಾರು ವಿಧದ ಪೂಜೆಗಳನ್ನು ಮಾಡುತ್ತಾರೆ. ವ್ರತಗಳನ್ನು ಮಾಡು ತ್ತಾರೆ ಹೀಗೆ ಎಲ್ಲಾ ದೇವರಿಗೆ ಹರಕೆಯ ಹೊತ್ತು ಪೂಜೆಯನ್ನು ಸಹ ಅರ್ಪಿಸುತ್ತಿರುತ್ತಾರೆ. ಆದರೆ ಅವರು ಎಷ್ಟೇ ಪೂಜೆ ವಿಧಿ ವಿಧಾನ ನಡೆಸಿದರು ಕೂಡ ಅವರಿಗೆ ಅವರ ಜೀವನದಲ್ಲಿ ನೆಮ್ಮದಿ ಎನ್ನುವುದು ಸಿಗುವುದಿಲ್ಲ.
ಆದರೆ ಈ ದಿನ ನಾವು ಹೇಳುವಂತಹ ಈ ಒಂದು ಪದಾರ್ಥಗಳನ್ನು ನೀವು ಈ ವರ್ಷದಲ್ಲಿ ಬರುತ್ತಿರುವಂತಹ ಅಕ್ಷಯ ತೃತೀಯದ ದಿನ ತಂದರೆ ನಿಮಗೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಗಳು ಉಂಟಾಗುವುದಿಲ್ಲ ನಿಮ್ಮ ಮನೆಯಲ್ಲಿ ಸದಾ ಕಾಲ ನೆಮ್ಮದಿ ಶಾಂತಿ ನೆಲೆಸಿರುತ್ತದೆ. ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಕೂಡ ಬರುವುದಿಲ್ಲ. ಹಾಗಾದರೆ ಆ ವಸ್ತುಗಳು ಯಾವುದು? ಹಾಗೂ ಅವುಗಳನ್ನು ಯಾವ ಸಮಯದಲ್ಲಿ ತರಬೇಕು?
ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಈ ದಿನ ತಿಳಿಯೋಣ. ಮೊದಲನೆಯದಾಗಿ ಈ ಒಂದು ದಿನ ಬಹಳ ವಿಶೇಷ ವಾದಂತಹ ದಿನವಾಗಿದ್ದು ಹವಳದಿಂದ ತಯಾರಿಸಿದ ಆಭರಣಗಳನ್ನು ತೆಗೆದುಕೊಂಡು ಬರುವುದರಿಂದ ನಿಮಗೆ ತುಂಬಾ ಒಳ್ಳೆಯದು. ಜೊತೆಗೆ ಮುತ್ತಿನಿಂದ ತಯಾರಿಸಿದ ಆಭರಣಗಳನ್ನು ಕೂಡ ಖರೀದಿ ಮಾಡುವುದರಿಂದ ಅದು ಕೂಡ ನಿಮಗೆ ಶುಭವನ್ನು ತಂದುಕೊಡುತ್ತದೆ.
ಹಾಗೂ ಚಿನ್ನದ ಆಭರಣಗಳಾಗಿರಬಹುದು ಅಥವಾ ಚಿನ್ನದ ನಾಣ್ಯ ವಾಗಿರಬಹುದು ನಿಮಗೆ ಎಷ್ಟು ಸಾಧ್ಯವೊ ಅಷ್ಟು ಖರೀದಿ ಮಾಡಿದರೆ ನಿಮಗೆ ಬಹಳ ಅದ್ಭುತವಾದಂತಹ ಶುಭವಾಗುತ್ತದೆ. ಎಲ್ಲರೂ ಕೂಡ ಹೆಚ್ಚಿನ ಬೆಲೆಬಾಳುವಂತಹ ಆಭರಣಗಳನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ಅಂತವರು ಬೆಳ್ಳಿಯ ಆಭರಣಗಳನ್ನು ಅಂದರೆ ಅದರಲ್ಲೂ ವಿಶೇಷವಾಗಿ ಗೆಜ್ಜೆಯನ್ನು ಈ ದಿನ ಖರೀದಿ ಮಾಡುವುದು ತುಂಬಾ ಒಳ್ಳೆಯದು ಇದು ಕೂಡ ನಿಮಗೆ ಒಳ್ಳೆಯ ಶುಭವನ್ನು ತಂದುಕೊಡುತ್ತದೆ.
ಜೊತೆಗೆ ನೀವು ಅಕ್ಷಯ ತೃತೀಯದ ದಿನ ತಾಮ್ರದ ತಂಬಿಗೆಯನ್ನು ತಂದು ಅದನ್ನು ಬೇರೆಯವರಿಗೆ ದಾನ ಕೊಡುವುದರಿಂದ ನಿಮಗೆ ಒಳ್ಳೆಯ ಶುಭವನ್ನು ತಂದುಕೊಡುತ್ತದೆ ಎಂದೇ ಹೇಳಬಹುದು. ಹೀಗೆ ಮೇಲೆ ಹೇಳಿದಂತಹ ಯಾವುದಾದರೂ ಒಂದನ್ನು ನೀವು ಖರೀದಿ ಮಾಡಿದರು ಸಹ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಗಳು ಕೂಡ ಬರುವುದಿಲ್ಲ. ನೆಮ್ಮದಿ ಎನ್ನುವುದು ಹೆಚ್ಚಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.