400 ವರ್ಷಗಳ ಬಳಿಕ ಹನುಮಂತನ ಗುಡಿಯ ನೆಲಮಾಳಿಗೆ ತೆಗೆದಾಗ ಭಾರತವನ್ನೇ ಚಕಿತಗೊಳಿಸಿದಂತಹ ವಿಚಿತ್ರ ಘಟನೆ…….!!
ಆಂಜನೇಯ ಹನುಮಂತ ವಾಯುಪುತ್ರ ರಾಮಾಯಣದ ಚಿತ್ರವನ್ನೇ ಬದಲಾಯಿಸಿದಂತಹ ಹನುಮಂತ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ರಾಮಾಯಣದಲ್ಲಿ ನಾವು ರಾಮನನ್ನು ಹೀರೋ ಎಂದು ಪರಿಗಣಿಸು ತ್ತೇವೆ. ಆದರೆ ರಾಮಾಯಣದ ಅಸಲಿ ಹೀರೋ ಹನುಮಂತ ಎಂದರು ತಪ್ಪಾಗುವುದಿಲ್ಲ. ರಾಮಾಯಣದಲ್ಲಿ ರಾಮನಿಗೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ಹನುಮಂತನಿಗೆ ಸಹ ಇದೆ.
ಅಂದ ಹಾಗೆ ಈಗ ನಾವು ಹೇಳಲು ಹೊರಟಿರುವಂತಹ ಕಥೆ ಹರೀಶ್ ಎಂಬ ರಾಮ ಭಕ್ತನಿಂದ ಶುರುವಾಗುತ್ತದೆ. ಹರೀಶ್ ತಮ್ಮ ಬಾಲ್ಯವನ್ನು ರಾಮಾಯಣ ಹಾಗೂ ಸುಂದರಕಾಂಡದ ಪಾಠಗಳನ್ನು ಕೇಳುವುದರ ಮೂಲಕ ಕಳೆಯುತ್ತಾರೆ. ಬಾಲ್ಯದಿಂದಲೇ ರಾಮ ಎಂದರೆ ಅಪಾರವಾದ ಭಕ್ತಿ ಇತ್ತು. ಚಿಕ್ಕಂದಿನಿಂದಲೇ ರಾಮನನ್ನು ಆರಾಧ್ಯ ದೈವ ಎಂದು ಪೂಜಿಸಿಕೊಂಡು ಬಂದಂತವರು ಹರೀಶ್.
ದೇವರ ಮೇಲೆ ಅಪಾರ ಭಕ್ತಿ ಇರುವುದರಿಂದಲೇ ಹರೀಶ್ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು. ಎಷ್ಟೇ ಬ್ಯುಸಿ ಇದ್ದರೂ ದೇವರ ಭಕ್ತಿಗೇನು ಆತ ಕಡಿಮೆ ಮಾಡುತ್ತಿರಲಿಲ್ಲ. ಹೀಗಿರುವಾಗ ಒಮ್ಮೆ ರಾಮ ಜನ್ಮಭೂಮಿ ಅಯೋಧ್ಯೆ ದರ್ಶನವನ್ನು ಮಾಡಲು ಅಯೋಧ್ಯೆಗೆ ಹೋಗಿದ್ದರು ಹರೀಶ್. ಅಯೋಧ್ಯೆಗೆ ಬಂದಾಗ ಹರೀಶ್ ಗೆ ಅದೇನೋ ಧನ್ಯತಾ ಭಾವ ಮೂಡುತ್ತಿತ್ತು. ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣವಾಗುತ್ತಿರುವುದನ್ನು ನೋಡಿದ ಆತನ ಖುಷಿಗೆ ಪಾರವೇ ಇರಲಿಲ್ಲ.
ಅಯೋಧ್ಯೆಯಲ್ಲಿ ನಡೆಯುತ್ತಿರುವಂತಹ ಎಲ್ಲಾ ಕೆಲಸಗಳನ್ನು ಕೂಡ ಅವರು ನೋಡುತ್ತಾರೆ. ರಾಮನ ವಿಗ್ರಹ ಕೆತ್ತಲು ಬಂದಿದ್ದ ಸಾಲಿಗ್ರಾಮ ಕಲ್ಲನ್ನು ಸಹ ಹರೀಶ್ ನೋಡುತ್ತಾರೆ. ಅಯೋಧ್ಯೆಯಲ್ಲಿ ಏನೆಲ್ಲ ಆಗುತ್ತಿದೆ ಎಂದು ನೋಡಿದಂತಹ ಹರೀಶ್ ಪೂಜೆ ಪುನಸ್ಕಾರ ಎಲ್ಲವನ್ನು ಮಾಡಿ ಅಲ್ಲಿಂದ ಹೋಗಲು ಮುಂದಾಗುತ್ತಾರೆ. ಹರೀಶ್ ಎಷ್ಟು ರಾಮಭಕ್ತರಾಗಿದ್ದರೋ ಅಷ್ಟೇ ಹನುಮ ಭಕ್ತರು ಸಹ ಹೌದು.
ಹನುಮಂತನ ದರ್ಶನ ಮಾಡದೆ ಹೋದರೆ ಅವರಿಗೆ ಸಮಾಧಾನವೇ ಇರುವುದಿಲ್ಲ. ಹೀಗಾಗಿ ಅಯೋಧ್ಯೆಯಿಂದ ನೇರವಾಗಿ ಬಾಲ ಹನುಮನ ದರ್ಶನಕ್ಕೆ ಹೋಗುತ್ತಾರೆ. ಹನುಮಂತ ರಾಮನ ಭಂಟ ರಾಮನ ಕೃಪೆಗೆ ಪಾತ್ರರಾಗಬೇಕು ಎಂದರೆ ರಾಮನ ದರ್ಶನ ಮುಗಿದ ನಂತರ ಹನುಮನ ದರ್ಶನ ಮಾಡಿದರೆ ಮಾತ್ರ ಅದು ಸಂಪೂರ್ಣ ವಾಗುವುದು. ಅಯೋಧ್ಯೆಯ ಪಕ್ಕದಲ್ಲಿಯೇ ಬಾಲ ಹನುಮನ ಮಂದಿರ ಇದೆ.
ಇದನ್ನು ರಾವಣನನ್ನು ವಧಿಸಿ ಅಯೋಧ್ಯೆಗೆ ಬಂದಾಗ ಪ್ರಭು ಶ್ರೀ ರಾಮನೇ ಕಟ್ಟಿಸಿದ್ದ ಎನ್ನುವ ನಂಬಿಕೆ ಇದೆ. ಕಟ್ಟುವಾಗ ಇದನ್ನು ದೇವಸ್ಥಾನ ಎಂದು ಕಟ್ಟದೆ ಹನುಮಂತ ವಾಸಮಾಡಲು ಒಂದು ಮನೆ ಇರಲಿ ಎಂದು ರಾಮ ಕಟ್ಟಿಸಿದ್ದ ಎನ್ನುವ ಪ್ರತೀತಿ ಇದೆ. ಅದನ್ನೇ ಮುಂದೆ ದೇವಾಲಯ ಅಂತ ಭಕ್ತರು ಪೂಜಿಸುತ್ತಾ ಬಂದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.