ಕನ್ನಡದ ಕಲಾವಿದರು ಮರಣ ಹೊಂದಿದ ಮೇಲೆ ಬಿಡುಗಡೆಯಾದ ಸಿನಿಮಾಗಳು ಯಾವುವು ಗೊತ್ತಾ ?

ಕಲಾವಿದರು ಮರಣ ಹೊಂದಿದ ಮೇಲೆ ಬಿಡುಗಡೆಯಾದ ಸಿನಿಮಾಗಳು ಯಾವುವು……..||

WhatsApp Group Join Now
Telegram Group Join Now

ನಮ್ಮ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಸಾಕಷ್ಟು ಕಲಾವಿದರು ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಿರುವಾಗಲೇ ಮರಣ ಹೊಂದಿದ್ದು ಅಂತಹ ಕಲಾವಿದರು ಮರಣ ಹೊಂದಿದ ಮೇಲೆ ಸಾಕಷ್ಟು ಸಿನಿಮಾ ಗಳು ಬಿಡುಗಡೆಯಾಗಿದ್ದು. ಹಾಗಾದರೆ ಈ ದಿನ ನಮ್ಮ ಸ್ಯಾಂಡಲ್ ವುಡ್ ಕಲಾವಿದರು ಮರಣ ಹೊಂದಿದ ಮೇಲೆ ಬಿಡುಗಡೆಯಾದ ಸಿನಿಮಾಗಳು ಯಾವುವು?

ಮತ್ತು ಅವರು ನಟಿಸಿದಂತಹ ಕೊನೆಯ ಸಿನಿಮಾ ಯಾವುದು? ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ. ಟೈಗರ್ ಪ್ರಭಾಕರ್ ಇವರು ಮಾರ್ಚ್ 25 2001 ರಂದು ಮರಣ ಹೊಂದಿದರು ಇವರ ಮರಣದ 6 ತಿಂಗಳ ನಂತರ ಮೈಸೂರು ಹುಲಿ ಎಂಬ ಚಿತ್ರ ಬಿಡುಗಡೆ ಆಯಿತು. ಇದಾಗ 4 ವರ್ಷದ ನಂತರ ರಿಯಲ್ ರೌಡಿ, ಗುಡ್ ಬ್ಯಾಡ್ ಆಗ್ಲಿ ಸಿನಿಮಾಗಳು ಬಿಡುಗಡೆಯಾದವು.

ಅಂಬರೀಶ್, ರೆಬಲ್ ಸ್ಟಾರ್ ಅಂಬರೀಶ್ ಅವರು ನವೆಂಬರ್ 24 2018ರಂದು ಮರಣ ಹೊಂದಿದರು. ಇವರ ಮರಣದ 9 ತಿಂಗಳ ನಂತರ ಆಗಸ್ಟ್ 9 2019 ರಂದು ಕುರುಕ್ಷೇತ್ರ ಸಿನಿಮಾ ಬಿಡುಗಡೆ ಯಾಯಿತು. ಕಾಶಿನಾಥ್, ಕಾಶಿನಾಥ್ ಅವರು ಜನವರಿ 18 2018 ರಂದು ಮರಣ ಹೊಂದಿದರು. ಇವರ ಮರಣದ 4 ತಿಂಗಳ ನಂತರ ಇವರು ಅಭಿನಯಿಸಿದ ಓಳ್ ಮುನಿಸ್ವಾಮಿ ಸಿನಿಮಾ ಮೇ 25 2018 ರಂದು ರಿಲೀಸ್ ಆಯಿತು.

ಬುಲೆಟ್ ಪ್ರಕಾಶ್ ಅವರು ಏಪ್ರಿಲ್ 6, 2020 ರಂದು ಮರಣ ಹೊಂದಿದರು. ಇವರ ಮರಣದ 1 ವರ್ಷದ ನಂತರ ಪೊಗರು ಸಿನಿಮಾ ಇನ್ನೆರಡು ವರ್ಷದ ನಂತರ ಗಾಳಿಪಟ 2 ಸಿನಿಮಾ ಬಿಡುಗಡೆಯಾಯಿತು. ಧೀರೇಂದ್ರ ಗೋಪಾಲ್ ಅವರು ಡಿಸೆಂಬರ್ 25 2000 ರಂದು ಮರಣ ಹೊಂದಿದರು. ಇವರ ಮರಣದ 4 ತಿಂಗಳ ನಂತರ

ಏಪ್ರಿಲ್ 1 2001 ರಂದು ಅಂಜಲಿ ಗೀತಾಂಜಲಿ ಸಿನಿಮಾ ಬಿಡುಗಡೆ ಆಯಿತು. ಸೌಂದರ್ಯ ಅವರು ಏಪ್ರಿಲ್ 17 2004 ರಂದು ಮರಣ ಹೊಂದಿದರು. ಇವರ ಮರಣದ 4 ತಿಂಗಳ ನಂತರ ತೆಲುಗಿನಲ್ಲಿ ಶಿವಶಂಕರ್ ಹಾಗೂ ಕನ್ನಡದಲ್ಲಿ ಆಪ್ತಮಿತ್ರ ಸಿನಿಮಾಗಳು ಆಗಸ್ಟ್ 2004ರಲ್ಲಿ ಬಿಡುಗಡೆಯಾದವು. ಇನ್ನು ಇವರ ಮರಣದ 4 ವರ್ಷದ ನಂತರ

ನವಶಕ್ತಿ ವೈಭವ ಸಿನಿಮಾದಲ್ಲಿ ಇವರ ಫೋಟೆಜ್ ಅನ್ನು ಬಳಸಿ ಸಿನಿಮಾವನ್ನು ತಯಾರಿಸಲಾಯಿತು. ಶಂಕರ್ ನಾಗ್ ಕರಾಟೆ ಕಿಂಗ್ ಶಂಕರ್ ನಾಗ್ ಅವರು ಸೆಪ್ಟೆಂಬರ್ 30 1990 ರಂದು ಮರಣ ಹೊಂದಿದರು. ಇವರ ಮರಣದ 2 ತಿಂಗಳ ನಂತರ ನಿಗೂಢ ರಹಸ್ಯ ಸಿನಿಮಾ ಬಿಡುಗಡೆಯಾಗಿದ್ದು 1992ರಲ್ಲಿ ಸುಂದರಕಾಂಡ, ಪ್ರಾಣ ಸ್ನೇಹಿತ ಸಿನಿಮಾ ಬಿಡುಗಡೆಯಾದವು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]