ಪಾರ್ಲಿಮೆಂಟ್ ಭದ್ರತಾ ಲೋಪ..ಪಾಸ್ ಕೊಟ್ಟಿದ್ದು ಮೈಸೂರು ಸಂಸದ ಪ್ರತಾಪ್ ಸಿಂಹ‌.

ಭಾರತದ ಸಂಸತ್ತಿನ ಮೇಲೆ ದಾಳಿ ನಡೆದು ಇವತ್ತಿಗೆ ಕರೆಕ್ಟಾಗಿ 22 ವರ್ಷ ಕಳೆದು ಹೋಗಿವೆ. ಪ್ರತಿ ವರ್ಷ ಡಿಸೆಂಬರ್ ಹದಿಮೂರನೇ ತಾರೀಖು ಭಾರತದ ಸಂಸತ್ತು ಅವತ್ತಿನ ಭಯಾನಕ ದಾಳಿಯ ನೆನಪು ಮಾಡಿಕೊಡುತ್ತೆ. ಅವತ್ತು ಸಂಸದನ ಆ ದೇಶದ ಗೌರವವನ್ನು ಕಾಪಾಡೋಣ ಆಲ್ಲಿ ಹುತಾತ್ಮರಾದ ಯೋಧರನ್ನ ನೆನಪು ಮಾಡಿಕೊಂಡು ಅವರಿಗೆ ಸಂತಾಪ ಸೂಚಿಸಿ ಶ್ರದ್ಧಾಂಜಲಿಯನ್ನ ಅರ್ಪಿಸುವ ಕೆಲಸವನ್ನ ಮಾಡುತ್ತೆ. ಇವತ್ತು ಕೂಡ ಬೆಳ್ಳಂ ಬೆಳಗ್ಗೆ ಸಂಸತ್ ಅಧಿವೇಶನ ಆರಂಭಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಎರಡು ಸದನಗಳ ಸ್ಪೀಕರುಗಳು ಎರಡೂ ಸದನಗಳು ಅಂದ್ರೆ ರಾಜ್ಯಸಭೆ ಹಾಗೂ ಲೋಕಸಭೆಗಳ ಸ್ಪೀಕರ್ ಪ್ರತಿಪಕ್ಷ ನಾಯಕರು ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಹೀಗೆ ಸಾಕಷ್ಟು ಗಣ್ಯರು 22 ವರ್ಷಗಳ ಹಿಂದಿನ ಪಾರ್ಲಿಮೆಂಟ್ ಮೇಲಿನ ದಾಳಿಗೆ ಸಂತಾಪ ಸೂಚಿಸಿದರು.

WhatsApp Group Join Now
Telegram Group Join Now

ಹುತಾತ್ಮರ ನೆನಪು ಮಾಡಿಕೊಂಡು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಯಥಾ ಪ್ರಕಾರ ಸದನ ಆರಂಭ ಆಯ್ತು. ಸಾಕಷ್ಟು ಬಿಲ್‌ಗಳ ಮೇಲೆ ಚರ್ಚೆ ನಡೆಯಬೇಕಿತ್ತು. ಒಂದಷ್ಟು ಸಂಸದರು ಮಾತಾಡ್ತಾ ಇದ್ರು. ಸ್ಪೀಕರ್ ಸ್ಥಾನದಲ್ಲಿ ಸಂಸದ ರಾಜೇಂದ್ರ ಅಗರ್‌ವಾಲ್ ಅವರು ಕೂತಿದ್ದರು. ಸದನದಲ್ಲಿ ಸದಸ್ಯರ ಸಂಖ್ಯೆ ಕೂಡ ತುಂಬಾ ಕಡಿಮೆ ಇತ್ತು. ಸಚಿವ ಹರ್ದೀಪ್ ಸಿಂಗ್ ಪುರಿ ಇದ್ರು ಅನು ಪ್ರಿಯ ಪಟೇಲ್ ಇದ್ದರು. ಪ್ರತಿಪಕ್ಷಗಳ ಸಾಲಿನಲ್ಲಿ ರಾಹುಲ್ ಗಾಂಧಿ ಇದ್ರು ಅಧೀರ್ ರಂಜನ್ ಚೌಧುರಿ ಇದ್ರು. ಇನ್ನು ಹಾಗೆ ಆಡಳಿತ ಹಾಗೂ ಪ್ರತಿಪಕ್ಷಗಳ ಸಾಕಷ್ಟು ಸದಸ್ಯರ ಕುರ್ಚಿಗಳು ಖಾಲಿ ಕೊಡಲಾಯಿತು. ಆಗ ಇದ್ದಕ್ಕಿದ್ದ ಹಾಗೆ ಸದನದಲ್ಲಿ ಗದ್ದಲ ಶುರುವಾಯಿತು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಯುವಕರು ತಾನಾ ಶಾಹಿ ನಹಿ ಚಲೇಗಾ ಅನ್ನೋ ಘೋಷಣಗಳನ್ನು ಕೂಗಕ್ಕೆ ಶುರು ಮಾಡಿದ್ರು. ಜೊತೆಗೆ ಸಂಸದರು ಕೂತ್ಕೊಳ್ಳೋ ಜಾಗಕ್ಕೆ 23 ಟಿಯರ್ ಗ್ಯಾಸ್ ಕಟ್ಟರ್ಗಳನ್ನು ಹಾಗೆ ಆಗಂತಕರ ಪೈಕಿ ಒಬ್ಬ ಗ್ಯಾಲರಿಯಿಂದ ಸಭಾಂಗಣಕ್ಕೆ ನುಗ್ಗಿದ ಕುರ್ಚಿಗಳು ಟೇಬಲ್‌ಗಳ ಮೇಲೆ ಹಾರಾಟ ಸಭಾಧ್ಯಕ್ಷರ ಪೀಠದ ಸಮೀಪಕ್ಕೆ ಹೋಗುವ ಪ್ರಯತ್ನ ಮಾಡಿದ ಅಷ್ಟರಲ್ಲಿ ಸಂಸದರ ಇಬ್ಬರು ಯುವಕರನ್ನು ಸುತ್ತವರಿದು ಅವರನ್ನ ಹಿಡಿದು ಭದ್ರತಾ ಪಡೆಗಳಿಗೆ ಒಪ್ಪಿಸುವ ಕೆಲಸವನ್ನು ಮಾಡಿದರು.

See also  ಮೋದಿ ಸರ್ಕಾರದಿಂದ ಸಿಗುತ್ತೆ ಉಚಿತ ಮೂರು ಸಾವಿರ ಹಣ..ಗೃಹಲಕ್ಷ್ಮಿ ಹಣ ಏನಾಗುತ್ತೆ ನೋಡಿ

ಇದೆಲ್ಲ ನಡೆದಾಗ ಸಮಯ ಮಧ್ಯಾಹ್ನ 1:00 ಆಗಿತ್ತು. ಎರಡು ಗಂಟೆಗಳವರೆಗೆ ಸದನವನ್ನು ಮುಂದೂಡಲಾಯಿತು. ಆ ನಂತರ ಸ್ಪೀಕರ್ ಓಂ ಬಿರ್ಲಾ ಈ ಘಟನೆಯ ಬಗ್ಗೆ ಒಂದಷ್ಟು ಮಾಹಿತಿಯನ್ನು ಸದನಕ್ಕೆ ಕೊಟ್ಟರು. ಇಬ್ಬರು ಆಗಂತುಕರು 20 ವರ್ಷದ ಆಸುಪಾಸಿನ ಯುವಕರು ಸಾಧಾರಣವಾದ ಸ್ಮಾರಕ ಟ್ರಸ್ಟ್ ಗಳನ್ನು ಬಳಸಿದರೆ ಅದರಲ್ಲಿ ಯಾವ ಅಪಾಯಕಾರಿ ಅಂಶಗಳು ಇಲ್ಲ. ಈ ಬಗ್ಗೆ ತನಿಖೆ ನಡೀತಾ ಇದೆ. ಆ ನಂತರ ಹೆಚ್ಚಿನ ಮಾಹಿತಿಯನ್ನ ನಿಮಗೆ ಕೊಡ್ತೀನಿ ಅಂತ ಸ್ಪೀಕರ್ ಓಂ ಬಿರ್ಲಾ ಹೇಳಿದರು. ಅಧಿರ್ ರಂಜನ್ ಚೌಧರಿ ಸೇರಿದಂತೆ ಸಾಕಷ್ಟು ಸಂಸದರು ಭದ್ರತಾ ಲೋಪದ ಬಗ್ಗೆ ಮಾತಾಡ ತೊಡಗಿದಾಗ ಆ ಬಗ್ಗೆ ನಿಮ್ಮ ಜೊತೆ ನಾನು ಆಮೇಲೆ ಮಾತಾಡ್ತೀನಿ. ಸಮಸ್ಯೆಗಳನ್ನು ಬಗೆಹರಿಸೋಣ ಅಂತ ಹೇಳಿದ ಸ್ಪೀಕರ್ ಸದನದ ಇನ್ನುಳಿದ ಕಲಾಪಗಳನ್ನು ಕೈಗೆತ್ತಿಕೊಂಡು ಅದಾದ ಕೆಲವೇ ನಿಮಿಷಗಳ ನಂತರ ಈ ದಾಳಿ ಮತ್ತು ದಾಳಿಕೋರರ ಬಗ್ಗೆ ಒಂದಷ್ಟು ಬಿಡಿ ಬಿಡಿ ಮತ್ತು ಅಸ್ಪಷ್ಟ ಮಾಹಿತಿಗಳು ಹೊರ ಬರೋದಕ್ಕೆ ಶುರುವಾಗಿದೆ. ಅದರ ಬಗ್ಗೆ ಹೇಳಿದಕ್ಕೆ ಮೊದಲು ಇವತ್ತಿಗೆ ಕರೆಕ್ಟಾಗಿ 22 ವರ್ಷಗಳ ಹಿಂದೆ ಏನಾಗಿತ್ತು ಅನ್ನೋದನ್ನ ಹೇಳ್ತೀನಿ.ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">