ಡಿವಿಎಸ್ ಕಣ್ಣೀರಿನ ಕಥೆ..ಸದಾನಂದ ಗೌಡ ಲೈಫ್ ಸ್ಟೋರಿ.ಮಗ ಸಾವನ್ನಪ್ಪಿದ್ದು ಹೇಗೆ ? ಆಸ್ತಿ ಎಷ್ಟು..ನೋಡಿ

ಸದಾನಂದ ಗೌಡ ಓದಿದ್ದೆಷ್ಟು ಪತ್ನಿ ಯಾರು ?

WhatsApp Group Join Now
Telegram Group Join Now

ಮಾಜಿ ಸಿಎಂ ಡಿವಿ. ಸದಾನಂದ ಗೌಡರ ಕತೆ ನಿಮಗೆ ಗೊತ್ತಾ? ಇವರು ಬೆಳೆದು ಬಂದ ಹಾದಿ ಹೇಗಿದೆ? ಓದಿರುವುದು ಎಷ್ಟು ರಾಜಕೀಯಕ್ಕೆ ಬಂದಿದ್ದು ಹೇಗೆ, ಯಾವೆಲ್ಲಾ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಇವರ ಮಗ ಸಾವನ್ನಪ್ಪಿದ್ದು ಹೇಗೆ? ಸದಾನಂದಗೌಡ ಎಷ್ಟು ಆಸ್ತಿ ಮಾಡಿದ್ದಾರೆ. ಎಲ್ಲವನ್ನು ಈ ಲೇಖನದಲ್ಲಿ ಹೇಳ್ತೀವಿ. 1953 ರ ಮಾರ್ಚ್ 18 ರಂದು ಜನನ. ದೇವರಗುಂಡ, ವೆಂಕಪ್ಪ ಸದಾನಂದ ಗೌಡ ಇವರು 1000 ಒಂಭೈನೂರ ಐವತ್ತಮೂರರ, ಮಾರ್ಚ್ ಹದಿನೆಂಟರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮಂಡೆಕೋಲು ಗ್ರಾಮದಲ್ಲಿ ಜನಿಸಿದರು.

ತಂದೆ ವೆಂಕಪ್ಪ ಗೌಡ, ತಾಯಿ ಕಮಲಾ ತುಳು ಭಾಷಿಕ ಕುಟುಂಬ ಇವರದಾಗಿತ್ತು. ಹುಟ್ಟೂರಿನಲ್ಲಿ ಆರಂಭಿಕ ಶಿಕ್ಷಣ ಪಡೆದ ಸದಾನಂದಗೌಡ, ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ವಿಜ್ಞಾನ ವಿಚಾರದಲ್ಲಿ ಪದವಿ ಪಡೆದುಕೊಂಡರು. ನಂತರದಲ್ಲಿ ಉಡುಪಿಯ ವೈಕುಂಠ ಬಾಳಿಗ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದುಕೊಂಡರು.

ಆಗಲೇ ಸ್ಟೂಡೆಂಟ್ ಪಾಲಿಟಿಕ್ಸ್ ನಲ್ಲಿ ಆಕ್ಟಿವ್ ಆಗಿದ್ದ ಗೌಡ್ರು ಸ್ಟೂಡೆಂಟ್ ಯೂನಿಯನ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇದರ ಜೊತೆಗೆ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಕಯಲ್ಲಿ ಗುರುತಿಸಿಕೊಂಡಿದ್ದ ಇವರು ಸಂಘಟನೆಯ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. ಲಾಯರ್ ಆಗಿ ವೃತ್ತಿ ಜೀವನ ಶುರು ಕಾನೂನು ಪದವಿ ಪಡೆದುಕೊಂಡ ಸದಾನಂದ ಗೌಡರು 1976 ರಲ್ಲಿ ಸುಳ್ಯ ಮತ್ತು ಪುತ್ತೂರಿನಲ್ಲಿ ಲೈಟ್ ಶುರು ಮಾಡಿದ್ರು.

See also  ಮೋದಿ ಸರ್ಕಾರದಿಂದ ಸಿಗುತ್ತೆ ಉಚಿತ ಮೂರು ಸಾವಿರ ಹಣ..ಗೃಹಲಕ್ಷ್ಮಿ ಹಣ ಏನಾಗುತ್ತೆ ನೋಡಿ

ನಂತರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕೆಲಸ ಮಾಡಿದ್ರು. ಆದ್ರೆ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದ ಸದಾನಂದ ಗೌಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ಮೇಲೆ ಕೋ ಆಪರೇಟಿವ್ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಸಹಕಾರಿ ಬ್ಯಾಂಕ್ ಮತ್ತು ಸೊಸೈಟಿಗಳಲ್ಲಿ ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ. ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಆರೆಸ್ಸೆಸ್ ನ ಕಾರ್ಮಿಕ ಸಂಘಟನೆ ಆಗಿದ್ದ ಭಾರತೀಯ ಮಜ್ದೂರ್ ಸಂಘದ ಪುತ್ತೂರು ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ,

ಕಾರ್ಮಿಕ ಚಳುವಳಿಯಲ್ಲೂ ಭಾಗಿಯಾದರು. ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಹೇಗೆ? ಸದಾನಂದಗೌಡರು ಜನ ಸಂಘದ ಸದಸ್ಯರಾಗಿ ರಾಜಕೀಯ ಶುರು ಮಾಡಿದ್ರು. ಪಕ್ಷದ ಸುಳ್ಯ ವಿಭಾಗದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಜನಸಂಘ ಜನತಾ ಪಕ್ಷದಲ್ಲಿ ವಿಲೀನವಾಗಿ ನಂತರ ಬಿಜೆಪಿ ಹುಟ್ಟಿಕೊಳ್ತು ಆಗ ಡಿವಿಎಸ್ ಕೂಡ ಬಿಜೆಪಿಯ ಸದಸ್ಯರಾದರು. ನಂತರ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿ ಮತ್ತು ಯುವಮೋರ್ಚಾದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಹೀಗೆ ಸದಾನಂದ ಗೌಡರು, ಫುಲ್‌ಟೈಮ್ ರಾಜಕಾರಣಿಯಾದರು.

ಗೆದ್ದ ಚುನಾವಣೆಗಳ ಎಷ್ಟು ಪಡೆದ ಹುದ್ದೆಗಳ ಏನು? ಸದಾನಂದ ಗೌಡರು 1994 ಮತ್ತು 1999 ರಲ್ಲಿ ಪುತ್ತೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ವಿನಾದರು. ಎರಡನೇ ಸಲ ಶಾಸಕರಾದಾಗಲೇ ವಿಧಾನಸಭೆ ವಿರೋಧಪಕ್ಷದ ಉಪನಾಯಕರಾಗಿ ಆಯ್ಕೆ ಆದರು. ಜೊತೆಗೆ ವಿವಿಧ ಶಾಸಕಾಂಗ ಸಮಿತಿಗಳಲ್ಲೂ ಕೆಲಸ ಮಾಡಿದ್ದರು. 2004 ರಲ್ಲಿ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಸದಾನಂದಗೌಡ್ರು ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಲ್ಲಿ ವೀರಪ್ಪ ಮೊಯ್ಲಿ ವಿರುದ್ಧ ವಿನಯ್ ಕೂಡ ಆದರು.

See also  ರೂಂ ನಂಬರ್ 704 ರ ರಹಸ್ಯ ಆ ಫ್ಲಾಟ್ ನಲ್ಲಿ ಇದ್ದದ್ದು ಮನುಷ್ಯ ಅಲ್ಲ..ಆಕಾಶವೇ ತಲೆ ಮೇಲೆ ಬಿದ್ದಂಗಾಯಿತು

ಅಲ್ಲೂ ಸಂಸದೀಯ ಸಮಿತಿಗಳಲ್ಲಿ ಕೆಲಸ ಮಾಡಿದರು. 2000 ರಲ್ಲಿ ಸದಾನಂದ ಗೌಡರು ರಾಜ್ಯ ಬಿಜೆಪಿ ಅಧ್ಯಕ್ಷರಾದರು. 2000 ಎಂಟರಲ್ಲಿ ಬಿಜೆಪಿ ರಾಜ್ಯದಲ್ಲಿ ಗೆದ್ದು ಸರ್ಕಾರ ರಚಿಸಿತ್ತು. ಇದರಿಂದ ಆಗ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸದಾನಂದ ಗೌಡರ ಹೆಸರು ರಾಷ್ಟ್ರ ಮಟ್ಟದ ಬಿಜೆಪಿಯಲ್ಲಿ ಸುದ್ದಿಯಾಯಿತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]


crossorigin="anonymous">