ಹನ್ನೆರಡನೆಯ ವಯಸ್ಸಿನಲ್ಲಿ ಬಂದ ಪ್ರೀತಿ 14 ವಯಸ್ಸಿನಲ್ಲಿ ಮದುವೆ15 ನೆ ವಯಸ್ಸಿಗೆ ಪ್ರಗ್ನೆಂಟ್ ಸತ್ಯ ಘಟನೆ ಇದು..

ಹನ್ನೆರಡನೆಯ ವಯಸ್ಸಿನಲ್ಲಿ ಬಂದ ಪ್ರೀತಿ 14 ವಯಸ್ಸಿನಲ್ಲಿ ಮದುವೆ15 ನೆ ವಯಸ್ಸಿಗೆ ಪ್ರಗ್ನೆಂಟ್ ಸತ್ಯ ಘಟನೆ ಇದು..

WhatsApp Group Join Now
Telegram Group Join Now

ಫ್ಯಂಡ್ರಿ ಎಂಬ ಮರಾಠಿ ಸಿನಿಮಾದ ಬಗ್ಗೆ ಇವತ್ತು ನಾವು ನಿಮಗೆ ತಿಳಿಸಿ ಕೊಡ್ತೀವಿ ಯಾಕಂದ್ರೆ ಪ್ರತಿದಿನ ಸಮಾಜದಲ್ಲಿ ನಡೆಯುತ್ತಿರುವಂತಹ ವಿಷಯವಿದು ಅವರ ಅರಿವಿಗೆ ಬಾರದೊ ಅಥವಾ ಅವರಿಗೆ ತಿಳಿದೋ ಕೆಲವೊಬ್ಬರ ಜೀವನದಲ್ಲಿ ನಡೆಯುತ್ತಿರುವಂತಹ ವಿಷಯಗಳಿವು. ನೀವೆಲ್ಲರೂ ನಿಮ್ಮ ಜೀವನದಲ್ಲಿ ಯಾವ ರೀತಿ ಸಮಾಜದಲ್ಲಿ ಇರಬೇಕೆಂದು ಹಾಗೂ ಯಾವ ವಯಸ್ಸಿಗೆ ಏನು ಮಾಡಬೇಕೆಂದು ನಿಮಗೆ ಅರಿವಾಗುತ್ತದೆ ಇಲ್ಲಿ 7ನೇ ತರಗತಿ ಓದುತ್ತಿದ್ದ ಕೀಳು ಜಾತಿಯ ಹುಡುಗ ಓದುವುದಕ್ಕೆ ಬಹಳ ಕಷ್ಟ ಪಡುತ್ತಿದ್ದ ಹುಡುಗ ಈ ರೀತಿ ಅವನ ಜೀವನವಿರುವಾಗ ದೊಡ್ಡ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿರುತ್ತಾನೆ ಈ ಎಲ್ಲಾ ನಡುವೆ ಅವನ ವಿದ್ಯಾಭ್ಯಾಸವನ್ನ ಪೂರ್ತಿಯಾಗಿ ಮುಗಿಸಿದನ ಪ್ರೀತಿಸಿದ ಹುಡುಗಿಯನ್ನು ಮದುವೆಯಾದ ತುಂಬಾ ಕಷ್ಟದಲ್ಲಿದ್ದ ಅವರ ಕುಟುಂಬವನ್ನು ಹೇಗೆ ನೋಡಿಕೊಳ್ಳುತ್ತಿದ್ದಾನೆ ಈ ಎಲ್ಲಾ ವಿಚಾರಗಳನ್ನ ನಾನು ನಿಮಗೆ ಇವತ್ತು ತಿಳಿಸಿಕೊಡುತ್ತೇನೆ.

ಇವನ ಹೆಸರು ಜಬ್ಬಯ್ಯ 7ನೇ ತರಗತಿ ಗವರ್ನಮೆಂಟ್ ಶಾಲೆಯಲ್ಲಿ ಓದುತ್ತಿರುತ್ತಾನೆ. ಇವನ ಕುಟುಂಬ ಆ ಊರಿನ ಹೊರಭಾಗದಲ್ಲಿ ಇರುತ್ತದೆ ಕಾರಣ ಇವರು ಕೀಳು ಜಾತಿಯವರೆಂದು ಆ ಊರಿನವರು ಅವರನ್ನ ಊರಿನ ಹೊರಗಡೆ ಇರಿಸಿರುತ್ತಾರೆ ಇವರ ಕೆಲಸ ಹಂದಿಯನ್ನು ಹಿಡಿಯುವುದು, ಊರಿನ ಮೋರಿಗಳನ್ನು ಸ್ವಚ್ಛಗೊಳಿಸುವುದು ಇಂತಹ ಕೆಲಸಗಳನ್ನು ಮಾಡುತ್ತಿರುತ್ತಾರೆ ಇವರು ಯಾರ ಮನೆಗೂ ಸಹ ಹೋಗಬಾರದು. ಅಪ್ಪಿ ತಪ್ಪಿಯು ಸಹ ಯಾರು ಇವರನ್ನು ಮುಟ್ಟಬಾರದು ಅಥವಾ ಮುಟ್ಟಿದರೆ ಪಾಪ ಮಾಡಿದಂತೆ ಸ್ನಾನವನ್ನು ಮಾಡುತ್ತಾರೆ ಇಷ್ಟೇ ಅಲ್ಲದೆ ಆ ಊರಿನ ದೇವಸ್ಥಾನಕ್ಕೆ ಇವರಿಗೆ ಪ್ರವೇಶವಿರುವುದಿಲ್ಲ

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ಜಬ್ಬಯ್ಯ ಗೆ ಇಬ್ಬರು ಅಕ್ಕಂದಿರು ಇರುತ್ತಾರೆ ಅದರಲ್ಲಿ ಒಬ್ಬರಿಗೆ ಗಂಡ ತೀರಿಹೋಗಿರುತ್ತಾರೆ ಇಡಿ ಕುಟುಂಬದವರೆಲ್ಲ ಆ ಊರಿನಲ್ಲಿ ಕೊಡುವ ಕೂಲಿ ಕೆಲಸಗಳನ್ನೇ ಮಾಡುತ್ತಿರುತ್ತಾರೆ ಆದ್ದರಿಂದ ಜಬ್ಬಯ್ಯ ನಿಗೆ ಶಾಲೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ ಆದರೆ ಆತನಿಗೆ ಓದುವಲ್ಲಿ ಬಹಳ ಆಸಕ್ತಿ ಇರುತ್ತದೆ ಕುಟುಂಬದ ಸಮಸ್ಯೆಗಳಿಂದ ಅವರ ತಂದೆ ಹೇಳಿದ ಕೆಲಸಗಳನ್ನು ಮಾಡುತ್ತಾ ಇರುತ್ತಾನೆ ಜಬ್ಬಯ್ಯ ಅವರ ತಂದೆ ತಾಯಿ ಸಹ ಆತನಿಗೆ ಓದಲು ಅವಕಾಶ ನೀಡುವುದಿಲ್ಲ ಕಾರಣ ಅವರು ಕೀಳು ಜಾತಿಯವರು ಅವರಿಗೆ ಜೀವನದಲ್ಲಿ ಯಾವುದೇ ರೀತಿಯ ಅವಕಾಶಗಳು ಮುಂದಕ್ಕೆ ಸಿಗುವುದಿಲ್ಲ ನಮ್ಮ ಕೆಲಸ ದಿನಗೂಲಿ ಕೆಲಸ ಅಷ್ಟೇ ಎಂದು ನಿರ್ಧಾರವಾಗಿ ಬಿಟ್ಟಿರುತ್ತಾರೆ ಈ ಕಾರಣದಿಂದಾಗಿ ಜಬ್ಬಯ್ಯನಿಗೆ ಶಾಲೆ ಹೋಗಲು ಬಿಡುತ್ತಿರಲಿಲ್ಲ

ಜಬ್ಬಯ್ಯ ಪ್ರತಿದಿನ ಕಪ್ಪು ಗುಬ್ಬಚ್ಚಿಯನ್ನು ಹುಡುಕುತ್ತಿರುತ್ತಾನೆ ಅದು ನಮ್ಮ ಕೈಗೆ ಸಿಗುವುದಿಲ್ಲವಾ ಎಂದು ಪ್ರತಿದಿನ ಹುಡುಕುತ್ತಿರುತ್ತಾನೆ. ಆದರೆ ಎಂದಿಗೂ ಆ ಕಪ್ಪು ಗುಬ್ಬಚ್ಚಿ ಈತನ ಕೈಗೆ ಸಿಗುವುದಿಲ್ಲ ಈತನಿಗೆ ಒಬ್ಬ ಸ್ನೇಹಿತ ಇರುತ್ತಾನೆ ಆತನ ಹೆಸರು ನಾಣಿ ಆತನ ಜೊತೆಗೆ ಇವನ ಆಟ ಪಾಠವೆಲ್ಲ ಇರುತ್ತದೆ ಇದರ ಜೊತೆಗೆ ಆ ಊರಿನ ಹಿರಿಯ ಜಾತಿಯ ಶಾಲು ಎಂಬ ಹುಡುಗಿಯನ್ನ ಪ್ರತಿದಿನ ಜಬ್ಬಯ್ಯ ನೋಡುತ್ತಿರುತ್ತಾನೆ ಆ ಹುಡುಗಿ ಹಾಗೂ ಜಬ್ಬಯ್ಯ ಇಬ್ಬರು ಒಂದೇ ಶಾಲೆಯಲ್ಲಿ ಓದುತ್ತಿರುತ್ತಾರೆ. ಜೊತೆಗೆ ಒಂದೇ ತರಗತಿಯಲ್ಲಿ ಸಹ ಇರುತ್ತಾರೆ ಆ ಹುಡುಗಿಯನ್ನು ಜಬ್ಬಯ್ಯ ಪ್ರೀತಿಸುತ್ತಿರುತ್ತಾನೆ ಆದರೆ ಜಬ್ಬಯ್ಯನಿಗೆ ಆ ಹುಡುಗಿಯ ಬಳಿ ಹೋಗಿ ತನ್ನ ಪ್ರೀತಿಯ ವಿಷಯವನ್ನು ಹೇಳಲು ಭಯಪಡುತ್ತಿದ್ದ ಆಕೆ ರೋಡಿನಲ್ಲಿ ಹೋಗುತ್ತಿರುವುದನ್ನು ಈತ ರೋಡಿನ ಕೊನೆಯ ತುದಿಯಲ್ಲಿ ನಿಂತು ನೋಡಿ ಖುಷಿಪಡುತ್ತಿದ್ದ.

ಸುಮಾರು ದಿನಗಳ ನಂತರ ಜಬ್ಬಯ್ಯ ಹಾಗೂ ನಾಣಿ ಇಬ್ಬರು ಶಾಲೆಗೆ ಹೊರಡಲು ಸಿದ್ದರಾಗುತ್ತಾರೆ ಆದರೆ ಅವರು ಶಾಲೆಗೆ ಹೋಗದೆ ಅದೇ ಊರಿನಲ್ಲಿದ್ದ ಒಂದು ಸೈಕಲ್ ಶಾಪಿಗೆ ಬರುತ್ತಾರೆ ಕಾರಣ ಆ ಸೈಕಲ್ ಶಾಪಿನ ಮುಂದೆ ಜಬ್ಬಯ್ಯ ಪ್ರೀತಿಸುತ್ತಿದ್ದ ಶಾಲು ಅವರ ಮನೆ ಇರುತ್ತದೆ ಆ ಹುಡುಗಿ ಶಾಲೆಗೆ ಹೊರಟಾಗ ಆಕೆಯನ್ನ ಹಿಂಬಾಲಿಸಿ ಜಬ್ಬಯ್ಯ ಸಹ ಹೋಗುತ್ತಾನೆ ಶಾಲೆಗೆ ಹೋದ ನಂತರ ಮೇಷ್ಟರು ಹೋಂವರ್ಕ್ ಬುಕ್ಕನ್ನು ತಂದು ಇಡೀ ಎಂದಾಗ ಜಬ್ಬಯ್ಯ ಮೊದಲೇ ತಂದು ಇಟ್ಟಿರುತ್ತಾನೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ ನಾಲ್ಕೈದು ದಿನಗಳಿಂದ ಜಬ್ಬಯ್ಯ ಶಾಲೆಗೆ ಬರದಿದ್ದರೂ ಆತನಿಗೆ ಹೋಂವರ್ಕ್ ಹೇಗೆ ತಿಳಿಯಿತು ಎಂದು ಆದರೆ ಇಲ್ಲಿ ಜಬ್ಬಯ್ಯನಿಗೆ ಓದುವ ಆಸೆ ಬಹಳಷ್ಟು ಇದ್ದು ಅದೇ ತರಗತಿಯಲ್ಲಿ ಓದುತ್ತಿದ್ದ ಆತನ ಸ್ನೇಹಿತನ ಮನೆಗೆ ಹೋಗಿ ಮಾಸ್ಟರ್ ಏನೆಲ್ಲಾ ಬರೆಸಿದರು ಎಂದು ಕೇಳಿ ಅದನ್ನು ತಂದು ರಾತ್ರಿಯಲ್ಲ ಕುಳಿತು ಓದಿ ಬರೆದುಕೊಂಡು ಹೋಗುತ್ತಿದ್ದ ಅವನಿಗೆ ಇರುವ ಕಡಿಮೆ ಸಮಯದಲ್ಲೇ ಅವನು ಓದುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದ

ಓದುವುದರ ಬಗ್ಗೆ ಆಸಕ್ತಿ ಇದ್ದರೆ ಯಾರು ಯಾವ ಸಮಯದಲ್ಲಿ ಯಾವ ಜಾಗದಲ್ಲಾದರೂ ಸರಿ ಓದಿ ದೊಡ್ಡ ವ್ಯಕ್ತಿಗಳಾಗುತ್ತಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ ಇಲ್ಲಿ ಶಾಲೆಯಲ್ಲಿ ಸಹ ಮೇಲುಜಾತಿ ಕೀಳು ಜಾತಿ ಎಂಬ ಭೇದಭಾವವನ್ನು ಮಾಡುತ್ತಾರೆ ಇಲ್ಲಿ ಮೇಲುಜಾತಿಯವರು ಯಾವುದೇ ರೀತಿಯ ಹೋಂವರ್ಕನ್ನ ಬರೆಯದೆ ಇದ್ದರೂ ಅವರಿಗೆ ಯಾವುದೇ ರೀತಿಯ ಬೈಗುಳವಾಗಲಿ ಯಾವ ರೀತಿಯ ಪ್ರಶ್ನೆಗಳನ್ನಾಗಲಿ ಕೇಳುತ್ತಿರಲಿಲ್ಲ ಆದರೆ ಇದೇ ಕೆಲಸ ಕೀಳು ಜಾತಿಯವರು ಮಾಡಿದರೆ ಅವರನ್ನು ಶಾಲೆಯಿಂದ ಹೊರ ಹಾಕುತ್ತಿದ್ದರು

ಒಮ್ಮೆ ಕಪ್ಪು ಗುಬ್ಬಚ್ಚಿಯನ್ನು ಹಿಡಿಯಲು ಜಬ್ಬಯ್ಯ ಮರ ಒಂದಕ್ಕೆ ಅತಿರುತ್ತಾನೆ ಅಲ್ಲೇ ಹೋಗುತ್ತಿದ್ದ ಅಜ್ಜಿ ಒಬ್ಬರು ಆತನನ್ನು ನೋಡಿ ಆ ಪಕ್ಷಿ ಬ್ರಾಹ್ಮಣ ಜಾತಿಗೆ ಸೇರಿದ್ದು ನೀನು ಮುಟ್ಟಬಾರದು ನೀನು ಕೀಳು ಜಾತಿಯವನು ಎಂದು ಬೈದು ಆತನನ್ನು ಮರದಿಂದ ಕೆಳಗೆ ಇಳಿಸುತ್ತಾರೆ ಈ ರೀತಿಯಾಗಿ ಪ್ರತಿದಿನ ಒಂದಲ್ಲ ಒಂದು ರೀತಿಯ ಕಷ್ಟ ಅವಮಾನಗಳನ್ನು ಎದುರಿಸುತ್ತಾನೆ ಬೆಳೆಯುತ್ತಾನೆ ಜಬ್ಬಯ್ಯ

ಈ ಸಮಯದಲ್ಲಿ ಜಬ್ಬಯನ ಇನ್ನೊಬ್ಬ ಅಕ್ಕನಿಗೆ ಮದುವೆ ಮಾಡಲು ಹುಡುಗನನ್ನು ಪಕ್ಕದೂರಿನಿಂದ ಕರೆಸುತ್ತಾರೆ ಹುಡುಗಿಯನ್ನು ನೋಡಲು ಬಂದ ಕುಟುಂಬದವರು 50,000 ವರದಕ್ಷಣೆಯನ್ನು ಕೇಳುತ್ತಾರೆ ಆದರೆ ಜಬ್ಬಯ್ಯನ ತಂದೆ ಅಷ್ಟು ಸಾಧ್ಯವಾಗುವುದಿಲ್ಲ 20,000 ಕೊಡುತ್ತೇವೆ ಎಂದು ಮಾತನ್ನು ನೀಡುತ್ತಾರೆ. ಆದರೆ ಅವರ ಜೀವನದಲ್ಲಿ ನೂರು ರೂಪಾಯಿ ಎನ್ನುವುದೇ ಬಹಳ ದೊಡ್ಡದಾಗಿರುತ್ತದೆ ಇನ್ನು 20,000 ಹಣವನ್ನು ಹೊಂದಿಸುವುದು ಬಹಳ ಕಷ್ಟವಾಗಿರುತ್ತದೆ ಹೀಗಾಗಿ ತನ್ನ ಇಡೀ ಕುಟುಂಬ ಯಾರು ಏನು ಕೆಲಸ ಮಾಡಿದರು ಮಾಡಲು ಸಿದ್ಧವಾಗುತ್ತಾರೆ. ಕೆಲವೊಬ್ಬರು ಕೆಲಸವನ್ನು ನೀಡುತ್ತಾರೆ ಕೆಲವರು ತಮ್ಮ ಕೊಠಡಿಯಲ್ಲಿರುವ ಹಸುವಿನ ಸಗಣೆಯನ್ನು ತೆಗೆದುಕೊಂಡು ಹೋಗಿ ಏನಾದರೂ ಸಾಧ್ಯವಾದರೆ ಮಾಡಿ ಎಂದು ಹೇಳಿ ಕಳಿಸುತ್ತಾರೆ ಹೀಗೆ ಅವರ ಇಡೀ ಕುಟುಂಬ ಬಹಳ ಕಷ್ಟದಿಂದ ಜೀವನವನ್ನ ನಡೆಸುತ್ತಿರುತ್ತದೆ ಈ ಮಧ್ಯೆ ಬಹಳ ದಿನಗಳಿಂದ ಜಬ್ಬಯ್ಯ ಒಂದು ಜೀನ್ಸ್ ಪ್ಯಾಂಟ್ ಹಾಗು ಟೀ ಶರ್ಟ್ ಅನ್ನ ತಗೋಬೇಕು ಎಂದು ಆಸೆ ಪಡುತ್ತಿರುತ್ತಾನೆ ಆದರೆ ಅದು ಕೂಡ ಸಾಧ್ಯವಾಗಿರುವುದಿಲ್ಲ ಅದಕ್ಕಾಗಿ ತನ್ನ ಸ್ನೇಹಿತನ ಬಳಿ ಹೇಳಿಕೊಳ್ಳುತ್ತಾನೆ ಒಂದು ಜೀನ್ಸ್ ಪ್ಯಾಂಟ್ ಹಾಗು ಟೀ ಶರ್ಟ್ ಅನ್ನು ತೆಗೆದುಕೊಳ್ಳಲು ಹಣವನ್ನ ಕೂಡಿ ಇಡುತ್ತೇನೆ ನನ್ನ ಇನ್ನೊಂದು ಆಸೆ ಆ ಕಪ್ಪು ಗುಬ್ಬಚ್ಚಿಯನ್ನು ಹಿಡಿಯುವುದು

ಒಂದು ಜೀನ್ಸ್ ಪ್ಯಾಂಟ್ ಹಾಗೂ ಟೀಶರ್ಟ್ ಗೋಸ್ಕರ ಜಬ್ಬಯ್ಯ ಸೈಕಲನ್ನು ಬಾಡಿಗೆಗೆ ತೆಗೆದುಕೊಂಡು ಅದರಲ್ಲಿ ಐಸ್ ಕ್ಯಾಂಡಿಯನ್ನು ತೆಗೆದುಕೊಂಡು ಬಿದಿ ಬಿದಿ ಹಲೆದು ಮಾರುತ್ತಾನೆ ಈ ಮಧ್ಯೆ ಒಂದು ಟೆಂಪೋ ಜಬ್ಬಯನ ಸೈಕಲನ್ನು ಬಿಳಿಸಿ ಹಾಳು ಮಾಡಿಬಿಡುತ್ತದೆ ಇದರಿಂದ ತಾನು ಕೂಡಿಟ್ಟ ಹಣದಿಂದ ತಂದ ಐಸ್ ಕ್ಯಾಂಡಿಗಳು ಕೂಡ ಹಾಳಾಗಿಬಿಡುತ್ತದೆ ತುಂಬಾ ಭಯದಿಂದ ಬಾಡಿಗೆಗೆ ಸೈಕಲ್ ತೆಗೆದುಕೊಂಡು ಅಂಗಡಿ ಗೆ ತೆರಳಿ ನಡೆದಿದ್ದ ಘಟನೆಯನ್ನು ವಿವರವಾಗಿ ವಿವರಿಸುತ್ತಾನೆ. ಸ್ವಲ್ಪ ದಿನಗಳ ಸಮಯ ಕಾಲಾವಕಾಶ ಕೇಳಿ ಹಣವನ್ನು ಹಿಂತಿರುಗಿಸುತ್ತೇನೆ ಎಂದು ಹೇಳುತ್ತಾನೆ ಆದರೆ ಸೈಕಲ್ ಶಾಪ್ ನವರು ಅವನಿಗೆ ಬಹಳ ಪರಿಚಯವಿದ್ದು ಆತನಿಗೆ ಸಮಾಧಾನ ಮಾಡಿ ಹಣವನ್ನು ಕೊಡುವುದೇನು ಬೇಡ ಎಂದು ಸಮಾಧಾನ ಮಾಡಿ ಹೇಳುತ್ತಾರೆ ನಂತರ ಜಬ್ಬಯ್ಯನ ತಂದೆ ಮನೆಯಲ್ಲಿ ಬುಟ್ಟಿಗಳನ್ನ ರೆಡಿ ಮಾಡಿರುತ್ತಾರೆ ಜಬ್ಬಯ್ಯನಿಗೆ ಅದನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಿ ಹಣವನ್ನು ತೆಗೆದುಕೊಂಡು ಬಾ ಎಂದು ಹೇಳುತ್ತಾರೆ ಹೀಗೆ ಜಬ್ಬಯ್ಯ ಯಾವುದೇ ಕೆಲಸವನ್ನು ಮಾಡಿಲ್ಲ ಎನ್ನುವಂತಿಲ್ಲ ಪ್ರತಿಯೊಂದು ಕೆಲಸಗಳನ್ನು ಮಾಡುತ್ತಾನೆ ಬೆಳೆಯುತ್ತಾನೆ

ಜಬಯನ ಊರಿನಲ್ಲಿ ದೇವಸ್ಥಾನದ ಜಾತ್ರೆ ಇರುತ್ತದೆ ಈ ರೀತಿ ಇರುವಾಗ ಜಬ್ಬಯ್ಯ ತನ್ನ ಒಂದು ಶರ್ಟ್ ಅನ್ನು ಐರನ್ ಮಾಡಿಕೊಂಡು ಮಿರಿ ಮಿರಿ ಮಿಂಚುತ್ತಾ ದೇವಸ್ಥಾನದ ಬಳಿ ಹೋಗುತ್ತಾನೆ ಕಾರಣ ಅವನು ಪ್ರೀತಿ ಮಾಡುತ್ತಿದ್ದ ಶಾಲು ಸಹ ಅಲ್ಲಿಗೆ ಬರುತ್ತಾಳೆ ಎಂದು ಶಾಲು ಬಂದಾಗ ಆಕೆ ಹಿಂದೆ ಹಿಂದೆ ಸುತ್ತುತ್ತಿರುತ್ತಾನೆ. ಜೊತೆಗೆ ಒಂದು ಪತ್ರವನ್ನು ಸಹ ಬರೆಯುತ್ತಾನೆ ನಾನು ನಿನ್ನನ್ನು ತುಂಬಾ ಇಷ್ಟಪಡುತ್ತಿದ್ದೇನೆ ಜೀವನದಲ್ಲಿ ಬಹಳಷ್ಟು ಕಷ್ಟವನ್ನು ಪಡುತ್ತಿದ್ದೇನೆ ಆದರೆ ನಿನ್ನನ್ನು ನೆನೆಸಿಕೊಂಡಾಗ ಈ ಕಷ್ಟಗಳೆಲ್ಲವೂ ನನಗೆ ಮರೆಯಾಗಿ ಹೋಗುತ್ತದೆ ನಿನಗೆ ನಾನು ಇಷ್ಟವಾದರೆ ಶಾಲೆಯ ಹಿಂದೆ ಇರುವ ಒಂದು ಕೆರೆಯ ಬಳಿ ಬಾ ಎಂದು ಪತ್ರವನ್ನು ಬರೆಯುತ್ತಾನೆ ನಿನಗೆ ನಾನು ಇಷ್ಟವಿದ್ದರೆ ಕೆರಿಯ ಬಳಿ ಬಾ ಅಷ್ಟೇ ಇಲ್ಲವಾದರೆ ಈ ಪತ್ರವನ್ನು ಇಲ್ಲೇ ಹರಿದು ಬಿಸಾಕು ಎಂದು ಬರೆಯುತ್ತಾನೆ

ಜಬಯನಿಗೆ ಆತನ ತಂದೆ ಒಂದು ಹೊಸ ಶರ್ಟ್ ಅನ್ನು ಕೊಡಿಸಲು ಅಂಗಡಿಗೆ ಕರೆದುಕೊಂಡು ಹೋದಾಗ ಅಂಗಡಿಯವನು ಜಬ್ಬಯ್ಯನನ್ನು ಹಾಗೂ ಆತನ ತಂದೆಯನ್ನು ಬಹಳ ಕೀಳಾಗಿ ನೋಡುತ್ತಾರೆ. ಆದರೂ ಒಂದು ಶರ್ಟ್ ಅನ್ನು ಕೊಡಿಸುತ್ತಾರೆ ನಂತರ ಅಬ್ಬ ಬಹಳ ಜೋರಾಗಿದ್ದು ಜಬ್ಬಯ್ಯ ಬಹಳ ಖುಷಿಯಿಂದ ಡ್ಯಾನ್ಸನ್ನು ಮಾಡುತ್ತಿರುತ್ತಾನೆ. ಆತನ ಜೊತೆಗೆ ಸೈಕಲ್ ಶಾಪ್ ಅಂಗಡಿಯವನು ಸಹ ಆತನನ್ನು ಹೆಗಲ ಮೇಲೆ ಕೂರಿಸಿಕೊಂಡು ಡ್ಯಾನ್ಸ್ ಅನ್ನು ಮಾಡುತ್ತಿರುತ್ತಾರೆ ಲೈಟ್ ಲ್ಯಾಂಪ್ ಒಂದನ್ನು ಜಬ್ಬಯ್ಯನ ತಲೆ ಮೇಲೆ ಹೊರಿಸುತ್ತಾರೆ ಇಲ್ಲಿ ತಿಳಿಯೋದು ಏನೆಂದರೆ ಕೀಳು ಮಟ್ಟದ ಜನ ಮೇಲೆ ಬಂದರೆ ಅವರನ್ನು ಬೇಗ ಕೆಳಗೆ ಇಳಿಸಿಬಿಡುತ್ತಾರೆ ಅವರಿಗೆ ಅಲ್ಲಿ ಯಾವ ಮರ್ಯಾದೆ ಆಗಲಿ ಯಾವ ಪ್ರೀತಿಯಾಗಲಿ ಸಿಗುವುದಿಲ್ಲ ಕಿಳು ಜಾತಿಯವರು ಯಾವಾಗಲೂ ಕೆಳಮಟ್ಟದಲ್ಲೇ ಇರಬೇಕೆಂದು ಬಯಸುತ್ತಾರೆ

ಊರಿನ ಉತ್ಸವ ನಡೆಯುವಾಗ ಹಂದಿ ಒಂದು ಅಜ್ಜನಗಳ ಮಧ್ಯೆ ಓಡಿ ಹೋಗುತ್ತದೆ ಅಲ್ಲಿನ ಊರಿನ ದೊಡ್ಡ ಮನುಷ್ಯ ಜಬ್ಬಯ್ಯನ ತಂದೆಯನ್ನು ಕರೆದು ಆ ಹಂದಿಯನ್ನು ಹಿಡಿದು ನೀವು ಸಾಯಿಸಬೇಕು ಎಂದು ಹೇಳುತ್ತಾರೆ ಜಬ್ಬಯ್ಯನ ತಂದೆ ತುಂಬಾ ವಯಸ್ಸಾಗಿದ್ದ ಕಾರಣ ನಮಗೆ ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ ಆದರೆ ಆ ದೊಡ್ಡ ವ್ಯಕ್ತಿ ಹೆಚ್ಚಿನ ಹಣವನ್ನು ನೀಡುತ್ತೇನೆ ಎಂದು ಹೇಳಿದಾಗ ತನ್ನ ಮಗಳ ಮದುವೆಗೆ ಉಪಯೋಗವಾಗುತ್ತದೆ ಎಂದು ಜಬ್ಬಯ್ಯ ಒಪ್ಪಿಕೊಂಡು ಆತನ ಇಡಿ ಕುಟುಂಬದವರನ್ನು ಕರೆದುಕೊಂಡು ಹಂದಿ ಹಿಡಿಯಲು ಹೋಗುತ್ತಾರೆ ಆ ಹಂದಿ ಇರುವ ಜಾಗ ಜಬಯ್ಯ ಓದುತ್ತಿದ್ದ ಶಾಲೆಯ ಮುಂದೆ ಒಂದು ದೊಡ್ಡ ಜಾಗವಿರುತ್ತದೆ ಆ ಜಾಗದಲ್ಲಿ ಹಂದಿಯನ್ನು ಹಿಡಿಯಲು ಜಬ್ಬಯ್ಯ ಬಹಳ ನಾಚಿಕೆಯನ್ನು ಪಡುತ್ತಾನೆ ಕಾರಣ ಆ ಶಾಲೆಯ ಮಕ್ಕಳು ಆತನನ್ನು ಹಂದಿ ಹಿಡಿಯುವವನು ಎಂದು ಆಡಿಕೊಳ್ಳುತ್ತಾರೆ ಎಂದು ಒಂದು ಜಾಗದಲ್ಲಿ ಮರೆಯಾಗಿ ಹೋಗಿ ಕುಳಿತುಕೊಳ್ಳುತ್ತಾನೆ. ಜಬ್ಬಯ್ಯ ಪ್ರೀತಿ ಮಾಡುತ್ತಿದ್ದ ಹುಡುಗಿಯೂ ಸಹ ಹೊರ ಬಂದು ಇದನ್ನೆಲ್ಲಾ ನೋಡುತ್ತಿರುತ್ತಾಳೆ. ಅವಳ ನಗು ತುಂಬಾ ವ್ಯಂಗ್ಯವಾಗಿರುತ್ತದೆ ಇದನ್ನು ನೋಡಿದ ಜಬ್ಬಯ್ಯ ಮನಸ್ಸಿನಲ್ಲಿ ಬಹಳ ನೋವನ್ನು ಅನುಭವಿಸುತ್ತಾ ತನ್ನಲ್ಲಿದ್ದ ಎಲ್ಲಾ ಸಿಟ್ಟನ್ನು ಹಂದಿಯ ಮೇಲೆ ತೋರಿಸಿ ಕಲ್ಲಿನಿಂದ ಹೊಡೆದು ಆ ಹಂದಿಯನ್ನು ಹಿಡಿದು ಹೋಗಬೇಕಾದರೆ ಆ ಊರಿನ ಕೆಲವರು ಪುಡಿ ಹುಡುಗರು ಜಬ್ಬಯನ ಅಕ್ಕನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಅದನ್ನು ಕೇಳಿಸಿಕೊಂಡ ಜಬ್ಬಯ್ಯ ಕೋಪದಿಂದ ಕಲ್ಲನ್ನು ತೂರಿ ಆತನ ಆಣೆಯನ್ನು ರಕ್ತ ಬರುವಂತೆ ತೂತು ಮಾಡುತ್ತಾನೆ. ಜಬ್ಬಯ್ಯನ ಅಕ್ಕ ಬೇಡವೆಂದು ಎಷ್ಟೇ ಹೇಳಿದರು ನಾವು ಸುಮ್ಮದಿದ್ದರೆ ಇವರು ನಮ್ಮನ್ನು ತುಳಿಯುತ್ತಲೇ ಇರುತ್ತಾರೆ ಎಂದು ಜೋರಾಗಿ ತಿರುಚಿ ತನ್ನ ತಮ್ಮನ್ನು ಕೀಳಾಗಿ ನೋಡಿದ ಜನರಿಗೆ ಕಲ್ಲಿನಿಂದ ಹೊಡೆಯುತ್ತಾನೆ. ಇಲ್ಲಿ ಅರ್ಥವಾಗುವುದೇನೆಂದರೆ ಮೇಲುಜಾತಿ ಕೀಳು ಜಾತಿ ಎಂಬುದು ಯಾವುದು ಇರುವುದಿಲ್ಲ ಜನಗಳು ಒಂದೇ ತಿನ್ನುವ ಅನ್ನ ಕೂಡ ಒಂದೇ

[irp]